ಸಾವೇ ಸಂಜೀವಿನಿ ಎಂದು ಸಾಯಲು ಹೊರಟ ಮಾವ- ಅತ್ತೆಗೆ ಗೌತಮ್‌ ದಿವಾನ್‌ ಸಾಂತ್ವಾನ- ಅಮೃತಧಾರೆ ಧಾರಾವಾಹಿಯಲ್ಲಿ ಭಾವುಕ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಾವೇ ಸಂಜೀವಿನಿ ಎಂದು ಸಾಯಲು ಹೊರಟ ಮಾವ- ಅತ್ತೆಗೆ ಗೌತಮ್‌ ದಿವಾನ್‌ ಸಾಂತ್ವಾನ- ಅಮೃತಧಾರೆ ಧಾರಾವಾಹಿಯಲ್ಲಿ ಭಾವುಕ ಕ್ಷಣಗಳು

ಸಾವೇ ಸಂಜೀವಿನಿ ಎಂದು ಸಾಯಲು ಹೊರಟ ಮಾವ- ಅತ್ತೆಗೆ ಗೌತಮ್‌ ದಿವಾನ್‌ ಸಾಂತ್ವಾನ- ಅಮೃತಧಾರೆ ಧಾರಾವಾಹಿಯಲ್ಲಿ ಭಾವುಕ ಕ್ಷಣಗಳು

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಕೊನೆಯ ಬಾರಿ ಗೌತಮ್‌, ಭೂಮಿಕಾ, ಅಪ್ಪಿಯನ್ನು ನೋಡಲು ಸದಾಶಿವ-ಮಂದಾಕಿನಿ ಹೋಗಿದ್ದಾರೆ. ಬಳಿಕ ಸಾಯಲು ಮುಂದಾಗಿದ್ದಾರೆ. ಇವರಿಗೆ ಗೌತಮ್‌ ಸಾಂತ್ವಾನ ಹೇಳಿದ್ದಾರೆ.

ಗೌತಮ್‌ ದಿವಾನ್‌- ಮಗಳಿಗೆ ಹೇಳಲಾಗದು. ಇಷ್ಟು ದಿನ ಕಷ್ಟ ಸುಖ ಒಟ್ಟಿಗೆ ಇದ್ದೇವೆ. ನಾವು ಜತೆಯಾಗಿ ಹೋಗೋಣ ಎಂದು ಸದಾಶಿವ ಮೇಷ್ಟ್ರು ಹೇಳುತ್ತಾರೆ. "ನನ್ನ ಕೊನೆಯ ಆಸೆ ಇದೆ .. ಕೊನೆಯ ಬಾರಿ ಅಪ್ಪಿ, ಗೌತಮ್‌, ಭೂಮಿಕಾಳನ್ನು ನೋಡಿಕೊಂಡು ಹೋಗೋಣ" ಎಂದು ಮಂದಾಕಿನಿ ಹೇಳುತ್ತಾರೆ. "ಸರಿ, ಅವರಿಗೆ ತಿಂಡಿ ಬೇಕರಿಯಿಂದ ತರೋಣ. ಮನೆಯಲ್ಲಿ ಮಾಡಿದ್ದು ಮನೆಯಲ್ಲಿಯೇ ಇದೆ" ಎಂದು ಸದಾಶಿವ ಹೇಳುತ್ತಾರೆ. ಹೀಗೆ ಇವರು ಕೊನೆಯ ಬಾರಿ ಭೂಮಿಯನ್ನು ನೋಡಲು ಹೋಗುತ್ತಾರೆ.
icon

(1 / 12)

ಗೌತಮ್‌ ದಿವಾನ್‌- ಮಗಳಿಗೆ ಹೇಳಲಾಗದು. ಇಷ್ಟು ದಿನ ಕಷ್ಟ ಸುಖ ಒಟ್ಟಿಗೆ ಇದ್ದೇವೆ. ನಾವು ಜತೆಯಾಗಿ ಹೋಗೋಣ ಎಂದು ಸದಾಶಿವ ಮೇಷ್ಟ್ರು ಹೇಳುತ್ತಾರೆ. "ನನ್ನ ಕೊನೆಯ ಆಸೆ ಇದೆ .. ಕೊನೆಯ ಬಾರಿ ಅಪ್ಪಿ, ಗೌತಮ್‌, ಭೂಮಿಕಾಳನ್ನು ನೋಡಿಕೊಂಡು ಹೋಗೋಣ" ಎಂದು ಮಂದಾಕಿನಿ ಹೇಳುತ್ತಾರೆ. "ಸರಿ, ಅವರಿಗೆ ತಿಂಡಿ ಬೇಕರಿಯಿಂದ ತರೋಣ. ಮನೆಯಲ್ಲಿ ಮಾಡಿದ್ದು ಮನೆಯಲ್ಲಿಯೇ ಇದೆ" ಎಂದು ಸದಾಶಿವ ಹೇಳುತ್ತಾರೆ. ಹೀಗೆ ಇವರು ಕೊನೆಯ ಬಾರಿ ಭೂಮಿಯನ್ನು ನೋಡಲು ಹೋಗುತ್ತಾರೆ.

ಗೌತಮ್‌ ಮತ್ತು ಭೂಮಿಕಾ ಮಾತನಾಡುವಾಗ ಮನೆಗೆ ಸದಾಶಿವ ಮತ್ತು ಮಂದಾಕಿನಿ ಬರುತ್ತಾರೆ. ಬಂದವರನ್ನು ಪ್ರೀತಿಯನ್ನು ಮಲ್ಲಿ ಮಾತನಾಡಿಸುತ್ತಾಳೆ. ಈ ಬಾರಿ ಅಪ್ಪಿ ನಮ್ಮನ್ನು ಮಾತನಾಡಿಸ್ತಾಳ? ಈ ಬಾರಿ ಮಾತನಾಡದೆ ಇದ್ದರೆ ಜೀವನಪೂರ್ತಿ ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಯೋಚಿಸುತ್ತಾರೆ.
icon

(2 / 12)

ಗೌತಮ್‌ ಮತ್ತು ಭೂಮಿಕಾ ಮಾತನಾಡುವಾಗ ಮನೆಗೆ ಸದಾಶಿವ ಮತ್ತು ಮಂದಾಕಿನಿ ಬರುತ್ತಾರೆ. ಬಂದವರನ್ನು ಪ್ರೀತಿಯನ್ನು ಮಲ್ಲಿ ಮಾತನಾಡಿಸುತ್ತಾಳೆ. ಈ ಬಾರಿ ಅಪ್ಪಿ ನಮ್ಮನ್ನು ಮಾತನಾಡಿಸ್ತಾಳ? ಈ ಬಾರಿ ಮಾತನಾಡದೆ ಇದ್ದರೆ ಜೀವನಪೂರ್ತಿ ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಯೋಚಿಸುತ್ತಾರೆ.

ಮಹಿಮಾ ಯಾರಿಗೆ ಈ ವಿಷಯ ಹೇಳಲಿ ಎಂದು ಯೋಚಿಸುತ್ತಾಳೆ. ಅತ್ತಿಗೆಗೆ ಹೇಳಲಾಗದು. ಅವರು ಪ್ರೆಗ್ನೆಂಟ್‌, ಆದರೆ, ಅಣ್ಣನಿಗೆ ಹೇಳಬಹುದು ಎಂದು ಅಣ್ಣನಿಗೆ ಕಾಲ್‌ ಮಾಡುತ್ತಾಳೆ. ಅದೇ ಸಮಯದಲ್ಲಿ ಮಲ್ಲಿ ಬಂದು "ಮಾವ ಅತ್ತೆ ಬಂದಿದ್ದಾರೆ" ಎಂದು ಹೇಳುತ್ತಾಳೆ. ಇನ್ನೊಂದೆಡೆ ಅಪೇಕ್ಷಾಳ ಕೊಠಡಿಗೂ ಮಲ್ಲಿ ಬರುತ್ತಾಳೆ. ಅವಳಿಗೂ ಹೇಳುತ್ತಾಳೆ.
icon

(3 / 12)

ಮಹಿಮಾ ಯಾರಿಗೆ ಈ ವಿಷಯ ಹೇಳಲಿ ಎಂದು ಯೋಚಿಸುತ್ತಾಳೆ. ಅತ್ತಿಗೆಗೆ ಹೇಳಲಾಗದು. ಅವರು ಪ್ರೆಗ್ನೆಂಟ್‌, ಆದರೆ, ಅಣ್ಣನಿಗೆ ಹೇಳಬಹುದು ಎಂದು ಅಣ್ಣನಿಗೆ ಕಾಲ್‌ ಮಾಡುತ್ತಾಳೆ. ಅದೇ ಸಮಯದಲ್ಲಿ ಮಲ್ಲಿ ಬಂದು "ಮಾವ ಅತ್ತೆ ಬಂದಿದ್ದಾರೆ" ಎಂದು ಹೇಳುತ್ತಾಳೆ. ಇನ್ನೊಂದೆಡೆ ಅಪೇಕ್ಷಾಳ ಕೊಠಡಿಗೂ ಮಲ್ಲಿ ಬರುತ್ತಾಳೆ. ಅವಳಿಗೂ ಹೇಳುತ್ತಾಳೆ.

ಮಲ್ಲಿಗೆ ತಾನು ಬಯ್ದ ಸಂಗತಿಗಳು ನೆನಪಿಗೆ ಬರುತ್ತವೆ. "ಅವರನ್ನು ಮಾತನಾಡಿಸಬೇಕೆಂಬ ಆಸೆ ಇದೆ. ಆದರೆ, ಇಷ್ಟು ದಿನ ಮಾತನಾಡಿಲ್ಲ, ಈಗ ಹೇಗೆ ಮಾತನಾಡಲಿ" ಎನ್ನುತ್ತಾಳೆ. "ನೀವು ಹೊಟ್ಟೆಯಲ್ಲಿರುವಾಗಲೂ ಒದ್ದಿದ್ದೀರಿ. ಹೊರಗೆಯೂ ಒದ್ದಿದ್ದೀರಿ. ಅವರು ಅಪ್ಪ ಅಮ್ಮ, ಅವರು ಬೇಸರ ಮಾಡೋಲ್ಲ" ಎಂದು ಪಾರ್ಥ ಹೇಳುತ್ತಾನೆ.
icon

(4 / 12)

ಮಲ್ಲಿಗೆ ತಾನು ಬಯ್ದ ಸಂಗತಿಗಳು ನೆನಪಿಗೆ ಬರುತ್ತವೆ. "ಅವರನ್ನು ಮಾತನಾಡಿಸಬೇಕೆಂಬ ಆಸೆ ಇದೆ. ಆದರೆ, ಇಷ್ಟು ದಿನ ಮಾತನಾಡಿಲ್ಲ, ಈಗ ಹೇಗೆ ಮಾತನಾಡಲಿ" ಎನ್ನುತ್ತಾಳೆ. "ನೀವು ಹೊಟ್ಟೆಯಲ್ಲಿರುವಾಗಲೂ ಒದ್ದಿದ್ದೀರಿ. ಹೊರಗೆಯೂ ಒದ್ದಿದ್ದೀರಿ. ಅವರು ಅಪ್ಪ ಅಮ್ಮ, ಅವರು ಬೇಸರ ಮಾಡೋಲ್ಲ" ಎಂದು ಪಾರ್ಥ ಹೇಳುತ್ತಾನೆ.

ಮನೆಗೆ ಬಂದ ಸದಾಶಿವ-ಮಂದಾಕಿನಿ ಬಳಿಯಲ್ಲಿ ಎಲ್ಲರೂ  ಮಾತನಾಡುತ್ತಾರೆ. ಇವರಿಬ್ಬರು ಕೆಟ್ಟ ನಿರ್ಧಾರ ಮಾಡಿಕೊಂಡಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಅಪೇಕ್ಷಾ ಮತ್ತು ಭೂಮಿಕಾ ಎಲ್ಲರಲ್ಲಿಯೂ ಮಾತನಾಡುತ್ತಾರೆ.
icon

(5 / 12)

ಮನೆಗೆ ಬಂದ ಸದಾಶಿವ-ಮಂದಾಕಿನಿ ಬಳಿಯಲ್ಲಿ ಎಲ್ಲರೂ ಮಾತನಾಡುತ್ತಾರೆ. ಇವರಿಬ್ಬರು ಕೆಟ್ಟ ನಿರ್ಧಾರ ಮಾಡಿಕೊಂಡಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಅಪೇಕ್ಷಾ ಮತ್ತು ಭೂಮಿಕಾ ಎಲ್ಲರಲ್ಲಿಯೂ ಮಾತನಾಡುತ್ತಾರೆ.

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಪ್ರೊಮೊ ಬಿಡುಗಡೆ ಮಾಡಿದೆ. ಅದರಲ್ಲಿ ಇಂದಿನ ಸಂಚಿಕೆಯಲ್ಲಿ ಏನೇನೂ ಇರಲಿದೆ ಎಂಬ ವಿವರ ಲಭ್ಯವಾಗಿದೆ. ಗೌತಮ್‌ ಮನೆಯಲಿರುವ ಸದಾಶಿವ ಮತ್ತು ಮಂದಾಕಿನಿ ರಾತ್ರಿ ಎದ್ದು ಹೊರಗೆ ಹೋಗಿ ಸಾಯುವ ನಿರ್ಧಾರ ಮಾಡುತ್ತಾರೆ.
icon

(6 / 12)

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಪ್ರೊಮೊ ಬಿಡುಗಡೆ ಮಾಡಿದೆ. ಅದರಲ್ಲಿ ಇಂದಿನ ಸಂಚಿಕೆಯಲ್ಲಿ ಏನೇನೂ ಇರಲಿದೆ ಎಂಬ ವಿವರ ಲಭ್ಯವಾಗಿದೆ. ಗೌತಮ್‌ ಮನೆಯಲಿರುವ ಸದಾಶಿವ ಮತ್ತು ಮಂದಾಕಿನಿ ರಾತ್ರಿ ಎದ್ದು ಹೊರಗೆ ಹೋಗಿ ಸಾಯುವ ನಿರ್ಧಾರ ಮಾಡುತ್ತಾರೆ.

"ಮನೆಯವರು ಹೇಳುವುದಕ್ಕಿಂತ ಮೊದಲು ನಾವೇ ಇಲ್ಲಿಂದ ಎದ್ದು ಹೋಗೋಣ. ನಮಗೆ ಈಗ ಸಾವೇ ಸಂಜೀವಿನಿ. ನಾವಿಲ್ಲದೆ ಇದ್ದರೂ ಈ ಜಗತ್ತು ನಡೆಯುತ್ತದೆ. ನಾಲ್ಕು ದಿನ ಕಣ್ಣೀರು ಹಾಕುತ್ತಾರೆ. ಆಮೇಲೆ ಎಲ್ಲವೂ ಮೊದಲಿನಂತೆ ಆಗುತ್ತದೆ" ಎಂದು ಸದಾಶಿವ ಹೇಳುತ್ತಾರೆ.
icon

(7 / 12)

"ಮನೆಯವರು ಹೇಳುವುದಕ್ಕಿಂತ ಮೊದಲು ನಾವೇ ಇಲ್ಲಿಂದ ಎದ್ದು ಹೋಗೋಣ. ನಮಗೆ ಈಗ ಸಾವೇ ಸಂಜೀವಿನಿ. ನಾವಿಲ್ಲದೆ ಇದ್ದರೂ ಈ ಜಗತ್ತು ನಡೆಯುತ್ತದೆ. ನಾಲ್ಕು ದಿನ ಕಣ್ಣೀರು ಹಾಕುತ್ತಾರೆ. ಆಮೇಲೆ ಎಲ್ಲವೂ ಮೊದಲಿನಂತೆ ಆಗುತ್ತದೆ" ಎಂದು ಸದಾಶಿವ ಹೇಳುತ್ತಾರೆ.

ಇದೇ ಪ್ರೊಮೊದಲ್ಲಿ ಗೌತಮ್‌ ದಿವಾನ್‌ ಇವರಿಬ್ಬರನ್ನು ವಿಚಾರಿಸಿಕೊಳ್ಳುವ ದೃಶ್ಯವಿದೆ. "ಏನು ಇದೆಲ್ಲ, ನೀವಿಬ್ಬರು ಏನು ಮಾಡಲು ಹೊರಟಿದ್ದೀರಿ" ಎಂದು ಗೌತಮ್‌ ದಿವಾನ್‌ ಕೇಳುತ್ತಾರೆ.
icon

(8 / 12)

ಇದೇ ಪ್ರೊಮೊದಲ್ಲಿ ಗೌತಮ್‌ ದಿವಾನ್‌ ಇವರಿಬ್ಬರನ್ನು ವಿಚಾರಿಸಿಕೊಳ್ಳುವ ದೃಶ್ಯವಿದೆ. "ಏನು ಇದೆಲ್ಲ, ನೀವಿಬ್ಬರು ಏನು ಮಾಡಲು ಹೊರಟಿದ್ದೀರಿ" ಎಂದು ಗೌತಮ್‌ ದಿವಾನ್‌ ಕೇಳುತ್ತಾರೆ.

"ನೀವು ಮೇಷ್ಟ್ರು, ಇನ್ನೊಬ್ಬರಿಗೆ ಪಾಠ ಹೇಳೋರು, ಇಂತಹ ನಿರ್ಧಾರ ಯಾಕೆ ತೆಗೆದುಕೊಂಡಿದ್ದೀರಿ?" ಎಂದು ಗೌತಮ್‌ ಪ್ರಶ್ನಿಸುತ್ತಾರೆ.
icon

(9 / 12)

"ನೀವು ಮೇಷ್ಟ್ರು, ಇನ್ನೊಬ್ಬರಿಗೆ ಪಾಠ ಹೇಳೋರು, ಇಂತಹ ನಿರ್ಧಾರ ಯಾಕೆ ತೆಗೆದುಕೊಂಡಿದ್ದೀರಿ?" ಎಂದು ಗೌತಮ್‌ ಪ್ರಶ್ನಿಸುತ್ತಾರೆ.

"ನಾವು ಏನೇ ಆಗಿದ್ರು ಸಮಯದ ಮುಂದೆ ತುಂಬಾ ಸಣ್ಣವರು" ಎಂದು ಸದಾಶಿವ ಹೇಳುತ್ತಾರೆ. "ಏನೆಂದು ಹೇಳಿ ಮಾವ" ಎಂದು ಗೌತಮ್‌ ಕೇಳುತ್ತಾರೆ.
icon

(10 / 12)

"ನಾವು ಏನೇ ಆಗಿದ್ರು ಸಮಯದ ಮುಂದೆ ತುಂಬಾ ಸಣ್ಣವರು" ಎಂದು ಸದಾಶಿವ ಹೇಳುತ್ತಾರೆ. "ಏನೆಂದು ಹೇಳಿ ಮಾವ" ಎಂದು ಗೌತಮ್‌ ಕೇಳುತ್ತಾರೆ.

ಆಗ ಮಂದಾಕಿನಿ ಮಗ ಮನೆಯಿಂದ ಹೊರಗೆ ಹಾಕಿದ ಸಂಗತಿ ಹೇಳುತ್ತಾರೆ.  "ಇದು ನನ್ನ ಮನೆ, ನಾನು ಕಟ್ಟಿಸಿದ ಮನೆ, ಇಷ್ಟೆಲ್ಲ ಆದ ಮೇಲೆ ಈ ಮನೆಯಲ್ಲಿ ಇರಬಾರದು" ಎಂದು ಜೀವನ್‌ ಹೇಳಿದ್ದ ವಿಷಯ ಕೇಳಿ ಗೌತಮ್‌ಗೆ ದುಃಖವಾಗುತ್ತದೆ. ಗೌತಮ್‌ ಮುಂದೆ ಏನು ಮಾಡುತ್ತಾರೆ ಎಂಬ ವಿವರ ಇಂದಿನ ಅಮೃತಧಾರೆ ಸಂಚಿಕೆಯಲ್ಲಿ ತಿಳಿಯಬಹುದು.
icon

(11 / 12)

ಆಗ ಮಂದಾಕಿನಿ ಮಗ ಮನೆಯಿಂದ ಹೊರಗೆ ಹಾಕಿದ ಸಂಗತಿ ಹೇಳುತ್ತಾರೆ. "ಇದು ನನ್ನ ಮನೆ, ನಾನು ಕಟ್ಟಿಸಿದ ಮನೆ, ಇಷ್ಟೆಲ್ಲ ಆದ ಮೇಲೆ ಈ ಮನೆಯಲ್ಲಿ ಇರಬಾರದು" ಎಂದು ಜೀವನ್‌ ಹೇಳಿದ್ದ ವಿಷಯ ಕೇಳಿ ಗೌತಮ್‌ಗೆ ದುಃಖವಾಗುತ್ತದೆ. ಗೌತಮ್‌ ಮುಂದೆ ಏನು ಮಾಡುತ್ತಾರೆ ಎಂಬ ವಿವರ ಇಂದಿನ ಅಮೃತಧಾರೆ ಸಂಚಿಕೆಯಲ್ಲಿ ತಿಳಿಯಬಹುದು.

ಜೀವನ್‌ನ ಕುಡಿತದ ಚಟ ಬಿಡಿಸಲು ಮಹಿಮಾ ಕುಡಿಯುವ ನಾಟಕ ಮಾಡಿದ್ದಳು. ಸದಾಶಿವನ ಸಲಹೆ ಮೇರೆಗೆ ಹೀಗೆ ಮಾಡಿದ್ದಳು. ಜೀವನ್‌ ತಲೆಕೆಟ್ಟವನಂತೆ ಅಪ್ಪ ಅಮ್ಮನನ್ನು ಹೊರಗೆ ಹಾಕಿದ್ದ. ಇದೀಗ ಗೌತಮ್‌ ಇವರಿಗೆ ಆಸರೆ ನೀಡುತ್ತಾನ? ಅಥವಾ ಜೀವನ್‌ಗೆ ಬುದ್ಧಿ ಕಳುಹಿಸುತ್ತಾನ? ಕಾದು ನೋಡಬೇಕಿದೆ.
icon

(12 / 12)

ಜೀವನ್‌ನ ಕುಡಿತದ ಚಟ ಬಿಡಿಸಲು ಮಹಿಮಾ ಕುಡಿಯುವ ನಾಟಕ ಮಾಡಿದ್ದಳು. ಸದಾಶಿವನ ಸಲಹೆ ಮೇರೆಗೆ ಹೀಗೆ ಮಾಡಿದ್ದಳು. ಜೀವನ್‌ ತಲೆಕೆಟ್ಟವನಂತೆ ಅಪ್ಪ ಅಮ್ಮನನ್ನು ಹೊರಗೆ ಹಾಕಿದ್ದ. ಇದೀಗ ಗೌತಮ್‌ ಇವರಿಗೆ ಆಸರೆ ನೀಡುತ್ತಾನ? ಅಥವಾ ಜೀವನ್‌ಗೆ ಬುದ್ಧಿ ಕಳುಹಿಸುತ್ತಾನ? ಕಾದು ನೋಡಬೇಕಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು