ಚಿಲ್ಲಿ ಚಿಕನ್‌, ಇದು ತಿನ್ನೋದಲ್ಲ ನೋಡೋದು; ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿಲ್ಲಿ ಚಿಕನ್‌, ಇದು ತಿನ್ನೋದಲ್ಲ ನೋಡೋದು; ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ

ಚಿಲ್ಲಿ ಚಿಕನ್‌, ಇದು ತಿನ್ನೋದಲ್ಲ ನೋಡೋದು; ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾ ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ

  • June 21 Release Movies: ಸ್ಯಾಂಡಲ್‌ವುಡ್‌ನಲ್ಲಿ ಈ ಶುಕ್ರವಾರ ಚಿಲ್ಲಿ ಚಿಕನ್‌, ಸಂಭವಾಮಿ ಯುಗೇ ಯುಗೇ ಮತ್ತು ದೇಸಾಯಿ ಎಂಬ ಮೂರು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದೇ ಸಮಯದಲ್ಲಿ ಧ್ರುವ ಸರ್ಜಾ ನಟನೆಯ ಬಹದ್ಧೂರ್‌ ಸಿನಿಮಾ 10 ವರ್ಷದ ಬಳಿಕ ಚಿತರಮಂದಿರಗಳಲ್ಲಿ ಮರುಬಿಡುಗಡೆಯಾಗುತ್ತಿದೆ.

June 21 Release Movies: ಈ ಶುಕ್ರವಾರ ಚಿಲ್ಲಿ ಚಿಕನ್‌ ಹೆಸರಿನ ಕನ್ನಡ ಸಿನಿಮಾ ರಿಲೀಸ್‌ ಆಗುತ್ತಿದೆ.   ಮೆಟನೋಯ್  ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಅವರ  ನಿರ್ಮಾಣದ, ಪ್ರತೀಕ್ ಪ್ರಜೋಶ್ ಅವರ ನಿರ್ದೇಶನದ, ಥ್ರಿಲ್ಲರ್  ಕಥಾಹಂದರ ಒಳಗೊಂಡ ಚಿತ್ರ 'ಚಿಲ್ಲಿ ಚಿಕನ್' ಈ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. (ಕೊಲಾಜ್‌ ಚಿತ್ರ: ಚಿಲ್ಲಿ ಚಿಕನ್‌ ಮತ್ತು ದೇಸಾಯಿ ಸಿನಿಮಾ)
icon

(1 / 8)

June 21 Release Movies: ಈ ಶುಕ್ರವಾರ ಚಿಲ್ಲಿ ಚಿಕನ್‌ ಹೆಸರಿನ ಕನ್ನಡ ಸಿನಿಮಾ ರಿಲೀಸ್‌ ಆಗುತ್ತಿದೆ.   ಮೆಟನೋಯ್  ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಅವರ  ನಿರ್ಮಾಣದ, ಪ್ರತೀಕ್ ಪ್ರಜೋಶ್ ಅವರ ನಿರ್ದೇಶನದ, ಥ್ರಿಲ್ಲರ್  ಕಥಾಹಂದರ ಒಳಗೊಂಡ ಚಿತ್ರ 'ಚಿಲ್ಲಿ ಚಿಕನ್' ಈ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. (ಕೊಲಾಜ್‌ ಚಿತ್ರ: ಚಿಲ್ಲಿ ಚಿಕನ್‌ ಮತ್ತು ದೇಸಾಯಿ ಸಿನಿಮಾ)

ಬೆಂಗಳೂರಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು,  ಉತ್ತರ ಭಾರತದಿಂದ ಬೆಂಗಳೂರಿಗೆ ಬಂದ  ಐವರು ಹುಡುಗರು  ಚೈನೀಸ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತ, ಸ್ವಂತ ಹೋಟೆಲ್  ತೆರೆಯಲು ಮುಂದಾಗುತ್ತಾರೆ. 
icon

(2 / 8)

ಬೆಂಗಳೂರಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು,  ಉತ್ತರ ಭಾರತದಿಂದ ಬೆಂಗಳೂರಿಗೆ ಬಂದ  ಐವರು ಹುಡುಗರು  ಚೈನೀಸ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತ, ಸ್ವಂತ ಹೋಟೆಲ್  ತೆರೆಯಲು ಮುಂದಾಗುತ್ತಾರೆ. 

ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಹೋಟೆಲ್ ಮಾಡ್ತಾರಾ, ಇಲ್ವಾ ಅನ್ನೋದೇ ಚಿಲ್ಲೀ ಚಿಕನ್ ಚಿತ್ರದ ಕಥಾಹಂದರ.  
icon

(3 / 8)

ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಹೋಟೆಲ್ ಮಾಡ್ತಾರಾ, ಇಲ್ವಾ ಅನ್ನೋದೇ ಚಿಲ್ಲೀ ಚಿಕನ್ ಚಿತ್ರದ ಕಥಾಹಂದರ.  

ಈ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಪ್ರತಿಭೆಗಳು  ಒಂದಾಗಿದ್ದಾರೆ. ನಿರ್ದೇಶಕ ಕೇರಳದವರಾದರೆ, ನಿರ್ಮಾಪಕ ಗುಜರಾತಿನವರು. ಕರ್ನಾಟಕ, ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 
icon

(4 / 8)

ಈ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಪ್ರತಿಭೆಗಳು  ಒಂದಾಗಿದ್ದಾರೆ. ನಿರ್ದೇಶಕ ಕೇರಳದವರಾದರೆ, ನಿರ್ಮಾಪಕ ಗುಜರಾತಿನವರು. ಕರ್ನಾಟಕ, ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
 

(ದೇಸಾಯಿ ಸಿನಿಮಾದ ಫೋಟೋ)

ಪ್ರತೀಕ್ ಪ್ರಜೋಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ, ವಿಕ್ಟರ್ ತೌಡಮ್, ಜಿಂಪಾ ಭುಟಿಯಾ, ಟಾಮ್‍ಥಿನ್ ಥೋಕ್‍ಚೋಮ್, ಹಿರಾಕ್ ಸೋನೊವಾಲ್ ಮುಂತಾದವರಿದ್ದಾರೆ. 
icon

(5 / 8)

ಪ್ರತೀಕ್ ಪ್ರಜೋಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ, ವಿಕ್ಟರ್ ತೌಡಮ್, ಜಿಂಪಾ ಭುಟಿಯಾ, ಟಾಮ್‍ಥಿನ್ ಥೋಕ್‍ಚೋಮ್, ಹಿರಾಕ್ ಸೋನೊವಾಲ್ ಮುಂತಾದವರಿದ್ದಾರೆ. 

(ದೇಸಾಯಿ ಸಿನಿಮಾದ ಫೋಟೋ)

ಸಿದ್ದಾಂತ್ ಸುಂದರ್ ಅವರ  ಸಂಗೀತ ಸಂಯೋಜನೆ, ಶ್ರೀಶ್ ತೋಮರ್ ಅವರ  ಛಾಯಾಗ್ರಹಣ, ಆಶಿಕ್ ಕೆ.ಎಸ್ ಅವರ ಸಂಕಲನ, ತ್ರಿಲೋಕ್ ಕೆಎಎಸ್  ಅವರ ಸಂಭಾಷಣೆ ಚಿತ್ರಕ್ಕಿದೆ. 
icon

(6 / 8)

ಸಿದ್ದಾಂತ್ ಸುಂದರ್ ಅವರ  ಸಂಗೀತ ಸಂಯೋಜನೆ, ಶ್ರೀಶ್ ತೋಮರ್ ಅವರ  ಛಾಯಾಗ್ರಹಣ, ಆಶಿಕ್ ಕೆ.ಎಸ್ ಅವರ ಸಂಕಲನ, ತ್ರಿಲೋಕ್ ಕೆಎಎಸ್  ಅವರ ಸಂಭಾಷಣೆ ಚಿತ್ರಕ್ಕಿದೆ.
 

(ದೇಸಾಯಿ ಸಿನಿಮಾದ ಫೋಟೋ)

ಜೂನ್‌ 21ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಸಂಭವಾಮಿ ಯುಗೇ ಯುಗೇ ಎಂಬ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಚೇತನ್‍ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯ್ ಶೆಟ್ಟಿ ಮತ್ತು ನಿಶಾ ರಜಪೂತ್ ಈ ಸಿನಿಮಾದ ನಾಯಕ ಮತ್ತು ನಾಯಕಿ. ದೇಸಾಯಿ ಹೆಸರಿನ ಇನ್ನೊಂದು ಸಿನಿಮಾವೂ ಈ ವಾರ ರಿಲೀಸ್‌ ಆಗುತ್ತಿದೆ. 
icon

(7 / 8)

ಜೂನ್‌ 21ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಸಂಭವಾಮಿ ಯುಗೇ ಯುಗೇ ಎಂಬ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಚೇತನ್‍ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯ್ ಶೆಟ್ಟಿ ಮತ್ತು ನಿಶಾ ರಜಪೂತ್ ಈ ಸಿನಿಮಾದ ನಾಯಕ ಮತ್ತು ನಾಯಕಿ. ದೇಸಾಯಿ ಹೆಸರಿನ ಇನ್ನೊಂದು ಸಿನಿಮಾವೂ ಈ ವಾರ ರಿಲೀಸ್‌ ಆಗುತ್ತಿದೆ.

 

ಕನ್ನಡದಲ್ಲಿ ಸಿನಿಮಾ, ಧಾರಾವಾಹಿ, ಒಟಿಟಿ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.
icon

(8 / 8)

ಕನ್ನಡದಲ್ಲಿ ಸಿನಿಮಾ, ಧಾರಾವಾಹಿ, ಒಟಿಟಿ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.


ಇತರ ಗ್ಯಾಲರಿಗಳು