ಹೊಟ್ಟೆಯಲ್ಲಿರುವ ಮಗುವಿಗೆ ಏನಾದ್ರೂ ಆದ್ರೆ ಏನು ಗತಿ? ಗೌತಮ್‌ ಪ್ರಶ್ನೆ ಕೇಳಿ ಭೂಮಿಕಾ ತಬ್ಬಿಬ್ಬು; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಟ್ಟೆಯಲ್ಲಿರುವ ಮಗುವಿಗೆ ಏನಾದ್ರೂ ಆದ್ರೆ ಏನು ಗತಿ? ಗೌತಮ್‌ ಪ್ರಶ್ನೆ ಕೇಳಿ ಭೂಮಿಕಾ ತಬ್ಬಿಬ್ಬು; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

ಹೊಟ್ಟೆಯಲ್ಲಿರುವ ಮಗುವಿಗೆ ಏನಾದ್ರೂ ಆದ್ರೆ ಏನು ಗತಿ? ಗೌತಮ್‌ ಪ್ರಶ್ನೆ ಕೇಳಿ ಭೂಮಿಕಾ ತಬ್ಬಿಬ್ಬು; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

  • Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್‌ ಪ್ರೇಮಧಾರೆ ಮುಂದುವರೆದಿದೆ. ಈ ಸಂದರ್ಭದಲ್ಲಿ ಮಗುವಿಗೆ ಏನಾದ್ರೂ ಆದ್ರೆ ಏನು ಗತಿ ಎಂದು ಗೌತಮ್‌ ಆತಂಕ ಪಡಿಸಿದ್ದಾರೆ. ಇಂದಿನ ಎಪಿಸೋಡ್‌ನ ಝಲಕ್‌ ಇಲ್ಲಿದೆ.

Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಭೂಮಿಕಾಗೆ ಇದ್ದ ಸಮಸ್ಯೆಗಳೆಲ್ಲ ಸಾಂಗವಾಗಿ ಕಳೆದುಹೋಗಿವೆ. ಇದೀಗ ಭೂಮಿಕಾ ಗರ್ಭಿಣಿ. ಗೌತಮ್‌ ಈಕೆಯ ಕುರಿತು ಅತೀವ ಕಾಳಜಿ ವಹಿಸುತ್ತಾನೆ. ವಿಶೇಷವಾಗಿ ಹೊಟ್ಟೆಯಲ್ಲಿರುವ ಮಗುವಿನ ಕುರಿತು ವಿಶೇಷ ಕಾಳಜಿ ವಹಿಸುತ್ತಾನೆ. 
icon

(1 / 10)

Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಭೂಮಿಕಾಗೆ ಇದ್ದ ಸಮಸ್ಯೆಗಳೆಲ್ಲ ಸಾಂಗವಾಗಿ ಕಳೆದುಹೋಗಿವೆ. ಇದೀಗ ಭೂಮಿಕಾ ಗರ್ಭಿಣಿ. ಗೌತಮ್‌ ಈಕೆಯ ಕುರಿತು ಅತೀವ ಕಾಳಜಿ ವಹಿಸುತ್ತಾನೆ. ವಿಶೇಷವಾಗಿ ಹೊಟ್ಟೆಯಲ್ಲಿರುವ ಮಗುವಿನ ಕುರಿತು ವಿಶೇಷ ಕಾಳಜಿ ವಹಿಸುತ್ತಾನೆ. 

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಮಗು ಆಗೋದಿಲ್ಲ, ಗರ್ಭಕೋಶದ ಸಮಸ್ಯೆ ಇದೆ ಎಂದೆಲ್ಲ ಹಿಂದೆ ಸುದ್ದಿಯಾಗಿತ್ತು. ಶಕುಂತಲಾದೇವಿ ಈ ರೀತಿ ಡಾಕ್ಟರ್‌ ಮೂಲಕ ಹೇಳಿಸಿದ್ದರು. ಆದರೆ, ಇದೀಗ ಅದೆಲ್ಲ ಸುಳ್ಳು, ಭೂಮಿಕಾ ಗರ್ಭಿಣಿ ಆಗಿದ್ದಾಳೆ ಎಂದು ಜಾಹೀರಾಗಿದೆ. 
icon

(2 / 10)

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಮಗು ಆಗೋದಿಲ್ಲ, ಗರ್ಭಕೋಶದ ಸಮಸ್ಯೆ ಇದೆ ಎಂದೆಲ್ಲ ಹಿಂದೆ ಸುದ್ದಿಯಾಗಿತ್ತು. ಶಕುಂತಲಾದೇವಿ ಈ ರೀತಿ ಡಾಕ್ಟರ್‌ ಮೂಲಕ ಹೇಳಿಸಿದ್ದರು. ಆದರೆ, ಇದೀಗ ಅದೆಲ್ಲ ಸುಳ್ಳು, ಭೂಮಿಕಾ ಗರ್ಭಿಣಿ ಆಗಿದ್ದಾಳೆ ಎಂದು ಜಾಹೀರಾಗಿದೆ. 

ಗೌತಮ್‌ಗೆ ಎರಡನೇ ಮದುವೆ ಮಾಡಿಸಲು ಶಕುಂತಲಾದೇವಿ ಮುಂದಾಗಿದ್ದರು. ಗೌತಮ್‌ ಜಾಣತನದಿಂದ ವಧು ಮಧುರಾಳಿಗೆ ಎಲ್ಲಾ ಹೇಳಿದ್ದ. ಮಧುರಾ ಮತ್ತು ಗೌತಮ್‌ ನಾಟಕ ಮಾಡಿದ್ರು. ಹಸೆಮಣೆಯಲ್ಲಿ ಗೌತಮ್‌ ತಾಳಿ ಕಟ್ಟುವ ಸಮಯದಲ್ಲಿ ಒಂದು ಟ್ವಿಸ್ಟ್‌ ಕೊಟ್ರು.  
icon

(3 / 10)

ಗೌತಮ್‌ಗೆ ಎರಡನೇ ಮದುವೆ ಮಾಡಿಸಲು ಶಕುಂತಲಾದೇವಿ ಮುಂದಾಗಿದ್ದರು. ಗೌತಮ್‌ ಜಾಣತನದಿಂದ ವಧು ಮಧುರಾಳಿಗೆ ಎಲ್ಲಾ ಹೇಳಿದ್ದ. ಮಧುರಾ ಮತ್ತು ಗೌತಮ್‌ ನಾಟಕ ಮಾಡಿದ್ರು. ಹಸೆಮಣೆಯಲ್ಲಿ ಗೌತಮ್‌ ತಾಳಿ ಕಟ್ಟುವ ಸಮಯದಲ್ಲಿ ಒಂದು ಟ್ವಿಸ್ಟ್‌ ಕೊಟ್ರು.  

ಮಧುರಾಳಿಗೆ ತಾಳಿ ಕಟ್ಟುವ ಬದಲು ತನ್ನ ಹೆಂಡತಿ ಭೂಮಿಕಾಳಿಗೆ ತಾಳಿ ಕಟ್ಟಿದ್ರು. ಈ ಮೂಲಕ ಮಗುವಾಗದೆ ಇದ್ದಾಗ ಗಂಡಿಗೆ ಎರಡನೇ ಮದುವೆ ಮಾಡುವುದು ಎಷ್ಟು ಸರಿ ಎಂದು ಸಮಾಜಕ್ಕೆ ತಿಳಿ ಹೇಳಿದ್ರು. 
icon

(4 / 10)

ಮಧುರಾಳಿಗೆ ತಾಳಿ ಕಟ್ಟುವ ಬದಲು ತನ್ನ ಹೆಂಡತಿ ಭೂಮಿಕಾಳಿಗೆ ತಾಳಿ ಕಟ್ಟಿದ್ರು. ಈ ಮೂಲಕ ಮಗುವಾಗದೆ ಇದ್ದಾಗ ಗಂಡಿಗೆ ಎರಡನೇ ಮದುವೆ ಮಾಡುವುದು ಎಷ್ಟು ಸರಿ ಎಂದು ಸಮಾಜಕ್ಕೆ ತಿಳಿ ಹೇಳಿದ್ರು. 

ಮಧುರಾಳಿಗೆ ತಾಳಿ ಕಟ್ಟುವ ಬದಲು ತನ್ನ ಹೆಂಡತಿ ಭೂಮಿಕಾಳಿಗೆ ತಾಳಿ ಕಟ್ಟಿದ್ರು. ಈ ಮೂಲಕ ಮಗುವಾಗದೆ ಇದ್ದಾಗ ಗಂಡಿಗೆ ಎರಡನೇ ಮದುವೆ ಮಾಡುವುದು ಎಷ್ಟು ಸರಿ ಎಂದು ಸಮಾಜಕ್ಕೆ ತಿಳಿ ಹೇಳಿದ್ರು. 
icon

(5 / 10)

ಮಧುರಾಳಿಗೆ ತಾಳಿ ಕಟ್ಟುವ ಬದಲು ತನ್ನ ಹೆಂಡತಿ ಭೂಮಿಕಾಳಿಗೆ ತಾಳಿ ಕಟ್ಟಿದ್ರು. ಈ ಮೂಲಕ ಮಗುವಾಗದೆ ಇದ್ದಾಗ ಗಂಡಿಗೆ ಎರಡನೇ ಮದುವೆ ಮಾಡುವುದು ಎಷ್ಟು ಸರಿ ಎಂದು ಸಮಾಜಕ್ಕೆ ತಿಳಿ ಹೇಳಿದ್ರು. 

ಇದೇ ಸಮಯದಲ್ಲಿ ಭೂಮಿಕಾ ಗರ್ಭಿಣಿ ಎಂಬ ವಿಷಯ ಬಹಿರಂಗವಾಗಿತ್ತು. ಅಲ್ಲೇ ಇದ್ದ ಮಧುರಾಳ ಅಮ್ಮ ಈಕೆ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ರು. ಹೀಗೆ, ಭೂಮಿಕಾ ಮತ್ತು ಗೌತಮ್‌ ನಡುವೆ ಇದ್ದ ಸಮಸ್ಯೆಗಳು ಸರಿಯಾಗಿವೆ. ಇಂದಿನ ಸಂಚಿಕೆಯಲ್ಲಿ ಭೂಮಿಕಾ ಮತ್ತು ಗೌತಮ್‌ ಮಾತನಾಡುತ್ತಿದ್ದಾರೆ. 
icon

(6 / 10)

ಇದೇ ಸಮಯದಲ್ಲಿ ಭೂಮಿಕಾ ಗರ್ಭಿಣಿ ಎಂಬ ವಿಷಯ ಬಹಿರಂಗವಾಗಿತ್ತು. ಅಲ್ಲೇ ಇದ್ದ ಮಧುರಾಳ ಅಮ್ಮ ಈಕೆ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ರು. ಹೀಗೆ, ಭೂಮಿಕಾ ಮತ್ತು ಗೌತಮ್‌ ನಡುವೆ ಇದ್ದ ಸಮಸ್ಯೆಗಳು ಸರಿಯಾಗಿವೆ. ಇಂದಿನ ಸಂಚಿಕೆಯಲ್ಲಿ ಭೂಮಿಕಾ ಮತ್ತು ಗೌತಮ್‌ ಮಾತನಾಡುತ್ತಿದ್ದಾರೆ. 

"ಅವರಲ್ಲಿ ರಿಕ್ವಸ್ಟ್‌ ಮಾಡಿದ್ದಕ್ಕೆ ಒಪ್ಪಿಕೊಂಡ್ರು. ಇಲ್ಲದೆ ಇದ್ದರೆ ಅವರಿಗೆ ತಾಳಿ ಕಟ್ಟಬೇಕಿತ್ತು. ಅವರ ಒಳ್ಳೆಯತನಕ್ಕೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ" ಎಂದು ಗೌತಮ್‌ ಹೇಳುತ್ತಾರೆ. ಮಧುರಾಳನ್ನು ಹೊಗಳುವಾಗ ಭೂಮಿಕಾ "ಸಾಕು ಸಾಕು ಹೊಗಳಿದ್ದು " ಎಂದು ಗುಣುಗುಡುತ್ತಾರೆ.  
icon

(7 / 10)

"ಅವರಲ್ಲಿ ರಿಕ್ವಸ್ಟ್‌ ಮಾಡಿದ್ದಕ್ಕೆ ಒಪ್ಪಿಕೊಂಡ್ರು. ಇಲ್ಲದೆ ಇದ್ದರೆ ಅವರಿಗೆ ತಾಳಿ ಕಟ್ಟಬೇಕಿತ್ತು. ಅವರ ಒಳ್ಳೆಯತನಕ್ಕೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ" ಎಂದು ಗೌತಮ್‌ ಹೇಳುತ್ತಾರೆ. ಮಧುರಾಳನ್ನು ಹೊಗಳುವಾಗ ಭೂಮಿಕಾ "ಸಾಕು ಸಾಕು ಹೊಗಳಿದ್ದು " ಎಂದು ಗುಣುಗುಡುತ್ತಾರೆ.  

"ಏನು ನಿಮಗೆ ಇಷ್ಟೊಂದು ಪೊಸೆಸಿವ್‌ನೆಸ್‌" ಎಂದು ಗೌತಮ್‌ ಕೇಳುತ್ತಾರೆ. "ಸಾರಿ" ಎಂದು ಭೂಮಿಕಾ ಭಸ್ಕಿ ಹೊಡೆಯುತ್ತಾರೆ. ಈ ಸಮಯದಲ್ಲಿ ಗೌತಮ್‌ ಎದ್ದು ಬರುತ್ತಾರೆ. 
icon

(8 / 10)

"ಏನು ನಿಮಗೆ ಇಷ್ಟೊಂದು ಪೊಸೆಸಿವ್‌ನೆಸ್‌" ಎಂದು ಗೌತಮ್‌ ಕೇಳುತ್ತಾರೆ. "ಸಾರಿ" ಎಂದು ಭೂಮಿಕಾ ಭಸ್ಕಿ ಹೊಡೆಯುತ್ತಾರೆ. ಈ ಸಮಯದಲ್ಲಿ ಗೌತಮ್‌ ಎದ್ದು ಬರುತ್ತಾರೆ. 

ಈಕೆ ಭಸ್ಕಿ ಹೊಡೆಯುವುನ್ನು ನಿಲ್ಲಿಸಿದ ಗೌತಮ್‌ "ಹೊಟ್ಟೆಯಲ್ಲಿ ಮಗು ಇದೆ, ಮಗುವಿಗೆ ಏನಾದರೂ ಆದ್ರೆ ಏನು ಗತಿ" ಎಂದು ಕೇಳುತ್ತಾರೆ. 
icon

(9 / 10)

ಈಕೆ ಭಸ್ಕಿ ಹೊಡೆಯುವುನ್ನು ನಿಲ್ಲಿಸಿದ ಗೌತಮ್‌ "ಹೊಟ್ಟೆಯಲ್ಲಿ ಮಗು ಇದೆ, ಮಗುವಿಗೆ ಏನಾದರೂ ಆದ್ರೆ ಏನು ಗತಿ" ಎಂದು ಕೇಳುತ್ತಾರೆ. 

"ನಿಮ್ಮ ಕಾಳಜಿ ಎಲ್ಲಾ ಮಗು ಬಗ್ಗೆ, ನನ್ನ ಬಗ್ಗೆ ಅಲ್ಲಾ" ಎಂದು ಭೂಮಿಕಾ ಕೇಳುತ್ತಾರೆ. "ನನಗೆ ನೀವೂ ಬೇಕು, ನಮ್ಮ ಮಗುವೂ ಬೇಕು" ಎನ್ನುತ್ತಾರೆ. ಇಬ್ಬರೂ ತಬ್ಬಿಕೊಳ್ಳುತ್ತಾರೆ. ಇಂದಿನ ಸಂಚಿಕೆಯನ್ನು ಪೂರ್ಣವಾಗಿ ಜೀ ಕನ್ನಡದಲ್ಲಿ ಸಂಜೆ ನೋಡಬಹುದು. 
icon

(10 / 10)

"ನಿಮ್ಮ ಕಾಳಜಿ ಎಲ್ಲಾ ಮಗು ಬಗ್ಗೆ, ನನ್ನ ಬಗ್ಗೆ ಅಲ್ಲಾ" ಎಂದು ಭೂಮಿಕಾ ಕೇಳುತ್ತಾರೆ. "ನನಗೆ ನೀವೂ ಬೇಕು, ನಮ್ಮ ಮಗುವೂ ಬೇಕು" ಎನ್ನುತ್ತಾರೆ. ಇಬ್ಬರೂ ತಬ್ಬಿಕೊಳ್ಳುತ್ತಾರೆ. ಇಂದಿನ ಸಂಚಿಕೆಯನ್ನು ಪೂರ್ಣವಾಗಿ ಜೀ ಕನ್ನಡದಲ್ಲಿ ಸಂಜೆ ನೋಡಬಹುದು. 

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು