ಮಹಾ ಕುಂಭ ಮೇಳ ಕಾಲ್ತುಳಿತ ದುರಂತ; ಕರ್ನಾಟಕದ ನಾಲ್ವರಿಗೆ ಗಾಯ, ಬೆಳಗಾವಿಯ ಇನ್ನೂ ಐವರು ಭಕ್ತರು ನಾಪತ್ತೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಹಾ ಕುಂಭ ಮೇಳ ಕಾಲ್ತುಳಿತ ದುರಂತ; ಕರ್ನಾಟಕದ ನಾಲ್ವರಿಗೆ ಗಾಯ, ಬೆಳಗಾವಿಯ ಇನ್ನೂ ಐವರು ಭಕ್ತರು ನಾಪತ್ತೆ?

ಮಹಾ ಕುಂಭ ಮೇಳ ಕಾಲ್ತುಳಿತ ದುರಂತ; ಕರ್ನಾಟಕದ ನಾಲ್ವರಿಗೆ ಗಾಯ, ಬೆಳಗಾವಿಯ ಇನ್ನೂ ಐವರು ಭಕ್ತರು ನಾಪತ್ತೆ?

ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆ ಸ್ನಾನಕ್ಕೆ ಸ್ವಲ್ಪ ಮೊದಲು ಕಾಲ್ತುಳಿತ ಸಂಭವಿಸಿದ್ದು, 15 ಭಕ್ತರು ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಈ ಪೈಕಿ ಕರ್ನಾಟಕದವರೂ ಇದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ 15 ಮಂದಿ ಮೃತಪಟ್ಟಿಟ್ಟು, ನೂರಾರು ಯಾತ್ರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
icon

(1 / 9)

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ 15 ಮಂದಿ ಮೃತಪಟ್ಟಿಟ್ಟು, ನೂರಾರು ಯಾತ್ರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೌನಿ ಅಮಾವಾಸ್ಯೆ ನಿಮಿತ್ತ ಸ್ನಾನಕ್ಕೆ ತೆರಳಿದ ವೇಳೆ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಗಾಯಗೊಂಡ ಯಾತ್ರಿಕರ ಪೈಕಿ ಕರ್ನಾಟಕದ ನಾಲ್ವರು ಭಕ್ತರಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಬೆಳಗಾವಿಯ 500ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಗ್​ರಾಜ್​ಗೆ ತೆರಳಿದ್ದರು ಎನ್ನಲಾಗಿದೆ.
icon

(2 / 9)

ಮೌನಿ ಅಮಾವಾಸ್ಯೆ ನಿಮಿತ್ತ ಸ್ನಾನಕ್ಕೆ ತೆರಳಿದ ವೇಳೆ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಗಾಯಗೊಂಡ ಯಾತ್ರಿಕರ ಪೈಕಿ ಕರ್ನಾಟಕದ ನಾಲ್ವರು ಭಕ್ತರಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಬೆಳಗಾವಿಯ 500ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಗ್​ರಾಜ್​ಗೆ ತೆರಳಿದ್ದರು ಎನ್ನಲಾಗಿದೆ.

ಬೆಳಗಾವಿಯ ಇಬ್ಬರು ಮಹಿಳೆಯರು, ಇಬ್ಬರು ಬಾಲಕಿಯರು ಗಾಯಗೊಂಡಿದ್ದಾರೆ ಎಂದು ಎನ್ನಲಾಗಿದೆ. ಇಬ್ಬರು ಮಹಿಳೆಯರು ಬಿಜೆಪಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಅವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
icon

(3 / 9)

ಬೆಳಗಾವಿಯ ಇಬ್ಬರು ಮಹಿಳೆಯರು, ಇಬ್ಬರು ಬಾಲಕಿಯರು ಗಾಯಗೊಂಡಿದ್ದಾರೆ ಎಂದು ಎನ್ನಲಾಗಿದೆ. ಇಬ್ಬರು ಮಹಿಳೆಯರು ಬಿಜೆಪಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಅವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ವಡಗಾಂವ್ ಉಪನಗರದ ನಿವಾಸಿಗಳಾದ ಬಿಜೆಪಿ ಕಾರ್ಯಕರ್ತರಾದ ಸರೋಜಿನಿ ನಡುವಿನಹಳ್ಳಿ ಮತ್ತು ಕಾಂಚನ್ ಘೋರ್ಪಡೆ, ಇಬ್ಬರು ಬಾಲಕಿಯರಾದ ಮೇಘಾ ಮತ್ತು ಜ್ಯೋತಿ ಎಂಬವರು ಕಾಲ್ತುಳಿತದಲ್ಲಿ ಗಾಯಗಳೊಂದಿಗೆ ಪಾರಾಗಿದ್ದು, ಕಣ್ಣೀರು ಹಾಕಿದ್ದಾರೆ.
icon

(4 / 9)

ವಡಗಾಂವ್ ಉಪನಗರದ ನಿವಾಸಿಗಳಾದ ಬಿಜೆಪಿ ಕಾರ್ಯಕರ್ತರಾದ ಸರೋಜಿನಿ ನಡುವಿನಹಳ್ಳಿ ಮತ್ತು ಕಾಂಚನ್ ಘೋರ್ಪಡೆ, ಇಬ್ಬರು ಬಾಲಕಿಯರಾದ ಮೇಘಾ ಮತ್ತು ಜ್ಯೋತಿ ಎಂಬವರು ಕಾಲ್ತುಳಿತದಲ್ಲಿ ಗಾಯಗಳೊಂದಿಗೆ ಪಾರಾಗಿದ್ದು, ಕಣ್ಣೀರು ಹಾಕಿದ್ದಾರೆ.

ಕಳೆದ ವಾರದಿಂದ ಬೆಳಗಾವಿಯ ಜನರು ವಿವಿಧ ಗುಂಪುಗಳಾಗಿ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದಾರೆ. ಕೆಲವರು ರೈಲು ಮತ್ತು ವಿಮಾನದಲ್ಲಿ ಪ್ರಯಾಣಿಸಿದರೆ, ಕೆಲವರು ಮಿನಿ ಬಸ್ ಮತ್ತು ಇತರ ವಾಹನಗಳಲ್ಲಿ ಹೊರಟಿದ್ದಾರೆ.
icon

(5 / 9)

ಕಳೆದ ವಾರದಿಂದ ಬೆಳಗಾವಿಯ ಜನರು ವಿವಿಧ ಗುಂಪುಗಳಾಗಿ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದಾರೆ. ಕೆಲವರು ರೈಲು ಮತ್ತು ವಿಮಾನದಲ್ಲಿ ಪ್ರಯಾಣಿಸಿದರೆ, ಕೆಲವರು ಮಿನಿ ಬಸ್ ಮತ್ತು ಇತರ ವಾಹನಗಳಲ್ಲಿ ಹೊರಟಿದ್ದಾರೆ.

ಕುಂಭಮೇಳಕ್ಕೆ ತೆರಳಿರುವ ಬೆಳಗಾವಿಯ ಇನ್ನೂ 5 ಭಕ್ತರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಕುಟುಂಬದವರು ಡಿಸಿ ಕಚೇರಿಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.
icon

(6 / 9)

ಕುಂಭಮೇಳಕ್ಕೆ ತೆರಳಿರುವ ಬೆಳಗಾವಿಯ ಇನ್ನೂ 5 ಭಕ್ತರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಕುಟುಂಬದವರು ಡಿಸಿ ಕಚೇರಿಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಕಾಲ್ತುಳಿತ ಪ್ರಕರಣದ ನಂತರ ಅಮೃತ ಸ್ನಾನವನ್ನು ರದ್ದುಗೊಳಿಸಲಾಯಿತು. ಶ್ರೀ ಪಂಚಾಯತ್ ಅಖಾರಾ ಮಹಾನಿರ್ವಾಣಿಯ ಸಾಧುಗಳು 'ಮೌನಿ ಅಮಾವಾಸ್ಯೆ ಅಮೃತ ಸ್ನಾನ' ಮಾಡದೆ ಮರಳಿದರು.
icon

(7 / 9)

ಕಾಲ್ತುಳಿತ ಪ್ರಕರಣದ ನಂತರ ಅಮೃತ ಸ್ನಾನವನ್ನು ರದ್ದುಗೊಳಿಸಲಾಯಿತು. ಶ್ರೀ ಪಂಚಾಯತ್ ಅಖಾರಾ ಮಹಾನಿರ್ವಾಣಿಯ ಸಾಧುಗಳು 'ಮೌನಿ ಅಮಾವಾಸ್ಯೆ ಅಮೃತ ಸ್ನಾನ' ಮಾಡದೆ ಮರಳಿದರು.

ಕಾಲ್ತುಳಿತದ ನಂತರ ಗಾಯಗೊಂಡವರನ್ನು ಕರೆತಂದ ಆಸ್ಪತ್ರೆಗಳಲ್ಲಿಯೂ ಜನರು ಕಿಕ್ಕಿರಿದಿದ್ದರು. ಅನೇಕರು ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಆಸ್ಪತ್ರೆಗಳತ್ತ ಹೆಜ್ಜೆ ಹಾಕಿದ್ದಾರೆ. ಆದರೆ, ಯಾರಿಗೂ ಆಸ್ಪತ್ರೆಗಳ ಒಳಗೆ ಪ್ರವೇಶಿಸಲು ನೀಡಲಿಲ್ಲ.
icon

(8 / 9)

ಕಾಲ್ತುಳಿತದ ನಂತರ ಗಾಯಗೊಂಡವರನ್ನು ಕರೆತಂದ ಆಸ್ಪತ್ರೆಗಳಲ್ಲಿಯೂ ಜನರು ಕಿಕ್ಕಿರಿದಿದ್ದರು. ಅನೇಕರು ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಆಸ್ಪತ್ರೆಗಳತ್ತ ಹೆಜ್ಜೆ ಹಾಕಿದ್ದಾರೆ. ಆದರೆ, ಯಾರಿಗೂ ಆಸ್ಪತ್ರೆಗಳ ಒಳಗೆ ಪ್ರವೇಶಿಸಲು ನೀಡಲಿಲ್ಲ.

ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಮಹಾ ಕುಂಭದಲ್ಲಿ ನಿರ್ಮಿಸಲಾದ ಆಸ್ಪತ್ರೆಗೆ ಕರೆತರಲಾಯಿತು. ಇಪ್ಪತ್ತಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ನಿರಂತರವಾಗಿ ಸುತ್ತುತ್ತಲೇ ಇದ್ದವು.
icon

(9 / 9)

ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಮಹಾ ಕುಂಭದಲ್ಲಿ ನಿರ್ಮಿಸಲಾದ ಆಸ್ಪತ್ರೆಗೆ ಕರೆತರಲಾಯಿತು. ಇಪ್ಪತ್ತಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ನಿರಂತರವಾಗಿ ಸುತ್ತುತ್ತಲೇ ಇದ್ದವು.


ಇತರ ಗ್ಯಾಲರಿಗಳು