ಅಪೇಕ್ಷಾಳ ಮನಸ್ಸಲ್ಲಿ ಭೂಮಿಕಾಳ ವಿರುದ್ಧ ದ್ವೇಷದ ಬೀಜ ಬಿತ್ತಿದ ಶಕುಂತಲಾದೇವಿ; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ
- Amruthadhaare serial today episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಶಕುಂತಲಾದೇವಿಯು ಅಪೇಕ್ಷಾಳ ಮನಸ್ಸಲ್ಲಿ ಭೂಮಿಕಾಳ ವಿರುದ್ಧ ದ್ವೇಷದ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನೇನು ಆಗಲಿದೆ ನೋಡೋಣ.
- Amruthadhaare serial today episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಶಕುಂತಲಾದೇವಿಯು ಅಪೇಕ್ಷಾಳ ಮನಸ್ಸಲ್ಲಿ ಭೂಮಿಕಾಳ ವಿರುದ್ಧ ದ್ವೇಷದ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನೇನು ಆಗಲಿದೆ ನೋಡೋಣ.
(1 / 10)
amruthadhaare serial today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇಂದಿನ ಸಂಚಿಕೆಯಲ್ಲೂ ಶಕುಂತಲಾದೇವಿಯ ನಾಟಕ ಮುಂದುವರೆಯುವ ಸೂಚನೆ ಇದೆ. ಮಂದಾಕಿನಿ ಮನೆಗೆ ಬಂದಿರುವ ಶಕುಂತಲಾದೇವಿ ಅಪೇಕ್ಷಾಳ ಜತೆ ಮಾತನಾಡುತ್ತಾರೆ.
(2 / 10)
ಯಾಕೆ ಬೇಸರದಲ್ಲಿದ್ದೀಯಾ ಎಂದಾಗ ಎಂದಿನಂತೆ ತಲೆನೋವಿನ ನೆಪ ಹೇಳ್ತಾಳೆ ಅಪ್ಪಿ. ಆದರೆ, ನನಗೆ ಎಲ್ಲಾ ವಿಷಯ ಗೊತ್ತು. ಪಾರ್ಥ ನಿಮ್ಮ ಪ್ರೀತಿಯ ವಿಷಯ ಹೇಳಿದ ಎನ್ನುತ್ತಾರೆ ಶಕುಂತಲಾದೇವಿ. ಇದನ್ನು ಕೇಳಿ ಅಪೇಕ್ಷಾಗೆ ಅಚ್ಚರಿಯಾಗುತ್ತದೆ.
(3 / 10)
ನಿಮ್ಮಿಬ್ಬರ ಪ್ರೀತಿಯ ವಿಷಯ ಯಾರಿಗೆಲ್ಲ ಗೊತ್ತು. ಯಾಕೆ ನನ್ನಲ್ಲಿ ಅಥವಾ ಗೌತಮ್ನಲ್ಲಿ ಹೇಳಿಲ್ಲ. ಅಟ್ಲಿಸ್ಟ್ ಭೂಮಿಕಾಳ ಬಳಿಯಾದರೂ ಹೇಳಬಹುದಿತ್ತು ಅಲ್ವಾ ಎಂದು ಸೋಗಿನ ಮುಖವಾಡದಲ್ಲಿ ಶಕುಂತಲಾದೇವಿ ಹೇಳುತ್ತಾರೆ.
(4 / 10)
"ಅಕ್ಕನಿಗೆ ಈ ವಿಷಯ ಗೊತ್ತು" ಅನ್ತಾಳೆ ಅಪೇಕ್ಷಾ. "ಹೌದ, ಹೀಗಿದ್ದರೂ ಪಾರ್ಥನ ಮದುವೆಗೆ ಹೇಗೆ ಖುಷಿಖುಷಿಯಾಗಿದ್ದಾಳೆ. ಅವಳು ಯಾಕೆ ನಿಮ್ಮನ್ನು ಒಂದು ಮಾಡಲು ಪ್ರಯತ್ನಿಸಿಲ್ಲ" ಎಂದು ಹೇಳುತ್ತಾರೆ ಶಕುಂತಲಾ.
(5 / 10)
ಈ ಮೂಲಕ ಅಪೇಕ್ಷಾಳ ಮನಸ್ಸಲ್ಲಿ ಭೂಮಿಕಾಳ ವಿರುದ್ಧ ದ್ವೇಷದ ಬೀಜ ಬಿತ್ತುವಲ್ಲಿ ಯಶಸ್ವಿಯಾಗುತ್ತಾಳೆ. ಸಾಮಾನ್ಯವಾಗಿ ಶಕುಂತಲಾದೇವಿ ಎಷ್ಟೇ ನಾಟಕ ಮಾಡಿದರೂ ಕೊನೆಗೆ ಭೂಮಿಕಾ ಗೆಲ್ಲೋದು ವಾಡಿಕೆ. ಈ ಬಾರಿ ಏನಾಗುತ್ತದೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಮೂಡಿದೆ.
(6 / 10)
ಶಕುಂತಲಾದೇವಿ "ಪಾರ್ಥ ಮತ್ತು ಅಪೇಕ್ಷಾಳ ವಿಷಯವನ್ನು" ಎಲ್ಲರ ಮುಂದೆ ಹೇಳುವ ಮುನ್ನವೇ ಭೂಮಿಕಾ ಈ ವಿಷಯವನ್ನು ಗೌತಮ್ಗೆ ಹೇಳಿಬಿಡಬಹುದು ಎಂದು ಪ್ರೇಕ್ಷಕರು ಅಂದಾಜಿಸಿದ್ದಾರೆ.
(7 / 10)
ಶಕುಂತಲಾ ಮಾಡಿದ ನಾಟಕ ಅರಿವಾದ ಬಳಿಕ ದೃಢ ನಿರ್ಧಾರ ಮಾಡಿ ಭೂಮಿಕಾ ಈ ವಿಷಯವನ್ನು ಗೌತಮ್ಗೆ ತಿಳಿಸಬಹುದು ಎಂದುಕೊಂಡಿದ್ದಾರೆ.
(8 / 10)
ಇನ್ನೊಂದೆಡೆ ಶಾಲಾ ಮಕ್ಕಳು ಎಕ್ಸಾಂ ಚೆನ್ನಾಗಿ ಬರೆಯುವ ನಿರೀಕ್ಷೆಯಿದೆ. ಈ ಮೂಲಕ ಸದಾಶಿವ ಪಾರ್ಥನಿಗೆ ನೀಡಿದ ಟಾಸ್ಕ್ ಕಂಪ್ಲಿಟ್ ಆಗುವ ಸೂಚನೆ ಇದೆ. ಲವ್ ಪರೀಕ್ಷೆ ಮತ್ತು ಶಾಲಾ ಪರೀಕ್ಷೆ ಎರಡೂ ಸುಸೂತ್ರವಾಗಿ ಸಾಗಿ ರಿಸಲ್ಟ್ ಉತ್ತಮವಾಗಿ ಬರುವ ಸಾಧ್ಯತೆ ಇದೆ.
(9 / 10)
ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಲವ್ ಬರ್ಡ್ಸ್ ರೀತಿ ಇದ್ದರು. ಜೈದೇವ್ನ ಕುತಂತ್ರದಿಂದ ಇವರಿಬ್ಬರ ಪ್ರೀತಿಗೆ ತಡೆಯಾಗಿತ್ತು. ಅಪೇಕ್ಷಾಳನ್ನು ಮದುವೆಯಾಗಲು ಬಯಸಿದ್ದ ಜೈದೇವ್ ಮಲ್ಲಿಗೆ ಮೋಸ ಮಾಡಲು ಹೋಗಿದ್ದ. ಆದರೆ, ಕೊನೆಕ್ಷಣದಲ್ಲಿ ಮಲ್ಲಿ ಜತೆ ಜೈದೇವ್ ಮದುವೆಯಾಗಿತ್ತು. ಇದಾದ ಬಳಿಕ ಅಪೇಕ್ಷಾ ಜತೆ ಪಾರ್ಥನ ಪ್ರೀತಿ ಮೊದಲಿನಂತೆ ಮುಂದುವರೆದಿತ್ತು. ಕಳೆದ ಕೆಲವು ದಿನಗಳಿಂದ ಇವರಿಬ್ಬರ ಲವ್ ಟ್ರಾಜಿಡಿ ಹಂತಕ್ಕೆ ತಲುಪಿದ್ದು, ಇದೀಗ ಹೊಸ ಟ್ವಿಸ್ಟ್ ದೊರಕಿದೆ.
ಇತರ ಗ್ಯಾಲರಿಗಳು