ಸದ್ಯಕ್ಕೆ ಕಾಶ್ಮೀರದ ಗೊಡವೆ ಬಿಡಿ; ಕರ್ನಾಟಕದಲ್ಲಿರುವ ಕೂಲ್‌ ಬೆಟ್ಟ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊರಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸದ್ಯಕ್ಕೆ ಕಾಶ್ಮೀರದ ಗೊಡವೆ ಬಿಡಿ; ಕರ್ನಾಟಕದಲ್ಲಿರುವ ಕೂಲ್‌ ಬೆಟ್ಟ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊರಡಿ

ಸದ್ಯಕ್ಕೆ ಕಾಶ್ಮೀರದ ಗೊಡವೆ ಬಿಡಿ; ಕರ್ನಾಟಕದಲ್ಲಿರುವ ಕೂಲ್‌ ಬೆಟ್ಟ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊರಡಿ

ಬೇಸಿಗೆಯಲ್ಲಿ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಚಾಮರಾಜನಗರ ಜಿಲ್ಲೆಯ ವರ್ಷವಿಡೀ ಕೂಲ್‌ ಇರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ. ಅಲ್ಲಿನ ವಾತಾವರಣವೇ ಮೈಮನ ಪುಳಕಿತಗೊಳಿಸುತ್ತದೆ.

ಕರ್ನಾಟಕದಲ್ಲಿ ವಿಭಿನ್ನ ಬೆಟ್ಟಗಳಿವೆ. ಅದರಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟವೂ ಒಂದು. ಹೆಸರೇ ಹೇಳುವಂತೆ ಹಿಮವನ್ನು ಹೊದ್ದ ಗೋಪಾಲಸ್ವಾಮಿ ಬೆಟ್ಟವಿದು.
icon

(1 / 9)

ಕರ್ನಾಟಕದಲ್ಲಿ ವಿಭಿನ್ನ ಬೆಟ್ಟಗಳಿವೆ. ಅದರಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟವೂ ಒಂದು. ಹೆಸರೇ ಹೇಳುವಂತೆ ಹಿಮವನ್ನು ಹೊದ್ದ ಗೋಪಾಲಸ್ವಾಮಿ ಬೆಟ್ಟವಿದು.

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿರುವ ಮಧ್ಯಮ ಗಾತ್ರದ ಬೆಟ್ಟ,  ಕರ್ನಾಟಕ ಗಡಿ ಭಾಗದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಹಂಗಳ ಗ್ರಾಮದ ಮೂಲಕ ಸಣ್ಣ ರಸ್ತೆಯ ಮೂಲಕ ಪ್ರವೇಶಿಸಬಹುದು
icon

(2 / 9)

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿರುವ ಮಧ್ಯಮ ಗಾತ್ರದ ಬೆಟ್ಟ, ಕರ್ನಾಟಕ ಗಡಿ ಭಾಗದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಹಂಗಳ ಗ್ರಾಮದ ಮೂಲಕ ಸಣ್ಣ ರಸ್ತೆಯ ಮೂಲಕ ಪ್ರವೇಶಿಸಬಹುದು

ಹಿಮವದ್ ಗೋಪಾಲಸ್ವಾಮಿ ಬೆಟ್ಟ ವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರವಾಗಿದೆ. ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.
icon

(3 / 9)

ಹಿಮವದ್ ಗೋಪಾಲಸ್ವಾಮಿ ಬೆಟ್ಟ ವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅತಿ ಎತ್ತರದ ಶಿಖರವಾಗಿದೆ. ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೆಟ್ಟಕ್ಕೆ ಹೋಗುವ ಹತ್ತು ಕಿ.ಮಿ ಮಾರ್ಗ, ಬೆಟ್ಟ ಏರಿದ ನಂತರ ಸಿಗುವ ರಮಣೀಯ ಸೌಂದರ್ಯ ಎಂಥವರನ್ನು ಖುಷಿಗೊಳಿಸುತ್ತದೆ. ಈ ಬೆಟ್ಟವು ಧಾರ್ಮಿಕ ಮಹತ್ವವನ್ನು ಹೊಂದಿದೆ. ಬೆಟ್ಟಗಳ ಮೇಲಿನ ಬಯಲು ಪ್ರದೇಶಗಳು ಹಚ್ಚ ಹಸಿರಿನ ಹುಲ್ಲಿನಿಂದ ಆವೃತವಾಗಿದ್ದು, ಆನೆಗಳು, ಜಿಂಕೆಗಳು ಮತ್ತು ಮೊಲಗಳಿಗೆ ನೆಲೆಯಾಗಿದೆ, ಆದರೆ ಇಳಿಜಾರುಗಳು ದಟ್ಟವಾದ ಕಾಡುಗಳಿಂದ ಆವೃತವಾಗಿದ್ದು, ಹುಲಿ, ಆನೆ, ಚಿರತೆ ಸಹಿತ ಹಲವು ವನ್ಯಜೀವಿಗಳ ನೆಲೆವೀಡು.
icon

(4 / 9)

ಬೆಟ್ಟಕ್ಕೆ ಹೋಗುವ ಹತ್ತು ಕಿ.ಮಿ ಮಾರ್ಗ, ಬೆಟ್ಟ ಏರಿದ ನಂತರ ಸಿಗುವ ರಮಣೀಯ ಸೌಂದರ್ಯ ಎಂಥವರನ್ನು ಖುಷಿಗೊಳಿಸುತ್ತದೆ. ಈ ಬೆಟ್ಟವು ಧಾರ್ಮಿಕ ಮಹತ್ವವನ್ನು ಹೊಂದಿದೆ. ಬೆಟ್ಟಗಳ ಮೇಲಿನ ಬಯಲು ಪ್ರದೇಶಗಳು ಹಚ್ಚ ಹಸಿರಿನ ಹುಲ್ಲಿನಿಂದ ಆವೃತವಾಗಿದ್ದು, ಆನೆಗಳು, ಜಿಂಕೆಗಳು ಮತ್ತು ಮೊಲಗಳಿಗೆ ನೆಲೆಯಾಗಿದೆ, ಆದರೆ ಇಳಿಜಾರುಗಳು ದಟ್ಟವಾದ ಕಾಡುಗಳಿಂದ ಆವೃತವಾಗಿದ್ದು, ಹುಲಿ, ಆನೆ, ಚಿರತೆ ಸಹಿತ ಹಲವು ವನ್ಯಜೀವಿಗಳ ನೆಲೆವೀಡು.

ಗುಂಡ್ಲುಪೇಟೆ ಶತಮಾನಗಳ ಹಿಂದೆ ನಿರ್ಮಿಸಲಾದ ಅದ್ಭುತ ವಾಸ್ತುಶಿಲ್ಪದ ಅನೇಕ ಪ್ರಾಚೀನ ದೇವಾಲಯಗಳನ್ನು ಹೊಂದಿದೆ, ಹಿಮವದ್ ಗೋಪಾಲಸ್ವಾಮಿ ದೇವಾಲಯವನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ದೇಗುಲದ ಒಳಗೆ ಸದಾ ನೀರು ಜಿನುಗುತ್ತಲೇ ಇರುತ್ತದೆ.
icon

(5 / 9)

ಗುಂಡ್ಲುಪೇಟೆ ಶತಮಾನಗಳ ಹಿಂದೆ ನಿರ್ಮಿಸಲಾದ ಅದ್ಭುತ ವಾಸ್ತುಶಿಲ್ಪದ ಅನೇಕ ಪ್ರಾಚೀನ ದೇವಾಲಯಗಳನ್ನು ಹೊಂದಿದೆ, ಹಿಮವದ್ ಗೋಪಾಲಸ್ವಾಮಿ ದೇವಾಲಯವನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ದೇಗುಲದ ಒಳಗೆ ಸದಾ ನೀರು ಜಿನುಗುತ್ತಲೇ ಇರುತ್ತದೆ.

ಈ ದೇವಾಲಯವು ಹಿಂದಿನ ಕಾಲದ ಕುಶಲಕರ್ಮಿಗಳ ವಾಸ್ತುಶಿಲ್ಪ ಮತ್ತು ಕಲಾತ್ಮಕ ಪ್ರತಿಭೆಯ ಸಾರಾಂಶವಾಗಿದೆ. ಈ ದೇವಾಲಯವು ಗೋಪಾಲಸ್ವಾಮಿಗೆ ಸಮರ್ಪಿತವಾಗಿದೆ, ಇದು ಹಿಂದೂ ದೇವರು ಕೃಷ್ಣನ ಹೆಸರುಗಳಲ್ಲಿ ಒಂದಾಗಿದೆ. ದೇಗುಲ ಸುತ್ತಲೂ ಹಸುರಿನಿಂದ ಕೂಡಿದೆ.
icon

(6 / 9)

ಈ ದೇವಾಲಯವು ಹಿಂದಿನ ಕಾಲದ ಕುಶಲಕರ್ಮಿಗಳ ವಾಸ್ತುಶಿಲ್ಪ ಮತ್ತು ಕಲಾತ್ಮಕ ಪ್ರತಿಭೆಯ ಸಾರಾಂಶವಾಗಿದೆ. ಈ ದೇವಾಲಯವು ಗೋಪಾಲಸ್ವಾಮಿಗೆ ಸಮರ್ಪಿತವಾಗಿದೆ, ಇದು ಹಿಂದೂ ದೇವರು ಕೃಷ್ಣನ ಹೆಸರುಗಳಲ್ಲಿ ಒಂದಾಗಿದೆ. ದೇಗುಲ ಸುತ್ತಲೂ ಹಸುರಿನಿಂದ ಕೂಡಿದೆ.

ಗರ್ಭಗೃಹವು ಮರದ ಕೆಳಗೆ ಕೊಳಲನ್ನು ಹಿಡಿದಿರುವ ಕೃಷ್ಣನ ವಿಗ್ರಹವನ್ನು ಹೊಂದಿದೆ. ಶ್ರೀಕೃಷ್ಣನ ವಿಗ್ರಹವು 6 ಅಡಿ ಎತ್ತರವಿದ್ದು, ವಿಗ್ರಹವನ್ನು ಪರಿಪೂರ್ಣವಾಗಿ ಕೆತ್ತಲಾಗಿದೆ ಮತ್ತು ಎಡ ಹೆಬ್ಬೆರಳು ಬಲಗಾಲಿನಲ್ಲಿ ಇರಿಸಿ ನೃತ್ಯ ಮಾಡುವ ಭಂಗಿಯಿದೆ. ಸರಳವಾದರೂ ಭವ್ಯವಾದ ವಿಗ್ರಹದ ಹಿಂದಿರುವ ಪ್ರಭಾವಲಿ / ಫಲಕವು ಮರದ ಕೆತ್ತನೆಗಳನ್ನು ಹೊಂದಿದೆ
icon

(7 / 9)

ಗರ್ಭಗೃಹವು ಮರದ ಕೆಳಗೆ ಕೊಳಲನ್ನು ಹಿಡಿದಿರುವ ಕೃಷ್ಣನ ವಿಗ್ರಹವನ್ನು ಹೊಂದಿದೆ. ಶ್ರೀಕೃಷ್ಣನ ವಿಗ್ರಹವು 6 ಅಡಿ ಎತ್ತರವಿದ್ದು, ವಿಗ್ರಹವನ್ನು ಪರಿಪೂರ್ಣವಾಗಿ ಕೆತ್ತಲಾಗಿದೆ ಮತ್ತು ಎಡ ಹೆಬ್ಬೆರಳು ಬಲಗಾಲಿನಲ್ಲಿ ಇರಿಸಿ ನೃತ್ಯ ಮಾಡುವ ಭಂಗಿಯಿದೆ. ಸರಳವಾದರೂ ಭವ್ಯವಾದ ವಿಗ್ರಹದ ಹಿಂದಿರುವ ಪ್ರಭಾವಲಿ / ಫಲಕವು ಮರದ ಕೆತ್ತನೆಗಳನ್ನು ಹೊಂದಿದೆ

ಬಂಡೀಪುರ ವನ್ಯಜೀವಿ ಅಭಯಾರಣ್ಯದ ಭಾಗವಾಗಿರುವುದರಿಂದ, ಬೆಟ್ಟಗಳು ಮೇಯುವ ಕಾಡು ಆನೆಗಳಿಂದ ಕೂಡಿವೆ. ಪಕ್ಕದಲ್ಲೇ ಸುತ್ತುವ ಆನೆಗಳು ದೇಗುಲ ಬಳಿಯೂ ಬಂದು ದರ್ಶನ ನೀಡುತ್ತವೆ.
icon

(8 / 9)

ಬಂಡೀಪುರ ವನ್ಯಜೀವಿ ಅಭಯಾರಣ್ಯದ ಭಾಗವಾಗಿರುವುದರಿಂದ, ಬೆಟ್ಟಗಳು ಮೇಯುವ ಕಾಡು ಆನೆಗಳಿಂದ ಕೂಡಿವೆ. ಪಕ್ಕದಲ್ಲೇ ಸುತ್ತುವ ಆನೆಗಳು ದೇಗುಲ ಬಳಿಯೂ ಬಂದು ದರ್ಶನ ನೀಡುತ್ತವೆ.

ಬೆಟ್ಟಗಳು ನವಿಲುಗಳು, ಗಿಳಿಗಳು, ಕಾಡು ಕೋಳಿಗಳು ಸೇರಿದಂತೆ ಕೆಲವು ಶ್ರೀಮಂತ ಪಕ್ಷಿ ಸಂಕುಲಕ್ಕೂ ನೆಲೆಯಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಯಾರಾದರೂ ಇಲ್ಲಿನ ವಾತಾವರಣ ಕಂಡು ತಕ್ಷಣವೇ ಇದನ್ನು ಪ್ರೀತಿಸುತ್ತಾರೆ ಎಂಬುದರಲ್ಲಿ ಸಂದೇಹವೇ ಬೇಡ. ತಡ ಏಕೆ ಪ್ರವಾಸಕ್ಕೆ ಯೋಜಿಸಿಕೊಳ್ಳಿ.
icon

(9 / 9)

ಬೆಟ್ಟಗಳು ನವಿಲುಗಳು, ಗಿಳಿಗಳು, ಕಾಡು ಕೋಳಿಗಳು ಸೇರಿದಂತೆ ಕೆಲವು ಶ್ರೀಮಂತ ಪಕ್ಷಿ ಸಂಕುಲಕ್ಕೂ ನೆಲೆಯಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಯಾರಾದರೂ ಇಲ್ಲಿನ ವಾತಾವರಣ ಕಂಡು ತಕ್ಷಣವೇ ಇದನ್ನು ಪ್ರೀತಿಸುತ್ತಾರೆ ಎಂಬುದರಲ್ಲಿ ಸಂದೇಹವೇ ಬೇಡ. ತಡ ಏಕೆ ಪ್ರವಾಸಕ್ಕೆ ಯೋಜಿಸಿಕೊಳ್ಳಿ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು