Amruthadhaare Climax: ಪಾರ್ಥನಿಗೆ ಅಪೇಕ್ಷಾ ಜತೆ ಮದುವೆ ಮಾಡಲು ಮುಂದಾದ ಶಕುಂತಲಾದೇವಿ; ಕ್ಲೈಮ್ಯಾಕ್ಸ್‌ ಹಂತಕ್ಕೆ ಅಮೃತಧಾರೆ ಲವ್‌ಸ್ಟೋರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare Climax: ಪಾರ್ಥನಿಗೆ ಅಪೇಕ್ಷಾ ಜತೆ ಮದುವೆ ಮಾಡಲು ಮುಂದಾದ ಶಕುಂತಲಾದೇವಿ; ಕ್ಲೈಮ್ಯಾಕ್ಸ್‌ ಹಂತಕ್ಕೆ ಅಮೃತಧಾರೆ ಲವ್‌ಸ್ಟೋರಿ

Amruthadhaare Climax: ಪಾರ್ಥನಿಗೆ ಅಪೇಕ್ಷಾ ಜತೆ ಮದುವೆ ಮಾಡಲು ಮುಂದಾದ ಶಕುಂತಲಾದೇವಿ; ಕ್ಲೈಮ್ಯಾಕ್ಸ್‌ ಹಂತಕ್ಕೆ ಅಮೃತಧಾರೆ ಲವ್‌ಸ್ಟೋರಿ

  • Amruthadhaare serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎನ್ನುವ ಪ್ರಶ್ನೆಗೆ ಉತ್ತರ ದೊರಕಿದೆ. ವಾಹಿನಿಯು ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಪಾರ್ಥನ ಪ್ರೀತಿಗೆ ಸ್ವತಃ ಶಕುಂತಲಾದೇವಿ ನೆರವು ನೀಡುವಂತಹ ಅಚ್ಚರಿ ಕಾಣಿಸಿದೆ.

Amruthadhaare serial today episode: ಪಾರ್ಥ ಮತ್ತು ಅಪೇಕ್ಷಾ ಒಂದಾಗಬಾರದು ಎಂದು ನಿರ್ಧರಿಸಿದ್ದ ಶಕುಂತಲಾದೇವಿ ತನ್ನ ಮಗನಿಗೆ ಬೇರೆ ಹುಡುಗಿಯ ಜತೆ ಮದುವೆ ಮಾಡಲು ಮುಂದಾಗಿದ್ದರು. ಇದೇ ಸಮಯದಲ್ಲಿ ನನ್ನ ಮಗನ ಮದುವೆ ನನ್ನ ಇಷ್ಟದಂತೆ ನಡೆಯಲು ಬಿಡು ಎಂದು ಭೂಮಿಕಾಳ ಬಳಿ ಪ್ರಾಮೀಸ್‌ ತೆಗೆದುಕೊಂಡಿದ್ದರು.
icon

(1 / 9)

Amruthadhaare serial today episode: ಪಾರ್ಥ ಮತ್ತು ಅಪೇಕ್ಷಾ ಒಂದಾಗಬಾರದು ಎಂದು ನಿರ್ಧರಿಸಿದ್ದ ಶಕುಂತಲಾದೇವಿ ತನ್ನ ಮಗನಿಗೆ ಬೇರೆ ಹುಡುಗಿಯ ಜತೆ ಮದುವೆ ಮಾಡಲು ಮುಂದಾಗಿದ್ದರು. ಇದೇ ಸಮಯದಲ್ಲಿ ನನ್ನ ಮಗನ ಮದುವೆ ನನ್ನ ಇಷ್ಟದಂತೆ ನಡೆಯಲು ಬಿಡು ಎಂದು ಭೂಮಿಕಾಳ ಬಳಿ ಪ್ರಾಮೀಸ್‌ ತೆಗೆದುಕೊಂಡಿದ್ದರು.

ಪಾರ್ಥ ಮತ್ತು ಅಪ್ಪಿ ಲವ್‌ ಸ್ಟೋರಿ ತಿಳಿದಿರುವ ಭೂಮಿಕಾಳಿಗೆ ಏನೂ ಮಾಡಲಾಗದ ಪರಿಸ್ಥಿತಿ. ಈ ಪ್ರೇಮಿಗಳ ಪಾಲಿಗೆ ವಿಲನ್‌ನಂತೆ ನಿಲ್ಲುವ ಸಂದಿಗ್ಧತೆ. ಇಬ್ಬರ ಪ್ರೀತಿಗೆ ನೆರವು ನೀಡಲಾಗದ  ಇಕ್ಕಟ್ಟಿಗೆ ಭೂಮಿಕಾ ಸಿಲುಕಿದ್ದರು. ಇದರಿಂದ ಅಪೇಕ್ಷಾ ಮತ್ತು ಪಾರ್ಥರ ಲವ್‌ ಟ್ರಾಜಿಟಿಯಾಗುವ ಹಂತಕ್ಕೆ ತಲುಪಿತ್ತು. 
icon

(2 / 9)

ಪಾರ್ಥ ಮತ್ತು ಅಪ್ಪಿ ಲವ್‌ ಸ್ಟೋರಿ ತಿಳಿದಿರುವ ಭೂಮಿಕಾಳಿಗೆ ಏನೂ ಮಾಡಲಾಗದ ಪರಿಸ್ಥಿತಿ. ಈ ಪ್ರೇಮಿಗಳ ಪಾಲಿಗೆ ವಿಲನ್‌ನಂತೆ ನಿಲ್ಲುವ ಸಂದಿಗ್ಧತೆ. ಇಬ್ಬರ ಪ್ರೀತಿಗೆ ನೆರವು ನೀಡಲಾಗದ  ಇಕ್ಕಟ್ಟಿಗೆ ಭೂಮಿಕಾ ಸಿಲುಕಿದ್ದರು. ಇದರಿಂದ ಅಪೇಕ್ಷಾ ಮತ್ತು ಪಾರ್ಥರ ಲವ್‌ ಟ್ರಾಜಿಟಿಯಾಗುವ ಹಂತಕ್ಕೆ ತಲುಪಿತ್ತು. 

ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಇಂದಿನ  ಸಂಚಿಕೆಯಲ್ಲಿ ಒಂದು ಟ್ವಿಸ್ಟ್‌ ಕಾಣಿಸಿದೆ. ಈ ಟ್ವಿಸ್ಟ್‌ ಪಾರ್ಥನ ಲವ್‌ ಸ್ಟೋರಿಯ ಕ್ಲೈಮ್ಯಾಕ್ಸ್‌ನಂತೆ ಕಾಣಿಸಿದೆ. ಪಾರ್ಥ ಮತ್ತು ಶಕುಂತಲಾದೇವಿ ಮಾತನಾಡುತ್ತಾರೆ. ನನಗೆ ಈ ಮದುವೆ ಬೇಡ ಎಂಬ ವಿಚಾರವನ್ನು ಪಾರ್ಥ ತಿಳಿಸುತ್ತಾನೆ.
icon

(3 / 9)

ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಇಂದಿನ  ಸಂಚಿಕೆಯಲ್ಲಿ ಒಂದು ಟ್ವಿಸ್ಟ್‌ ಕಾಣಿಸಿದೆ. ಈ ಟ್ವಿಸ್ಟ್‌ ಪಾರ್ಥನ ಲವ್‌ ಸ್ಟೋರಿಯ ಕ್ಲೈಮ್ಯಾಕ್ಸ್‌ನಂತೆ ಕಾಣಿಸಿದೆ. ಪಾರ್ಥ ಮತ್ತು ಶಕುಂತಲಾದೇವಿ ಮಾತನಾಡುತ್ತಾರೆ. ನನಗೆ ಈ ಮದುವೆ ಬೇಡ ಎಂಬ ವಿಚಾರವನ್ನು ಪಾರ್ಥ ತಿಳಿಸುತ್ತಾನೆ.

ತಾನು ಅಪೇಕ್ಷಾಳನ್ನು ಪ್ರೀತಿಸುವ ಸಂಗತಿ ತಿಳಿಸುತ್ತಾಳೆ. ಈ ಸಮಯದಲ್ಲಿ ಖುದ್ದಾಗಿ ತಾನೇ ಮಂದಾಕಿನಿ ಬಳಿ ಹೆಣ್ಣು ಕೇಳಲು ಹೋಗುವುದಾಗಿ ತಿಳಿಸುತ್ತಾಳೆ. ಇದನ್ನು ಕೇಳಿ ಆಕೆಯ ಸಹೋದರನಿಗೆ ಅಚ್ಚರಿ, ಆಘಾತವಾಗುತ್ತದೆ. 
icon

(4 / 9)

ತಾನು ಅಪೇಕ್ಷಾಳನ್ನು ಪ್ರೀತಿಸುವ ಸಂಗತಿ ತಿಳಿಸುತ್ತಾಳೆ. ಈ ಸಮಯದಲ್ಲಿ ಖುದ್ದಾಗಿ ತಾನೇ ಮಂದಾಕಿನಿ ಬಳಿ ಹೆಣ್ಣು ಕೇಳಲು ಹೋಗುವುದಾಗಿ ತಿಳಿಸುತ್ತಾಳೆ. ಇದನ್ನು ಕೇಳಿ ಆಕೆಯ ಸಹೋದರನಿಗೆ ಅಚ್ಚರಿ, ಆಘಾತವಾಗುತ್ತದೆ. 

ನಾನು ಹೇಳಿದಂತೆ ಮದುವೆ ನಡೆಯಲಿದೆ ಎನ್ನುವ ಖುಷಿಯಲ್ಲಿ ಶಕುಂತಲಾದೇವಿ ಇರುತ್ತಾರೆ. ಇಲ್ಲಿ ನಿಜವಾಗಿಯೂ ಗೆದ್ದವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಪಾರ್ಥ ಮತ್ತು ಅಪೇಕ್ಷಾರ ಪ್ರೀತಿ ಗೆಲ್ಲುವ ಸೂಚನೆಯಿದೆ.
icon

(5 / 9)

ನಾನು ಹೇಳಿದಂತೆ ಮದುವೆ ನಡೆಯಲಿದೆ ಎನ್ನುವ ಖುಷಿಯಲ್ಲಿ ಶಕುಂತಲಾದೇವಿ ಇರುತ್ತಾರೆ. ಇಲ್ಲಿ ನಿಜವಾಗಿಯೂ ಗೆದ್ದವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಪಾರ್ಥ ಮತ್ತು ಅಪೇಕ್ಷಾರ ಪ್ರೀತಿ ಗೆಲ್ಲುವ ಸೂಚನೆಯಿದೆ.

ಇನ್ನೊಂದೆಡೆ ಪಾರ್ಥನಿಗೆ ಹುಡುಗಿ ಫೈನಲ್‌ ಮಾಡಿಟ್ಟ ಗೌತಮ್‌ ಈ ವಿಚಾರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಯೂ ಮೂಡಿದೆ. ಎಲ್ಲರ ಮುಂದೆ ವಿಲನ್‌ ಆಗಿದ್ದ ಶಕುಂತಲಾದೇವಿ ಈ ವಿಷಯದಲ್ಲಿ ಹೀರೋಯಿನ್‌ ಆಗುವ ಸೂಚನೆ ಇದೆ. ಆದರೆ, ಕೊನೆಗೆ ಎಲ್ಲಾ ಗುಟ್ಟು ರಟ್ಟಾಗುವ ಸೂಚನೆಯೂ ಇದೆ.
icon

(6 / 9)

ಇನ್ನೊಂದೆಡೆ ಪಾರ್ಥನಿಗೆ ಹುಡುಗಿ ಫೈನಲ್‌ ಮಾಡಿಟ್ಟ ಗೌತಮ್‌ ಈ ವಿಚಾರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಯೂ ಮೂಡಿದೆ. ಎಲ್ಲರ ಮುಂದೆ ವಿಲನ್‌ ಆಗಿದ್ದ ಶಕುಂತಲಾದೇವಿ ಈ ವಿಷಯದಲ್ಲಿ ಹೀರೋಯಿನ್‌ ಆಗುವ ಸೂಚನೆ ಇದೆ. ಆದರೆ, ಕೊನೆಗೆ ಎಲ್ಲಾ ಗುಟ್ಟು ರಟ್ಟಾಗುವ ಸೂಚನೆಯೂ ಇದೆ.

ಕಳೆದ ಕೆಲವು ದಿನಗಳಿಂದ ಭೂಮಿಕಾ ಪೆಚ್ಚಾಗಿ ನಟಿಸುವ ಅನಿವಾರ್ಯತೆ ಇದೆ. ಇಲ್ಲಿಯವರೆಗೆ ಆಕೆಯನ್ನು ಆತ್ಮವಿಶ್ವಾಸದ ಗಣಿಯಂತೆ ನೋಡಿದ್ದ ಪ್ರೇಕ್ಷಕರಿಗೆ ಕಳೆದ ಕೆಲವು ದಿನಗಳಿಂದ ಇರಿಸುಮುರಿಸು ಆಗುತ್ತಿತ್ತು. ಇದೀಗ ಭೂಮಿಕಾ ಮತ್ತೆ ಹಳಿಗೆ ಮರಳುವ ಸೂಚನೆ ಇದೆ. 
icon

(7 / 9)

ಕಳೆದ ಕೆಲವು ದಿನಗಳಿಂದ ಭೂಮಿಕಾ ಪೆಚ್ಚಾಗಿ ನಟಿಸುವ ಅನಿವಾರ್ಯತೆ ಇದೆ. ಇಲ್ಲಿಯವರೆಗೆ ಆಕೆಯನ್ನು ಆತ್ಮವಿಶ್ವಾಸದ ಗಣಿಯಂತೆ ನೋಡಿದ್ದ ಪ್ರೇಕ್ಷಕರಿಗೆ ಕಳೆದ ಕೆಲವು ದಿನಗಳಿಂದ ಇರಿಸುಮುರಿಸು ಆಗುತ್ತಿತ್ತು. ಇದೀಗ ಭೂಮಿಕಾ ಮತ್ತೆ ಹಳಿಗೆ ಮರಳುವ ಸೂಚನೆ ಇದೆ. 

ಒಟ್ಟಾರೆ, ಕಳೆದ ಕೆಲವು ದಿನಗಳಿಂದ ಪಾರ್ಥ ಮತ್ತು ಅಪೇಕ್ಷಾ ಲವ್‌ ಸ್ಟೋರಿಯಲ್ಲಿ "ಫೀಲಿಂಗ್‌"ನಿಂದ ತುಂಬಿದ್ದ ಕಥೆಯು ಮತ್ತೆ ಹಳೆಯ ಜೋಶ್‌ಗೆ ಮರಳುವ ಸೂಚನೆ ದೊರಕಿದ್ದು, ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. 
icon

(8 / 9)

ಒಟ್ಟಾರೆ, ಕಳೆದ ಕೆಲವು ದಿನಗಳಿಂದ ಪಾರ್ಥ ಮತ್ತು ಅಪೇಕ್ಷಾ ಲವ್‌ ಸ್ಟೋರಿಯಲ್ಲಿ "ಫೀಲಿಂಗ್‌"ನಿಂದ ತುಂಬಿದ್ದ ಕಥೆಯು ಮತ್ತೆ ಹಳೆಯ ಜೋಶ್‌ಗೆ ಮರಳುವ ಸೂಚನೆ ದೊರಕಿದ್ದು, ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. 

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(9 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 


ಇತರ ಗ್ಯಾಲರಿಗಳು