Vaikunta Ekadasi 2025: ಜನವರಿ 10ಕ್ಕೆ ವೈಕುಂಠ ಏಕಾದಶಿ; ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಿವು, ಹೇಗಿರುತ್ತೆ ಸಂಭ್ರಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vaikunta Ekadasi 2025: ಜನವರಿ 10ಕ್ಕೆ ವೈಕುಂಠ ಏಕಾದಶಿ; ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಿವು, ಹೇಗಿರುತ್ತೆ ಸಂಭ್ರಮ

Vaikunta Ekadasi 2025: ಜನವರಿ 10ಕ್ಕೆ ವೈಕುಂಠ ಏಕಾದಶಿ; ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಿವು, ಹೇಗಿರುತ್ತೆ ಸಂಭ್ರಮ

  • ನಾಳೆ (ಜನವರಿ 10, ಶುಕ್ರವಾರ) ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ. ಈ ಸಡಗರದ ನಿಮಿತ್ತವಾಗಿ ಕರ್ನಾಟಕದಲ್ಲಿರುವ ಪ್ರಮುಖ ವೈಷ್ಣವ ಕ್ಷೇತ್ರಗಳ ಬಗ್ಗೆ ತಿಳಿಯೋಣ. ಮಾಲೂರಿನ ಚಿಕ್ಕತಿರುಪತಿಯಿಂದ ಹಿಡಿದು ಮೇಲುಕೋಟೆ ಚೆಲುವನಾರಾಯಣ ದೇವಾಲಯದವರಿಗೆ ದೇಗುಲಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ವೈಕುಂಠ ಏಕಾದಶಿ ದಿನ ಭಕ್ತರು ಉಪವಾಸವಿದ್ದು ವಿಷ್ಣು ಹಾಗೂ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಮರುದಿನ ಉಪವಾಸ ಅಂತ್ಯಗೊಳಿಸುತ್ತಾರೆ. ಈ ಶುಭದಿನದಂದು ಎಲ್ಲಾ ದೇವಾಲಯಗಳಲ್ಲಿ ಉತ್ತರದ ಬಾಗಿಲಿನಿಂದ ಭಕ್ತರಿಗೆ ದರ್ಶನ ಸೌಲಭ್ಯ ಮಾಡಲಾಗುತ್ತದೆ. ಇದನ್ನು ಮುಕ್ಕೋಟಿ ಏಕಾದಶಿ ಅಂತಲೂ ಕರೆಯುತ್ತಾರೆ.
icon

(1 / 11)

ವೈಕುಂಠ ಏಕಾದಶಿ ದಿನ ಭಕ್ತರು ಉಪವಾಸವಿದ್ದು ವಿಷ್ಣು ಹಾಗೂ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಮರುದಿನ ಉಪವಾಸ ಅಂತ್ಯಗೊಳಿಸುತ್ತಾರೆ. ಈ ಶುಭದಿನದಂದು ಎಲ್ಲಾ ದೇವಾಲಯಗಳಲ್ಲಿ ಉತ್ತರದ ಬಾಗಿಲಿನಿಂದ ಭಕ್ತರಿಗೆ ದರ್ಶನ ಸೌಲಭ್ಯ ಮಾಡಲಾಗುತ್ತದೆ. ಇದನ್ನು ಮುಕ್ಕೋಟಿ ಏಕಾದಶಿ ಅಂತಲೂ ಕರೆಯುತ್ತಾರೆ.

ನಾಳೆ (ಜನವರಿ 10, ಶುಕ್ರವಾರ) ವೈಕುಂಠ ಏಕಾದಶಿಯ ಆಚರಣೆಗಾಗಿ ಎಲ್ಲಾ ದೇವಾಲಯಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿಶೇಷ ದೀಪಾಲಂಕಾರ, ಪೆಂಡಾಲ್, ವಿವಿಧ ಬಣ್ಣಗಳ ಹೂವಿನ ಅಲಂಕಾರ, ಭಕ್ತರ ದರ್ಶನಕ್ಕೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. 
icon

(2 / 11)

ನಾಳೆ (ಜನವರಿ 10, ಶುಕ್ರವಾರ) ವೈಕುಂಠ ಏಕಾದಶಿಯ ಆಚರಣೆಗಾಗಿ ಎಲ್ಲಾ ದೇವಾಲಯಗಳಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿಶೇಷ ದೀಪಾಲಂಕಾರ, ಪೆಂಡಾಲ್, ವಿವಿಧ ಬಣ್ಣಗಳ ಹೂವಿನ ಅಲಂಕಾರ, ಭಕ್ತರ ದರ್ಶನಕ್ಕೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. 

ಕೋಲಾರ ಜಿಲ್ಲೆಯ ಮಾಲೂರಿನ ಚಿಕ್ಕ ತಿರುಪತಿಯಿಂದ ಹಿಡಿದು ತುಮಕೂರು ಜಿಲ್ಲೆಯ ದೇವರಾಯನದುರ್ಗದ ಯೋಗ ಮತ್ತು ಭೋಗ ನರಸಿಂಹ ದೇವಾಲಯಗಳ ವರೆಗೆ ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಲ್ಲಿ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಾಜ್ಯದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳ ವಿವರ ಇಲ್ಲಿದೆ.
icon

(3 / 11)

ಕೋಲಾರ ಜಿಲ್ಲೆಯ ಮಾಲೂರಿನ ಚಿಕ್ಕ ತಿರುಪತಿಯಿಂದ ಹಿಡಿದು ತುಮಕೂರು ಜಿಲ್ಲೆಯ ದೇವರಾಯನದುರ್ಗದ ಯೋಗ ಮತ್ತು ಭೋಗ ನರಸಿಂಹ ದೇವಾಲಯಗಳ ವರೆಗೆ ಕರ್ನಾಟಕದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳಲ್ಲಿ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಾಜ್ಯದ ಪ್ರಸಿದ್ಧ ವೈಷ್ಣವ ಕ್ಷೇತ್ರಗಳ ವಿವರ ಇಲ್ಲಿದೆ.

ಮಾಲೂರಿನ ಚಿಕ್ಕ ತಿರುಪತಿ: ಕೋಲಾರ ಜಿಲ್ಲೆ ಮಾಲೂರು ತಾಲೂಕು ಲಕ್ಕೂರು ಹೋಬಳ್ಳಿಯಲ್ಲಿರುವ ಚಿಕ್ಕ ತಿರುಪತಿ ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಕ್ಷೇತ್ರವಾಗಿದ್ದು, ವೈಕುಂಠ ಏಕಾದಶಿಯನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಚಿಕ್ಕ ತಿರುಪತಿಯಲ್ಲಿನ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. 
icon

(4 / 11)

ಮಾಲೂರಿನ ಚಿಕ್ಕ ತಿರುಪತಿ: ಕೋಲಾರ ಜಿಲ್ಲೆ ಮಾಲೂರು ತಾಲೂಕು ಲಕ್ಕೂರು ಹೋಬಳ್ಳಿಯಲ್ಲಿರುವ ಚಿಕ್ಕ ತಿರುಪತಿ ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಕ್ಷೇತ್ರವಾಗಿದ್ದು, ವೈಕುಂಠ ಏಕಾದಶಿಯನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಚಿಕ್ಕ ತಿರುಪತಿಯಲ್ಲಿನ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. 

ಅರಸೀಕೆರೆ ಮಾಲೇಕಲ್ ಚಿಕ್ಕ ತಿರುಪತಿ: ರಾಜ್ಯದ ಮತ್ತೊಂದು ಚಿಕ್ಕ ತಿರುಪತಿ ಅಂತಲೇ ಜನಪ್ರಿಯವಾಗಿದ್ದು, ಇಲ್ಲಿನ ಲಕ್ಷ್ಮಿವೆಂಕಟರಮಣ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕ ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ.
icon

(5 / 11)

ಅರಸೀಕೆರೆ ಮಾಲೇಕಲ್ ಚಿಕ್ಕ ತಿರುಪತಿ: ರಾಜ್ಯದ ಮತ್ತೊಂದು ಚಿಕ್ಕ ತಿರುಪತಿ ಅಂತಲೇ ಜನಪ್ರಿಯವಾಗಿದ್ದು, ಇಲ್ಲಿನ ಲಕ್ಷ್ಮಿವೆಂಕಟರಮಣ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕ ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ.

ಬೆಂಗಳೂರು ಇಸ್ಕಾನ್: ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ರಾಧಾ ಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ಇಲ್ಲಿ ವಿಶೇಷ ಸೇವೆಗಳನ್ನು ಮಾಡಲಾಗುತ್ತದೆ. ನೂರಾರು ಮಂದಿ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. 
icon

(6 / 11)

ಬೆಂಗಳೂರು ಇಸ್ಕಾನ್: ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ರಾಧಾ ಕೃಷ್ಣನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ವೈಕುಂಠ ಏಕಾದಶಿಯಂದು ಇಲ್ಲಿ ವಿಶೇಷ ಸೇವೆಗಳನ್ನು ಮಾಡಲಾಗುತ್ತದೆ. ನೂರಾರು ಮಂದಿ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. 

ರಂಗನಾಥಸ್ವಾಮಿ ದೇಗುಲ, ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಾಲಯದಲ್ಲೂ ವೈಕುಂಠ ಏಕಾದಶಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ವಿಷ್ಣುವಿನ ಪ್ರತಿರೂಪದ ಈ ದೇವಾಲಯವನ್ನು ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ. ವೈಕುಂಠ ಏಕಾದಶಿಯಂದು ನೂರಾರು ಭಕ್ತರು ದೇವರ ದರ್ಶನ ಪಡೆಯಲಿದ್ದಾರೆ.
icon

(7 / 11)

ರಂಗನಾಥಸ್ವಾಮಿ ದೇಗುಲ, ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಾಲಯದಲ್ಲೂ ವೈಕುಂಠ ಏಕಾದಶಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ವಿಷ್ಣುವಿನ ಪ್ರತಿರೂಪದ ಈ ದೇವಾಲಯವನ್ನು ವೈಷ್ಣವ ಸಂಪ್ರದಾಯದ 108 ಅಭಿಮಾನ ಕ್ಷೇತ್ರಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ. ವೈಕುಂಠ ಏಕಾದಶಿಯಂದು ನೂರಾರು ಭಕ್ತರು ದೇವರ ದರ್ಶನ ಪಡೆಯಲಿದ್ದಾರೆ.

ಅಪ್ರಮೇಯ ಸ್ವಾಮಿ ದೇಗುಲ, ಚನ್ನಪಟ್ಟಣ: ರಾಮನಗರ ಜಿಲ್ಲೆ ಚನ್ನಪಟ್ಟಣದ ಸಮೀಪದಲ್ಲೇ ಇರುವ ಅಪ್ರಮೇಯ ಸ್ವಾಮಿ ದೇಗುಲ ಕರ್ನಾಟಕ ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ. ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ಮಾಡಲಾಗುತ್ತದೆ. 
icon

(8 / 11)

ಅಪ್ರಮೇಯ ಸ್ವಾಮಿ ದೇಗುಲ, ಚನ್ನಪಟ್ಟಣ: ರಾಮನಗರ ಜಿಲ್ಲೆ ಚನ್ನಪಟ್ಟಣದ ಸಮೀಪದಲ್ಲೇ ಇರುವ ಅಪ್ರಮೇಯ ಸ್ವಾಮಿ ದೇಗುಲ ಕರ್ನಾಟಕ ಪ್ರಮುಖ ವೈಷ್ಣವ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ. ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ಮಾಡಲಾಗುತ್ತದೆ. 

ಮೇಲುಕೋಟೆ ಚೆಲುವನಾರಾಯಣ ದೇಗುಲ:ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣ ದೇವಾಲಯವು  ಐತಿಹಾಸಿಕವಾಗಿದ್ದು, ವೈಕುಂಠ ಏಕಾದಶಿಯನ್ನು ಇಲ್ಲಿ ಸಂಭ್ರಮ ಸಡಗರದಿಂದ ನೆರವೇರುತ್ತದೆ. ದೇವಾಲಯದ ಆವರಣದಲ್ಲಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ನೂರಾರು ಭಕ್ತರು ಚೆಲುವನಾರಾಯಣನ ದರ್ಶನಕ್ಕೆ ಕಾತುರರಾಗಿದ್ದಾರೆ.
icon

(9 / 11)

ಮೇಲುಕೋಟೆ ಚೆಲುವನಾರಾಯಣ ದೇಗುಲ:ಮಂಡ್ಯ ಜಿಲ್ಲೆಯ ಮೇಲುಕೋಟೆ ಚೆಲುವನಾರಾಯಣ ದೇವಾಲಯವು  ಐತಿಹಾಸಿಕವಾಗಿದ್ದು, ವೈಕುಂಠ ಏಕಾದಶಿಯನ್ನು ಇಲ್ಲಿ ಸಂಭ್ರಮ ಸಡಗರದಿಂದ ನೆರವೇರುತ್ತದೆ. ದೇವಾಲಯದ ಆವರಣದಲ್ಲಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ನೂರಾರು ಭಕ್ತರು ಚೆಲುವನಾರಾಯಣನ ದರ್ಶನಕ್ಕೆ ಕಾತುರರಾಗಿದ್ದಾರೆ.

ಕೋಟ ಗುರು ನರಸಿಂಹ ದೇಗುಲ:ಉಡುಪಿ ನಗರದಿಂದ 22 ಕಿಲೋ ಮೀಟರ್ ದೂರದಲ್ಲಿರುವ ಕೋಟ ಗುರು ನರಸಿಂಹ ದೇವಾಲಯದಲ್ಲಿ ಸಾಲಿಗ್ರಾಮವು ವಿಷ್ಣುವಿನ ಸಿಂಹದ ತಲೆಯ ರೂಪದಲ್ಲಿದೆ. ಇಲ್ಲೂ ಕೂಡ ಜನವರಿ 10ರ ಶುಕ್ರವಾರ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭಕ್ತರು ದೇವರ ದರ್ಶನ ಪಡೆಯಲಿದ್ದಾರೆ.
icon

(10 / 11)

ಕೋಟ ಗುರು ನರಸಿಂಹ ದೇಗುಲ:ಉಡುಪಿ ನಗರದಿಂದ 22 ಕಿಲೋ ಮೀಟರ್ ದೂರದಲ್ಲಿರುವ ಕೋಟ ಗುರು ನರಸಿಂಹ ದೇವಾಲಯದಲ್ಲಿ ಸಾಲಿಗ್ರಾಮವು ವಿಷ್ಣುವಿನ ಸಿಂಹದ ತಲೆಯ ರೂಪದಲ್ಲಿದೆ. ಇಲ್ಲೂ ಕೂಡ ಜನವರಿ 10ರ ಶುಕ್ರವಾರ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭಕ್ತರು ದೇವರ ದರ್ಶನ ಪಡೆಯಲಿದ್ದಾರೆ.

ದೇವರಾಯನದುರ್ಗ ಯೋಗ ಲಕ್ಷ್ಮಿನರಸಿಂಹ ಮತ್ತು ಭೋಗ ನರಸಿಂಹ: ಬೆಟ್ಟದ ತಪ್ಪಲಿನಲ್ಲಿರುವ ದೇವರಾಯನದುರ್ಗದ ಯೋಗ ನರಸಿಂಹ ದೇವಾಲಯ ಇಲ್ಲಿನ ಮೂದಲ ದೇವಾಲಯವಾಗಿದೆ. ಭೋಗ  ನರಸಿಂಹ ದೇವಾಲಯ ಎರಡನೇ ಪ್ರಮುಖ ದೇವಾಲಯವಾಗಿದ್ದು,  ಕರ್ನಾಟಕ ಪ್ರಮುಖ ವೈಷ್ಣವ ಕ್ಷೇತ್ರಗಳು ಎನಿಸಿವೆ.
icon

(11 / 11)

ದೇವರಾಯನದುರ್ಗ ಯೋಗ ಲಕ್ಷ್ಮಿನರಸಿಂಹ ಮತ್ತು ಭೋಗ ನರಸಿಂಹ: ಬೆಟ್ಟದ ತಪ್ಪಲಿನಲ್ಲಿರುವ ದೇವರಾಯನದುರ್ಗದ ಯೋಗ ನರಸಿಂಹ ದೇವಾಲಯ ಇಲ್ಲಿನ ಮೂದಲ ದೇವಾಲಯವಾಗಿದೆ. ಭೋಗ  ನರಸಿಂಹ ದೇವಾಲಯ ಎರಡನೇ ಪ್ರಮುಖ ದೇವಾಲಯವಾಗಿದ್ದು,  ಕರ್ನಾಟಕ ಪ್ರಮುಖ ವೈಷ್ಣವ ಕ್ಷೇತ್ರಗಳು ಎನಿಸಿವೆ.


ಇತರ ಗ್ಯಾಲರಿಗಳು