ಭಾಗ್ಯಲಕ್ಷ್ಮೀ ಧಾರಾವಾಹಿ: ಕಿಶನ್- ಪೂಜಾ ಮದುವೆ ಮುರಿಯಲು ಬಂದ ಆದೀಶ್ವರ್ ಕಾಮತ್! ಭಾಗ್ಯಾಗೆ ಎದುರಾಯ್ತು ಹೊಸ ಸವಾಲು
ಕಿಶನ್ ಮನೆಯಲ್ಲಿ ಭಾಗ್ಯಾ ಮತ್ತವರ ಕುಟುಂಬಕ್ಕೆ ಕನ್ನಿಕಾ ಅವಮಾನ ಮಾಡಿದ್ದಾಳೆ. ಕನ್ನಿಕಾಳ ವರ್ತನೆ ಭಾಗ್ಯಾ ಮಾತ್ರವಲ್ಲದೆ, ಅಪ್ಪ ರಾಮದಾಸ್ ಕಾಮತ್ಗೂ ಬೇಸರ ತರಿಸಿದೆ. ಹಾಗಾಗಿ ತಮ್ಮ ಕುಟುಂಬದಿಂದ ಆದ ತಪ್ಪಿಗೆ ಕಿಶನ್ ಜೊತೆಗೆ ಭಾಗ್ಯಾ ಮನೆಗೆ ಬಂದಿದ್ದಾನೆ ರಾಮ್ದಾಸ್ ಕಾಮತ್. ಇನ್ನೊಂದು ಕಡೆ ಇದೇ ಮದುವೆ ನಿಲ್ಲಿಸಲು ಆದೀಶ್ವರ್ ಎಂಟ್ರಿಯಾಗಿದ್ದಾನೆ.
(1 / 10)
ಕಿಶನ್ ಮನೆಯಲ್ಲಿ ಭಾಗ್ಯಾ ಮತ್ತವರ ಕುಟುಂಬಕ್ಕೆ ಕನ್ನಿಕಾ ಅವಮಾನ ಮಾಡಿದ್ದಾಳೆ. ಕನ್ನಿಕಾಳ ವರ್ತನೆ ಭಾಗ್ಯಾ ಮಾತ್ರವಲ್ಲದೆ, ಅಪ್ಪ ರಾಮದಾಸ್ ಕಾಮತ್ಗೂ ಬೇಸರ ತರಿಸಿದೆ. ಹಾಗಾಗಿ ತಮ್ಮ ಕುಟುಂಬದಿಂದ ಆದ ತಪ್ಪಿಗೆ ಕಿಶನ್ ಜೊತೆಗೆ ಭಾಗ್ಯಾ ಮನೆಗೆ ಬಂದಿದ್ದಾನೆ ರಾಮ್ದಾಸ್ ಕಾಮತ್. ಇನ್ನೊಂದು ಕಡೆ ಇದೇ ಮದುವೆ ನಿಲ್ಲಿಸಲು ಆದೀಶ್ವರ್ ಎಂಟ್ರಿಯಾಗಿದ್ದಾನೆ.
(2 / 10)
ನಮ್ಮ ಮನೆಯಲ್ಲಿ ನಿಮಗೆ ಅವಮಾನವಾಗಿದೆ. ಅದಕ್ಕೆ ನಾನು ಕ್ಷಮೆ ಕೇಳುತ್ತಿದ್ದೇನೆ. ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ. ಈಗ ನಾನು ಬಂದಿರೋ ಮುಖ್ಯ ಕೆಲಸ ಏನೆಂದರೆ, ಕಿಶನ್ ಮತ್ತು ಪೂಜಾ ಮದುವೆ ಬಗ್ಗೆ ಮಾತನಾಡೋಕೆ ಎಂದಿದ್ದಾನೆ ರಾಮ್ದಾಸ್ ಕಾಮತ್.
(3 / 10)
ಕಿಶನ್ ಮತ್ತು ಪೂಜಾ ಇಬ್ಬರನ್ನೂ ಅಕ್ಕ ಪಕ್ಕ ಕೂರಿಸಿ, ಒಂದಷ್ಟು ಪ್ರಶ್ನೆ ಕೇಳಿದ್ದಾರೆ ರಾಮ್ದಾಸ್. ನಿಜವಾಗಿ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೇವೆ ಎಂದಿದ್ದಾನೆ ಕಿಶನ್. ಕಿಶನ್ ಅಂದ್ರೆ ನನಗೂ ಇಷ್ಟಾನೇ ಎಂದಿದ್ದಾಳೆ ಪೂಜಾ.
(4 / 10)
ಇವರಿಬ್ಬರ ಮದುವೆ ಆಗೇ ಆಗುತ್ತೆ. ಇವತ್ತು ಆಗಿದ್ದನ್ನು ಮರೆತು ಬಿಡು, ಅವಳಿಗೆ ಯಾವುದೇ ಸಮಸ್ಯೆ ಆಗದಿರೋ ಥರ ನಾನು ನೋಡ್ಕೋತಿನಿ. ಇದು ರಾಮ್ದಾಸ್ ಕಾಮತ್ ಕೊಡ್ತಿರುವ ಮಾತು. ಇವಾಗಲಾದರೂ ನಿಮ್ಮ ತಂಗಿಯನ್ನು ನಮ್ಮ ಮನೆಗೆ ಧಾರೆ ಎರೆದು ಕೊಡ್ತೀರಿ ಅಲ್ವಾ? ಭಾಗ್ಯಾಳನ್ನು ನೋಡಿ ನಿನ್ನನ್ನು ನನ್ನ ಮನೆ ತುಂಬಿಸಿಕೊಳ್ಳುತ್ತಿದ್ದೇನೆ ಎಂದೂ ಹೇಳಿದ್ದಾನೆ ರಾಮ್ದಾಸ್.
(5 / 10)
ಅಪ್ಪ ರಾಮ್ದಾಸ್ ಆ ಭಾಗ್ಯಾ ಮನೆಗೇ ಹೋಗಿರ್ತಾರೆ ಅನ್ನೋದು ಕನ್ನಿಕಾಗೆ ಗೊತ್ತಾಗಿದೆ. ಪೂಜಾಳನ್ನೇ ಕಿಶನ್ಗೆ ಕೊಟ್ಟು ಮದುವೆ ಮಾಡಿಸ್ತಾರೆ. ಆದರೆ, ಆ ಪೂಜಾ ಈ ಮನೆಗೆ ಸೊಸೆಯಾಗಿ ಬರೋದು ಒಂಚೂರೂ ಇಷ್ಟ ಇಲ್ಲ ಎಂದು ಅಕ್ಕನ ಮುಂದೆ ಹೇಳಿದ್ದಾಳೆ ಕನ್ನಿಕಾ.
(6 / 10)
ಆದಿ ಬ್ರೋ ಹೇಳಿದ್ರೆ ಪಕ್ಕಾ ಅಪ್ಪ ಕೇಳೇ ಕೇಳ್ತಾರೆ ಅಂತ ನೇರವಾಗಿ ಅಣ್ಣ ಆದೀಶ್ವರ್ ಕಾಮತ್ಗೆ ಫೋನ್ ಮಾಡಿದ್ದಾಳೆ ಕನ್ನಿಕಾ. ಈ ಮೂಲಕ ಭಾಗ್ಯಾ ಎದುರು ಇನ್ನೊಬ್ಬ ಖಳನಾಯಕನ ಎಂಟ್ರಿಯಾಗಲಿದೆ. ಅಣ್ಣ ಆದೀಶ್ವರ್ಗೆ ಫೋನ್ ಮಾಡಿ ಇರೋ ವಿಷ್ಯವನ್ನು ಹೇಳಿದ್ದಾಳೆ.
(7 / 10)
ಎಲ್ಲಿ ನಮ್ಮ ಫ್ಯಾಮಿಲಿ ಒಡೆದೋಗುತ್ತೋ ಅನ್ನೋ ಭಯ ಶುರುವಾಗಿದೆ. ಆದಷ್ಟು ಬೇಗ ಮನೆಗೆ ಬಂದು, ಈ ಮದುವೆನಾ ನಿಲ್ಲಿಸಣ್ಣ ಎಂದು ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ಅಣ್ಣ ಆದೀಶ್ವರ್ ಮುಂದೆ ಹೇಳಿಕೊಂಡಿದ್ದಾಳೆ. ಕನ್ನಿಕಾ ಮಾತು ಕೇಳಿ ಅಖಾಡಕ್ಕೆ ಇಳಿದಿದ್ದಾನೆ ಆದೀಶ್ವರ್.
(8 / 10)
ಮನೆಗೆ ಬಂದು ಪೂಜಾಗೂ ಮತ್ತು ಕಿಶನ್ಗೂ ಮದುವೆ ಮಾಡಿಸೋದಾಗಿ ರಾಮದಾಸ್ ಕಾಮತ್ ಕನ್ನಿಕಾ ಮುಂದೆ ಹೇಳಿದ್ದಾನೆ. ಈ ಮದುವೆ ನಡದೇ ನಡಿಯುತ್ತೆ. ಯಾರೂ ಈ ಮದುವೆ ನಿಲ್ಲಿಸೋಕೆ ಆಗಲ್ಲ ಎಂದು ಕನ್ನಿಕಾಳ ಬಾಯಿ ಮುಚ್ಚಿಸಿದ್ದಾನೆ.
(9 / 10)
ಇತ್ತ ಮನೆಯಲ್ಲಿ ಆದೀಶ್ವರ್ ಬರೋ ವಿಚಾರ ತಿಳಿದು, ಸಂಭ್ರಮ ಜೋರಾಗಿದೆ. ವಿದೇಶದಲ್ಲಿದ್ದ ಆದಿ ಇದೀಗ ತುಂಬ ವರ್ಷಗಳ ಬಳಿಕ, ಮನೆಗೆ ಆಗಮಿಸಿದ್ದಾನೆ. ಆತನ ಎಂಟ್ರಿಯೂ ಅಷ್ಟೇ ಗ್ರ್ಯಾಂಡ್ ಆಗಿದೆ. ಇಡೀ ಕುಟುಂಬ ಆದೀಶ್ವರ್ನನ್ನು ಸ್ವಾಗತಿಸಿಲು ಆರತಿ ತಟ್ಟೆ ಹಿಡಿದು ನಿಂತಿದೆ.
ಇತರ ಗ್ಯಾಲರಿಗಳು