Ramcharan meets Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ
- ಆರ್ಆರ್ಆರ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ರಾಮ್ಚರಣ್ ತೇಜ ಮತ್ತು ಮೆಗಾಸ್ಟಾರ್ ಚಿರಂಜೀವಿ. ದೆಹಲಿಯ ಕಚೇರಿಗೆ ತೆರಳಿದ ರಾಮ್ಚರಣ್ಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಈ ವೇಳೆ ಕೆಲ ಹೊತ್ತು ಸಿನಿಮಾ ಆಗುಹೋಗುಗಳ ಬಗ್ಗೆಯೂ ಮಾತನಾಡಿದ್ದಾರೆ.
- ಆರ್ಆರ್ಆರ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ರಾಮ್ಚರಣ್ ತೇಜ ಮತ್ತು ಮೆಗಾಸ್ಟಾರ್ ಚಿರಂಜೀವಿ. ದೆಹಲಿಯ ಕಚೇರಿಗೆ ತೆರಳಿದ ರಾಮ್ಚರಣ್ಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಈ ವೇಳೆ ಕೆಲ ಹೊತ್ತು ಸಿನಿಮಾ ಆಗುಹೋಗುಗಳ ಬಗ್ಗೆಯೂ ಮಾತನಾಡಿದ್ದಾರೆ.
(1 / 5)
95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಇತ್ತೀಚೆಗಷ್ಟೇ ತೆರೆಬಿದಿತ್ತು. ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡಿಗೆ ಅತ್ಯುತ್ತಮ ಒರಿಜಿನಲ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿತ್ತು. (twitter/ Amit Shah)
(2 / 5)
ಸಂಗೀತ ನಿರ್ದೇಶಕ ಕೀರವಾಣಿ ಮತ್ತು ಸಾಹಿತ್ಯ ಬರೆದಿದ್ದ ಚಂದ್ರಬೋಸ್ಗೆ ಆಸ್ಕರ್ ಲಭಿಸಿತ್ತು. ರಾಜಮೌಳಿ, ಜೂ. ಎನ್ಟಿಆರ್, ರಾಮ್ ಚರಣ್ ತೇಜ ಸೇರಿ ಚಿತ್ರತಂಡದ ಹಲವರು ಪ್ರಶಸ್ತಿ ಸಮಾರಂಭದಲ್ಲಿದ್ದರು. (twitter/ Amit Shah)
(3 / 5)
ಚಿತ್ರದ ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ, ಇಡೀ ಭಾರತ ಸಂಭ್ರಮಿಸಿತ್ತು. ಆರ್ಆರ್ಆರ್ ಚಿತ್ರತಂಡಕ್ಕೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿತ್ತು. (twitter/ Amit Shah)
(4 / 5)
ಇದೀಗ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ನಟ ರಾಮ್ಚರಣ್ ಮತ್ತವರ ತಂದೆ ಮೆಗಾಸ್ಟಾರ್ ಚಿರಂಜೀವಿ. (twitter/ Amit Shah)
ಇತರ ಗ್ಯಾಲರಿಗಳು