ಕಾಶ್ಮೀರದಲ್ಲಿ ಪ್ರಕೃತಿ ಸೌಂದರ್ಯ ಸವಿಯುವ ಅವಕಾಶ ತಪ್ಪಿತೇ; ಕರ್ನಾಟಕದ ಬೇಸಿಗೆ ಪ್ರವಾಸಕ್ಕೆ ಆಹ್ವಾನಿಸುತಿದೆ ಕೊಡಗಿನ ಅತೀ ಎತ್ತರದ ಬೆಟ್ಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಶ್ಮೀರದಲ್ಲಿ ಪ್ರಕೃತಿ ಸೌಂದರ್ಯ ಸವಿಯುವ ಅವಕಾಶ ತಪ್ಪಿತೇ; ಕರ್ನಾಟಕದ ಬೇಸಿಗೆ ಪ್ರವಾಸಕ್ಕೆ ಆಹ್ವಾನಿಸುತಿದೆ ಕೊಡಗಿನ ಅತೀ ಎತ್ತರದ ಬೆಟ್ಟ

ಕಾಶ್ಮೀರದಲ್ಲಿ ಪ್ರಕೃತಿ ಸೌಂದರ್ಯ ಸವಿಯುವ ಅವಕಾಶ ತಪ್ಪಿತೇ; ಕರ್ನಾಟಕದ ಬೇಸಿಗೆ ಪ್ರವಾಸಕ್ಕೆ ಆಹ್ವಾನಿಸುತಿದೆ ಕೊಡಗಿನ ಅತೀ ಎತ್ತರದ ಬೆಟ್ಟ

ಕಾಶ್ಮೀರಕ್ಕೆ ಈಗ ಪ್ರವಾಸಕ್ಕೆ ಹೋಗಲಾಗುತ್ತಿಲ್ಲ ಎನ್ನುವ ಬೇಸರವೇಕೆ. ಕರ್ನಾಟಕದ ಕೊಡಗಿನಲ್ಲಿಯೇ ಇದೆ ಅತೀ ಎತ್ತರದ ಬೆಟ್ಟ ಬೇಸಿಗೆಗೆ ಕೈ ಬೀಸಿ ಕರೆಯುತಿದೆ. ಇದರ ನೋಟ ಇಲ್ಲಿದೆ.

ಕೊಡಗು ಜಿಲ್ಲೆಯ ಅತ್ಯುನ್ನತ ಪರ್ವತವಾದ ತಡಿಯಾಂಡಮೋಳ್ ಕರ್ನಾಟಕದ 2ನೇ ಎತ್ತರದ ಶಿಖರ ಚಾರಣಿಗರ ಸ್ವರ್ಗ ಎನ್ನಿಸಿದೆ.ಬೇಸಿಗೆಯಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
icon

(1 / 9)

ಕೊಡಗು ಜಿಲ್ಲೆಯ ಅತ್ಯುನ್ನತ ಪರ್ವತವಾದ ತಡಿಯಾಂಡಮೋಳ್ ಕರ್ನಾಟಕದ 2ನೇ ಎತ್ತರದ ಶಿಖರ ಚಾರಣಿಗರ ಸ್ವರ್ಗ ಎನ್ನಿಸಿದೆ.ಬೇಸಿಗೆಯಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದರ ಎತ್ತರ ಸುಮಾರು  1748 ಮೀಟರ್. ಇದು ಚಾರಣಿಗರ ಪಾಲಿಗೆ ಬಹಳ ಪ್ರಿಯವಾದ ಜಾಗ. ಇದು ವಿರಾಜಪೇಟೆಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ
icon

(2 / 9)

ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದರ ಎತ್ತರ ಸುಮಾರು 1748 ಮೀಟರ್. ಇದು ಚಾರಣಿಗರ ಪಾಲಿಗೆ ಬಹಳ ಪ್ರಿಯವಾದ ಜಾಗ. ಇದು ವಿರಾಜಪೇಟೆಯಿಂದ ಸುಮಾರು 30 ಕಿ.ಮೀ ದೂರದಲ್ಲಿದೆ

5700 ಅಡಿ ಎತ್ತರದ ಕೊಡಗಿನ ತಡಿಯಾಂಡಮೋಳ್ ಬೆಟ್ಟ ಶ್ರೇಣಿಯು ಬೇಸಿಗೆಯ ಜ್ವಾಲೆಯ ನಡುವೆಯೂ ನಿರಂತರ 3 ಗಂಟೆಗಳ ನಡಿಗೆಯಿಂದ ಮೇಲೇರಿದ ನಮ್ಮನ್ನು ನಿರಾಸೆಗೊಳಿಸಲಿಲ್ಲ ಎಂದು ಮೈಸೂರಿನ ಲೇಖಕ ನಿ.ಗೂ ರಮೇಶ್‌ ಬರೆದುಕೊಂಡಿದ್ದಾರೆ.
icon

(3 / 9)

5700 ಅಡಿ ಎತ್ತರದ ಕೊಡಗಿನ ತಡಿಯಾಂಡಮೋಳ್ ಬೆಟ್ಟ ಶ್ರೇಣಿಯು ಬೇಸಿಗೆಯ ಜ್ವಾಲೆಯ ನಡುವೆಯೂ ನಿರಂತರ 3 ಗಂಟೆಗಳ ನಡಿಗೆಯಿಂದ ಮೇಲೇರಿದ ನಮ್ಮನ್ನು ನಿರಾಸೆಗೊಳಿಸಲಿಲ್ಲ ಎಂದು ಮೈಸೂರಿನ ಲೇಖಕ ನಿ.ಗೂ ರಮೇಶ್‌ ಬರೆದುಕೊಂಡಿದ್ದಾರೆ.

ತಾತ್ಕಾಲಿಕವಾಗಿ ನಮ್ಮನ್ನು ಸ್ವಾಗತಿಸಲು ಎಂಬಂತೆ ಸೂರ್ಯನನ್ನು ಮೋಡಗಳು ಮರೆಮಾಡಿದವು! ಬೆಟ್ಟದ ತಪ್ಪಲಿನಿಂದ ಮೇಲೇರಿ ಬಂದ ಮೋಡಗಳನ್ನು ಅಪ್ಪಿ ಬಾಚಿಕೊಳ್ಳುವುದಷ್ಟೇ ನಮ್ಮ ಸಂಭ್ರಮವಾಗಿತ್ತು. ಮೋಡಗಳಿಗಿಂತ ನಾವೇ ಎತ್ತರದಲ್ಲಿ ನಿಂತ ಕ್ಷಣ ಅವರ್ಣನೀಯ ಎಂದು ಪ್ರವಾಸಿಗರು ಬರೆಯುತ್ತಾರೆ.
icon

(4 / 9)

ತಾತ್ಕಾಲಿಕವಾಗಿ ನಮ್ಮನ್ನು ಸ್ವಾಗತಿಸಲು ಎಂಬಂತೆ ಸೂರ್ಯನನ್ನು ಮೋಡಗಳು ಮರೆಮಾಡಿದವು! ಬೆಟ್ಟದ ತಪ್ಪಲಿನಿಂದ ಮೇಲೇರಿ ಬಂದ ಮೋಡಗಳನ್ನು ಅಪ್ಪಿ ಬಾಚಿಕೊಳ್ಳುವುದಷ್ಟೇ ನಮ್ಮ ಸಂಭ್ರಮವಾಗಿತ್ತು. ಮೋಡಗಳಿಗಿಂತ ನಾವೇ ಎತ್ತರದಲ್ಲಿ ನಿಂತ ಕ್ಷಣ ಅವರ್ಣನೀಯ ಎಂದು ಪ್ರವಾಸಿಗರು ಬರೆಯುತ್ತಾರೆ.

ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿರುವ ತಡಿಯಂಡಮೋಳ್ ಬೆಟ್ಟ ಚಾರಣಿಗರಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿಯೇ ಮೊದಲಿನಿಂದಲೂ ಈ ಬೆಟ್ಟದತ್ತ ಚಾರಣಿಗರು ಬರುವುದು ಸಾಮಾನ್ಯ ಎನ್ನಿಸಿದೆ.
icon

(5 / 9)

ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿರುವ ತಡಿಯಂಡಮೋಳ್ ಬೆಟ್ಟ ಚಾರಣಿಗರಿಗೆ ಹೇಳಿ ಮಾಡಿಸಿದಂತಿದೆ. ಹೀಗಾಗಿಯೇ ಮೊದಲಿನಿಂದಲೂ ಈ ಬೆಟ್ಟದತ್ತ ಚಾರಣಿಗರು ಬರುವುದು ಸಾಮಾನ್ಯ ಎನ್ನಿಸಿದೆ.

ತಡಿಯಂಡ ಮೋಳ್ ಬೆಟ್ಟಕ್ಕೆ ಹೋಗುವುದು ಹೇಗೆ ಎಂದರೆ ಮಡಿಕೇರಿಗೆ ಹೋಗಿ ಅಲ್ಲಿಂದ ನಾಪೋಕ್ಲುಗೆ ತೆರಳಿ ಅಲ್ಲಿಗೆ ಸಮೀಪದ ಕಕ್ಕಬೆ ಮೂಲಕ ತೆರಳಬೇಕಾಗುತ್ತದೆ. ಬಹಳಷ್ಟು ಚಾರಣಿಗರು ನಾಪೋಕ್ಲು ಅಥವಾ ಕಕ್ಕಬೆ ವ್ಯಾಪ್ತಿಯಲ್ಲಿರುವ ಹೋಂಸ್ಟೇಗಳಲ್ಲಿ ರಾತ್ರಿ ತಂಗಿದ್ದು ಅವರ ಮಾರ್ಗದರ್ಶನದಲ್ಲಿ ಮುಂಜಾನೆ ಚಾರಣ ಆರಂಭಿಸುತ್ತಾರೆ
icon

(6 / 9)

ತಡಿಯಂಡ ಮೋಳ್ ಬೆಟ್ಟಕ್ಕೆ ಹೋಗುವುದು ಹೇಗೆ ಎಂದರೆ ಮಡಿಕೇರಿಗೆ ಹೋಗಿ ಅಲ್ಲಿಂದ ನಾಪೋಕ್ಲುಗೆ ತೆರಳಿ ಅಲ್ಲಿಗೆ ಸಮೀಪದ ಕಕ್ಕಬೆ ಮೂಲಕ ತೆರಳಬೇಕಾಗುತ್ತದೆ. ಬಹಳಷ್ಟು ಚಾರಣಿಗರು ನಾಪೋಕ್ಲು ಅಥವಾ ಕಕ್ಕಬೆ ವ್ಯಾಪ್ತಿಯಲ್ಲಿರುವ ಹೋಂಸ್ಟೇಗಳಲ್ಲಿ ರಾತ್ರಿ ತಂಗಿದ್ದು ಅವರ ಮಾರ್ಗದರ್ಶನದಲ್ಲಿ ಮುಂಜಾನೆ ಚಾರಣ ಆರಂಭಿಸುತ್ತಾರೆ

ಇಲ್ಲವೇ ಮೈಸೂರಿಂದ ಹುಣಸೂರು ಗೋಣಿಕೊಪ್ಪಲು ವೀರಾಜಪೇಟೆಯಿಂದ  ಕಕ್ಕಬ್ಬೆಗೆ ಬಂದು ಆ ಮಾರ್ಗದಲ್ಲೂ ತಡಿಯಾಂಡಮೋಳ್‌ ಬೆಟ್ಟ ಹತ್ತಬಹುದು,
icon

(7 / 9)

ಇಲ್ಲವೇ ಮೈಸೂರಿಂದ ಹುಣಸೂರು ಗೋಣಿಕೊಪ್ಪಲು ವೀರಾಜಪೇಟೆಯಿಂದ ಕಕ್ಕಬ್ಬೆಗೆ ಬಂದು ಆ ಮಾರ್ಗದಲ್ಲೂ ತಡಿಯಾಂಡಮೋಳ್‌ ಬೆಟ್ಟ ಹತ್ತಬಹುದು,

ತಡಿಯಾಂಡಮೋಳ್‌ ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಕೂಡ ಇದೆ. ಇನ್ನು ಈ ಬೆಟ್ಟವು ಕರ್ನಾಟಕ ಎರಡನೇ ಅತಿ ಎತ್ತರದ ಪರ್ವತವಾಗಿದೆ. ಇದು ನೈಸರ್ಗಿಕವಾಗಿ ಬೇಸಿಗೆಯ ಸಮಯದಲ್ಲಿ ಟ್ರೆಕ್ಕಿಂಗ್‌ ಮಾಡಲು ಸೂಕ್ತವಾದ ಪ್ರವಾಸಿ ಸ್ಥಳವಾಗಿದೆ.
icon

(8 / 9)

ತಡಿಯಾಂಡಮೋಳ್‌ ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಕೂಡ ಇದೆ. ಇನ್ನು ಈ ಬೆಟ್ಟವು ಕರ್ನಾಟಕ ಎರಡನೇ ಅತಿ ಎತ್ತರದ ಪರ್ವತವಾಗಿದೆ. ಇದು ನೈಸರ್ಗಿಕವಾಗಿ ಬೇಸಿಗೆಯ ಸಮಯದಲ್ಲಿ ಟ್ರೆಕ್ಕಿಂಗ್‌ ಮಾಡಲು ಸೂಕ್ತವಾದ ಪ್ರವಾಸಿ ಸ್ಥಳವಾಗಿದೆ.

ಸ್ಥಳೀಯ ಕೊಡವ ಇಲ್ಲವೇ ಕೆಲವರು ಮಾತನಾಡುವ ಮಲೆಯಾಳ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ. ಇಂತಹ ಎತ್ತರದ ಬೆಟ್ಟದ ಚಾರಣ ಹಾಗೂ ಬೇಸಿಗೆ ತಣ್ಣನೆಯ ವಾತಾವರಣವನ್ನು ಕೊಡಗಿನ ಇತರೆ ಪ್ರವಾಸಿ ಸ್ಥಳಗಳೊಂದಿಗೆ ಕಳೆಯುವುದನ್ನು ಮರೆಯಬೇಡಿ,
icon

(9 / 9)

ಸ್ಥಳೀಯ ಕೊಡವ ಇಲ್ಲವೇ ಕೆಲವರು ಮಾತನಾಡುವ ಮಲೆಯಾಳ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ. ಇಂತಹ ಎತ್ತರದ ಬೆಟ್ಟದ ಚಾರಣ ಹಾಗೂ ಬೇಸಿಗೆ ತಣ್ಣನೆಯ ವಾತಾವರಣವನ್ನು ಕೊಡಗಿನ ಇತರೆ ಪ್ರವಾಸಿ ಸ್ಥಳಗಳೊಂದಿಗೆ ಕಳೆಯುವುದನ್ನು ಮರೆಯಬೇಡಿ,

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು