ಚಿನ್ನ ಗೆದ್ದ ಜಾಫರ್ ಖಾನ್-ನಿಯೋಲ್ ಅನ್ನಾಗೆ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ, ಹಾಕಿಯಲ್ಲಿ ಹಾವೇರಿ ಚಾಂಪಿಯನ್; ಕರ್ನಾಟಕ ಕ್ರೀಡಾಕೂಟ ಸಂಪನ್ನ
- ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ (ಜನವರಿ 23) ಜರುಗಿದ ಕರ್ನಾಟಕ ಕ್ರೀಡಾಕೂಟ ಸಮಾರೋಪ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಗೆದ್ದವರಿಗೆ ಪದಕ ವಿತರಣೆ ಮಾಡಲಾಯಿತು.
- ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ (ಜನವರಿ 23) ಜರುಗಿದ ಕರ್ನಾಟಕ ಕ್ರೀಡಾಕೂಟ ಸಮಾರೋಪ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಗೆದ್ದವರಿಗೆ ಪದಕ ವಿತರಣೆ ಮಾಡಲಾಯಿತು.
(1 / 10)
ಬೆಳಗಾವಿಯ ಜಾಫರ್ ಖಾನ್ ಮತ್ತು ಬೆಂಗಳೂರಿನ ನಿಯೋಲ್ ಅನ್ನಾ ಕಾರ್ನೆಲಿಯೊ ಅವರು 'ಕರ್ನಾಟಕ ಕ್ರೀಡಾಕೂಟ'ದ ಅಥ್ಲೇಟಿಕ್ಸ್ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಶ್ರೇಷ್ಠ ಅಥ್ಲೀಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ದಕ್ಷಿಣ ಕನ್ನಡ-ಉಡುಪಿಯಲ್ಲಿ ನಡೆದ ಕ್ರೀಡಾಕೂಟದ ಸಮಾರೋಪವು ಜನವರಿ 24ರಂದು ನಡೆಯಿತು.
(2 / 10)
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಲಾಂಗ್ ಜಂಪ್ನಲ್ಲಿ 7.44 ಮೀಟರ್ ಜಗಿದು ಚಿನ್ನದ ಪದಕ ಜಯಿಸಿದ್ದ ಜಾಫರ್ ಖಾನ್, ಈ ಕೂಟದಲ್ಲಿ ಒಟ್ಟು 1,016 ಅಂಕ ಪಡೆದರೆ, ನಿಯೋಲ್ 100 ಮೀಟರ್ ಓಟವನ್ನು 11 ನಿಮಿಷ 93 ಸೆಕೆಂಡ್ಗಳಲ್ಲಿ ಪೂರೈಸಿ ಒಟ್ಟು 1,005 ಅಂಕ ಪಡೆದು ಮಿಂಚಿದರು.
(3 / 10)
ಖೋ ಖೋ ಪುರುಷರ ವಿಭಾಗದಲ್ಲಿ ಬೆಳಗಾವಿ ಚಿನ್ನ, ಬಾಗಲಕೋಟೆ ಬೆಳ್ಳಿ, ಧಾರವಾಡ-ರಾಯಚೂರು ತಂಡಗಳು ಕಂಚಿನ ಪದಕ ಗೆದ್ದಿವೆ. ಖೋ ಖೋ ಮಹಿಳೆಯರ ವಿಭಾಗದಲ್ಲಿ ಬೆಳಗಾವಿ ತಂಡ ಚಿನ್ನ, ಮೈಸೂರು ಬೆಳ್ಳಿ, ಬೆಂಗಳೂರು ಮತ್ತು ರಾಯಚೂರು ತಂಡಗಳು ಕಂಚಿನ ಪದಕ ಗೆದ್ದವು.
(4 / 10)
ವಾಲಿಬಾಲ್ನಲ್ಲಿ ಪುರುಷರ ವಿಭಾಗದಲ್ಲಿ ಬೆಂಗಳೂರು ಎ ಚಾಂಪಿಯನ್ ಆಗಿದೆ. ಉಡುಪಿ ಬೆಳ್ಳಿ, ಬೆಳಗಾವಿ ಕಂಚು ಗೆದ್ದಿತು. ಮಹಿಳೆಯರ ವಿಭಾಗದಲ್ಲಿ ಉಡುಪಿ ತಂಡ ಚಾಂಪಿಯನ್ ಆಯಿತು. ಮೈಸೂರು ಬೆಳ್ಳಿ, ಕೊಪ್ಪಳ ತಂಡ ಕಂಚು ಗೆದ್ದಿತು.
(5 / 10)
ಪುರುಷರ ಹ್ಯಾಂಡ್ ಬಾಲ್ನಲ್ಲಿ ಬೆಂಗಳೂರು ಗ್ರಾಮಾಂತರ ಚಿನ್ನ, ಮೈಸೂರು ಬೆಳ್ಳಿ, ಬೆಂಗಳೂರು ನಗರ, ಉಜಿರೆಯ ಎಸ್ಡಿಎಂ ತಂಡಗಳು ಕಂಚಿನ ಪದಕ ಗೆದ್ದವು. ಮಹಿಳೆಯರ ವಿಭಾಗದಲ್ಲಿ ಹಾಸನ ಚಿನ್ನ, ದಾವಣಗೆರೆ ಬೆಳ್ಳಿ, ಚಿತ್ರದುರ್ಗ, ಬೆಂಗಳೂರು ಕಂಚು ಗೆದ್ದಿದ್ದಾರೆ.
(6 / 10)
ಪುರುಷರ ಬ್ಯಾಸ್ಕೆಟ್ ಬಾಲ್ನಲ್ಲಿ ಬ್ಯಾಂಕ್ ಆಫ್ ಬರೋಡಾ ಚಿನ್ನ ಗೆದ್ದರೆ, ಡೈಸ್ ಬೆಂಗಳೂರು ಬೆಳ್ಳಿಗೆ ಮುತ್ತಿಕ್ಕಿತು. ದಕ್ಷಿಣ ಕನ್ನಡ ಕಂಚು ಗೆದ್ದಿತು. ಮಹಿಳೆಯರ ವಿಭಾಗದಲ್ಲಿ ಮೌಂಟ್ಸ್ ತಂಡ ಚಿನ್ನ, ಡೈಸ್ ಮೈಸೂರು ಬೆಳ್ಳಿ, ಡೈಸ್ ಮಂಡ್ಯ ಕಂಚು ಗೆದ್ದಿತು.
(8 / 10)
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, 'ನಮ್ಮ ಅಥ್ಲೀಟ್ಗಳ ಬದ್ಧತೆ ಮತ್ತು ಪರಿಶ್ರಮಕ್ಕೆ ಶ್ಲಾಘನೀಯ. ನೂತನ ಪ್ರತಿಭೆಗಳನ್ನು ಹುಡುಕುವುದಕ್ಕಾಗಿ ಪ್ರಾದೇಶಿಕ ಮಟ್ಟದಲ್ಲಿ 3 ತಿಂಗಳಿಗೊಮ್ಮೆ ಮತ್ತು ಜಿಲ್ಲಾಮಟ್ಟದಲ್ಲಿ 6 ತಿಂಗಳಿಗೊಮ್ಮೆ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಬೇಕು' ಎಂದು ಕೋರಿದ್ದಾರೆ.
(9 / 10)
ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿ, 'ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿದರೆ ಇತರೆ ಕಾನೂನು ಬಾಹಿರ ಚಟುವಟಿಕೆಗಳ ಕಡೆಗೆ ಯುವಜನರು ಗಮನಹರಿಸುವುದನ್ನು ತಡೆಯಬಹುದು. ಕರ್ನಾಟಕ ಕ್ರೀಡಾಕೂಟವನ್ನು ಈ ವರ್ಷ ಮಂಗಳೂರು ಮತ್ತು ಉಡುಪಿಯಲ್ಲಿ ಆಯೋಜಿಸಲಾಗಿದ್ದು, ಮುಂದಿನ ವರ್ಷ ತುಮಕೂರಿನಲ್ಲಿ ನಡೆಸಬೇಕೆಂದು' ಎಂದು ಮನವಿ ಮಾಡಿದ್ದಾರೆ.
ಇತರ ಗ್ಯಾಲರಿಗಳು