Amruthadhaare: ಮಲ್ಲಿಗೆ ಏನಾದ್ರೂ ಆದ್ರೆ ಗೌತಮ್ ಸುಮ್ನೆ ಬಿಡೋಲ್ಲ, ಹುಷಾರಾಗಿ ನೋಡ್ಕೊಳ್ಳಿ; ಶಕುಂತಲಾದೇವಿಗೆ ವಾರ್ನ್ ಮಾಡಿದ ಭೂಮಿಕಾ
- Amruthadhaare Serial Today: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ "ಮಲ್ಲಿಯನ್ನು ಹುಷಾರಾಗಿ ನೋಡಿಕೊಳ್ಳುವಂತೆ ಶಕುಂತಲಾದೇವಿಗೆ ಎಚ್ಚರಿಕೆ" ನೀಡಿರುವುದು ತಿಳಿದುಬಂದಿದೆ. ಈ ಮೂಲಕ ಶಕುಂತಲಾದೇವಿ, ಜೈದೇವ್ ಆಟ ಎಲ್ಲವೂ ತನಗೆ ತಿಳಿದಿದೆ ಎಂಬ ಸೂಚನೆಯನ್ನು ಭೂಮಿಕಾ ನೀಡಿದ್ದಾರೆ.
- Amruthadhaare Serial Today: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ "ಮಲ್ಲಿಯನ್ನು ಹುಷಾರಾಗಿ ನೋಡಿಕೊಳ್ಳುವಂತೆ ಶಕುಂತಲಾದೇವಿಗೆ ಎಚ್ಚರಿಕೆ" ನೀಡಿರುವುದು ತಿಳಿದುಬಂದಿದೆ. ಈ ಮೂಲಕ ಶಕುಂತಲಾದೇವಿ, ಜೈದೇವ್ ಆಟ ಎಲ್ಲವೂ ತನಗೆ ತಿಳಿದಿದೆ ಎಂಬ ಸೂಚನೆಯನ್ನು ಭೂಮಿಕಾ ನೀಡಿದ್ದಾರೆ.
(1 / 8)
ಝೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಿರಲಿದೆ ಎಂಬ ಝಲಕ್ನ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಭೂಮಿಕಾ ಅವರು ಶಕುಂತಲಾದೇವಿಗೆ ವಾರ್ನ್ ಮಾಡಿರುವುದು ತಿಳಿದುಬಂದಿದೆ.
(2 / 8)
ಭೂಮಿಕಾ ಮತ್ತು ಗೌತಮ್ ಚಿಕ್ಕಮಗಳೂರಿನಲ್ಲಿ ಹನಿಮೂನ್ಗೆ ಹೋಗಿದ್ದಾರೆ. ಮಲ್ಲಿಯ ಕಥೆ ಮುಗಿಸಲು ಇದೇ ಸೂಕ್ತ ಸಂದರ್ಭ ಎಂದು ಶಕುಂತಲಾದೇವಿ ಮತ್ತು ಜೈದೇವ್ ಖತರ್ನಾಕ್ ಪ್ಲ್ಯಾನ್ ಮಾಡಿದ್ದರು.
(3 / 8)
ಜೈದೇವ್ ತನ್ನನ್ನು ರೌಡಿಗಳು ಕಟ್ಟಿ ಹಾಕಿ ಹೊಡೆಯುತ್ತಿದ್ದಾರೆ ಎಂದು ನಾಟಕ ಮಾಡಿದ್ದನು. ಬೇಗ ಮನೆಯಲ್ಲಿರುವ ಫೈಲ್ ತರುವಂತೆ ಮಲ್ಲಿಗೆ ತಿಳಿಸಿದ್ದನು.
(4 / 8)
ಇದೀಗ ಇಂದಿನ ಸಂಚಿಕೆಯಲ್ಲಿ ಭೂಮಿಕಾ ಶಕುಂತಲಾದೇವಿಗೆ ಕಾಲ್ ಮಾಡುತ್ತಾಳೆ. "ಮಲ್ಲಿ ಮನೆಗೆ ಬಂದಿದ್ದಾಳೆ" ಎಂದು ಶಕುಂತಲಾ ಹೇಳಿದಾಗ "ಮಲ್ಲಿ ಮನೆಗೆ ಬರುವ ನಿರೀಕ್ಷೆ ನಿಮಗೆ ಇರಲಿಲ್ಲ ಅಲ್ವಾ?" ಎಂದು ಭೂಮಿಕಾ ಕೇಳುತ್ತಾಳೆ.
(5 / 8)
ಚಿಕ್ಕಮಗಳೂರಿನಲ್ಲಿರುವ ಭೂಮಿಕಾಳಿಗೆ ಮಲ್ಲಿಗೆ ಏನೋ ತೊಂದರೆಯಾಗಿರುವುದು ತಿಳಿಯಿತು. ಆಕೆ ಫೋನ್ನಲ್ಲಿ ಅಸ್ಪಷ್ಟವಾಗಿ ಹೇಳಿದ್ದು ಗೊತ್ತಿತ್ತು. ತಕ್ಷಣ ಆ ಲೊಕೆಷನ್ಗೆ ಹೋಗುವಂತೆ ಮಹಿಮಾಗೆ ತಿಳಿಸಿದ್ದಳು.
(6 / 8)
ಆ ಸ್ಥಳಕ್ಕೆ ಪೊಲೀಸರೊಂದಿಗೆ ಮಹಿಮಾ ಹೋಗಿ ಮಲ್ಲಿಯನ್ನು ಬಚಾವ್ ಮಾಡಿದ್ದಳು. ಮಲ್ಲಿಯ ಸಾವಿನ ಸುದ್ದಿ ಕೇಳಲು ಕಾಯುತ್ತಿದ್ದ ಶಕುಂತಲಾದೇವಿ ಮುಂದೆ ಇವರನ್ನು ಕರೆದುಕೊಂಡು ಬಂದಿದ್ದಳು.
(7 / 8)
ಇದೀಗ ಇಂದಿನ ಸಂಚಿಕೆಯಲ್ಲಿ ಭೂಮಿಕಾ ಶಕುಂತಲಾದೇವಿಗೆ ಕಾಲ್ ಮಾಡುತ್ತಾಳೆ. "ಮಲ್ಲಿ ಮನೆಗೆ ಬಂದಿದ್ದಾಳೆ" ಎಂದು ಶಕುಂತಲಾ ಹೇಳಿದಾಗ "ಮಲ್ಲಿ ಮನೆಗೆ ಬರುವ ನಿರೀಕ್ಷೆ ನಿಮಗೆ ಇರಲಿಲ್ಲ ಅಲ್ವಾ?" ಎಂದು ಭೂಮಿಕಾ ಕೇಳುತ್ತಾಳೆ.
ಇತರ ಗ್ಯಾಲರಿಗಳು