ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವೈಭವದ ಮಹಾರಥೋತ್ಸವ ಸಂಪನ್ನ; ಫೋಟೊಸ್ ನೋಡಿ
- ದಕ್ಷಿಣ ಕನ್ನಡದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವೈಭವದ ಮಹಾರಥೋತ್ಸವ ಸಂಪನ್ನಗೊಂಡಿದೆ. 1 ತಿಂಗಳ ವಾರ್ಷಿಕ ಜಾತ್ರೆ ಸಾವಿರಾರು ಭಕ್ತರ ಸಾಕ್ಷಿಯೊಂದಿಗೆ ಮುಕ್ತಾಯವಾಗಿದೆ. ಫೋಟೊಸ್ ಇಲ್ಲಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
- ದಕ್ಷಿಣ ಕನ್ನಡದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ವೈಭವದ ಮಹಾರಥೋತ್ಸವ ಸಂಪನ್ನಗೊಂಡಿದೆ. 1 ತಿಂಗಳ ವಾರ್ಷಿಕ ಜಾತ್ರೆ ಸಾವಿರಾರು ಭಕ್ತರ ಸಾಕ್ಷಿಯೊಂದಿಗೆ ಮುಕ್ತಾಯವಾಗಿದೆ. ಫೋಟೊಸ್ ಇಲ್ಲಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
(1 / 10)
ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಸುದೀರ್ಘ ಒಂದು ತಿಂಗಳ ಕಾಲದ ವಾರ್ಷಿಕ ಜಾತ್ರೆಯ ನಿಮಿತ್ತ ವೈಭವದ ಮಹಾರಥೋತ್ಸವ ಗುರುವಾರ (ಏಪ್ರಿಲ್ 10) ಸಂಜೆ ನಡೆಯಿತು. ಭಕ್ತರ ಜಯಘೋಷದ ನಡುವೆ ರಥೋತ್ಸವ ಸಂಪನ್ನಗೊಂಡಿತು.
(2 / 10)
ಏ.9ರಂದು ಕಡೇ ಚೆಂಡಿನ ಉತ್ಸವದ ಬಳಿಕ ಗುರುವಾರ ರಥೋತ್ಸವ ನಡೆಯುತ್ತದೆ. ಈ ಸಂದರ್ಭ ಸಿಡಿಮದ್ದಿನ ಪ್ರದರ್ಶನವೂ ನಡೆಯಿತು. ವಿದ್ಯುತ್ ದೀಪಾಲಂಕಾರಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು.
(3 / 10)
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಮಹಾರಥೋತ್ಸವ ವೀಕ್ಷಿಸಲು ಏಪ್ರಿಲ್ 10ರ ಗುರುವಾರ ಸಂಜೆ ಸಹಸ್ರಾರು ಮಂದಿ ಸೇರಿದ್ದರು.
(4 / 10)
ರಥೋತ್ಸವದ ದಿನ ಬೆಳಗ್ಗೆ ದೇವರಲ್ಲಿ ವಿಧಿವತ್ತಾಗಿ ಪ್ರಾರ್ಥನೆ ನೆರವೇರಿಸಿ ಮಹಾಪೂಜೆಯ ಬಳಿಕ ದೇವರು ರಥಾರೋಹಣ ಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು.
(5 / 10)
ವಿಶೇಷ ಪೂಜೆ ನಡೆದು ಸಂಜೆ ರಥದಲ್ಲಿ ದೇವರಿಗೆ ಪೂಜೆಯ ಬಳಿಕ ಗುತ್ತಿನವರು ಹಾಗೂ ಭಕ್ತರು ತೆಂಗಿನ ಕಾಯಿ ಒಡೆದು ರಥ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಚೆಂಡಿನ ಗದ್ದೆಗೆ ಎಳೆಯಲಾಯಿತು. ಬಳಿಕ ಸುಡುಮದ್ದು ಪ್ರದರ್ಶನ ಆರಂಭಗೊಂಡು ಸುದೀರ್ಘ ಸಮಯದವರೆಗೆ ಮುಂದುವರಿತು.
(6 / 10)
ಸಹಸ್ರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು, ಅಲ್ಲೇ ಇದ್ದ ಸಂತೆಮಾರುಕಟ್ಟೆಯಲ್ಲಿ ಖರೀದಿ ವಹಿವಾಟಿನಲ್ಲಿ ತೊಡಗಿದ್ದು ಕಂಡುಬಂತು.
(8 / 10)
ಪೊಳಲಿ ರಾಜರಾಜೇಶ್ವರಿ ಮಹಾರಥೋತ್ಸವಕ್ಕೆ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು. ತೇರು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದಿದ್ದಾರೆ.
(9 / 10)
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ, ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಇತರ ಗ್ಯಾಲರಿಗಳು