Radha Bhagavathi: ಈ ಬಾರ್ಬಿ ಡಾಲ್‌ ಮನೆ ಕೆಲಸದಾಕೆ ಅಂದ್ರೆ ನಂಬ್ತೀರಾ? ರಾಧಾ ಭಗವತಿಯ ಚಂದಕ್ಕಿಂತ ಚಂದದ ಫೋಟೋಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Radha Bhagavathi: ಈ ಬಾರ್ಬಿ ಡಾಲ್‌ ಮನೆ ಕೆಲಸದಾಕೆ ಅಂದ್ರೆ ನಂಬ್ತೀರಾ? ರಾಧಾ ಭಗವತಿಯ ಚಂದಕ್ಕಿಂತ ಚಂದದ ಫೋಟೋಗಳು

Radha Bhagavathi: ಈ ಬಾರ್ಬಿ ಡಾಲ್‌ ಮನೆ ಕೆಲಸದಾಕೆ ಅಂದ್ರೆ ನಂಬ್ತೀರಾ? ರಾಧಾ ಭಗವತಿಯ ಚಂದಕ್ಕಿಂತ ಚಂದದ ಫೋಟೋಗಳು

  • Serial Actress Radha Bhagavathi: ರಾಧಾ ಭಗವತಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ರಾಮಚಾರಿ ಸೀರಿಯಲ್‌ನಲ್ಲಿ ಸೀತಾ ಆಗಿದ್ದ ರಾಧಾ ಭಗವತಿ ಈಗ ಅಮೃತಧಾರೆ ಧಾರಾವಾಹಿಯಲ್ಲಿ ಮನೆ ಕೆಲಸದಾಕೆ ಮಲ್ಲಿ. ಈ ಸುಂದರ ಫೋಟೋಗಳನ್ನು ನೋಡಿದರೆ "ಯಾವ ಸೈಡ್‌ನಿಂದ ನೋಡಿದರೂ ಮನೆ ಕೆಲಸದಾಕೆ" ರೀತಿ ಕಾಣಿಸೋದಿಲ್ಲ ಎಂದು ಅಭಿಮಾನಿಗಳು ಹೇಳಬಹುದು.

ಅಮೃತಧಾರೆಯ ಮಲ್ಲಿ ನಿಜಜೀವನದ ರಾಧಾ ಭಗವತಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಹೊಸ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತ ಇರುತ್ತಾರೆ. ಇದೀಗ ಬಾರ್ಬಿ ಡಾಲ್‌ನಂತೆ ಕಾಣಿಸುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
icon

(1 / 10)

ಅಮೃತಧಾರೆಯ ಮಲ್ಲಿ ನಿಜಜೀವನದ ರಾಧಾ ಭಗವತಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಹೊಸ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತ ಇರುತ್ತಾರೆ. ಇದೀಗ ಬಾರ್ಬಿ ಡಾಲ್‌ನಂತೆ ಕಾಣಿಸುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನ ತಂಗಿಯಾಗಿ ನಟಿಸಿದ್ದರು. ಅಮೃತಧಾರೆಯಲ್ಲಿ ಮನೆ ಕೆಲಸದಾಕೆಯಾಗಿದ್ದಳು. ಆದರೆ, ಇತ್ತೀಚೆಗೆ ಅಮೃತಧಾರೆ ಧಾರಾವಾಹಿಯಲ್ಲಿ ಮಹಾ ತಿರುವು ಸಂಭವಿಸಿ ಜೈದೇವ್‌ನ ಪತ್ನಿಯಾಗಿ ದಿವಾನ್‌ ಕುಟುಂಬದ ಸೊಸೆಯಾಗಿದ್ದಾಳೆ.
icon

(2 / 10)

ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನ ತಂಗಿಯಾಗಿ ನಟಿಸಿದ್ದರು. ಅಮೃತಧಾರೆಯಲ್ಲಿ ಮನೆ ಕೆಲಸದಾಕೆಯಾಗಿದ್ದಳು. ಆದರೆ, ಇತ್ತೀಚೆಗೆ ಅಮೃತಧಾರೆ ಧಾರಾವಾಹಿಯಲ್ಲಿ ಮಹಾ ತಿರುವು ಸಂಭವಿಸಿ ಜೈದೇವ್‌ನ ಪತ್ನಿಯಾಗಿ ದಿವಾನ್‌ ಕುಟುಂಬದ ಸೊಸೆಯಾಗಿದ್ದಾಳೆ.

ರಾಧಾ ಭಗವತಿ ಮೂಲತಃ ಬಿಜಾಪುರದವರು. ಇವರು ಸ್ಯಾಂಡಲ್‌ವುಡ್‌ ನಟಿಯೂ ಹೌದು. ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎಸ್‌ ನಾರಾಯಣ್‌ ನಿರ್ದೇಶನದ ಒಂದ್ಸಲ ಮೀಟ್‌ ಮಾಡೋಣ ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದಾರೆ.
icon

(3 / 10)

ರಾಧಾ ಭಗವತಿ ಮೂಲತಃ ಬಿಜಾಪುರದವರು. ಇವರು ಸ್ಯಾಂಡಲ್‌ವುಡ್‌ ನಟಿಯೂ ಹೌದು. ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎಸ್‌ ನಾರಾಯಣ್‌ ನಿರ್ದೇಶನದ ಒಂದ್ಸಲ ಮೀಟ್‌ ಮಾಡೋಣ ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದಾರೆ.

ಅಮೃತಧಾರೆಯಲ್ಲಿ ಮನೆಕೆಲಸದಾಕೆಯಾಗಿದ್ದ ಮಲ್ಲಿ ನಿಜಜೀವನದಲ್ಲಿ ಸ್ಯಾಂಡಲ್‌ವುಡ್‌ ನಟಿ ಮಾತ್ರವಲ್ಲ, ಇವರು ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಎರಡು ಸಿನಿಮಾಗಳಲ್ಲಿ ಇವರು ಹಾಡಿದ್ದಾರೆ. ಮದುಮಗಳು ಸೀರಿಯಲ್‌ನಲ್ಲಿ ನಾಯಕಿಯ ಪಾತ್ರಕ್ಕೆ ಇವರು ಧ್ವನಿಯಾಗಿದ್ದಾರೆ. 
icon

(4 / 10)

ಅಮೃತಧಾರೆಯಲ್ಲಿ ಮನೆಕೆಲಸದಾಕೆಯಾಗಿದ್ದ ಮಲ್ಲಿ ನಿಜಜೀವನದಲ್ಲಿ ಸ್ಯಾಂಡಲ್‌ವುಡ್‌ ನಟಿ ಮಾತ್ರವಲ್ಲ, ಇವರು ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಎರಡು ಸಿನಿಮಾಗಳಲ್ಲಿ ಇವರು ಹಾಡಿದ್ದಾರೆ. ಮದುಮಗಳು ಸೀರಿಯಲ್‌ನಲ್ಲಿ ನಾಯಕಿಯ ಪಾತ್ರಕ್ಕೆ ಇವರು ಧ್ವನಿಯಾಗಿದ್ದಾರೆ. 

ರಾಧಾ ಭಗವತಿ ಕುಟುಂಬಕ್ಕೂ ಕಲೆಗೂ ನಂಟಿದೆ. ಇವರ ತಾತ ರಂಗಭೂಮಿ ಕಲಾವಿದರು. ಹರಿಕಥೆ ದಾಸರೂ ಆಗಿದ್ದರು. ಅಮ್ಮನೂ ಜಾನಪದ ಹಾಡುಗಾರ್ತಿ. ಇದೇ ಕಾರಣಕ್ಕೆ ರಾಧಾ ಭಗವತಿಗೂ ಕಲೆಗೂ ನಂಟಿದೆ. 
icon

(5 / 10)


ರಾಧಾ ಭಗವತಿ ಕುಟುಂಬಕ್ಕೂ ಕಲೆಗೂ ನಂಟಿದೆ. ಇವರ ತಾತ ರಂಗಭೂಮಿ ಕಲಾವಿದರು. ಹರಿಕಥೆ ದಾಸರೂ ಆಗಿದ್ದರು. ಅಮ್ಮನೂ ಜಾನಪದ ಹಾಡುಗಾರ್ತಿ. ಇದೇ ಕಾರಣಕ್ಕೆ ರಾಧಾ ಭಗವತಿಗೂ ಕಲೆಗೂ ನಂಟಿದೆ. 

ಇನ್‌ಸ್ಟಾಗ್ರಾಂನಲ್ಲಿ ಅದ್ಭುತವಾದ ಫೋಟೋಗಳನ್ನು ಹಂಚಿಕೊಳ್ಳುವ ಇವರಿಗೆ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಿದೆ. ಆಗಾಗ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. 
icon

(6 / 10)

ಇನ್‌ಸ್ಟಾಗ್ರಾಂನಲ್ಲಿ ಅದ್ಭುತವಾದ ಫೋಟೋಗಳನ್ನು ಹಂಚಿಕೊಳ್ಳುವ ಇವರಿಗೆ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಿದೆ. ಆಗಾಗ ಫೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. 

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯಾಗಿ ಇವರು ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ತಾತಾನ ಜತೆ ಕ್ವಾಟ್ರಸ್‌ನಲ್ಲಿದ್ದ ಇವಳ ಮೇಲೆ ಕೇಡಿ ಜೈದೇವ್‌ ಕಣ್ಣು ಬಿದ್ದಿತ್ತು. ಪ್ರೀತಿಯ ನಾಟಕವಾಡಿದ್ದ ಜೈದೇವ್‌ನಿಂದ ಈಕೆ ಬಸುರಿಯಾಗಿದ್ದಳು.
icon

(7 / 10)

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯಾಗಿ ಇವರು ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ತಾತಾನ ಜತೆ ಕ್ವಾಟ್ರಸ್‌ನಲ್ಲಿದ್ದ ಇವಳ ಮೇಲೆ ಕೇಡಿ ಜೈದೇವ್‌ ಕಣ್ಣು ಬಿದ್ದಿತ್ತು. ಪ್ರೀತಿಯ ನಾಟಕವಾಡಿದ್ದ ಜೈದೇವ್‌ನಿಂದ ಈಕೆ ಬಸುರಿಯಾಗಿದ್ದಳು.

ಮಲ್ಲಿ ಬಸುರಿಯಾದ ಬಳಿಕ ಜೈದೇವ್‌ ಅಪೇಕ್ಷಾಳನ್ನು ಮದುವೆಯಾಗಲು ಮುಂದಾಗಿದ್ದ. ಈ ಸಮಯದಲ್ಲಿ ಭೂಮಿಕಾ ಮಧ್ಯಪ್ರವೇಶಿಸಿದ ಕಾರಣ ಮಲ್ಲಿಗೂ ಜೈದೇವ್‌ಗೂ ಮದುವೆಯಾಗಿತ್ತು. ಮನೆಯಲ್ಲಿ ಈಕೆಯನ್ನು ಕೊಲ್ಲುವ ಪ್ರಯತ್ನವನ್ನು ಜೈದೇವ್‌ ಮತ್ತು ಶಕುಂತಲಾದೇವಿ ಮಾಡುತ್ತಿದ್ದರೂ ಅದು ಸಫಲವಾಗಿಲ್ಲ. 
icon

(8 / 10)

ಮಲ್ಲಿ ಬಸುರಿಯಾದ ಬಳಿಕ ಜೈದೇವ್‌ ಅಪೇಕ್ಷಾಳನ್ನು ಮದುವೆಯಾಗಲು ಮುಂದಾಗಿದ್ದ. ಈ ಸಮಯದಲ್ಲಿ ಭೂಮಿಕಾ ಮಧ್ಯಪ್ರವೇಶಿಸಿದ ಕಾರಣ ಮಲ್ಲಿಗೂ ಜೈದೇವ್‌ಗೂ ಮದುವೆಯಾಗಿತ್ತು. ಮನೆಯಲ್ಲಿ ಈಕೆಯನ್ನು ಕೊಲ್ಲುವ ಪ್ರಯತ್ನವನ್ನು ಜೈದೇವ್‌ ಮತ್ತು ಶಕುಂತಲಾದೇವಿ ಮಾಡುತ್ತಿದ್ದರೂ ಅದು ಸಫಲವಾಗಿಲ್ಲ. 

ಒಟ್ಟಾರೆ ಮನೆ ಕೆಲಸದಾಕೆಯ ಪಾತ್ರದ ಮೂಲಕ ಅಮೃತಧಾರೆಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ದಿವಾನ್‌ ಕುಟುಂಬದ ಸೊಸೆಯಾದರೂ ಒಂದಿಷ್ಟು ಅಳಕು ಸ್ವಭಾವದ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ರಾಧಾ ಭಗವತಿ.
icon

(9 / 10)

ಒಟ್ಟಾರೆ ಮನೆ ಕೆಲಸದಾಕೆಯ ಪಾತ್ರದ ಮೂಲಕ ಅಮೃತಧಾರೆಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ದಿವಾನ್‌ ಕುಟುಂಬದ ಸೊಸೆಯಾದರೂ ಒಂದಿಷ್ಟು ಅಳಕು ಸ್ವಭಾವದ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ರಾಧಾ ಭಗವತಿ.

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಅಮೃತಧಾರೆ, ಬೃಂದಾವನ, ಸೀತಾರಾಮ  ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಅಮೃತಧಾರೆ, ಬೃಂದಾವನ, ಸೀತಾರಾಮ  ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 


ಇತರ ಗ್ಯಾಲರಿಗಳು