ಮೊದಲ ರಾತ್ರಿ ತಪ್ಪಿಸಲು ಯತ್ನಿಸಿದ ಶಕುಂತಲಾದೇವಿಗೆ ತಕ್ಕ ಶಾಸ್ತಿ ಮಾಡಿದ ಭೂಮಿಕಾ; ಇನ್ನು ನಿಮ್ಮ ಡ್ರಾಮಾ ನಡೆಯೋಲ್ಲ ಅಂದ್ರು ಪ್ರೇಕ್ಷಕರು
- Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯನ್ನು ನೋಡಲು ಸಾಕಷ್ಟು ಪ್ರೇಕ್ಷಕರು ಕಾಯುತ್ತಿರಬಹುದು. ಭೂಮಿಕಾ ಮತ್ತು ಗೌತಮ್ ಒಲವ ಅಮೃತಧಾರೆ ಶುರುವಾಗಿದೆ. ಆದರೆ, ಫಸ್ಟ್ ನೈಟ್ಗೆ ವಿಘ್ನ ತರಲು ಶಕುಂತಲಾದೇವಿ ಎಂದಿನಂತೆ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಅದು ಠುಸ್ ಆಗಿದೆ.
- Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯನ್ನು ನೋಡಲು ಸಾಕಷ್ಟು ಪ್ರೇಕ್ಷಕರು ಕಾಯುತ್ತಿರಬಹುದು. ಭೂಮಿಕಾ ಮತ್ತು ಗೌತಮ್ ಒಲವ ಅಮೃತಧಾರೆ ಶುರುವಾಗಿದೆ. ಆದರೆ, ಫಸ್ಟ್ ನೈಟ್ಗೆ ವಿಘ್ನ ತರಲು ಶಕುಂತಲಾದೇವಿ ಎಂದಿನಂತೆ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಅದು ಠುಸ್ ಆಗಿದೆ.
(1 / 11)
ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಮೋ ಬಿಡುಗಡೆಯಾಗಿದೆ. ಇದರಲ್ಲಿ ಸಾಕಷ್ಟು ವಿಚಾರಗಗಳು ತಿಳಿದುಬಂದಿದೆ. ಭೂಮಿಕಾ ಮತ್ತು ಗೌತಮ್ ಪ್ರಪೋಸ್ ಮಾಡಿರುವ ಸಂಗತಿ ತಿಳಿದ ಶಕುಂತಲಾದೇವಿ ಉರಿದುಬಿದ್ದಿದ್ದಾರೆ. ಇಂದು ಅವರ ಫಸ್ಟ್ ನೈಟ್ ನಡೆಯಲಿದೆ ಎಂಬ ವಿಚಾರ ಕೇಳಿ ಟೆನ್ಷನ್ನಲ್ಲಿದ್ದಾರೆ.
(2 / 11)
ಇವರಿಬ್ಬರ ಫಸ್ಟ್ ನೈಟ್ ತಪ್ಪಿಸಲು ಎಂದಿನಂತೆ ಅನಾರೋಗ್ಯದ ನಾಟಕ ಮಾಡಲು ಪ್ರಯತ್ನಿಸಿದ್ದಾರೆ. ನನಗೆ ಹುಷಾರಿಲ್ಲ ಎಂದಾಗ ಮಗ ಓಡೋಡಿ ಬರುತ್ತಾನೆ ಎಂಬ ನಂಬಿಕೆ ಅವರದ್ದು. ಅದೇ ರೀತಿ ತಲೆ ತಿರುಗಿ ಬಿದ್ದಂತೆ ನಾಟಕವಾಡಿದ್ದಾರೆ. ಅಣ್ಣ ರಮಾಕಾಂತ ಗೌತಮ್ಗೆ ಕಾಲ್ ಮಾಡಿದ್ದಾರೆ.
(3 / 11)
ಎಲ್ಲದಕ್ಕೂ ಕಾರಣ ಈ ರಮಾಕಾಂತ. ಆನಂದ್ಗೆ ಕಾಲ್ ಮಾಡಿದ ಸಂದರ್ಭದಲ್ಲಿ ಇವರಿಬ್ಬರ ಪ್ರಪೋಸ್ ಮತ್ತು ಫಸ್ಟ್ ನೈಟ್ ವಿಚಾರ ತಿಳಿದುಕೊಂಡಿದ್ದನು. ಈ ವಿಚಾರವನ್ನು ಶಕುಂತಲಾದೇವಿಗೆ ತಿಳಿಸಿದ್ದನು.
(4 / 11)
ಇವರಿಬ್ಬರು ಒಂದಾದರೆ ನಮಗೆ ಚೊಂಬೇ ಗತಿ ಎಂದು ಶಕುಂತಲಾದೇವಿ ಮತ್ತು ರಮಾಕಾಂತ್ ಮಾತನಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ತನ್ನ ಎಂದಿನ ಟ್ರಿಕ್ಸ್ ಉಪಯೋಗಿಸಿ ಅನಾರೋಗ್ಯದ ನಾಟಕವಾಡಿದ್ದಾರೆ ಶಕುಂತಲಾದೇವಿ.
(5 / 11)
ರಮಾಕಾಂತ್ ಗೌತಮ್ಗೆ ಕಾಲ್ ಮಾಡಿದ್ದಾನೆ. ಈ ವಿಚಾರ ತಿಳಿದಾಗ ಎಂದಿನಂತೆ ಸಹಜವಾಗಿ ಗೌತಮ್ಗೆ ಬೇಸರವಾಗಿದೆ. ನಾನು ಈಗಲೇ ಹೊರಟು ಬರುತ್ತೇನೆ ಎಂದಿದ್ದಾನೆ.
(6 / 11)
ವೆಕೇಷನ್ ಕಂಟಿನ್ಯೂ ಮಾಡಲಾಗುತ್ತಿಲ್ಲ ಎಂದು ಬೇಸರದಲ್ಲೇ ಭೂಮಿಕಾಳಿಗೆ ತಿಳಿಸಿದ್ದಾನೆ. ಬನ್ನಿ ಬ್ಯಾಗ್ ಪ್ಯಾಕ್ ಮಾಡೋಣ ಎಂದಿದ್ದಾರೆ. ಈ ಸಮಯದಲ್ಲಿ ಯಾಕೋ ಭೂಮಿಕಾಳಿಗೆ ಸಂದೇಹ ಬಂದಿದೆ.
(7 / 11)
ಮಲ್ಲಿಗೆ ಭೂಮಿಕಾ ಕಾಲ್ ಮಾಡಿ ಕೇಳುತ್ತಾಳೆ. ಅತ್ತೆಯವರು ಹುಷಾರಿದ್ದಾರ ಎಂದು ಕೇಳುತ್ತಾಳೆ. ಅತ್ತೆ ಆರಾಮಾವಾಗಿ ಓಡಾಡಿಕೊಂಡಿದ್ದಾರೆ ಎಂದು ಮಲ್ಲಿ ಹೇಳುತ್ತಾಳೆ. ಇದು ನಾಟಕ ಎಂದು ಹೇಳುತ್ತಾಳೆ.
(8 / 11)
ನಮ್ಮ ಫಸ್ಟ್ ನೈಟ್ ಕ್ಯಾನ್ಸಲ್ ಮಾಡಲು ಇಷ್ಟೊಂದು ಚೀಪ್ ಆಗಿ ವರ್ತಿಸ್ತಾರ ಎಂದು ಭೂಮಿಕಾ ಆಲೋಚಿಸುತ್ತಾರೆ. ಇದೇ ಸಮಯದಲ್ಲಿ ಇವರ ನಾಟಕ ಅಂತ್ಯ ಮಾಡುವ ಕುರಿತು ಯೋಚಿಸುತ್ತಾಳೆ.
(9 / 11)
ಶಕುಂತಲಾದೇವಿ ಮನೆಯಲ್ಲಿರುವಾಗ ಭೂಮಿಕಾ ಕಳುಹಿಸಿದ ಡಾಕ್ಟರ್ ಬರುತ್ತಾರೆ. ಮಲ್ಲಿ ಕೂಡ ಆಸ್ಪತ್ರೆಯಿಂದ ವಾಪಸ್ ಬರಲು ಈ ಡಾಕ್ಟರೇ ಕಾರಣ. ಡಾಕ್ಟರ್ ಮನೆಗೆ ಬಂದಾಗ ಶಕುಂತಲಾದೇವಿಗೆ ಅಚ್ಚರಿಯಾಗುತ್ತದೆ.
(10 / 11)
ನಿಮಗೆ ಅನಾರೋಗ್ಯ ಎಂದು ಹೇಳಿದ್ರು. ಚೆಕ್ ಮಾಡಲು ಬಂದೆ ಎಂದು ಡಾಕ್ಟರ್ ಹೇಳುತ್ತಾರೆ. ಅಲ್ಲಿಯವರೆಗೆ ಆರಾಮವಾಗಿ ಓಡಾಡಿಕೊಂಡಿದ್ದ ಶಕುಂತಲಾದೇವಿ ಹಾಸಿಗೆಯಲ್ಲಿ ಮಲಗುತ್ತಾರೆ. ಡಾಕ್ಟರ್ ಚೆಕ್ ಮಾಡುತ್ತಾರೆ.
ಇತರ ಗ್ಯಾಲರಿಗಳು