Summer Travel 2025 : ಬೇಸಿಗೆಯ ಮನಗಳಿಗೆ ತಂಪು ನೀಡಲಿದೆ ಮುಡುಕುತೊರೆ ಪ್ರವಾಸ; ದೇಗುಲದಿಂದ ಕಾವೇರಿ ನದಿ ವೈಭವದ ನೋಟ ಚಂದ
- ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಮೆಟ್ಟಿಲು ಏರಿ ಬೆಟ್ಟಕ್ಕೆ ಹೋದರೆ ದೇಗುಲ, ಎದುರು ಕಾವೇರಿಯ ಮೋಹನ ಚಿತ್ರಣ.
- ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಬೇಸಿಗೆ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಮೆಟ್ಟಿಲು ಏರಿ ಬೆಟ್ಟಕ್ಕೆ ಹೋದರೆ ದೇಗುಲ, ಎದುರು ಕಾವೇರಿಯ ಮೋಹನ ಚಿತ್ರಣ.
(1 / 10)
ಶತಮಾನಗಳಷ್ಟು ಹಳೆಯಾದ ಕಾವೇರಿ ನದಿ ತೀರದ ಮುಡುಕುತೊರೆ, ಅಲ್ಲಿನ ದೇವಸ್ಥಾನ, ಸುತ್ತಮುತ್ತಲ ನೋಟ ಎಂತಹ ಪ್ರವಾಸಿಗರ ಮನ ಸೆಳೆಯುತ್ತದೆ.
(2 / 10)
ಸುಮಾರು ಮೂರು ನೂರಕ್ಕೂ ಅಧಿಕ ಇರುವ ಮೆಟ್ಟಿಲುಗಳನ್ನು ಏರಿಕೊಂಡು ಹೋದರೆ ಸಿಗುವುದೇ ಬೆಟ್ಟದಲ್ಲಿರುವ ಮುಡುಕುತೊರೆ ಭ್ರಮರಾಂಭ ಸಹಿತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ.
(3 / 10)
ಬೇಸಿಗೆ ಇರುವುದರಿಂದ ದೇಗುಲದ ಮೆಟ್ಟಿಲುಗಳನ್ನು ಏರಿಕೊಂಡು ಹೋದಲು ಮೇಲ್ಛಾವಣಿ ವ್ಯವಸ್ಥೆಯನ್ನು ಮಾಡಲಾಗಿದೆ. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ,.ಮಳವಳ್ಳಿ ಮಾರ್ಗವಾಗಿ ಇಲ್ಲಿಗೆ ಬರಲು ವ್ಯವಸ್ಥೆಯಿದೆ.
(4 / 10)
ಬೆಟ್ಟದ ಮೇಲಿದೆ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಭ್ರಮರಾಂಬಿಕ ದೇವಾಲಯ. ಇಲ್ಲಿ ಮಲ್ಲಿಕಾರ್ಜುನನಿಗೆ ನಿತ್ಯ ಪೂಜೆಗಳು ನೆರವೇರುತ್ತವೆ.
(5 / 10)
ಮಲ್ಲಿಕಾರ್ಜುನನ ಜತೆಯಲ್ಲಿ ಭ್ರಮರಾಂಭ ಕೂಡ ಇಲ್ಲಿನ ಆಕರ್ಷಣೆ, ಮಹಾಭಾರತ ಕಾಲದಲ್ಲಿ ಅರ್ಜುನ ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ಈ ಮಾರ್ಗವಾಗಿ ಸಂಚರಿಸುವಾಗ ಮಲ್ಲಿಕಾ ಎಂಬ ಪುಷ್ಪದಿಂದ ಶಿವಲಿಂಗಕ್ಕೆ ಅರ್ಚನೆ ಮಾಡಿದ್ದ. ಅದಕ್ಕಾಗಿಯೇ ಈ ದೇವರಿಗೆ ಮಲ್ಲಿಕಾರ್ಜುನ ಎಂಬ ಹೆಸರು ಬಂತು ಎನ್ನುವ ಸ್ಥಳ ಮಹಾತ್ಮೆ ಇದೆ.
(7 / 10)
ದೇಗುಲದ ಮೆಟ್ಟಿಲುಗಳನ್ನು ಏರಿ ಹೋದಾಗ ಅಬ್ಬಬ್ಬಾ ಎನ್ನುವ ಭಕ್ತರು, ಪ್ರವಾಸಿಗರು ಎದುರಿಗೆ ನೋಡಿದಾಗ ಕಾಣುವ ಮನಮೋಹನ ನೋಟ ಕಂಡಾಗ ವಾವ್ ಎಂದು ಬಿಡುತ್ತಾರೆ.
(8 / 10)
ತಿರುಮಕೂಡಲು ನರಸೀಪುರದಲ್ಲಿ ಕಪಿಲಾ ನದಿ ಸಂಗಮವಾಗಿ ಮುಂದೆ ವಿಶಾಲವಾಗಿ ಹರಿಯುವ ಕಾವೇರಿ ನದಿ ಇಂತಹ ಮೋಹಕ ಸನ್ನಿವೇಶವನ್ನು ಸೃಷ್ಟಿಸಿದೆ.
(9 / 10)
ಕಾವೇರಿ ನದಿ ಇಲ್ಲಿ ಕವಲೊಡೆದು ದ್ವೀಪ ರೂಪದಲ್ಲಿ ಹರಿದು ಬರುತ್ತದೆ. ಇಲ್ಲಿಂದ ಮುಂದೆ ತಲಕಾಡು ಮಾರ್ಗವಾಗಿ ತಮಿಳುನಾಡಿನತ್ತು ಕಾವೇರಿ ನದಿ ಹರಿಯುವುದು ವಿಶೇಷ.
ಇತರ ಗ್ಯಾಲರಿಗಳು