Wild life in Summer: ನಾಗರಹೊಳೆ ಅರಣ್ಯದಲ್ಲೂ ಬಿಸಿಲ ಬೇಗೆ, ನೀರು- ನೆರಳು ಹುಡುಕಾಟದಲ್ಲಿ ವನ್ಯಜೀವಿಗಳು; ಹೀಗಿವೆ ಭಿನ್ನ ನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wild Life In Summer: ನಾಗರಹೊಳೆ ಅರಣ್ಯದಲ್ಲೂ ಬಿಸಿಲ ಬೇಗೆ, ನೀರು- ನೆರಳು ಹುಡುಕಾಟದಲ್ಲಿ ವನ್ಯಜೀವಿಗಳು; ಹೀಗಿವೆ ಭಿನ್ನ ನೋಟ

Wild life in Summer: ನಾಗರಹೊಳೆ ಅರಣ್ಯದಲ್ಲೂ ಬಿಸಿಲ ಬೇಗೆ, ನೀರು- ನೆರಳು ಹುಡುಕಾಟದಲ್ಲಿ ವನ್ಯಜೀವಿಗಳು; ಹೀಗಿವೆ ಭಿನ್ನ ನೋಟ

  • Wild life in Summer: ಈಗ ಎಲ್ಲೆಡೆ ಬಿರು ಬಿಸಿಲು. ಅದು ಕಾಡನ್ನೂ ಬಿಟ್ಟಿಲ್ಲ. ನಿತ್ಯ ಹರಿದ್ವರ್ಣ ಕಾಡು ಎನ್ನಿಸಿರುವ ನಾಗರಹೊಳೆಯಲ್ಲೂ ಬಿಸಿಲು ಜೋರಿದೆ. ಈ ವೇಳೆ ವನ್ಯಜೀವಿಗಳ ಬಿಸಿಲ ದಿನಗಳ ಬದುಕವನ್ನು ಮೈಸೂರಿನ ಛಾಯಾಗ್ರಾಹಕ ಅನುರಾಗ್‌ ಬಸವರಾಜ್‌ ಸೆರೆ ಹಿಡಿದಿದ್ದಾರೆ.

ಅಬ್ಬಬ್ಬಾ ಏನು ಬಿಸಿಲು ಎನ್ನುತ್ತಿದ್ದಾನೆ ಹುಲಿರಾಯ. ನೀರು ಸಿಕ್ಕರೆ ಅಷ್ಟೇ ಸಾಕು ಎಂದು ಹುಡುಕಿಕೊಂಡು ಬಂದು ದೇಹದ ಕಾವು ತಣಿಸಿಕೊಳ್ಳುತ್ತಿರುವ ಹುಲಿ.
icon

(1 / 10)

ಅಬ್ಬಬ್ಬಾ ಏನು ಬಿಸಿಲು ಎನ್ನುತ್ತಿದ್ದಾನೆ ಹುಲಿರಾಯ. ನೀರು ಸಿಕ್ಕರೆ ಅಷ್ಟೇ ಸಾಕು ಎಂದು ಹುಡುಕಿಕೊಂಡು ಬಂದು ದೇಹದ ಕಾವು ತಣಿಸಿಕೊಳ್ಳುತ್ತಿರುವ ಹುಲಿ.

ನೀರಿನಲ್ಲಿ ಕೆಲಹೊತ್ತು ಮಲಗಿ ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳುವ ಪ್ರಯತ್ನಿಸಿದ ಹುಲಿ ರಾಯನಿಗೆ ಆ ಕೆರೆಯೇ ದಾಹ ತೀರಿಸುವ  ಜಲದಾಣ.
icon

(2 / 10)

ನೀರಿನಲ್ಲಿ ಕೆಲಹೊತ್ತು ಮಲಗಿ ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳುವ ಪ್ರಯತ್ನಿಸಿದ ಹುಲಿ ರಾಯನಿಗೆ ಆ ಕೆರೆಯೇ ದಾಹ ತೀರಿಸುವ  ಜಲದಾಣ.

ನಾಗರಹೊಳೆಯಲ್ಲಿ ಅಲ್ಲಲ್ಲೇ ಕೆರೆಗಳಲ್ಲಿ ನೀರು ಇದೆ. ಕೆಲವು ಕಡೆ ಅರಣ್ಯ ಇಲಾಖೆಯವರೆ ಟ್ಯಾಂಕರ್‌ ಮೂಲಕ ನೀರು ಹರಿಸುತ್ತಲೂ ಇದ್ದಾರೆ. ಇಂತಲ್ಲಿಗೆ ಹುಲಿ ಬಂದು ಕೆಲ ಹೊತ್ತು ಕಳೆದು ಹೋಗುತ್ತಿದೆ.
icon

(3 / 10)

ನಾಗರಹೊಳೆಯಲ್ಲಿ ಅಲ್ಲಲ್ಲೇ ಕೆರೆಗಳಲ್ಲಿ ನೀರು ಇದೆ. ಕೆಲವು ಕಡೆ ಅರಣ್ಯ ಇಲಾಖೆಯವರೆ ಟ್ಯಾಂಕರ್‌ ಮೂಲಕ ನೀರು ಹರಿಸುತ್ತಲೂ ಇದ್ದಾರೆ. ಇಂತಲ್ಲಿಗೆ ಹುಲಿ ಬಂದು ಕೆಲ ಹೊತ್ತು ಕಳೆದು ಹೋಗುತ್ತಿದೆ.

ಚಿರತೆಗೂ ಬಿಡಿದ ಚಿಂತೆ ಎನ್ನುವಂತೆ ನಾಗರಹೊಳೆಯಲ್ಲಿ ಚಿರತೆಯೊಂದು ಬಿಸಿಲಿನ ನಡುವೆ ಕಂಡದ್ದು ಹೀಗೆ.
icon

(4 / 10)

ಚಿರತೆಗೂ ಬಿಡಿದ ಚಿಂತೆ ಎನ್ನುವಂತೆ ನಾಗರಹೊಳೆಯಲ್ಲಿ ಚಿರತೆಯೊಂದು ಬಿಸಿಲಿನ ನಡುವೆ ಕಂಡದ್ದು ಹೀಗೆ.

ನಾಗರಹೊಳೆಯಲ್ಲಿ ಬಹಳಷ್ಟು ಕಡೆ ಮರಗಳು ಒಣಗಿ ವಸಂತ ಮಾಸದ ಆಗಮನದಂತೆ ಚಿಗುರು ಇನ್ನಷ್ಟೆ ಶುರುವಾಗುತ್ತಿದೆ. ಬಿಸಿಲ ನಡುವೆಯೆ ತಾಯಿ ಹಾಗೂ ಮರಿ ಆನೆಗಳ ಸಮಾಗಮವೂ ಆಯಿತು.
icon

(5 / 10)

ನಾಗರಹೊಳೆಯಲ್ಲಿ ಬಹಳಷ್ಟು ಕಡೆ ಮರಗಳು ಒಣಗಿ ವಸಂತ ಮಾಸದ ಆಗಮನದಂತೆ ಚಿಗುರು ಇನ್ನಷ್ಟೆ ಶುರುವಾಗುತ್ತಿದೆ. ಬಿಸಿಲ ನಡುವೆಯೆ ತಾಯಿ ಹಾಗೂ ಮರಿ ಆನೆಗಳ ಸಮಾಗಮವೂ ಆಯಿತು.

ನಾಗರಹೊಳೆಯ ಹಲವು ಭಾಗದಲ್ಲಿ ಬಿಸಿಲಿನಿಂದ ಹಸಿರು ಕಡಿಮೆಯಾಗಿದೆ. ಹುಲ್ಲೇ ಪ್ರಮುಖ ಆಹಾರ ಆಗಿರುವ ಆನೆಗಳು ಹುಡುಕಿಕೊಂಡು ಹೋಗುತ್ತವೆ. ಒಂಟಿ ಸಲಗನ ಹೆಜ್ಜೆ ಇದೆ ದಿಕ್ಕಿನಲ್ಲಿ ಇತ್ತು.
icon

(6 / 10)

ನಾಗರಹೊಳೆಯ ಹಲವು ಭಾಗದಲ್ಲಿ ಬಿಸಿಲಿನಿಂದ ಹಸಿರು ಕಡಿಮೆಯಾಗಿದೆ. ಹುಲ್ಲೇ ಪ್ರಮುಖ ಆಹಾರ ಆಗಿರುವ ಆನೆಗಳು ಹುಡುಕಿಕೊಂಡು ಹೋಗುತ್ತವೆ. ಒಂಟಿ ಸಲಗನ ಹೆಜ್ಜೆ ಇದೆ ದಿಕ್ಕಿನಲ್ಲಿ ಇತ್ತು.

ಜೀವ ಭಯದ ನಡುವೆಯೇ ಜಿಂಕೆ ಜೋಡಿ ನಾಗರಹೊಳೆಯ ವ್ಯಾಪ್ತಿಯ ಕೆರೆಯೊಂದರಲ್ಲಿ ನೀರು ಕುಡಿಯುತ್ತಿವೆ. ಕೆಲ ದಿನಗಳ ಹಿಂದೆ ಹೀಗೆ ನೀರು ಕುಡಿಯಲು ಬಂದ ಜಿಂಕೆಯನ್ನು ಹುಲಿ ಬೇಟೆ ಕೂಡ ಅಡಿತ್ತು.
icon

(7 / 10)

ಜೀವ ಭಯದ ನಡುವೆಯೇ ಜಿಂಕೆ ಜೋಡಿ ನಾಗರಹೊಳೆಯ ವ್ಯಾಪ್ತಿಯ ಕೆರೆಯೊಂದರಲ್ಲಿ ನೀರು ಕುಡಿಯುತ್ತಿವೆ. ಕೆಲ ದಿನಗಳ ಹಿಂದೆ ಹೀಗೆ ನೀರು ಕುಡಿಯಲು ಬಂದ ಜಿಂಕೆಯನ್ನು ಹುಲಿ ಬೇಟೆ ಕೂಡ ಅಡಿತ್ತು.

ಕಾಡಿನಲ್ಲಿ ಜಿಂಕೆಗಳ ಸ್ನೇಹಿತರಾಗಿರುವ ನೀಲಗಿರಿ ಲಂಗೂರ್‌ಗಳು ಮರದಿಂದ ಮರಕ್ಕೆ ಹಾರುತ್ತಲೇ ದಿನ ದೂಡುತ್ತವೆ. ಬೇಸಿಗೆಯಲ್ಲಿ ಲಂಗೂರ್‌ ಜಂಪಿಂಗ್‌ ನೋಟ ಹೀಗಿತ್ತು.
icon

(8 / 10)

ಕಾಡಿನಲ್ಲಿ ಜಿಂಕೆಗಳ ಸ್ನೇಹಿತರಾಗಿರುವ ನೀಲಗಿರಿ ಲಂಗೂರ್‌ಗಳು ಮರದಿಂದ ಮರಕ್ಕೆ ಹಾರುತ್ತಲೇ ದಿನ ದೂಡುತ್ತವೆ. ಬೇಸಿಗೆಯಲ್ಲಿ ಲಂಗೂರ್‌ ಜಂಪಿಂಗ್‌ ನೋಟ ಹೀಗಿತ್ತು.

ಮತ್ತೊಂದು ನೀಲಗಿರಿ ಲಂಗೂರ್‌ ಕಂಕುಳಲ್ಲಿ ಪುಟ್ಟ ಮರಿಯನ್ನು ಇಟ್ಟುಕೊಂಡೇ ಮರದಿಂದ ಮರಕ್ಕೆ ಹಾರುವ ಯತ್ನದಲ್ಲಿದೆ. ಬಿಸಿಲ ನಡುವೆಯೂ ಅವುಗಳ ಬದುಕು ಕಾಡಲ್ಲಿ ಸಾಗಿದೆ.
icon

(9 / 10)

ಮತ್ತೊಂದು ನೀಲಗಿರಿ ಲಂಗೂರ್‌ ಕಂಕುಳಲ್ಲಿ ಪುಟ್ಟ ಮರಿಯನ್ನು ಇಟ್ಟುಕೊಂಡೇ ಮರದಿಂದ ಮರಕ್ಕೆ ಹಾರುವ ಯತ್ನದಲ್ಲಿದೆ. ಬಿಸಿಲ ನಡುವೆಯೂ ಅವುಗಳ ಬದುಕು ಕಾಡಲ್ಲಿ ಸಾಗಿದೆ.

ಮೂರು ದಶಕದಿಂದಲೂ ಛಾಯಾಗ್ರಾಹಕರಾಗಿರುವ ಮೈಸೂರಿನ ಅನುರಾಗ್‌ ಬಸವರಾಜ್‌ ಕರ್ನಾಟಕ ಮಾತ್ರವಲ್ಲದೇ ಭಾರತದ ನಾನಾ ಭಾಗದ ಅರಣ್ಯಗಳಿಗೆ ಭೇಟಿ ನೀಡಿ ವನ್ಯಬದುಕನ್ನು ವಿಭಿನ್ನವಾಗಿ ಸೆರೆ ಹಿಡಿಯುತ್ತಾರೆ. ಅವರಿಗೆ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಯೂ ವನ್ಯಜೀವಿ ಛಾಯಾಗ್ರಹಣಕ್ಕೆ ಲಭಿಸಿದೆ.
icon

(10 / 10)

ಮೂರು ದಶಕದಿಂದಲೂ ಛಾಯಾಗ್ರಾಹಕರಾಗಿರುವ ಮೈಸೂರಿನ ಅನುರಾಗ್‌ ಬಸವರಾಜ್‌ ಕರ್ನಾಟಕ ಮಾತ್ರವಲ್ಲದೇ ಭಾರತದ ನಾನಾ ಭಾಗದ ಅರಣ್ಯಗಳಿಗೆ ಭೇಟಿ ನೀಡಿ ವನ್ಯಬದುಕನ್ನು ವಿಭಿನ್ನವಾಗಿ ಸೆರೆ ಹಿಡಿಯುತ್ತಾರೆ. ಅವರಿಗೆ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಯೂ ವನ್ಯಜೀವಿ ಛಾಯಾಗ್ರಹಣಕ್ಕೆ ಲಭಿಸಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು