ಮನೆಯ ಯುಜಮಾನಿಯಾಗಿ ಲೆಕ್ಕ ಕೇಳೋದು ತಪ್ಪ? ಭೂಮಿಕಾ ಮಾತಿಗೆ ಭೂಮಿಕಾ ಪ್ರಶ್ನೆಗೆ ಗೌತಮ್ ಭಾವುಕ, ಅಮೃತಧಾರೆ ಸೀರಿಯಲ್ನ ಇಂದಿನ ಸ್ಟೋರಿ
- Amruthadhaare serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಭೂಮಿಕಾರ ಮೇಲೆ ರೇಗಿ ಬಿಟ್ಟಿದ್ದಾರೆ. ಅಶ್ವಿನಿ 5 ಕೋಟಿ ರೂಪಾಯಿ ಕೇಳಿದಾಗ ಯಾಕೆ ಎಂದು ಭೂಮಿಕಾ ಕೇಳಿದ್ದು ಗೌತಮ್ಗೆ ಬೇಸರ ತಂದಿದೆ. ಇಂದಿನ ಸಂಚಿಕೆಯಲ್ಲಿ ಒಬ್ಬರಿಗೊಬ್ಬರು ಸಮಾಧಾನ ಹೇಳುವ ಸಮಯ.
- Amruthadhaare serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಭೂಮಿಕಾರ ಮೇಲೆ ರೇಗಿ ಬಿಟ್ಟಿದ್ದಾರೆ. ಅಶ್ವಿನಿ 5 ಕೋಟಿ ರೂಪಾಯಿ ಕೇಳಿದಾಗ ಯಾಕೆ ಎಂದು ಭೂಮಿಕಾ ಕೇಳಿದ್ದು ಗೌತಮ್ಗೆ ಬೇಸರ ತಂದಿದೆ. ಇಂದಿನ ಸಂಚಿಕೆಯಲ್ಲಿ ಒಬ್ಬರಿಗೊಬ್ಬರು ಸಮಾಧಾನ ಹೇಳುವ ಸಮಯ.
(1 / 11)
ಭೂಮಿಕಾಗೆ ದಿವಾನ್ ಮನೆಯ ಯುಜಮಾನಿಕೆ ಪಟ್ಟ ದೊರಕಿದೆ. ಇದೇ ಸಮಯದಲ್ಲಿ ಈ ಜವಾಬ್ದಾರಿ ಸಾಕಷ್ಟು ಸವಾಲುಗಳನ್ನು ತಂದೊಡ್ಡಿದೆ. ಅಶ್ವಿನಿಯು ತನ್ನ ಪತಿಗಾಗಿ ಭೂಮಿಕಾಳ ಬಳಿ ಹಣ ಕೇಳಿದ್ದಾಳೆ. ಒಂದು ಲಕ್ಷ ಐದು ಲಕ್ಷ ಕೇಳಬಹುದು ಎಂದುಕೊಂಡಿದ್ದ ಭೂಮಿಕಾಳಿಗೆ ಅಶ್ವಿನಿ 5 ಕೋಟಿ ರೂಪಾಯಿ ಕೇಳಿದ್ದು ಅಚ್ಚರಿಯಾಗಿದೆ. ಯಾಕೆ ಎಂದು ಕೇಳಿದ್ದಾರೆ ಭೂಮಿಕಾ.
(2 / 11)
ಭೂಮಿಕಾಗೆ ದಿವಾನ್ ಮನೆಯ ಯುಜಮಾನಿಕೆ ಪಟ್ಟ ದೊರಕಿದೆ. ಇದೇ ಸಮಯದಲ್ಲಿ ಈ ಜವಾಬ್ದಾರಿ ಸಾಕಷ್ಟು ಸವಾಲುಗಳನ್ನು ತಂದೊಡ್ಡಿದೆ. ಅಶ್ವಿನಿಯು ತನ್ನ ಪತಿಗಾಗಿ ಭೂಮಿಕಾಳ ಬಳಿ ಹಣ ಕೇಳಿದ್ದಾಳೆ. ಒಂದು ಲಕ್ಷ ಐದು ಲಕ್ಷ ಕೇಳಬಹುದು ಎಂದುಕೊಂಡಿದ್ದ ಭೂಮಿಕಾಳಿಗೆ ಅಶ್ವಿನಿ 5 ಕೋಟಿ ರೂಪಾಯಿ ಕೇಳಿದ್ದು ಅಚ್ಚರಿಯಾಗಿದೆ. ಯಾಕೆ ಎಂದು ಕೇಳಿದ್ದಾರೆ ಭೂಮಿಕಾ.
(3 / 11)
ಇದರಿಂದ ಅಶ್ವಿನಿಗೆ ಹರ್ಟ್ ಆಗಿದೆ. ಇಲ್ಲಿಯವರೆಗೆ ಯಾರೂ ಯಾಕೆ ಹಣ ಎಂದು ಕೇಳಿಲ್ಲ ಎಂದು ದೊಡ್ಡ ರಂಪ ಮಾಡಿದ್ದಾಳೆ. ವಿಷಯದ ಕುರಿತು ಸರಿಯಾದ ಮಾಹಿತಿ ಇಲ್ಲದೆ ಗೌತಮ್ ಕೂಡ ಭೂಮಿಕಾಗೆ ಜೋರಾಗಿ ಬೈದು ಬಿಟ್ಟಿದ್ದಾರೆ. ಇದಾಗಿ ಇವರ ನಡುವೆ ಇಂದಿನ ಸಂಚಿಕೆಯಲ್ಲಿ ರಾಜಿಯಾಗುವ ಸಮಯ ಬಂದಿದೆ.
(4 / 11)
ನಾನು ಮನೆಯ ಯುಜಮಾನಿಯಷ್ಟೇ. ಈ ಮನೆಯ ಖರ್ಚುಗಳನ್ನು ಲೆಕ್ಕ ಹಿಡಿಯೋದಷ್ಟೇ ನನ್ನ ಕೆಲಸ ಎಂದು ಭೂಮಿಕಾ ಹೇಳುತ್ತಾರೆ.
(5 / 11)
ಅದು ನಿಮ್ಮ ದುಡ್ಡ, ಹಗಲು ರಾತ್ರಿ ನೀವು ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣವದು. ನಾನದನ್ನು ಏನೂ ಕೇಳದೆ ವಿಚಾರಿಸದೆ ಹಾಗೆ ತೆಗೆದುಕೊಡಲು ಆಗುತ್ತ? ಎಂದು ಭೂಮಿಕಾ ಗೌತಮ್ನನ್ನು ಪ್ರಶ್ನಿಸುತ್ತಾರೆ.
(6 / 11)
"ಎಲ್ಲದಕ್ಕೂ ಒಂದು ಲೆಕ್ಕಾಚಾರ ಬೇಕಲ್ವ. ನಾನು ಲೆಕ್ಕ ಮಾಡೋ ಕೆಲಸ ಮಾಡಿದೆ ಅಷ್ಟೇ. ಅದು ಬಿಟ್ಟು ಬೇರೆ ಯಾರನ್ನಾದರೂ ಕಂಟ್ರೋಲ್ ಮಾಡೋದಾಗ್ಲಿ, ಯುಜಮಾನಿ ಅನ್ನೋ ದೌಲತ್ತು ತೋರಿಸೋದಾಗ್ಲಿ ನಾನು ಮಾಡೋದಿಲ್ಲ" ಎಂದು ಭೂಮಿಕಾ ಹೇಳುತ್ತಾರೆ.
(7 / 11)
"ಈ ರೀತಿ ಮಾಡೋದು ನನ್ನ ಸ್ವಭಾವವಲ್ಲ. ಇಷ್ಟೇನ ನೀವು ನನ್ನ ಅರ್ಥ ಮಾಡಿಕೊಂಡಿರೋದು. ಸುಮ್ಮನೆ ನನ್ನ ಮೇಲೆ ರೇಗಾಡಿಬಿಟ್ರಿ. ನನಗೆ ಎಷ್ಟು ಹರ್ಟ್ ಆಯ್ತು ಗೊತ್ತ?" ಎಂದು ಭೂಮಿಕಾ ಕೇಳುತ್ತಾಳೆ. ಅದಕ್ಕೆ ಗೌತಮ್ "ನೀವು ಕೂಡ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ" ಎಂದು ಹೇಳುತ್ತಾನೆ.
(8 / 11)
"ನೀವು ಅದನ್ನೇ ಮಾಡಿದ್ರಲ್ಲ ಭೂಮಿಕಾ. ನನ್ನ ಅರ್ಥನೇ ಮಾಡಿಲ್ಲ. ನಾನು ನಿಮ್ಮನ್ನು ಎಷ್ಟು ಪ್ರೀತಿಸ್ತಿನೋ ಅಷ್ಟೇ ಮನೆಯವರನ್ನು ಪ್ರೀತಿಸ್ತಿನಿ. ನನಗೆ ಜವಾಬ್ದಾರಿ ಇಲ್ಲ ಎಂದಲ್ಲ. ಅವರೆಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ. ಇದು ಅಪ್ಪ ವಹಿಸಿದ ಜವಾಬ್ದಾರಿ" ಎಂದು ಗೌತಮ್ ಹೇಳುತ್ತಾರೆ.
(9 / 11)
"ಅಪ್ಪನಿಗೆ ಕೊಟ್ಟ ಮಾತಿಗಾಗಿ ನಾನು ಅವರಿಗೆ ಕೇಳಿದ್ದೆಲ್ಲ ಕೊಡುವೆ. ಕೊಟ್ಟ ಮಾತು ಕಟ್ಟಿ ಹಾಕುತ್ತೆ. ಪ್ರತಿಬಾರಿಯೂ ನನ್ನ ಬಾಯಿಯನ್ನು ತಡೆದು ನಿಲ್ಲಿಸುತ್ತದೆ" ಎಂದು ಗೌತಮ್ ಹೇಳುತ್ತಾನೆ.
(10 / 11)
"ಆದರೆ ನಿಮ್ಮ ಜೊತೆ ಹಾಗಲ್ಲ. ನಿಮ್ಮ ಜತೆ ಯಾವ ಬೇಲಿ ಇಲ್ಲ. ಯಾರ ಜತೆಯೂ ಇಲ್ಲದ ಸಲಿಗೆ ಇದೆ. ನನಗೆ ನೀವು ಮತ್ತು ಆನಂದ್ ಜತೆ ಮಾತ್ರ ಹೀಗೆ ಇರಲು ಸಾಧ್ಯವಾಗುತ್ತದೆ. ನಿಮ್ಮಿಬ್ಬರಿಗೂ ನನ್ನ ಜೀವನದಲ್ಲಿ ಕೊಟ್ಟಿರುವ ಜಾಗ ಏನೆಂದು ನನಗೆ ಗೊತ್ತು. ನೋಯಿಸುವ ಉದ್ದೇಶದಿಂದ ನಾನೂ ಯಾರಿಗೂ ಏನೂ ಹೇಳೋದಿಲ್ಲ" ಎಂದು ಹೇಳುತ್ತಾರೆ ಗೌತಮ್.
ಇತರ ಗ್ಯಾಲರಿಗಳು