ಅಮೃತಧಾರೆ ಸೀರಿಯಲ್‌: ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಲು ಹೋಗಿ ಅಪ್ಪಚ್ಚಿಯಾಗ್ತಾನ ಜೈದೇವ್‌? ಸೃಜನ್‌ ಪ್ರತಿಭೆಗೆ ನಡುಗಿದ ಶಕುಂತಲಾ ಗ್ಯಾಂಗ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಸೀರಿಯಲ್‌: ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಲು ಹೋಗಿ ಅಪ್ಪಚ್ಚಿಯಾಗ್ತಾನ ಜೈದೇವ್‌? ಸೃಜನ್‌ ಪ್ರತಿಭೆಗೆ ನಡುಗಿದ ಶಕುಂತಲಾ ಗ್ಯಾಂಗ್‌

ಅಮೃತಧಾರೆ ಸೀರಿಯಲ್‌: ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಲು ಹೋಗಿ ಅಪ್ಪಚ್ಚಿಯಾಗ್ತಾನ ಜೈದೇವ್‌? ಸೃಜನ್‌ ಪ್ರತಿಭೆಗೆ ನಡುಗಿದ ಶಕುಂತಲಾ ಗ್ಯಾಂಗ್‌

  • ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಅದರಲ್ಲಿ ಸೃಜನ್‌ ಸಹಾಯದಿಂದ ಕಿಡ್ನ್ಯಾಪರ್‌ಗಳ ಸ್ಥಳ ಮಾಹಿತಿಯನ್ನು ಗೌತಮ್‌ ಪಡೆಯುತ್ತಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಕುಂತಲಾದೇವಿ ಆತಂಕಕ್ಕೆ ಈಡಾಗಿದ್ದಾರೆ. ಜೈದೇವ್‌ ಸಿಕ್ಕಿ ಬೀಳ್ತಾನ ಎಂಬ ಅನುಮಾನದಲ್ಲಿದ್ದಾರೆ.

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆ ಮಾಡಿದೆ. ಅಲ್ಲಿ ಜೈದೇವ್‌ ಮಾರು ಧ್ವನಿಯಲ್ಲಿ ಕಿಡ್ನ್ಯಾಪರ್‌ ಸೋಗಿನಲ್ಲಿದ್ದಾನೆ. ಆತನ ಸುತ್ತ ಹಲವು ಗೂಂಡಾಗಳು ಇದ್ದಾರೆ.
icon

(1 / 10)

ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆ ಮಾಡಿದೆ. ಅಲ್ಲಿ ಜೈದೇವ್‌ ಮಾರು ಧ್ವನಿಯಲ್ಲಿ ಕಿಡ್ನ್ಯಾಪರ್‌ ಸೋಗಿನಲ್ಲಿದ್ದಾನೆ. ಆತನ ಸುತ್ತ ಹಲವು ಗೂಂಡಾಗಳು ಇದ್ದಾರೆ.

ಇನ್ನೊಂದೆಡೆ ಸೃಜನ್‌ಗೆ ಹ್ಯಾಕಿಂಗ್‌ ಗೊತ್ತು. ಕಂಪ್ಯೂಟರ್‌ನಲ್ಲಿ ಫೋನ್‌ ಟ್ರೇಸ್‌ ಮಾಡುತ್ತಿದ್ದಾನೆ. ಜೈದೇವ್‌ ಕಾಲ್‌ ಮಾಡಿದ ಸಮಯದಲ್ಲಿ ಆತನ ಲೊಕೆಷನ್‌ ಟ್ರ್ಯಾಕ್‌ ಮಾಡುತ್ತಿದ್ದಾನೆ. ಸೃಜನ್‌ ನೆರವಿನಿಂದ ಜೈದೇವ್‌ ಇರುವ ಸ್ಥಳ ಗೌತಮ್‌ಗೆ ತಿಳಿಯುವ ಸೂಚನೆ ದೊರಕಿದೆ.
icon

(2 / 10)

ಇನ್ನೊಂದೆಡೆ ಸೃಜನ್‌ಗೆ ಹ್ಯಾಕಿಂಗ್‌ ಗೊತ್ತು. ಕಂಪ್ಯೂಟರ್‌ನಲ್ಲಿ ಫೋನ್‌ ಟ್ರೇಸ್‌ ಮಾಡುತ್ತಿದ್ದಾನೆ. ಜೈದೇವ್‌ ಕಾಲ್‌ ಮಾಡಿದ ಸಮಯದಲ್ಲಿ ಆತನ ಲೊಕೆಷನ್‌ ಟ್ರ್ಯಾಕ್‌ ಮಾಡುತ್ತಿದ್ದಾನೆ. ಸೃಜನ್‌ ನೆರವಿನಿಂದ ಜೈದೇವ್‌ ಇರುವ ಸ್ಥಳ ಗೌತಮ್‌ಗೆ ತಿಳಿಯುವ ಸೂಚನೆ ದೊರಕಿದೆ.

ಹೀಗೆ ಸೃಜನ್‌ ಮಗುವನ್ನು ಕಾಪಾಡಲು ನೆರವಾಗಬಹುದು. ಆದರೆ, ಕೊನೆಯ ಕ್ಷಣದಲ್ಲಿ ಜೈದೇವ್‌ ಸಿಕ್ಕಿ ಬೀಳದೆ ಇರಬಹುದು. ಶಕುಂತಲಾದೇವಿ ಹೇಗಾದರೂ ಮಾಡಿ ಜೈದೇವ್‌ನ ಕೊನೆಕ್ಷಣದಲ್ಲಿ ಕಾಪಾಡಬಹುದು.
icon

(3 / 10)

ಹೀಗೆ ಸೃಜನ್‌ ಮಗುವನ್ನು ಕಾಪಾಡಲು ನೆರವಾಗಬಹುದು. ಆದರೆ, ಕೊನೆಯ ಕ್ಷಣದಲ್ಲಿ ಜೈದೇವ್‌ ಸಿಕ್ಕಿ ಬೀಳದೆ ಇರಬಹುದು. ಶಕುಂತಲಾದೇವಿ ಹೇಗಾದರೂ ಮಾಡಿ ಜೈದೇವ್‌ನ ಕೊನೆಕ್ಷಣದಲ್ಲಿ ಕಾಪಾಡಬಹುದು.

ಈ ಕಿಡ್ನ್ಯಾಪ್‌ ಮಾಡಲು ಪ್ರಮುಖ ಕಾರಣವಿದೆ. ಭೂಮಿಕಾ ಮತ್ತು ಸೃಜನ್‌ ಇಬ್ಬರೂ ಜತೆಯಾಗಿ ಮೈಕ್‌ ರಹಸ್ಯ ತಿಳಿಯಲು ಹೋಗಿದ್ದಾರೆ ಎಂದು ಶಕುಂತಲಾ ದೇವಿಗೆ ಗೊತ್ತಿತ್ತು. ಅವರಿಬ್ಬರು ಗಮ್ಯ ತಲುಪುವ ಮೊದಲೇ ಈ ನಾಟಕ ಮಾಡಿ ಮುಗಿಸಿದ್ದಾರೆ.
icon

(4 / 10)

ಈ ಕಿಡ್ನ್ಯಾಪ್‌ ಮಾಡಲು ಪ್ರಮುಖ ಕಾರಣವಿದೆ. ಭೂಮಿಕಾ ಮತ್ತು ಸೃಜನ್‌ ಇಬ್ಬರೂ ಜತೆಯಾಗಿ ಮೈಕ್‌ ರಹಸ್ಯ ತಿಳಿಯಲು ಹೋಗಿದ್ದಾರೆ ಎಂದು ಶಕುಂತಲಾ ದೇವಿಗೆ ಗೊತ್ತಿತ್ತು. ಅವರಿಬ್ಬರು ಗಮ್ಯ ತಲುಪುವ ಮೊದಲೇ ಈ ನಾಟಕ ಮಾಡಿ ಮುಗಿಸಿದ್ದಾರೆ.

ಅನಿವಾರ್ಯವಾಗಿ ಭೂಮಿಕಾ ವಾಪಸ್‌ ಬಂದಿದ್ದಾಳೆ. ಆದರೆ, ಜತೆಯಲ್ಲಿ ಸೃಜನ್‌ ಇರುವುದರಿಂದ ಶಕುಂತಲಾದೇವಿಯ ಪ್ಲ್ಯಾನ್‌ ಉಲ್ಟಾ ಹೊಡೆದಿದೆ.
icon

(5 / 10)

ಅನಿವಾರ್ಯವಾಗಿ ಭೂಮಿಕಾ ವಾಪಸ್‌ ಬಂದಿದ್ದಾಳೆ. ಆದರೆ, ಜತೆಯಲ್ಲಿ ಸೃಜನ್‌ ಇರುವುದರಿಂದ ಶಕುಂತಲಾದೇವಿಯ ಪ್ಲ್ಯಾನ್‌ ಉಲ್ಟಾ ಹೊಡೆದಿದೆ.

ಬಿಟೆಕ್‌ ಓದಿರುವ ಈತನಿಗೆ ಹ್ಯಾಕಿಂಗ್‌ ಕೂಡ ತಿಳಿದಿದೆ. ಪೊಲೀಸರಿಗೆ ತಿಳಿಸಿದ್ರೆ ಲೊಕೆಷನ್‌ ಅಥವಾ ಫೋನ್‌ ಟ್ರ್ಯಾಕ್‌ ಮಾಡ್ತಾ ಇದ್ರು. ಇವರು ನೋಡಿದ್ರೆ ಏನೂ ಮಾಡೋದು ಬೇಡ ಅಂತಿದ್ದಾರೆ. ಈಗ ಹ್ಯಾಕರ್‌ಗಳನ್ನು ಎಲ್ಲಿ ಹುಡುಕೋದು ಎಂದು ಗೌತಮ್‌ ಹೇಳುತ್ತಾರೆ.
icon

(6 / 10)

ಬಿಟೆಕ್‌ ಓದಿರುವ ಈತನಿಗೆ ಹ್ಯಾಕಿಂಗ್‌ ಕೂಡ ತಿಳಿದಿದೆ. ಪೊಲೀಸರಿಗೆ ತಿಳಿಸಿದ್ರೆ ಲೊಕೆಷನ್‌ ಅಥವಾ ಫೋನ್‌ ಟ್ರ್ಯಾಕ್‌ ಮಾಡ್ತಾ ಇದ್ರು. ಇವರು ನೋಡಿದ್ರೆ ಏನೂ ಮಾಡೋದು ಬೇಡ ಅಂತಿದ್ದಾರೆ. ಈಗ ಹ್ಯಾಕರ್‌ಗಳನ್ನು ಎಲ್ಲಿ ಹುಡುಕೋದು ಎಂದು ಗೌತಮ್‌ ಹೇಳುತ್ತಾರೆ.

ಆಗ ಅಲ್ಲಿ ಇದ್ದ ಸೃಜನ್‌ "ಸರ್‌ ನಾನೇ ಮಾಡುವೆ" ಎನ್ನುತ್ತಾನೆ. ಇದು ಶಕುಂತಲಾ ಟೀಮ್‌ಗೆ ಅನಿರೀಕ್ಷಿತ. "ಸರ್‌ ನಾನು ಅದೇ ಓದಿರುವುದು. ಈ ಹಿಂದೆ ಹ್ಯಾಕಿಂಗ್‌ ಮಾಡಿಲ್ಲ. ಆದರೆ, ಅದರ ಬಗ್ಗೆ ಎಲ್ಲವೂ ಗೊತ್ತಿದೆ" ಎನ್ನುತ್ತಾನೆ. "ಗೆಳೆಯ ಇವನು ಇಷ್ಟೊಂದು ಕಾನ್ಫಿಡೆಂಟ್‌ ಆಗಿ ಹೇಳ್ತಾ ಇದ್ದಾನೆ ಅಂದರೆ ಇವನು ಗ್ಯಾರಂಟಿ ಮಾಡ್ತಾನೆ. ಮಾಡಲಿ ಬಿಡು" ಎಂದು ಆನಂದ್‌ ಹೇಳುತ್ತಾನೆ. "ಇವರು ಏನಾದರೂ ಟ್ರ್ಯಾಕ್‌ ಮಾಡಿದ್ರೆ ಜೈ ಸಿಕ್ಕಿ ಹಾಕಿಕೊಳ್ಳುತ್ತಾನೆ" ಎಂದು ಶಕುಂತಲಾದೇವಿ ಯೋಚಿಸುತ್ತಾರೆ.
icon

(7 / 10)

ಆಗ ಅಲ್ಲಿ ಇದ್ದ ಸೃಜನ್‌ "ಸರ್‌ ನಾನೇ ಮಾಡುವೆ" ಎನ್ನುತ್ತಾನೆ. ಇದು ಶಕುಂತಲಾ ಟೀಮ್‌ಗೆ ಅನಿರೀಕ್ಷಿತ. "ಸರ್‌ ನಾನು ಅದೇ ಓದಿರುವುದು. ಈ ಹಿಂದೆ ಹ್ಯಾಕಿಂಗ್‌ ಮಾಡಿಲ್ಲ. ಆದರೆ, ಅದರ ಬಗ್ಗೆ ಎಲ್ಲವೂ ಗೊತ್ತಿದೆ" ಎನ್ನುತ್ತಾನೆ. "ಗೆಳೆಯ ಇವನು ಇಷ್ಟೊಂದು ಕಾನ್ಫಿಡೆಂಟ್‌ ಆಗಿ ಹೇಳ್ತಾ ಇದ್ದಾನೆ ಅಂದರೆ ಇವನು ಗ್ಯಾರಂಟಿ ಮಾಡ್ತಾನೆ. ಮಾಡಲಿ ಬಿಡು" ಎಂದು ಆನಂದ್‌ ಹೇಳುತ್ತಾನೆ. "ಇವರು ಏನಾದರೂ ಟ್ರ್ಯಾಕ್‌ ಮಾಡಿದ್ರೆ ಜೈ ಸಿಕ್ಕಿ ಹಾಕಿಕೊಳ್ಳುತ್ತಾನೆ" ಎಂದು ಶಕುಂತಲಾದೇವಿ ಯೋಚಿಸುತ್ತಾರೆ.

ಇಂದಿನ ಸಂಚಿಕೆಯಲ್ಲಿ ಕಿಡ್ನ್ಯಾಪರ್‌ ವೇಷದಲ್ಲಿರುವ ಜೈದೇವ್‌ ಫೋನ್‌ ಮಾಡುತ್ತಾನೆ. ಆತ ತುಂಬಾ ಖುಷಿಯಿಂದ ಹಣ ಕೇಳುತ್ತಾನೆ. ಆದರೆ, ತಾನು ಟ್ರ್ಯಾಕ್‌ ಆಗುತ್ತಿರುವ ಸಂಗತಿ ಆತನಿಗೆ ತಿಳಿದಿಲ್ಲ. ಈ ಕಿಡ್ನ್ಯಾಪ್‌ ಪ್ರಕರಣ ಇಂದಿನ ಸಂಚಿಕೆಯಲ್ಲಿ ಬಗೆಹರಿಯುವುದೇ, ಇನ್ನೊಂದೆರಡು ದಿನ ಮುಂದುವರೆಯಬಹುದೇ ಎಂದು ಕಾದು ನೋಡಬೇಕಿದೆ.
icon

(8 / 10)

ಇಂದಿನ ಸಂಚಿಕೆಯಲ್ಲಿ ಕಿಡ್ನ್ಯಾಪರ್‌ ವೇಷದಲ್ಲಿರುವ ಜೈದೇವ್‌ ಫೋನ್‌ ಮಾಡುತ್ತಾನೆ. ಆತ ತುಂಬಾ ಖುಷಿಯಿಂದ ಹಣ ಕೇಳುತ್ತಾನೆ. ಆದರೆ, ತಾನು ಟ್ರ್ಯಾಕ್‌ ಆಗುತ್ತಿರುವ ಸಂಗತಿ ಆತನಿಗೆ ತಿಳಿದಿಲ್ಲ. ಈ ಕಿಡ್ನ್ಯಾಪ್‌ ಪ್ರಕರಣ ಇಂದಿನ ಸಂಚಿಕೆಯಲ್ಲಿ ಬಗೆಹರಿಯುವುದೇ, ಇನ್ನೊಂದೆರಡು ದಿನ ಮುಂದುವರೆಯಬಹುದೇ ಎಂದು ಕಾದು ನೋಡಬೇಕಿದೆ.

ಒಟ್ಟಾರೆ ಹಾವು ಸಾಯಲೂಬಾರದು, ಕೋಲು ಮುರಿಯಲೂ ಬಾರದು ಎಂಬಂತೆ ನಾಜೂಕಾಗಿ ಸೀರಿಯಲ್‌ ಮುಂದೆ ಸಾಗುತ್ತಿದೆ. ವಿಲನ್‌ ಪಡೆ ಸಿಕ್ಕಿ ಬಿದ್ದರೆ ಅಮೃತಧಾರೆಯ ಎಲ್ಲಾ ಕಥೆಗಳಿಗೂ ಬ್ರೇಕ್‌ ಬಿದ್ದಂತೆ ಆಗುತ್ತದೆ. ಹೀಗಾಗಿ, ಸದ್ಯಕ್ಕೆ ಶಕುಂತಲಾ ಗ್ಯಾಂಗ್‌ ಸಿಕ್ಕಿಬೀಳುವ ಸೂಚನೆ ಇಲ್ಲ.
icon

(9 / 10)

ಒಟ್ಟಾರೆ ಹಾವು ಸಾಯಲೂಬಾರದು, ಕೋಲು ಮುರಿಯಲೂ ಬಾರದು ಎಂಬಂತೆ ನಾಜೂಕಾಗಿ ಸೀರಿಯಲ್‌ ಮುಂದೆ ಸಾಗುತ್ತಿದೆ. ವಿಲನ್‌ ಪಡೆ ಸಿಕ್ಕಿ ಬಿದ್ದರೆ ಅಮೃತಧಾರೆಯ ಎಲ್ಲಾ ಕಥೆಗಳಿಗೂ ಬ್ರೇಕ್‌ ಬಿದ್ದಂತೆ ಆಗುತ್ತದೆ. ಹೀಗಾಗಿ, ಸದ್ಯಕ್ಕೆ ಶಕುಂತಲಾ ಗ್ಯಾಂಗ್‌ ಸಿಕ್ಕಿಬೀಳುವ ಸೂಚನೆ ಇಲ್ಲ.

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.
icon

(10 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು