Summer 2025: ಕೊಡಗು ಭಾಗದಲ್ಲಿ ಆಗಲೇ ಬಿಸಿಲು ಜೋರು, ನಿತ್ಯ ಹರಿದ್ವರ್ಣ ಕಾಡು ನಾಗರಹೊಳೆಯಲ್ಲಿ ವನ್ಯಜೀವಿಗಳ ಪರಿತಾಪ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer 2025: ಕೊಡಗು ಭಾಗದಲ್ಲಿ ಆಗಲೇ ಬಿಸಿಲು ಜೋರು, ನಿತ್ಯ ಹರಿದ್ವರ್ಣ ಕಾಡು ನಾಗರಹೊಳೆಯಲ್ಲಿ ವನ್ಯಜೀವಿಗಳ ಪರಿತಾಪ

Summer 2025: ಕೊಡಗು ಭಾಗದಲ್ಲಿ ಆಗಲೇ ಬಿಸಿಲು ಜೋರು, ನಿತ್ಯ ಹರಿದ್ವರ್ಣ ಕಾಡು ನಾಗರಹೊಳೆಯಲ್ಲಿ ವನ್ಯಜೀವಿಗಳ ಪರಿತಾಪ

  • Summer 2025: ಫೆಬ್ರವರಿ ಎರಡನೇ ವಾರದಲ್ಲಿ ಕರ್ನಾಟಕದಲ್ಲಿ ಬಿಸಿಲು ಜೋರಾಗಿದೆ. ಕರ್ನಾಟಕದ ನಿತ್ಯ ಹರಿದ್ವರ್ಣ ಕಾಡು ನಾಗರಹೊಳೆಯಲ್ಲೂ ಬಿಸಿಲ ಬೇಗೆ ಕಂಡು ಬಂದಿದೆ. ಅದರ ಚಿತ್ರ ನೋಟ ಇಲ್ಲಿದೆ.

ಕೊಡಗು ಹಾಗೂ ಮೈಸೂರು ಜಿಲ್ಲೆಯಲ್ಲಿ ಹಂಚಿಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಸಲಬೇಗೆ ಜೋರಾಗಿದೆ. ಜಿಂಕೆಗಳು ನೀರು ಹುಡುಕಿಕೊಂಡು ಹೋಗಿ ಕುಡಿದು ಬಿಸಿಲ ಬವಣೆ ನೀಗಿಸಿಕೊಳ್ಳುತ್ತಿವೆ. 
icon

(1 / 8)

ಕೊಡಗು ಹಾಗೂ ಮೈಸೂರು ಜಿಲ್ಲೆಯಲ್ಲಿ ಹಂಚಿಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಸಲಬೇಗೆ ಜೋರಾಗಿದೆ. ಜಿಂಕೆಗಳು ನೀರು ಹುಡುಕಿಕೊಂಡು ಹೋಗಿ ಕುಡಿದು ಬಿಸಿಲ ಬವಣೆ ನೀಗಿಸಿಕೊಳ್ಳುತ್ತಿವೆ. 
(Aruna Nambiyar)

ಬೇಸಿಗೆ ಕಾಲ ಶುರುವಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕಾಡಿನ ಬೆಂಕಿ ತಡೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೇಸಿಗೆ ಕಾಲದ ನೋಟ ಹೀಗಿದೆ.
icon

(2 / 8)

ಬೇಸಿಗೆ ಕಾಲ ಶುರುವಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕಾಡಿನ ಬೆಂಕಿ ತಡೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೇಸಿಗೆ ಕಾಲದ ನೋಟ ಹೀಗಿದೆ.

ನಿತ್ಯ ಹರಿದ್ವರ್ಣ ಕಾಡು ಎಂದು ಹೆಸರಾಗಿರುವ ನಾಗರಹೊಳೆಯ ಹಲವು ಭಾಗದಲ್ಲಿ ಹಸಿರಿನ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದೆ.
icon

(3 / 8)

ನಿತ್ಯ ಹರಿದ್ವರ್ಣ ಕಾಡು ಎಂದು ಹೆಸರಾಗಿರುವ ನಾಗರಹೊಳೆಯ ಹಲವು ಭಾಗದಲ್ಲಿ ಹಸಿರಿನ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದೆ.

ಈಗಾಗಲೇ ನಾಗರಹೊಳೆಯಲ್ಲಿ ಕಾಡಿನ ಬೆಂಕಿಗೆ ಮುನ್ನೆಚ್ಚರಿಕೆಯಾಗಿ ಫೈರ್‌ಲೈನ್‌ಗಳನ್ನು ಹಾಕಲಾಗಿದೆ. ಹಸಿರು ನಿಧಾನವಾಗಿ ಮಾಯವಾಗುತ್ತಿದೆ.
icon

(4 / 8)

ಈಗಾಗಲೇ ನಾಗರಹೊಳೆಯಲ್ಲಿ ಕಾಡಿನ ಬೆಂಕಿಗೆ ಮುನ್ನೆಚ್ಚರಿಕೆಯಾಗಿ ಫೈರ್‌ಲೈನ್‌ಗಳನ್ನು ಹಾಕಲಾಗಿದೆ. ಹಸಿರು ನಿಧಾನವಾಗಿ ಮಾಯವಾಗುತ್ತಿದೆ.

ಹಸಿರಿನ ಪ್ರಮಾಣ ಕಡಿಮೆಯಾಗಿ ಅಲ್ಲಲ್ಲಿ ಧೂಳಿನ ವಾತಾವರಣ. ಸೂರ್ಯನ ಪ್ರಭಾವದಿಂದ ನಾಗರಹೊಳೆಗೆ ಬರುವ ಪ್ರವಾಸಿಗರು ಸುಸ್ತಾಗುವ ಸನ್ನಿವೇಶವೂ ಇದೆ.
icon

(5 / 8)

ಹಸಿರಿನ ಪ್ರಮಾಣ ಕಡಿಮೆಯಾಗಿ ಅಲ್ಲಲ್ಲಿ ಧೂಳಿನ ವಾತಾವರಣ. ಸೂರ್ಯನ ಪ್ರಭಾವದಿಂದ ನಾಗರಹೊಳೆಗೆ ಬರುವ ಪ್ರವಾಸಿಗರು ಸುಸ್ತಾಗುವ ಸನ್ನಿವೇಶವೂ ಇದೆ.

ನಾಗರಹೊಳೆಯಲ್ಲಿ ನಿತ್ಯ ಸಫಾರಿಯಿದೆ. ಬಿಸಿಲ ನಡುವೆಯೂ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಪ್ರಾಣಿಗಳನ್ನು ನೋಡಲು ಸಫಾರಿ ಹೋಗುತ್ತಿದ್ದಾರೆ.
icon

(6 / 8)

ನಾಗರಹೊಳೆಯಲ್ಲಿ ನಿತ್ಯ ಸಫಾರಿಯಿದೆ. ಬಿಸಿಲ ನಡುವೆಯೂ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಪ್ರಾಣಿಗಳನ್ನು ನೋಡಲು ಸಫಾರಿ ಹೋಗುತ್ತಿದ್ದಾರೆ.
(Aruna Nambiyar)

ನಾಗರಹೊಳೆಗೆ ಆಗಮಿಸುವ ವಿದೇಶಿ ಪ್ರವಾಸಿಗರಿಗೂ ಬಿಸಿಲ ಝಳ ತಟ್ಟಿದೆ. ಹಲವರು ನೆರಳಿನಲ್ಲಿ ಕುಳಿತು ಚರ್ಚೆಯಲ್ಲಿ ತೊಡಗಿದ್ದಾರೆ.
icon

(7 / 8)

ನಾಗರಹೊಳೆಗೆ ಆಗಮಿಸುವ ವಿದೇಶಿ ಪ್ರವಾಸಿಗರಿಗೂ ಬಿಸಿಲ ಝಳ ತಟ್ಟಿದೆ. ಹಲವರು ನೆರಳಿನಲ್ಲಿ ಕುಳಿತು ಚರ್ಚೆಯಲ್ಲಿ ತೊಡಗಿದ್ದಾರೆ.
(Nataraj)

ಕೇರಳ ಹಾಗೂ ಮೈಸೂರು ಜಿಲ್ಲೆಗೆ ಹೊಂದಿಕೊಂಡ ಕಬಿನಿ ಹಿನ್ನೀರೇ ಬಹುತೇಕ ವನ್ಯಜೀವಿಗಳಿಗೆ ನೀರಿಗೆ ಆಸರೆ. ಇತ್ತ ಕಡೆಯೇ ಪ್ರಾಣಿಗಳು ನೀರು ಹುಡುಕಿಕೊಂಡು ಬರುತ್ತಿವೆ. 
icon

(8 / 8)

ಕೇರಳ ಹಾಗೂ ಮೈಸೂರು ಜಿಲ್ಲೆಗೆ ಹೊಂದಿಕೊಂಡ ಕಬಿನಿ ಹಿನ್ನೀರೇ ಬಹುತೇಕ ವನ್ಯಜೀವಿಗಳಿಗೆ ನೀರಿಗೆ ಆಸರೆ. ಇತ್ತ ಕಡೆಯೇ ಪ್ರಾಣಿಗಳು ನೀರು ಹುಡುಕಿಕೊಂಡು ಬರುತ್ತಿವೆ. 
(Shruti Shankar)


ಇತರ ಗ್ಯಾಲರಿಗಳು