ಅಮೃತಧಾರೆ ಧಾರಾವಾಹಿ: ಕಿಡ್ನ್ಯಾಪರ್‌ ಜೈದೇವ್‌ಗೆ ಪ್ರಮೋಷನ್‌ ನೀಡಿದ ಗೌತಮ್‌; ಮಲ್ಲಿ ಸತ್ಯ ಹೇಳುವ ಸಮಯ ಬಂದಾಯ್ತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಧಾರಾವಾಹಿ: ಕಿಡ್ನ್ಯಾಪರ್‌ ಜೈದೇವ್‌ಗೆ ಪ್ರಮೋಷನ್‌ ನೀಡಿದ ಗೌತಮ್‌; ಮಲ್ಲಿ ಸತ್ಯ ಹೇಳುವ ಸಮಯ ಬಂದಾಯ್ತು

ಅಮೃತಧಾರೆ ಧಾರಾವಾಹಿ: ಕಿಡ್ನ್ಯಾಪರ್‌ ಜೈದೇವ್‌ಗೆ ಪ್ರಮೋಷನ್‌ ನೀಡಿದ ಗೌತಮ್‌; ಮಲ್ಲಿ ಸತ್ಯ ಹೇಳುವ ಸಮಯ ಬಂದಾಯ್ತು

  • ಅಮೃತಧಾರೆ ಧಾರಾವಾಹಿಯಲ್ಲಿ ಧೋ ಎಂದು ದೊಡ್ಡದೊಂದು ಮಳೆ ಸುರಿದು ಮತ್ತೆ ನೀರವತೆ ಮೂಡುವ ಸಮಯ. ಕಳೆದ ಕೆಲವು ದಿನಗಳಿಂದ ಲಚ್ಚಿ ಕಿಡ್ನ್ಯಾಪ್‌ ಘಟನೆಯಿಂದ ಕೆಲವೊಂದು ಸೀನಿಮಯ ದೃಶ್ಯಗಳನ್ನು ಅಮೃತಧಾರೆ ಧಾರಾವಾಹಿಯಲ್ಲಿ ನೀಡಲಾಗಿತ್ತು. ಇದೀಗ ಜೈದೇವ್‌ ಪ್ರಮೋಷನ್‌ ವಿಚಾರ ಮುನ್ನೆಲೆಗೆ ಬಂದಿದೆ.

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರೊಮೊ ಬಿಡುಗಡೆ ಮಾಡಿದೆ. ಜೈದೇವ್‌ಗೆ ಗೌತಮ್‌ ದಿವಾನ್‌ ತನ್ನ ಕಂಪನಿಯಲ್ಲಿ ಪ್ರೊಮೊಷನ್‌ ನೀಡಿದ್ದಾನೆ. ದಿವಾನ್‌ ಕಂಪನಿಯ ಬೋರ್ಡ್‌ ಸದಸ್ಯತ್ವವನ್ನೂ ನೀಡಿದ್ದಾನೆ. ಈ ವಿಚಾರ ಮಲ್ಲಿಗೆ ತಿಳಿದಾಗ ಅವಳು ಖುಷಿಗೊಂಡಿಲ್ಲ. ಜೈದೇವ್‌ನ ವಿಚಾರವನ್ನು ಮಲ್ಲಿ ಗೌತಮ್‌ ಮತ್ತು ಭೂಮಿಕಾಳಿಗೆ ಇಂದು ಹೇಳುತ್ತಾಳೆಯೇ?
icon

(1 / 9)

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಪ್ರೊಮೊ ಬಿಡುಗಡೆ ಮಾಡಿದೆ. ಜೈದೇವ್‌ಗೆ ಗೌತಮ್‌ ದಿವಾನ್‌ ತನ್ನ ಕಂಪನಿಯಲ್ಲಿ ಪ್ರೊಮೊಷನ್‌ ನೀಡಿದ್ದಾನೆ. ದಿವಾನ್‌ ಕಂಪನಿಯ ಬೋರ್ಡ್‌ ಸದಸ್ಯತ್ವವನ್ನೂ ನೀಡಿದ್ದಾನೆ. ಈ ವಿಚಾರ ಮಲ್ಲಿಗೆ ತಿಳಿದಾಗ ಅವಳು ಖುಷಿಗೊಂಡಿಲ್ಲ. ಜೈದೇವ್‌ನ ವಿಚಾರವನ್ನು ಮಲ್ಲಿ ಗೌತಮ್‌ ಮತ್ತು ಭೂಮಿಕಾಳಿಗೆ ಇಂದು ಹೇಳುತ್ತಾಳೆಯೇ?

ಕಳೆದ ಕೆಲವು ದಿನಗಳಿಂದ ಅಮೃತಧಾರೆ ಧಾರಾವಾಹಿಯಲ್ಲಿ ಲಚ್ಚಿ ಕಿಡ್ನ್ಯಾಪ್‌ ಪ್ರಕರಣ ನಡೆದಿದೆ. ಜೈದೇವ್‌ ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಿದ್ದ. ಶಕುಂತಲಾದೇವಿ ಗ್ಯಾಂಗ್‌ ತಾವೇ ತೋಡಿದ ಹಳ್ಳಕ್ಕೆ ಬಿದ್ದ ಪ್ರಸಂಗ ನಡೆದಿತ್ತು.
icon

(2 / 9)

ಕಳೆದ ಕೆಲವು ದಿನಗಳಿಂದ ಅಮೃತಧಾರೆ ಧಾರಾವಾಹಿಯಲ್ಲಿ ಲಚ್ಚಿ ಕಿಡ್ನ್ಯಾಪ್‌ ಪ್ರಕರಣ ನಡೆದಿದೆ. ಜೈದೇವ್‌ ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಿದ್ದ. ಶಕುಂತಲಾದೇವಿ ಗ್ಯಾಂಗ್‌ ತಾವೇ ತೋಡಿದ ಹಳ್ಳಕ್ಕೆ ಬಿದ್ದ ಪ್ರಸಂಗ ನಡೆದಿತ್ತು.

ಭೂಮಿಕಾ ಮತ್ತು ಸೃಜನ್‌ ಸರದಲ್ಲಿ ಮೈಕ್‌ ಇಟ್ಟವರನ್ನು ಪತ್ತೆಹಚ್ಚಲು ಮುಂದಾಗಿದ್ದರು. ಅವರಿಬ್ಬರು ಮೈಕ್‌ ಕಂಪನಿಯ ಪ್ರತಿನಿಧಿಯೊಬ್ಬರನ್ನು ಭೇಟಿಯಾಗಲು ಹೋಗುತ್ತಿದ್ದರು. ಇದನ್ನು ತಡೆಹಿಡಿಯಲು ಶಕುಂತಲಾದೇವಿ ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದಳು.
icon

(3 / 9)

ಭೂಮಿಕಾ ಮತ್ತು ಸೃಜನ್‌ ಸರದಲ್ಲಿ ಮೈಕ್‌ ಇಟ್ಟವರನ್ನು ಪತ್ತೆಹಚ್ಚಲು ಮುಂದಾಗಿದ್ದರು. ಅವರಿಬ್ಬರು ಮೈಕ್‌ ಕಂಪನಿಯ ಪ್ರತಿನಿಧಿಯೊಬ್ಬರನ್ನು ಭೇಟಿಯಾಗಲು ಹೋಗುತ್ತಿದ್ದರು. ಇದನ್ನು ತಡೆಹಿಡಿಯಲು ಶಕುಂತಲಾದೇವಿ ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದಳು.

ಸುಧಾಳ ಮಗಳು ‌ ಲಚ್ಚಿಯನ್ನು ಜೈದೇವ್‌ ಕಿಡ್ನ್ಯಾಪ್‌ ಮಾಡಿದ್ದ. ಭೂಮಿಕಾ ಅರ್ಜೆಂಟ್‌ನಲ್ಲಿ ವಾಪಸ್‌ ಬರುವಂತೆ ಮಾಡುವಲ್ಲಿ ಶಕುಂತಲಾ ಯಶಸ್ವಿಯಾಗಿದ್ದಳು. ಮೈಕ್‌ ರಹಸ್ಯ ಪತ್ತೆ ಹಚ್ಚಲು ಹಿನ್ನೆಡೆಯಾಗಿತ್ತು. ಭೂಮಿಕಾ ವಾಪಸ್‌ ಬಂದಿದ್ದಳು.
icon

(4 / 9)

ಸುಧಾಳ ಮಗಳು ‌ ಲಚ್ಚಿಯನ್ನು ಜೈದೇವ್‌ ಕಿಡ್ನ್ಯಾಪ್‌ ಮಾಡಿದ್ದ. ಭೂಮಿಕಾ ಅರ್ಜೆಂಟ್‌ನಲ್ಲಿ ವಾಪಸ್‌ ಬರುವಂತೆ ಮಾಡುವಲ್ಲಿ ಶಕುಂತಲಾ ಯಶಸ್ವಿಯಾಗಿದ್ದಳು. ಮೈಕ್‌ ರಹಸ್ಯ ಪತ್ತೆ ಹಚ್ಚಲು ಹಿನ್ನೆಡೆಯಾಗಿತ್ತು. ಭೂಮಿಕಾ ವಾಪಸ್‌ ಬಂದಿದ್ದಳು.

ಕಿಡ್ನ್ಯಾಪರ್‌ ಜೈದೇವ್‌ ಆಟ ನಡೆದಿಲ್ಲ. ಸೃಜನ್‌ ಸಹಾಯದಿಂದ ಲೊಕೆಷನ್‌ ಪತ್ತೆಹಚ್ಚಿದ ಆನಂದ್‌ ಮತ್ತು ಗೌತಮ್‌ ಘಟನಾ ಸ್ಥಳಕ್ಕೆ ಬಂದಿದ್ದರು. ಗೂಂಡಾಗಳ ಜತೆ ಸಖತ್‌ ಫೈಟಿಂಗ್‌ ಮಾಡಿದ್ದರು. ಶಕುಂತಲಾ ಗ್ಯಾಂಗ್‌ ಯೋಜನೆ ಠುಸ್‌ ಆಗಿತ್ತು.
icon

(5 / 9)

ಕಿಡ್ನ್ಯಾಪರ್‌ ಜೈದೇವ್‌ ಆಟ ನಡೆದಿಲ್ಲ. ಸೃಜನ್‌ ಸಹಾಯದಿಂದ ಲೊಕೆಷನ್‌ ಪತ್ತೆಹಚ್ಚಿದ ಆನಂದ್‌ ಮತ್ತು ಗೌತಮ್‌ ಘಟನಾ ಸ್ಥಳಕ್ಕೆ ಬಂದಿದ್ದರು. ಗೂಂಡಾಗಳ ಜತೆ ಸಖತ್‌ ಫೈಟಿಂಗ್‌ ಮಾಡಿದ್ದರು. ಶಕುಂತಲಾ ಗ್ಯಾಂಗ್‌ ಯೋಜನೆ ಠುಸ್‌ ಆಗಿತ್ತು.

ಇದೀಗ ಈ ಕಿಡ್ನ್ಯಾಪ್‌ ಘಟನೆಯಿಂದ ಪ್ರೇಕ್ಷಕರನ್ನು ಬೇರೆಡೆಗೆ ಸೆಳೆಯಲು ಜೈದೇವ್‌ ಪ್ರಮೋಷನ್‌ ಪ್ರಸಂಗ ನಡೆದಿದೆ. ಜೈದೇವ್‌ನ ಪ್ರೊಮೋಷನ್‌ ಲೆಟರ್‌ ನೋಡಿ ಭೂಮಿಕಾ ವಾಹ್‌ ಎನ್ನುತ್ತಾಳೆ. "ಬರೀ ಪ್ರೊಮೊಷನ್‌ ಅಲ್ಲ, ಈತನನ್ನು ಬೋರ್ಡ್‌ ಸದಸ್ಯನ್ನಾಗಿಯೂ ಮಾಡಿದ್ದೇನೆ" ಎಂದು ಗೌತಮ್‌ ಹೇಳುತ್ತಾರೆ. ಖುಷಿಯಿಂದ ಭೂಮಿಕಾ ಮಲ್ಲಿಯನ್ನು ಕರೆಯುತ್ತಾರೆ.
icon

(6 / 9)

ಇದೀಗ ಈ ಕಿಡ್ನ್ಯಾಪ್‌ ಘಟನೆಯಿಂದ ಪ್ರೇಕ್ಷಕರನ್ನು ಬೇರೆಡೆಗೆ ಸೆಳೆಯಲು ಜೈದೇವ್‌ ಪ್ರಮೋಷನ್‌ ಪ್ರಸಂಗ ನಡೆದಿದೆ. ಜೈದೇವ್‌ನ ಪ್ರೊಮೋಷನ್‌ ಲೆಟರ್‌ ನೋಡಿ ಭೂಮಿಕಾ ವಾಹ್‌ ಎನ್ನುತ್ತಾಳೆ. "ಬರೀ ಪ್ರೊಮೊಷನ್‌ ಅಲ್ಲ, ಈತನನ್ನು ಬೋರ್ಡ್‌ ಸದಸ್ಯನ್ನಾಗಿಯೂ ಮಾಡಿದ್ದೇನೆ" ಎಂದು ಗೌತಮ್‌ ಹೇಳುತ್ತಾರೆ. ಖುಷಿಯಿಂದ ಭೂಮಿಕಾ ಮಲ್ಲಿಯನ್ನು ಕರೆಯುತ್ತಾರೆ.

ಪ್ರಮೋಷನ್‌ ಸಿಕ್ಕ ವಿಚಾರ ಮಲ್ಲಿಗೆ ಖುಷಿ ತಂದಿಲ್ಲ. "ಜೈದೇವ್‌ ಈ ಮನೆಯವರಿಗೆ ಮಾಡುವ ವಂಚನೆ ತಿಳಿದಿಲ್ಲ. ಇವರು ಇವನಿಗೆ ಪ್ರೊಮೋಷನ್‌ ನೀಡುತ್ತಿದ್ದಾರೆ" ಎಂದು ಮಲ್ಲಿ ಯೋಚಿಸುತ್ತಾಳೆ. ಮಲ್ಲಿಯ ಮನಸ್ಸು ಸರಿ ಇಲ್ಲ ಎನ್ನುವುದು ಗೌತಮ್‌ ಮತ್ತು ಭೂಮಿಕಾಗೆ ತಿಳಿಯುತ್ತದೆ.
icon

(7 / 9)

ಪ್ರಮೋಷನ್‌ ಸಿಕ್ಕ ವಿಚಾರ ಮಲ್ಲಿಗೆ ಖುಷಿ ತಂದಿಲ್ಲ. "ಜೈದೇವ್‌ ಈ ಮನೆಯವರಿಗೆ ಮಾಡುವ ವಂಚನೆ ತಿಳಿದಿಲ್ಲ. ಇವರು ಇವನಿಗೆ ಪ್ರೊಮೋಷನ್‌ ನೀಡುತ್ತಿದ್ದಾರೆ" ಎಂದು ಮಲ್ಲಿ ಯೋಚಿಸುತ್ತಾಳೆ. ಮಲ್ಲಿಯ ಮನಸ್ಸು ಸರಿ ಇಲ್ಲ ಎನ್ನುವುದು ಗೌತಮ್‌ ಮತ್ತು ಭೂಮಿಕಾಗೆ ತಿಳಿಯುತ್ತದೆ.

"ಏನಾಯ್ತು ಮಲ್ಲಿ" ಎಂದು ಗೌತಮ್‌ ಮತ್ತು ಭೂಮಿಕಾ ಕೇಳುತ್ತಾರೆ. ಈಕೆ ಜೈದೇವ್‌ನ ನಿಜ ಬುದ್ಧಿಯನ್ನು ಗೌತಮ್‌ಗೆ ಹೇಳುತ್ತಾಳ ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಈ ಪ್ರೊಮೊಗೆ ವೀಕ್ಷಕರು ನಾನಾ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
icon

(8 / 9)

"ಏನಾಯ್ತು ಮಲ್ಲಿ" ಎಂದು ಗೌತಮ್‌ ಮತ್ತು ಭೂಮಿಕಾ ಕೇಳುತ್ತಾರೆ. ಈಕೆ ಜೈದೇವ್‌ನ ನಿಜ ಬುದ್ಧಿಯನ್ನು ಗೌತಮ್‌ಗೆ ಹೇಳುತ್ತಾಳ ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಈ ಪ್ರೊಮೊಗೆ ವೀಕ್ಷಕರು ನಾನಾ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

"ಸತ್ಯ ಹೇಳಮ್ಮ, ಮಲ್ಲಿ ಜಯ್ ದೇವ್ ಎಂಥ ವಿಶ್ವಾಸಘಾತಕ ಎಂದು ಪೆದ್ದ ಗೌತಮ್, ಮತ್ತೆ ಭೂಮಿಕಾಗೆ ತಿಳಿಯುತ್ತಿಲ್ಲ", "ಸಾಕು ಸಾಕಾಯ್ತು ಈ ಧಾರಾವಾಹಿ ಹಳ್ಳ ಹಿಡಿಯಿತು..."  "ಭೂಮಿಕಾಗೆ ಇಷ್ಟೊಂದು ಖುಷಿ ತೋರಿಸುವ ಅಗತ್ಯ ಏನಿತ್ತೋ", "ಏನು ಇಲ್ಲ ಅಕ್ಕೊರೆ ಸುಮ್ನೆ ಹಾಗೆ ಅಂದ್ರೆ ಮುಗೀತು... ಯಪ್ಪ ಇನ್ನು ಎಷ್ಟು ದಿನ ನೋಡಬೇಕು ಈ ಭೂಮಿಕ ಮಾತು ನಾರ್ಮಲ್ ಅಗಿ ಇರೋಲ್ಲ ಓವರ್ ಆಕ್ಟಿಂಗ್. ಈ ಗೌತಮ್ ಪೆದ್ದುತನ..ಈ ಅಕ್ಕೊರೆ ಮಾತು ಅ ಜೈದೇವ್ ಶಕುನಿ ಮಾವ ಶಕುಂತಲ ಪ್ಲಾನ್, ಎಲ್ಲಾ ನೋಡಿ ಆಗಿದೆ ಮುಂದೆ ಏನಾದ್ರೂ ಸ್ಟೋರೀ ಅಂತ ಬರೆದಿದ್ದರೆ ತೋರಿಸಿ ಇಲ್ಲ ಸೀರಿಯಲ್ ನಿಲ್ಲಿಸಿ" ಎಂದೆಲ್ಲ ಪ್ರೊಮೊಗೆ ಸೋಷಿಯಲ್‌ ಮೀಡಿಯಾದಲ್ಲಿ ಜನರು ಕಾಮೆಂಟ್‌ ಮಾಡಿದ್ದಾರೆ.
icon

(9 / 9)

"ಸತ್ಯ ಹೇಳಮ್ಮ, ಮಲ್ಲಿ ಜಯ್ ದೇವ್ ಎಂಥ ವಿಶ್ವಾಸಘಾತಕ ಎಂದು ಪೆದ್ದ ಗೌತಮ್, ಮತ್ತೆ ಭೂಮಿಕಾಗೆ ತಿಳಿಯುತ್ತಿಲ್ಲ", "ಸಾಕು ಸಾಕಾಯ್ತು ಈ ಧಾರಾವಾಹಿ ಹಳ್ಳ ಹಿಡಿಯಿತು..." "ಭೂಮಿಕಾಗೆ ಇಷ್ಟೊಂದು ಖುಷಿ ತೋರಿಸುವ ಅಗತ್ಯ ಏನಿತ್ತೋ", "ಏನು ಇಲ್ಲ ಅಕ್ಕೊರೆ ಸುಮ್ನೆ ಹಾಗೆ ಅಂದ್ರೆ ಮುಗೀತು... ಯಪ್ಪ ಇನ್ನು ಎಷ್ಟು ದಿನ ನೋಡಬೇಕು ಈ ಭೂಮಿಕ ಮಾತು ನಾರ್ಮಲ್ ಅಗಿ ಇರೋಲ್ಲ ಓವರ್ ಆಕ್ಟಿಂಗ್. ಈ ಗೌತಮ್ ಪೆದ್ದುತನ..ಈ ಅಕ್ಕೊರೆ ಮಾತು ಅ ಜೈದೇವ್ ಶಕುನಿ ಮಾವ ಶಕುಂತಲ ಪ್ಲಾನ್, ಎಲ್ಲಾ ನೋಡಿ ಆಗಿದೆ ಮುಂದೆ ಏನಾದ್ರೂ ಸ್ಟೋರೀ ಅಂತ ಬರೆದಿದ್ದರೆ ತೋರಿಸಿ ಇಲ್ಲ ಸೀರಿಯಲ್ ನಿಲ್ಲಿಸಿ" ಎಂದೆಲ್ಲ ಪ್ರೊಮೊಗೆ ಸೋಷಿಯಲ್‌ ಮೀಡಿಯಾದಲ್ಲಿ ಜನರು ಕಾಮೆಂಟ್‌ ಮಾಡಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು