Tumkur News: ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ವೈಭವ; ಸಿದ್ದಗಂಗಾ ಮಠಕ್ಕೆ ಹರಿದು ಬಂದ ಭಕ್ತ ಸಾಗರ, ರಥ ಎಳೆದು ಸಂಭ್ರಮ
- ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಹರಿದು ಬಂದಿದ್ದರು. ಅದರ ಫೋಟೊಸ್ ಇಲ್ಲಿದೆ.
- ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಹರಿದು ಬಂದಿದ್ದರು. ಅದರ ಫೋಟೊಸ್ ಇಲ್ಲಿದೆ.
(1 / 5)
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿವರಾತ್ರಿ ಹಬ್ಬದ ಸಡಗರ ಜೋರಾಗಿತ್ತು, ಶಿವರಾತ್ರಿ ಹಬ್ಬದ ಪ್ರಯುಕ್ತ ಮಠದಲ್ಲಿ ಒಂದು ವಾರ ಕಾಲ ಜಾತ್ರೆಯೇ ನಡೆಯುತ್ತೆ, ಇಲ್ಲಿ ನಡೆಯುವ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು, ಮಾರ್ಚ್ 9 ರಂದು ಅದ್ದೂರಿಯಾಗಿ ರಥೋತ್ಸವ ನಡೆದರೆ, ಮಾರ್ಚ್ 10 ರ ರಾತ್ರಿ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಸಿಡಿಮದ್ದುಗಳ ಪ್ರದರ್ಶನ ಆಕರ್ಷಣೀಯವಾಗಿ ಇರಲಿದೆ.
(2 / 5)
ಶಿವರಾತ್ರಿ ಹಬ್ಬದ ಹಿಂದಿನ ದಿನ ಭಕ್ತರು ಜಾಗರಣೆ ಮಾಡುತ್ತಾರೆ. ಶಿವನ ಭಕ್ತರು ಜಾಗರಣೆ ಮಾಡಲು ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದರು,‘ ಭಕ್ತರಿಗೆ ಭಜನೆ ಮಾಡಲು, ಶಿವನಾಮ ಹಾಡಲು ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು, ಜೊತೆಗೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
(3 / 5)
ಶಿವರಾತ್ರಿ ಹಬ್ಬದ ಪ್ರಯುಕ್ತ ಮಠದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ, ಕೃಷಿ, ತೋಟಗಾರಿಕೆ, ರೇಷ್ಮೆ, ಉಣ್ಣೆ, ಹೈನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಪ್ರದರ್ಶನಲ್ಲಿ ಭಾಗವಹಿಸಿ ತಮ್ಮ ಇಲಾಖೆ ಸೌಲಭ್ಯ ಸೇರಿದಂತೆ ಉತ್ಪನ್ನಗಳ
ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗಿದೆ. ಇನ್ನ ಜಾತ್ರೆಯಲ್ಲಿ ಭಕ್ತರು ಮಿಂದೆದಿದ್ದಾರೆ.
(4 / 5)
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಪ್ರತಿ ಶಿವರಾತ್ರಿ ರಾತ್ರಿ ಹಬ್ಬ ಅಂದ್ರೆ ಭಕ್ತರು ಸಿದ್ದಗಂಗಾ ಮಠದತ್ತ ದಾಪುಗಾಲಿಡುತ್ತಾರೆ, ಮಠದಲ್ಲಿ ಶಿವರಾತ್ರಿ ವೈಭವವೇ ನಡೆಯಲಿದೆ.
ಇತರ ಗ್ಯಾಲರಿಗಳು