ಅಪ್ಪ- ಅಮ್ಮನನ್ನು ಮನೆಯಿಂದ ಹೊರಗೆ ಹಾಕಿದ ಜೀವನ್‌- ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಸಂಗ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಪ್ಪ- ಅಮ್ಮನನ್ನು ಮನೆಯಿಂದ ಹೊರಗೆ ಹಾಕಿದ ಜೀವನ್‌- ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಸಂಗ

ಅಪ್ಪ- ಅಮ್ಮನನ್ನು ಮನೆಯಿಂದ ಹೊರಗೆ ಹಾಕಿದ ಜೀವನ್‌- ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಸಂಗ

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್‌ ಕುಡಿತಕ್ಕೆ ಭೂಮಿಕಾ ಮದ್ದು ಅರೆಯಲು ಪ್ರಯತ್ನಿಸಿದ್ದಾರೆ. ಮನೆಯಲ್ಲಿ ಮಹಿಮಾ ಕುಡಿಯುವುದನ್ನು ನೋಡಿರುವ ಜೀವನ್‌ ಕೋಪಗೊಂಡಿದ್ದಾನೆ. ಮನೆಯಿಂದ ಎಲ್ಲರನ್ನೂ ಹೊರಹಾಕಿದ್ದಾನೆ. ಭೂಮಿಕಾಳ ಅಣತಿಯಂತೆ ಮಹಿಮಾ ಮತ್ತು ಇತರರು ಜೀವನ್‌ಗೆ ಬುದ್ಧಿ ಕಲಿಸಲು ಯತ್ನಿಸುತ್ತಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್‌ ಕುಟುಂಬದ ಕಥೆಯಲ್ಲಿ ಒಂದು ಪ್ರಮುಖ ಘಟ್ಟ ತಲುಪಿದಂತೆ ಇದೆ. ಜೀವನ್‌ನ ಕುಡಿತದ ಚಟವನ್ನು ನಿಲ್ಲಿಸಲು ಭೂಮಿಕಾ ಕಣಕ್ಕೆ ಇಳಿದಿದ್ದಾಳೆ. ಮಹಿಮಾಳಿಗೆ ಮನೆಯಲ್ಲಿ ಕುಡಿಯಲು ಹೇಳಿದ್ದಾಳೆ.  ಮಹಿಮಾ ಕುಡಿಯುವ ನಾಟಕ ಆರಂಭಿಸಿದ್ದಾಳೆ.
icon

(1 / 11)

ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್‌ ಕುಟುಂಬದ ಕಥೆಯಲ್ಲಿ ಒಂದು ಪ್ರಮುಖ ಘಟ್ಟ ತಲುಪಿದಂತೆ ಇದೆ. ಜೀವನ್‌ನ ಕುಡಿತದ ಚಟವನ್ನು ನಿಲ್ಲಿಸಲು ಭೂಮಿಕಾ ಕಣಕ್ಕೆ ಇಳಿದಿದ್ದಾಳೆ. ಮಹಿಮಾಳಿಗೆ ಮನೆಯಲ್ಲಿ ಕುಡಿಯಲು ಹೇಳಿದ್ದಾಳೆ. ಮಹಿಮಾ ಕುಡಿಯುವ ನಾಟಕ ಆರಂಭಿಸಿದ್ದಾಳೆ.

ಜೀವನ್‌ ಬಂದಾ ಮಹಿಮಾ ಕುಡಿಯುತ್ತಿದ್ದಾಳೆ. ಆತನ ಮಾತನ್ನು ಆಕೆ ಕೇಳುವುದಿಲ್ಲ. ನನ್ನಿಷ್ಟು ಕುಡಿಯುವೆ, ಏನಿವಾಗ ಎಂದು ಎದುರುತ್ತರ ನೀಡುತ್ತಾಳೆ.
icon

(2 / 11)

ಜೀವನ್‌ ಬಂದಾ ಮಹಿಮಾ ಕುಡಿಯುತ್ತಿದ್ದಾಳೆ. ಆತನ ಮಾತನ್ನು ಆಕೆ ಕೇಳುವುದಿಲ್ಲ. ನನ್ನಿಷ್ಟು ಕುಡಿಯುವೆ, ಏನಿವಾಗ ಎಂದು ಎದುರುತ್ತರ ನೀಡುತ್ತಾಳೆ.

ಅಲ್ಲಿಗೆ ಬಂದ ತಂದೆ ಸದಾಶಿವ ಮತ್ತು ಮಂದಾಕಿನಿ ಬಳಿ "ನೋಡಪ್ಪ, ಇವಳು ಮನೆಯಲ್ಲಿಯೇ ಕುಡಿಯುತ್ತಿದ್ದಾಳೆ, ಮನೆಯನ್ನೇ ಬಾರ್‌ ಮಾಡಿಕೊಂಡಿದ್ದಾಳೆ" ಎಂದು ಹೇಳುತ್ತಾನೆ.
icon

(3 / 11)

ಅಲ್ಲಿಗೆ ಬಂದ ತಂದೆ ಸದಾಶಿವ ಮತ್ತು ಮಂದಾಕಿನಿ ಬಳಿ "ನೋಡಪ್ಪ, ಇವಳು ಮನೆಯಲ್ಲಿಯೇ ಕುಡಿಯುತ್ತಿದ್ದಾಳೆ, ಮನೆಯನ್ನೇ ಬಾರ್‌ ಮಾಡಿಕೊಂಡಿದ್ದಾಳೆ" ಎಂದು ಹೇಳುತ್ತಾನೆ.

"ನೀನು ಕುಡಿದರೆ ನಮಗೆ ಹೇಳಲಾಗಗುವುದಿಲ್ಲ ಅಂದರೆ, ಸೊಸೆ ಕುಡಿದರೆ ನಮಗೆ ಹೇಳಲಾಗುತ್ತದೆಯೇ?" ಎಂದು ಸದಾಶಿವ ಹೇಳುತ್ತಾರೆ.
icon

(4 / 11)

"ನೀನು ಕುಡಿದರೆ ನಮಗೆ ಹೇಳಲಾಗಗುವುದಿಲ್ಲ ಅಂದರೆ, ಸೊಸೆ ಕುಡಿದರೆ ನಮಗೆ ಹೇಳಲಾಗುತ್ತದೆಯೇ?" ಎಂದು ಸದಾಶಿವ ಹೇಳುತ್ತಾರೆ.

"ನನ್ನ ನೆಮ್ಮದಿ ಹಾಳು ಮಾಡಬೇಕೆಂದು ಹೀಗೆಲ್ಲ ಪ್ಲ್ಯಾನ್‌ ಮಾಡಿದ್ದೀರಾ?" ಎಂದು ಜೀವನ್‌ ಕೋಪದಿಂದ ಹೇಳುತ್ತಾನೆ.
icon

(5 / 11)

"ನನ್ನ ನೆಮ್ಮದಿ ಹಾಳು ಮಾಡಬೇಕೆಂದು ಹೀಗೆಲ್ಲ ಪ್ಲ್ಯಾನ್‌ ಮಾಡಿದ್ದೀರಾ?" ಎಂದು ಜೀವನ್‌ ಕೋಪದಿಂದ ಹೇಳುತ್ತಾನೆ.

"ನೀವೇ ಇವಳಿಗೆ ಹೇಳಿಕೊಟ್ಟಿರ್ತಿರಾ, ಹೀಗೆಲ್ಲ ಮಾಡು ಅಂತ. ಇಷ್ಟೆಲ್ಲ ಆದ ಮೇಲೆ ನೀವ್ಯಾರು ನನ್ನ ಮನೆಯಲ್ಲಿ ಇರಬಾರದು" ಎಂದು ಎಲ್ಲರನೂ ಹೊರಗೆ ಹಾಕುತ್ತಾನೆ.
icon

(6 / 11)

"ನೀವೇ ಇವಳಿಗೆ ಹೇಳಿಕೊಟ್ಟಿರ್ತಿರಾ, ಹೀಗೆಲ್ಲ ಮಾಡು ಅಂತ. ಇಷ್ಟೆಲ್ಲ ಆದ ಮೇಲೆ ನೀವ್ಯಾರು ನನ್ನ ಮನೆಯಲ್ಲಿ ಇರಬಾರದು" ಎಂದು ಎಲ್ಲರನೂ ಹೊರಗೆ ಹಾಕುತ್ತಾನೆ.

ಅತ್ಯಂತ ಮರ್ಯಾದೆಯಿಂದ ಬದುಕಿದ ಸದಾಶಿವ ಊರ ಜನರ ಮುಂದೆ ತಲೆತಗ್ಗಿಸಿಕೊಂಡು ಹೊರಹೋಗುತ್ತಾರೆ. ಮಂದಾಕಿನಿ ಮುಖದಲ್ಲಿಯೂ ದುಃಖ ಮಡುಗಟ್ಟಿದೆ.
icon

(7 / 11)

ಅತ್ಯಂತ ಮರ್ಯಾದೆಯಿಂದ ಬದುಕಿದ ಸದಾಶಿವ ಊರ ಜನರ ಮುಂದೆ ತಲೆತಗ್ಗಿಸಿಕೊಂಡು ಹೊರಹೋಗುತ್ತಾರೆ. ಮಂದಾಕಿನಿ ಮುಖದಲ್ಲಿಯೂ ದುಃಖ ಮಡುಗಟ್ಟಿದೆ.

 ಇನ್ನೊಂದೆಡೆ ಇವರೆರಲ್ಲರ ಬಳಿ ಭೂಮಿಕಾ ಕಾಲ್‌ನಲ್ಲಿ ಮಾತನಾಡುವ ದೃಶ್ಯವನ್ನೂ ತೋರಿಸಲಾಗಿದೆ. ಭೂಮಿಕಾ ಇವರೆಲ್ಲರಿಗೂ ಆಸರೆ ನೀಡುವ ಸಾಧ್ಯತೆ ಇದೆ. ಈ ರೀತಿ ಮನೆಯಿಂದ ಹೊರಹಾಕುವ ಹಿಂದೆ ಸೀರಿಯಲ್‌ ತಂಡದ ಬೇರೆ ಏನೋ ತಂತ್ರವಿದೆಯೇ? ಯಾಕೆಂದರೆ...
icon

(8 / 11)

ಇನ್ನೊಂದೆಡೆ ಇವರೆರಲ್ಲರ ಬಳಿ ಭೂಮಿಕಾ ಕಾಲ್‌ನಲ್ಲಿ ಮಾತನಾಡುವ ದೃಶ್ಯವನ್ನೂ ತೋರಿಸಲಾಗಿದೆ. ಭೂಮಿಕಾ ಇವರೆಲ್ಲರಿಗೂ ಆಸರೆ ನೀಡುವ ಸಾಧ್ಯತೆ ಇದೆ. ಈ ರೀತಿ ಮನೆಯಿಂದ ಹೊರಹಾಕುವ ಹಿಂದೆ ಸೀರಿಯಲ್‌ ತಂಡದ ಬೇರೆ ಏನೋ ತಂತ್ರವಿದೆಯೇ? ಯಾಕೆಂದರೆ...

ಜೀವನ್‌ ಪಾತ್ರದಾರಿಗೆ ಬೇರೆ ಸೀರಿಯಲ್‌ನಲ್ಲಿ ನಾಯಕ ನಟನಾಗುವ ಅವಕಾಶ ದೊರಕಿದೆ. ಅಮೃತಧಾರೆ ಧಾರಾವಾಹಿಯಿಂದ ಜೀವನ್‌ ಪಾತ್ರವನ್ನು ಮರೆಯಾಗಿಸುವ ಉದ್ದೇಶದಿಂದ ಈ ರೀತಿ ಮನೆಯಿಂದ ಹೊರಗೆ ಹಾಕುವ ಪ್ಲ್ಯಾನ್‌ ಮಾಡಲಾಗಿದೆಯೇ? ಎಂಬ ಸಂದೇಹವೂ ಇದೆ.
icon

(9 / 11)

ಜೀವನ್‌ ಪಾತ್ರದಾರಿಗೆ ಬೇರೆ ಸೀರಿಯಲ್‌ನಲ್ಲಿ ನಾಯಕ ನಟನಾಗುವ ಅವಕಾಶ ದೊರಕಿದೆ. ಅಮೃತಧಾರೆ ಧಾರಾವಾಹಿಯಿಂದ ಜೀವನ್‌ ಪಾತ್ರವನ್ನು ಮರೆಯಾಗಿಸುವ ಉದ್ದೇಶದಿಂದ ಈ ರೀತಿ ಮನೆಯಿಂದ ಹೊರಗೆ ಹಾಕುವ ಪ್ಲ್ಯಾನ್‌ ಮಾಡಲಾಗಿದೆಯೇ? ಎಂಬ ಸಂದೇಹವೂ ಇದೆ.

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್‌ ಮತ್ತು ಮಹಿಮಾ ಪಾತ್ರಕ್ಕೆ ಒಂದು ತೂಕವಿತ್ತು. ಆದರೆ, ಭೂಪತಿ ಜತೆ ಸೇರಿ ಜೀವನ್‌ ಹಾಳಾಗಿದ್ದಾನೆ ಎಂದು ಇವರ ಸಂಸಾರದಲ್ಲಿ ಅಪಸ್ವರ ಮೂಡಿಸಲಾಯಿತು. ಕುಡಿತದ ನಂತರ ಮುಂದೇನೂ ಎಂದು ತಿಳಿಯದೆ ಕಥೆಗಾರರು ತಡವರಿಸಿದಂತೆ ಇದೆ.
icon

(10 / 11)

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್‌ ಮತ್ತು ಮಹಿಮಾ ಪಾತ್ರಕ್ಕೆ ಒಂದು ತೂಕವಿತ್ತು. ಆದರೆ, ಭೂಪತಿ ಜತೆ ಸೇರಿ ಜೀವನ್‌ ಹಾಳಾಗಿದ್ದಾನೆ ಎಂದು ಇವರ ಸಂಸಾರದಲ್ಲಿ ಅಪಸ್ವರ ಮೂಡಿಸಲಾಯಿತು. ಕುಡಿತದ ನಂತರ ಮುಂದೇನೂ ಎಂದು ತಿಳಿಯದೆ ಕಥೆಗಾರರು ತಡವರಿಸಿದಂತೆ ಇದೆ.

ಇದೀಗ ಮನೆಯಿಂದ ಹೊರಹಾಕುವ ಮೂಲಕ ಇವರ ಕಥೆಗೆ ಒಂದು ಟ್ವಿಸ್ಟ್‌ ನೀಡುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕಾದು ನೋಡಬೇಕಿದೆ.
icon

(11 / 11)

ಇದೀಗ ಮನೆಯಿಂದ ಹೊರಹಾಕುವ ಮೂಲಕ ಇವರ ಕಥೆಗೆ ಒಂದು ಟ್ವಿಸ್ಟ್‌ ನೀಡುವ ಪ್ರಯತ್ನ ನಡೆಯುತ್ತಿದೆಯೇ ಎಂದು ಕಾದು ನೋಡಬೇಕಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು