Amruthadhaare: ಶಕುಂತಲಾದೇವಿ- ಭಾಗ್ಯಮ್ಮ ಮುಖಾಮುಖಿ, ಗೌತಮ್ ದಿವಾನ್ಗೆ ಸತ್ಯ ತಿಳಿಯುವ ಸಮಯವೇ? ಅಮೃತಧಾರೆ ಇಂದಿನ ಕಥೆ
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ (ಜನವರಿ 4) ಸಾಕಷ್ಟು ಘಟನೆಗಳು ನಡೆಯುವ ಸೂಚನೆ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ದೊರಕಿದೆ. ವಿಶೇಷವಾಗಿ, ಮನೆಗೆ ಬಂದಿರುವ ಭಾಗ್ಯಮ್ಮನ ನೋಡಿ ಶಕುಂತಲಾದೇವಿ ಬೆಚ್ಚಿದ್ದಾರೆ. ಶಕುಂತಲಾನ ನೋಡಿ ಭಾಗ್ಯಮ್ಮ ಭಯಗೊಂಡಿದ್ದಾರೆ.
- Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ (ಜನವರಿ 4) ಸಾಕಷ್ಟು ಘಟನೆಗಳು ನಡೆಯುವ ಸೂಚನೆ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ದೊರಕಿದೆ. ವಿಶೇಷವಾಗಿ, ಮನೆಗೆ ಬಂದಿರುವ ಭಾಗ್ಯಮ್ಮನ ನೋಡಿ ಶಕುಂತಲಾದೇವಿ ಬೆಚ್ಚಿದ್ದಾರೆ. ಶಕುಂತಲಾನ ನೋಡಿ ಭಾಗ್ಯಮ್ಮ ಭಯಗೊಂಡಿದ್ದಾರೆ.
(1 / 13)
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ದಿವಾನ್ ತನ್ನ ಪ್ರೀತಿಯ ಅಮ್ಮನ ಕೈಹಿಡಿದು ಮನೆಗೆ ಕರೆತಂದಿದ್ದಾರೆ. ಮನೆಯಲ್ಲಿ ಅಮ್ಮನಿಗೆ ಎಲ್ಲರನ್ನೂ ಪರಿಚಯಿಸಿದ್ದಾರೆ. ದೊಡ್ಡ ಮನೆಯನ್ನು ಬಿಟ್ಟ ಕಣ್ಣುಗಳಿಂದ ಅಚ್ಚರಿಯಿಂದ ನೋಡುತ್ತ ಭಾಗ್ಯಮ್ಮ ಮನೆ ಪ್ರವೇಶಿಸಿದ್ದಾರೆ.
(2 / 13)
ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಮೊದಲು ಅಜ್ಜಿ ಅಚ್ಚರಿಗೊಂಡಿದ್ದಾರೆ. ನೀನು ಭಾಗ್ಯಮ್ಮ ಅಲ್ವ. ನೀನು ಈ ಮನೆಯ ಭಾಗ್ಯಲಕ್ಷ್ಮಿ. ಈ ಮನೆಗೆ ನೀನು ಬಂದ ಬಳಿಕ ನಮ್ಮ ಬದುಕು ಬದಲಾಗಿದ್ದು ಎಂದು ಅಜ್ಜಿ ಹೇಳುತ್ತಾರೆ.
(3 / 13)
ನೀನು ಭಾಗ್ಯಮ್ಮ ಅಲ್ವ. ನೀನು ಈ ಮನೆಯ ಭಾಗ್ಯಲಕ್ಷ್ಮಿ. ಈ ಮನೆಗೆ ನೀನು ಬಂದ ಬಳಿಕ ನಮ್ಮ ಬದುಕು ಬದಲಾಗಿದ್ದು ಎಂದು ಅಜ್ಜಿ ಹೇಳುತ್ತಾರೆ.
(4 / 13)
ಇದಾದ ಬಳಿಕ ಶಕುಂತಲಾದೇವಿ ಕೊಠಡಿಗೆ ಗೌತಮ್ ತನ್ನ ತಾಯಿಯ ಜತೆಗೆ ಬಂದಿದ್ದಾರೆ. ಶಕುಂತಲಾದೇವಿ ಆತಂಕದಿಂದಲೇ ನೋಡಿದ್ದಾರೆ. ಶಕುಂತಲಾನ ನೋಡಿ ಭಾಗ್ಯಮ್ಮ ಭಯಗೊಂಡಿದ್ದಾರೆ. ತನ್ನನ್ನು ಸಾಯಿಸಲು ಪ್ರಯತ್ನಿಸಿದ್ದ ರಾಕ್ಷಸಿ ಈಕೆ ಎಂದು ಭಾಗ್ಯಮ್ಮನಿಗೆ ತಿಳಿದಿದೆ. ಹೀಗಾಗಿ, ಭಯಗೊಂಡಿದ್ದಾಳೆ.
(5 / 13)
ಇವಳು ಶಕುಂತಲಾ, ಭಯಪಡಬೇಡ ಎಂದು ಗೌತಮ್ ಹೇಳಿದ್ದಾರೆ. ಶಕುಂತಲಾನ ನೋಡಿ ಅಮ್ಮ ಯಾಕೆ ಇಷ್ಟೊಂದು ಭಯಪಡುತ್ತಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಗೌತಮ್ ಅಥವಾ ಭೂಮಿಕಾ ಅನುಮಾನಗೊಂಡು ಹುಡುಕಿದರೆ ರಹಸ್ಯ ತಿಳಿಯಬಹುದು.
(6 / 13)
ಮನೆಗೆ ಬಂದ ಅಮ್ಮನಿಗೆ ಇನ್ನು ಆಪರೇಷನ್ ನಡೆಸಬೇಕಿದೆ. ಆಪರೇಷನ್ ಸಮಯದಲ್ಲಿ ಶಕುಂತಲಾ ಗ್ಯಾಂಗ್ ಏನಾದರೂ ತೊಂದರೆ ಉಂಟುಮಾಡಲು ಪ್ರಯತ್ನ ಮಾಡಬಹುದು ಎಂಬ ಅನುಮಾನವೂ ವೀಕ್ಷಕರಿದ್ದಾರೆ.
(7 / 13)
ಕಳೆದ ಕೆಲವು ದಿನಗಳಿಂದ ಅಮೃತಧಾರೆ ಧಾರಾವಾಹಿ ನೀಡಿದ ಅಚ್ಚರಿಗೆ ಪ್ರೇಕ್ಷಕರು ಖುಷಿಗೊಂಡಿದ್ದಾರೆ. ನೂರಾರು ಕಾಮೆಂಟ್ಗಳ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
(8 / 13)
"ಇನ್ನೂ ಭೂಮಿಕಾಗೆ ಒಂದು ಮಗು ಆಗಲಿ, ಗೌತಮ್ನ ತಂಗಿ ಗಂಡ ಎಲ್ಲಿ? ಅವರ ಸಂಸಾರ ಸರಿಯಾಗಲಿ" "ಗೌತಮ್ ಅವರೇ ನಿಮ್ಮ ಚಿಕ್ಕಮ್ಮನ ಮಖವಾಡ ಕಳಚಿ ಸತ್ಯವನ್ನು ತಿಳಿದುಕೊಳ್ಳಿ" ಎಂದು ಅಮೃತಧಾರೆ ಪ್ರಮೋಗೆ ಸೀರಿಯಲ್ ಪ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
(9 / 13)
"ಇನ್ನೂ ಭೂಮಿಕಾಗೆ ಒಂದು ಮಗು ಆಗಲಿ, ಗೌತಮ್ನ ತಂಗಿ ಗಂಡ ಎಲ್ಲಿ? ಅವರ ಸಂಸಾರ ಸರಿಯಾಗಲಿ" "ಗೌತಮ್ ಅವರೇ ನಿಮ್ಮ ಚಿಕ್ಕಮ್ಮನ ಮಖವಾಡ ಕಳಚಿ ಸತ್ಯವನ್ನು ತಿಳಿದುಕೊಳ್ಳಿ" ಎಂದು ಅಮೃತಧಾರೆ ಪ್ರಮೋಗೆ ಸೀರಿಯಲ್ ಪ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
(10 / 13)
"ಗೌತಮ್ ಅವರೇ ನಿಮ್ಮ ಮಲತಾಯಿ ಬಗ್ಗೆ ಎಚ್ಚರವಿರಲಿ ನಿಮ್ಮ ಸ್ವಂತ ತಾಯಿಗೆ ಕೊಲ್ಲಬಹುದು ಎಚ್ಚರ" "ಈ ಧಾರಾವಾಹಿ ನೋಡುತ್ತಿದ್ದರೆ ಹಳೇ ರಾಜ್ ಕುಮಾರ್ ಸಾಂಸಾರಿಕ ಚಲನಚಿತ್ರ ನೋಡಿದ ಅನುಭವ ಆಗುತ್ತದೆ.ಇದೇ ರೀತಿ ಸಾಗಲಿ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
(11 / 13)
ಭೂಪತಿ ಎಂಬ ಪಾತ್ರ ಸೀರಿಯಲ್ಗೆ ಎಂಟ್ರಿ ನೀಡಿದರೂ ಗೌತಮ್ಗೆ ತೊಂದರೆ ನೀಡಲು ಆಗಿರಲಿಲ್ಲ. ಭೂಪತಿಯ ಬಳಿಯೇ ಸುಧಾ ಕೆಲಸ ಮಾಡುತ್ತಿದ್ದಳು. ಆಕೆ ಗೌತಮ್ನ ತಂಗಿ ಎಂಬ ವಿಚಾರವೂ ಭೂಪತಿಗೆ ತಿಳಿದಿರಲಿಲ್ಲ.
(12 / 13)
ಅಮೃತಧಾರೆ ಸೀರಿಯಲ್ ಸದ್ಯದಲ್ಲಿಯೇ ಮುಗಿಯಬಹುದೇ? ಎಂಬ ಅನುಮಾನವೂ ಇದೆ. ಯಾಕೆಂದರೆ, ಕಳೆದ ಹಲವು ತಿಂಗಳುಗಳಿಂದ ಸತ್ಯವನ್ನು ತಿಳಿಸಲು ತಡಮಾಡಲಾಗಿತ್ತು. ಆದರೆ, ಈಗ ಈ ಸೀರಿಯಲ್ ಕೊನೆಯ ಹಂತದಲ್ಲಿರುವಂತೆ ತೋರುತ್ತದೆ. ಅಮೃತಧಾರೆ ಧಾರಾವಾಹಿ ಜೀ ಕನ್ನಡದಲ್ಲಿ ಪ್ರತಿದಿನ ರಾತ್ರಿ ಏಳುಗಂಟೆಗೆ ಪ್ರಸಾರವಾಗುತ್ತದೆ.
ಇತರ ಗ್ಯಾಲರಿಗಳು