ಎರಡು ಮೂರಾಗಲು ಗೌತಮ್ ದಿವಾನ್-ಭೂಮಿಕಾ ಹನಿಮೂನ್; ಗೆದ್ದು ಬಾ ಗೆಳೆಯ ಎಂದು ಹಾರೈಸಿದ ಆನಂದ್, ಅಮೃತಧಾರೆ ಸೀರಿಯಲ್ ಸ್ಟೋರಿ
- Amruthadhaare Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ದಿವಾನ್ ಮತ್ತು ಭೂಮಿಕಾರನ್ನು ಹನಿಮೂನ್ಗೆ ಕಳುಹಿಗಸುವ ಯೋಜನೆಯನ್ನು ಅಜ್ಜಮ್ಮ ವ್ಯಕ್ತಪಡಿಸಿದ್ದಾರೆ. ಇಬ್ಬರು ಮೂವರಾಗಲೇಬೇಕು ಎಂದು ಅಜ್ಜಿ ಹೇಳಿದ್ದಾರೆ. ಗೆಳೆಯನಿಗೆ ಗುಡ್ ಲಕ್ ಹೇಳಿದ್ದಾನೆ ಗೆಳೆಯ ಆನಂದ್.
- Amruthadhaare Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ ದಿವಾನ್ ಮತ್ತು ಭೂಮಿಕಾರನ್ನು ಹನಿಮೂನ್ಗೆ ಕಳುಹಿಗಸುವ ಯೋಜನೆಯನ್ನು ಅಜ್ಜಮ್ಮ ವ್ಯಕ್ತಪಡಿಸಿದ್ದಾರೆ. ಇಬ್ಬರು ಮೂವರಾಗಲೇಬೇಕು ಎಂದು ಅಜ್ಜಿ ಹೇಳಿದ್ದಾರೆ. ಗೆಳೆಯನಿಗೆ ಗುಡ್ ಲಕ್ ಹೇಳಿದ್ದಾನೆ ಗೆಳೆಯ ಆನಂದ್.
(1 / 9)
ಅಮೃತಧಾರೆ ಧಾರಾವಾಹಿಯಲ್ಲಿ ಕೆಂಚ ಎಂಬಾತ ದಿವಾನ್ ಕುಟುಂಬದ ಜಮೀನನ್ನು ತನ್ನ ಹೆಸರಿಗೆ ಬರೆದುಕೊಳ್ಳಲು ಸಂಚು ರೂಪಿಸಿದ್ದಾನೆ. ಸಮಸ್ಯೆ ಇರುವ ಈ ಚಿಕ್ಕಮಗಳೂರು ಎಸ್ಟೇಟ್ಗೆ ಶಕುಂತಲಾದೇವಿ ಗೌತಮ್ ಮತ್ತು ಭೂಮಿಕಾರನ್ನು ಕಳುಹಿಸಲು ಯೋಜಿಸಿದ್ದಾರೆ.
(2 / 9)
ಗೌತಮ್ ಮತ್ತು ಭೂಮಿಕಾ ಹನಿಮೂನ್ ಮೂಡ್ನಲ್ಲಿದ್ದಾರೆ. ನೀವು ಇಬ್ಬರು ಇದ್ದದ್ದು ಮೂವರು ಆಗಲೇಬೇಕು ಎಂದು ಅಜ್ಜಮ್ಮ ಫರ್ಮಾನು ಹೊರಡಿಸಿದ್ದಾರೆ. ಈ ಮೂಲಕ ಇವರಿಬ್ಬರನ್ನು ಹನಿಮೂನ್ಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
(3 / 9)
ಇನ್ನೊಂದೆಡೆ ಗೌತಮ್ ಮತ್ತು ಭೂಮಿಕಾ ಬಲೂನ್ಗಳ ಜತೆ ಆಡುತ್ತ ಇದ್ದಾರೆ. ಬಲೂನ್ ನೋಡುತ್ತ ಭೂಮಿಕಾಳಿಗೆ ಗೌತಮ್ನ ಹೊಟ್ಟೆ ನೆನಪಿಗೆ ಬಂದು ಜೋರಾಗಿ ನಕ್ಕಿದ್ದಾಳೆ.
(4 / 9)
ನನ್ನನ್ನು ಡುಮ್ಮ ಅನ್ನೋದ್ಯಾಕೆ ನಾನು ಸಿಕ್ಸ್ ಪ್ಯಾಕ್ ಮಾಡ್ತಿನಿ ಎಂದು ಗೌತಮ್ ಹೇಳಿದಾಗ "ನೀವು ಇದೇ ರೀತಿ ಇದ್ದರೆ ಚೆನ್ನ" ಎಂದು ಭೂಮಿಕಾ ಹೇಳುತ್ತಾರೆ.
(5 / 9)
ಇನ್ನೊಂದೆಡೆ ಗೌತಮ್ ಮತ್ತು ಭೂಮಿಕಾ ಬಲೂನ್ ಜತೆ ಆಡುವ ದೃಶ್ಯವೂ ಇದೆ. ಈ ಸಮಯದಲ್ಲಿ ಗೌತಮ್ ಭೂಮಿಕಾರನ್ನು ಮೇಲಕ್ಕೆ ಎತ್ತುತ್ತಾರೆ. ಈ ಸಮಯದಲ್ಲಿ ಈ ದೃಶ್ಯ ಆನಂದ್ ನೋಡುತ್ತಾನೆ. ಇದು ಬರೀ ಟ್ರೇಲರ್ ಅಷ್ಟೇ, ಮಾಡಬೇಕಿರುವುದು ಬೇರೆಯದ್ದೇ ಇದೆ ಅನ್ನುತ್ತಾನೆ.
(6 / 9)
ಗೆದ್ದು ಬಾ ಗೆಳೆಯ ಆಲ್ ದಿ ಬೆಸ್ಟ್ ಎಂದು ಆನಂದ್ ಹೇಳುತ್ತಾನೆ. ಈ ನನ್ನ ಮಗ ಏನು ಹೇಳ್ತಾನೆ ಎನ್ನೋದೇ ಅರ್ಥ ಆಗೋದಿಲ್ಲ ಎಂದು ಗೌತಮ್ ಅಂದುಕೊಳ್ಳುತ್ತಾರೆ.
(7 / 9)
ಒಟ್ಟಾರೆ ಭೂಮಿಕಾ ಮತ್ತು ಗೌತಮ್ ಮಗುವನ್ನು ನೋಡಲು ಎಲ್ಲರೂ ಕಾತರರಾಗಿದ್ದಾರೆ. ಪ್ರೇಕ್ಷಕರೂ ಈ ಎಪಿಸೋಡ್ ಕುರಿತು ಸಾಕಷ್ಟು ಕುತೂಹಲಗೊಂಡಿದ್ದಾರೆ.
(8 / 9)
ಇದೇ ಸಮಯದಲ್ಲಿ ರೌಡಿ ಕೆಂಚನಿಂದ ಇವರಿಗೆ ಏನಾದರೂ ತೊಂದರೆಯಾಗಬಹುದೇ? ರೌಡಿಯ ತೊಂದರೆಯನ್ನು ಗೌತಮ್ ಹೇಗೆ ನಿಭಾಯಿಸ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಹೆಚ್ಚಿನ ವಿವರ ತಿಳಿಯಲು ಇಂದು ಸಂಜೆ ಝೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ನೋಡಬಹುದು.
ಇತರ ಗ್ಯಾಲರಿಗಳು