Amruthadhaare: ಗುರುಗಳ ಹತ್ರ ಸುಳ್ಳು ಹೇಳಿಸಿದ್ದು ನೀವೇ ಅಲ್ವ ಅತ್ತೆ, ಹೇಗಿತ್ತು ನನ್ನ ಸರ್ಪ್ರೈಸ್? ಶಕುಂತಲಾದೇವಿಗೆ ಭೂಮಿಕಾ ಟಾಂಗ್
- Amruthadhaare Serial Today Episode: ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್ನ ಇಂದಿನ ಎಪಿಸೋಡ್ನ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ "ನಾನು ಗೌತಮ್ ಒಂದಾಗಬಾರದೆಂದು ಗುರುಗಳ ಹತ್ರ ನೀವಲ್ವ ಅತ್ತೆ ಸುಳ್ಳು ಹೇಳಿಸಿದ್ದು?" ಎಂದು ಭೂಮಿಕಾ ನೇರವಾಗಿ ಕೇಳುತ್ತಾಳೆ.
- Amruthadhaare Serial Today Episode: ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್ನ ಇಂದಿನ ಎಪಿಸೋಡ್ನ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ "ನಾನು ಗೌತಮ್ ಒಂದಾಗಬಾರದೆಂದು ಗುರುಗಳ ಹತ್ರ ನೀವಲ್ವ ಅತ್ತೆ ಸುಳ್ಳು ಹೇಳಿಸಿದ್ದು?" ಎಂದು ಭೂಮಿಕಾ ನೇರವಾಗಿ ಕೇಳುತ್ತಾಳೆ.
(1 / 11)
ಅಮೃತಧಾರೆ ಸೀರಿಯಲ್ನಲ್ಲಿ ಗುರುಗಳ ಹತ್ರ ಸುಳ್ಳು ಹೇಳಿಸಿದ್ದ ಶಕುಂತಲಾದೇವಿ ತಲೆತಗ್ಗಿಸುವಂತಾಗಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಬಾರದೆಂದು ಕುಟುಂಬದ ಜ್ಯೋತಿಷರ ಬಳಿ ಶಕುಂತಲಾ ಸುಳ್ಳು ಹೇಳಿಸಿದ್ದರು.
(2 / 11)
ಗೌತಮ್ ಭೂಮಿಕಾಳಿಗೆ ಪ್ರಪೋಸ್ ಮಾಡಬೇಕೆಂದುಕೊಂಡಿದ್ದ. ತನ್ನ ಮನಸ್ಸಿನ ಮಾತುಗಳನ್ನು ಗೌತಮ್ಗೆ ಹೇಳಲು ಭೂಮಿಕಾ ಸಿದ್ಧವಾಗಿದ್ದರು. ಈ ವಿಷಯ ತಿಳಿದ ಶಕುಂತಲಾದೇವಿ ಖತರ್ನಾಕ್ ಪ್ಲ್ಯಾನ್ ಮಾಡಿದ್ದರು.
(3 / 11)
ಗೌತಮ್ ಮತ್ತು ಭೂಮಿಕಾ ಜಾತಕ ಸರಿ ಇಲ್ಲ. ಯಾವುದೇ ಕಾರಣಕ್ಕೂ ಇವರಿಬ್ಬರು ಒಂದಾಗಬಾರದು. ಈ ರೀತಿ ಒಂದಾದ್ರೆ ಭೂಮಿಕಾ ಜೀವಕ್ಕೆ ಅಪಾಯ ಎಂದು ಗುರುಗಳ ಬಳಿ ಸುಳ್ಳು ಹೇಳಿಸಿದ್ರು. ಇದರಿಂದ ಗೌತಮ್ ಮಾನಸಿಕವಾಗಿ ತುಂಬಾ ಕುಗ್ಗಿದ್ದರು.
(4 / 11)
ಭೂಮಿಕಾಳಿಗೆ ಏನೂ ತೊಂದರೆಯಾಗಬಾರದೆಂದು ಗೌತಮ್ ಹರಕೆ ಹೊತ್ತಿದ್ದರು. ದೇವಾಲಯದಲ್ಲಿ ಉರುಳು ಸೇವೆ ಮಾಡಿದರು. ನೆಲದಲ್ಲಿ ತಟ್ಟೆ ಇಲ್ಲದೆ ಊಟ ಮಾಡಿದ್ದರು. ಉರುಳು ಸೇವೆ ಮಾಡಿ ಗೌತಮ್ ಆರೋಗ್ಯ ಕೆಟ್ಟಿತ್ತು.
(5 / 11)
ಶಕುಂತಲಾದೇವಿ ತನ್ನ ಷಡ್ಯಂತ್ರದ ಕುರಿತು ಮಾತನಾಡುವುದನ್ನು ಮಲ್ಲಿ ಕೇಳಿಸಿಕೊಂಡು ಭೂಮಿಕಾಳಿಗೆ ತಿಳಿಸಿದ್ದಳು. ಭೂಮಿಕಾ ನಿಜವಾದ ಜ್ಯೋತಿಷಿ ಮೂಲಕ ಮನೆಯಲ್ಲಿ ಪಂಚಾಂಗ ಶ್ರವಣ ಇಟ್ಟುಕೊಂಡರು. ಆ ಸಮಯದಲ್ಲಿ ಎಲ್ಲರ ಜಾತಕವನ್ನು ಮತ್ತೆ ಓದಿಸಿದ್ದರು.
(7 / 11)
"ಇದು ತುಂಬಾ ಅಮೋಘವಾದ ಜಾತಕ. 36ರಲ್ಲಿ 35 ಋಣ ಕೂಡಿ ಬರುತ್ತದೆ. ಭೂಮಿಕಾರಿಗೆ ಇರುವ ಆತ್ಮಶಕ್ತಿ ಅಪಾರವಾದದ್ದು. ಇವತ್ತಿನವರಿಗೂ ನಿಮ್ಮನ್ನೇ ಕಾದಿರುವುದು. ನಿಮ್ಮಿಬ್ಬರಿಗೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಒಳ್ಳೆಯದಾಗುತ್ತದೆ" ಎಂದು ಗುರುಗಳು ಹೇಳುತ್ತಾರೆ.
(8 / 11)
ಇಂದಿನ ಸಂಚಿಕೆಯಲ್ಲಿ ಭೂಮಿಕಾ ಶಕುಂತಲಾ ದೇವಿಗೆ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ಎಲ್ಲವೂ ಒಳ್ಳೆಯದೇ ಆಯ್ತಲ್ವ ಎಂದು ಹೇಳಿದ ಶಕುಂತಲಾ ದೇವಿಗೆ "ನಾನು ಗೌತಮ್ ಒಂದಾಗಬಾರದೆಂದು ಗುರುಗಳ ಹತ್ರ ನೀವಲ್ವ ಅತ್ತೆ ಸುಳ್ಳು ಹೇಳಿಸಿದ್ದು?" ಎಂದು ನೇರವಾಗಿ ಕೇಳುತ್ತಾಳೆ. ಈ ಮೂಲಕ ಶಕುಂತಲಾದೇವಿ ಮಾಡಿದ ತಪ್ಪನ್ನು ನೇರವಾಗಿ ಪ್ರಶ್ನಿಸುತ್ತಾರೆ.
(10 / 11)
"ಒಳ್ಳೆ ಕೆಲಸ ಮಾಡಿದೆ ಅಂತ ಹೇಗೆ ಹೇಳ್ತಿರಿ ಅತ್ತೆ?" "ನಾನು ಗೌತಮ್ ಒಂದಾಗಬಾರದು ಎಂದು ನೀವು ಗುರುಗಳ ಹತ್ರ ಸುಳ್ಳು ಹೇಳಿಸಿದ್ದು" ಎಂದು ನೇರವಾಗಿ ಕೇಳುತ್ತಾಳೆ. ಇದಕ್ಕೂ ಮುನ್ನ ಗೌತಮ್ ಖುಷಿಯಿಂದ ಭೂಮಿಕಾಳನ್ನು ಅಪ್ಪಿಕೊಂಡಿರುತ್ತಾನೆ. ಆತನ ಚಿಂತೆಯೆಲ್ಲ ಹೋಗಿರುತ್ತದೆ.
ಇತರ ಗ್ಯಾಲರಿಗಳು