ಕಿರುತೆರೆಯಲ್ಲಿ ಹೆಸರು ಮಾಡಿದ್ರೂ ಸಿನಿಮಾಗಳಲ್ಲಿ ಅದೃಷ್ಟ ಹಿಡಿಯದ ಕನ್ನಡ ಕಲಾವಿದರು; ವಿಜಯ್ ಸೂರ್ಯಯಿಂದ ಅನುಶ್ರೀವರೆಗೆ
- ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಗಳಿಸಿರುವ ನಟ–ನಟಿಯರು ಸಿನಿಮಾ ರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಬೆಳ್ಳಿತೆರೆಯಲ್ಲಿ ಯಾಕೋ ಅವರ ಅದೃಷ್ಟ ಖುಲಾಯಿಸಿ ಇರಲಿಲ್ಲ. ಅಂತಹ ಕೆಲವು ನಟರ ಬಗ್ಗೆ ಇಲ್ಲಿದೆ ಮಾಹಿತಿ.
- ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಗಳಿಸಿರುವ ನಟ–ನಟಿಯರು ಸಿನಿಮಾ ರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಬೆಳ್ಳಿತೆರೆಯಲ್ಲಿ ಯಾಕೋ ಅವರ ಅದೃಷ್ಟ ಖುಲಾಯಿಸಿ ಇರಲಿಲ್ಲ. ಅಂತಹ ಕೆಲವು ನಟರ ಬಗ್ಗೆ ಇಲ್ಲಿದೆ ಮಾಹಿತಿ.
(1 / 9)
ಧಾರಾವಾಹಿ, ರಿಯಾಲಿಟಿ ಷೋ ಸೇರಿದಂತೆ ಕಿರುತೆರೆಯಲ್ಲಿ ಛಾಪು ಮೂಡಿಸಿರುವ ಅನೇಕ ಕಲಾವಿದರು ಸಿನಿಮಾಗಳಲ್ಲೂ ನಟಸಿರುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಇವರಲ್ಲಿ ಹಲವರಿಗೆ ಬೆಳ್ಳಿತೆರೆ ಕೈ ಹಿಡಿದಿಲ್ಲ. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಗಳಿಸಿ, ಸಿನಿಮಾಗಳಲ್ಲೂ ನಟಿಸಿರುವ ಕೆಲವು ಟಿವಿ ಕಲಾವಿದರ ಬಗ್ಗೆ ಇಲ್ಲಿದೆ ಮಾಹಿತಿ.
(All Image Credit : Instagram)(2 / 9)
ವಿಜಯ್ ಸೂರ್ಯ: ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಾಕಷ್ಟು ಹೆಸರು ಮಾಡಿದ್ದ ನಟ ವಿಜಯ್ ಸೂರ್ಯ ನಂತರ ಸಿನಿರಂಗದತ್ತ ವಾಲುತ್ತಾರೆ. ಕ್ರೇಜಿ ಲೋಕ, ಇಷ್ಟಕಾಮ್ಯ, ಕದ್ದು ಮುಚ್ಚಿ, ಗಾಳಿಪಟ 2 ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಸಿನಿಮಾಗಳಲ್ಲಿ ನಿರೀಕ್ಷಿಸಿದ ಹೆಸರು ಮಾಡಲು ಸಾಧ್ಯವಾಗಿಲ್ಲ. ಸದ್ಯ ಕಲರ್ಸ್ ಕನ್ನಡದ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ನಾಯಕನ ಪಾತ್ರ ಮಾಡುತ್ತಿದ್ದಾರೆ.
(3 / 9)
ಅನುಶ್ರೀ: ಕನ್ನಡ ಕಿರುತೆರೆಯ ಸ್ಟಾರ್ ಆ್ಯಂಕರ್ ಅನುಶ್ರೀ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಇವರು ಸಿನಿಮಾಗಳಲ್ಲಿ ನಟಿಸುವ ಮೂಲಕ ಅದೃಷ್ಟ ಪರೀಕ್ಷೆ ಮಾಡಿದ್ದರು. ಆದರೆ ಬೆಳ್ಳಿತೆರೆಯಲ್ಲಿ ಇವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಅನುಶ್ರೀ ರಿಂಗ್ ಮಾಸ್ಟರ್, ಉಪ್ಪು ಹುಳಿ ಖಾರ ಸಿನಿಮಾಗಳಲ್ಲಿ ನಟಿಸಿದ್ದರು.
(4 / 9)
ದೀಪಿಕಾ ದಾಸ್: ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ದೀಪಿಕಾ ದಾಸ್ ದೂದ್ ಸಾಗರ್ ಸಿನಿಮಾ ಮೂಲಕ ಸಿನಿಲೋಕಕ್ಕೆ ಪ್ರವೇಶ ಪಡೆಯುತ್ತಾರೆ. ಆದರೆ ಸಿನಿಮಾದಲ್ಲಿ ಆಕೆಗೆ ಹೇಳಿಕೊಳ್ಳುವ ಹೆಸರು ಮಾಡಲು ಸಾಧ್ಯವಾಗಿಲ್ಲ. ಸದ್ಯ ಇವರು ಯಾವುದೇ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಿಲ್ಲ.
(5 / 9)
ವೈಷ್ಣವಿ ಗೌಡ: ನಟಿ ವೈಷ್ಣವಿ ಗೌಡ ದೇವಿ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ್ದರೂ ಇವರಿಗೆ ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಇವರು ಕೂಡ ಸಿನಿಮಾಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಬೆಕ್ಕು, ಗಿರಗಿಟ್ಲೆ ಸಿನಿಮಾಗಳಲ್ಲಿ ನಟಿಸಿದ್ದ ವೈಷ್ಣವಿಗೆ ಅಂಥ ಹೆಸರು ಸಿಕ್ಕಿರಲಿಲ್ಲ. ಸದ್ಯ ಅವರು ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
(6 / 9)
ಐಶ್ವರ್ಯಾ ಸಿಂಧೋಗಿ: ಬಿಗ್ಬಾಸ್ ಫೇಮ್ ಐಶ್ವರ್ಯಾ ಸಿಂಧೋಗಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಇವರು ಬೆಳ್ಳಿ ಪರದೆಯ ಮೇಲೂ ಕಾಣಿಸಿಕೊಂಡಿದ್ದರೂ ಇವರಿಗೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ. ಮಮ್ಮಿ ಸೇವ್ ಮಿ, ಸಪ್ನೋ ಕಿ ರಾಣಿ ಸಿನಿಮಾದಲ್ಲಿ ಐಶ್ವರ್ಯಾ ನಟಿಸಿದ್ದರು.
(7 / 9)
ದಿವ್ಯಾ ಸುರೇಶ್: ಬಿಗ್ ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿದ್ದ, ತ್ರಿಪುರ ಸುಂದರಿ ಧಾರಾವಾಹಿ ನಾಯಕಿ ದಿವ್ಯಾ ಸುರೇಶ್ ಕೂಡ ಸಿನಿಮಾ ನಟಿಯಾಗಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಥರ್ಥ್ ಕ್ಲಾಸ್, ಟೆಂಪ್ಟ್ ರಾಜಾ ಮುಂತಾದ ಸಿನಿಮಾಗಳಲ್ಲಿ ಐಶ್ವರ್ಯಾ ನಟಿಸಿದ್ದರು.
(8 / 9)
ರಂಜನಿ ರಾಘವನ್: ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ರಂಜನಿ ರಾಘವನ್ ಸದ್ಯ ನಿರ್ದೇಶಕಿಯಾಗಿ ಭಡ್ತಿ ಪಡೆದಿದ್ದಾರೆ. ಇವರು ಕೂಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಅದೃಷ್ಟ ಪರೀಕ್ಷೆ ಮಾಡಿದ್ದರು. ಇವರು ರಾಜಹಂಸ, ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಪ್ಯೂ, ಕಾಂಗರೂ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು ಅವರಿಗೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ.
ಇತರ ಗ್ಯಾಲರಿಗಳು