Valentines Week 2025: ಕರ್ನಾಟಕದಲ್ಲಿ ಪ್ರೀತಿಸಿ ಮದುವೆಯಾದ ಸಚಿವರು, ರಾಜಕಾರಣಿಗಳ ಪಟ್ಟಿ ದೊಡ್ಡದು, ಯಾರಿದ್ದಾರೆ ಪ್ರೇಮ ಜೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Valentines Week 2025: ಕರ್ನಾಟಕದಲ್ಲಿ ಪ್ರೀತಿಸಿ ಮದುವೆಯಾದ ಸಚಿವರು, ರಾಜಕಾರಣಿಗಳ ಪಟ್ಟಿ ದೊಡ್ಡದು, ಯಾರಿದ್ದಾರೆ ಪ್ರೇಮ ಜೋಡಿ

Valentines Week 2025: ಕರ್ನಾಟಕದಲ್ಲಿ ಪ್ರೀತಿಸಿ ಮದುವೆಯಾದ ಸಚಿವರು, ರಾಜಕಾರಣಿಗಳ ಪಟ್ಟಿ ದೊಡ್ಡದು, ಯಾರಿದ್ದಾರೆ ಪ್ರೇಮ ಜೋಡಿ

  • ಕರ್ನಾಟಕದ ಹಲವು ರಾಜಕಾರಣಿಗಳು ಪ್ರೇಮಿಸಿ ವಿವಾಹವಾದವರೇ.ಕರ್ನಾಟಕ ಸರ್ಕಾರದ ಈಗಿನ ಸಂಪುಟದಲ್ಲಿಯೇ ಐವರು ಸಚಿವರು ಹೀಗೆ ಪ್ರೇಮಿಸಿ ಮದುವೆಯಾಗಿ ಆದರ್ಶ ಜೋಡಿಗಳು ಎನ್ನಿಸಿದ್ದಾರೆ. ಹೀಗೆ ಪ್ರೀತಿಸಿ ಮದುವೆಯಾದ ರಾಜಕಾರಣಗಳ ಚಿತ್ರ ನೋಟ ಇಲ್ಲಿದೆ.

ಕರ್ನಾಟಕ ಸರ್ಕಾರದ ಗೃಹ ಸಚಿವ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಕನ್ಯಕಾ ಪರಮೇಶ್ವರಿ ಅವರನ್ನು ದಶಕಗಳ ಹಿಂದೆಯೇ ಪ್ರೇಮಿಸಿ ವಿವಾಹವಾದವರು. ಅವರದ್ದೂ ಆದರ್ಶ ಪ್ರೇಮ ಯಾನವೇ.
icon

(1 / 9)

ಕರ್ನಾಟಕ ಸರ್ಕಾರದ ಗೃಹ ಸಚಿವ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಕನ್ಯಕಾ ಪರಮೇಶ್ವರಿ ಅವರನ್ನು ದಶಕಗಳ ಹಿಂದೆಯೇ ಪ್ರೇಮಿಸಿ ವಿವಾಹವಾದವರು. ಅವರದ್ದೂ ಆದರ್ಶ ಪ್ರೇಮ ಯಾನವೇ.

ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ಹಿರಿಯ ಸಚಿವರಾಗಿರುವ, ವಿಜಯಪುರ ಜಿಲ್ಲೆಯವರಾದ ಎಂ.ಬಿ.ಪಾಟೀಲ್‌ ಹಾಗೂ ಆಶಾ ಪಾಟೀಲ್‌ ಅವರದ್ದು ಪ್ರೇಮವಿವಾಹವೇ. ವಿಜಯಪುರದಲ್ಲಿ ಆ ಕಾಲಕ್ಕೆ ಪ್ರೇಮಿಸಿ ವಿವಾಹವಾದ ಪಾಟೀಲದ್ದು ಈಗಲೂ ಪ್ರೇಮ ಜೋಡಿಯೇ.
icon

(2 / 9)

ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ಹಿರಿಯ ಸಚಿವರಾಗಿರುವ, ವಿಜಯಪುರ ಜಿಲ್ಲೆಯವರಾದ ಎಂ.ಬಿ.ಪಾಟೀಲ್‌ ಹಾಗೂ ಆಶಾ ಪಾಟೀಲ್‌ ಅವರದ್ದು ಪ್ರೇಮವಿವಾಹವೇ. ವಿಜಯಪುರದಲ್ಲಿ ಆ ಕಾಲಕ್ಕೆ ಪ್ರೇಮಿಸಿ ವಿವಾಹವಾದ ಪಾಟೀಲದ್ದು ಈಗಲೂ ಪ್ರೇಮ ಜೋಡಿಯೇ.

ಮಾಜಿ ಸಿಎಂ ಗುಂಡೂರಾವ್‌ ಅವರ ಪುತ್ರ, ಸಚಿವರಾಗಿರುವ ದಿನೇಶ್‌ ಗುಂಡೂರಾವ್‌ ಅವರು ಧರ್ಮವನ್ನು ಮೀರಿದ ಪ್ರೇಮ. ಟಬು ಅವರನ್ನು ಮೂರು ದಶಕದ ಹಿಂದೆಯೇ ವರಿಸಿ ಪ್ರೇಮವಿವಾಹವಾದ ಈ ಜೋಡಿ ಈಗಲೂ ಮಾದರಿಯಾಗಿದ್ದಾರೆ.
icon

(3 / 9)

ಮಾಜಿ ಸಿಎಂ ಗುಂಡೂರಾವ್‌ ಅವರ ಪುತ್ರ, ಸಚಿವರಾಗಿರುವ ದಿನೇಶ್‌ ಗುಂಡೂರಾವ್‌ ಅವರು ಧರ್ಮವನ್ನು ಮೀರಿದ ಪ್ರೇಮ. ಟಬು ಅವರನ್ನು ಮೂರು ದಶಕದ ಹಿಂದೆಯೇ ವರಿಸಿ ಪ್ರೇಮವಿವಾಹವಾದ ಈ ಜೋಡಿ ಈಗಲೂ ಮಾದರಿಯಾಗಿದ್ದಾರೆ.

ಕರ್ನಾಟಕದ ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿರುವ, ಮಾಜಿ ಸಚಿವ ಬೈರೇಗೌಡ ಅವರ ಪುತ್ರ ಕೃಷ್ಣಬೈರೇಗೌಡ ಕೂಡ ಪ್ರೇಮಿಸಿ ವಿವಾಹವಾದವರು. ಐಟಿ ಉದ್ಯೊಗಿಯಾಗಿದ್ದ ಮೀನಾಕ್ಷಿ ಅವರನ್ನು ಕೃಷ್ಣಬೈರೇಗೌಡ ವರಿಸಿದರು.
icon

(4 / 9)

ಕರ್ನಾಟಕದ ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿರುವ, ಮಾಜಿ ಸಚಿವ ಬೈರೇಗೌಡ ಅವರ ಪುತ್ರ ಕೃಷ್ಣಬೈರೇಗೌಡ ಕೂಡ ಪ್ರೇಮಿಸಿ ವಿವಾಹವಾದವರು. ಐಟಿ ಉದ್ಯೊಗಿಯಾಗಿದ್ದ ಮೀನಾಕ್ಷಿ ಅವರನ್ನು ಕೃಷ್ಣಬೈರೇಗೌಡ ವರಿಸಿದರು.

ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್‌ ಖರ್ಗೆ ಅವರದ್ದೂ ಪ್ರೇಮ ವಿವಾಹವೇ. ಬೆಂಗಳೂರಿನಲ್ಲಿ ಡಿಪ್ಲೋಮಾ ಓದುವಾಗಲೇ ಪ್ರೇಮಪಾಶಕ್ಕೆ ಬಿದ್ದು ಶೃತಿ ಅವರನ್ನು ವಿವಾಹವಾದವರು.
icon

(5 / 9)

ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್‌ ಖರ್ಗೆ ಅವರದ್ದೂ ಪ್ರೇಮ ವಿವಾಹವೇ. ಬೆಂಗಳೂರಿನಲ್ಲಿ ಡಿಪ್ಲೋಮಾ ಓದುವಾಗಲೇ ಪ್ರೇಮಪಾಶಕ್ಕೆ ಬಿದ್ದು ಶೃತಿ ಅವರನ್ನು ವಿವಾಹವಾದವರು.

ಕಲಬುರಗಿ ಜಿಲ್ಲೆ ಜೇವರ್ಗಿ ಶಾಸಕ ಹಾಗೂ ಮಾಜಿ ಸಿಎಂ ಧರ್ಮಸಿಂಗ್‌ ಅವರ ಪುತ್ರ ಡಾ.ಅಜಯಸಿಂಗ್‌ ಕಾಲೇಜು ದಿನಗಳಲ್ಲಿಯೇ ಶ್ವೇತ ಅವರನ್ನು ಜಾತಿಯ ಎಲ್ಲೆ ಮೀರಿ ವಿವಾಹವಾದವರು. 
icon

(6 / 9)

ಕಲಬುರಗಿ ಜಿಲ್ಲೆ ಜೇವರ್ಗಿ ಶಾಸಕ ಹಾಗೂ ಮಾಜಿ ಸಿಎಂ ಧರ್ಮಸಿಂಗ್‌ ಅವರ ಪುತ್ರ ಡಾ.ಅಜಯಸಿಂಗ್‌ ಕಾಲೇಜು ದಿನಗಳಲ್ಲಿಯೇ ಶ್ವೇತ ಅವರನ್ನು ಜಾತಿಯ ಎಲ್ಲೆ ಮೀರಿ ವಿವಾಹವಾದವರು. 

ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕರು, ಸಚಿವರೂ ಆಗಿದ್ದ ಇಕ್ಬಾಲ್‌ ಅನ್ಸಾರಿ ಅವರದ್ದೂ ಪ್ರೇಮ ವಿವಾಹವೇ. ಅವರ ಪತ್ನಿ, ನಟಿ ಹಾಗು ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಪಂಚಮಿ.
icon

(7 / 9)

ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕರು, ಸಚಿವರೂ ಆಗಿದ್ದ ಇಕ್ಬಾಲ್‌ ಅನ್ಸಾರಿ ಅವರದ್ದೂ ಪ್ರೇಮ ವಿವಾಹವೇ. ಅವರ ಪತ್ನಿ, ನಟಿ ಹಾಗು ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಪಂಚಮಿ.

ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದ ಬಿಜೆಪಿ ಯುವ ನಾಯಕ ಪ್ರತಾಪ್‌ಸಿಂಹ ಕಾಲೇಜು ದಿನಗಳಲ್ಲಿಯೇ ಡಾ.ಅರ್ಪಿತಾ ಅವರನ್ನು ಪ್ರೇಮಿಸಿಯೇ ವಿವಾಹವಾದವರು.
icon

(8 / 9)

ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದ ಬಿಜೆಪಿ ಯುವ ನಾಯಕ ಪ್ರತಾಪ್‌ಸಿಂಹ ಕಾಲೇಜು ದಿನಗಳಲ್ಲಿಯೇ ಡಾ.ಅರ್ಪಿತಾ ಅವರನ್ನು ಪ್ರೇಮಿಸಿಯೇ ವಿವಾಹವಾದವರು.

ಕರ್ನಾಟಕ ಗ್ಯಾರಂಟಿಗಳ ಸಮಿತಿ ರಾಜ್ಯ ಉಪಾಧ್ಯಕ್ಷೆ, ಮೈಸೂರು ಜಿಪಂ ಅಧ್ಯಕ್ಷೆಯೂ ಆಗಿದ್ದ ಡಾ.ಪುಷ್ಪಾ ಅವರದ್ದು ಪ್ರೇಮ ವಿವಾಹ. ಪುಷ್ಪ ಅವರ ಪತಿ ಉದ್ಯಮಿ, ಚಿತ್ರ ನಿರ್ಮಾಪಕ ಅಮರನಾಥ್‌. ಹುಣಸೂರು ಶಾಸಕರಾಗಿದ್ದ ಎಚ್‌ಪಿ ಮಂಜುನಾಥ್‌ ಅವರ ಸಹೋದರ.
icon

(9 / 9)

ಕರ್ನಾಟಕ ಗ್ಯಾರಂಟಿಗಳ ಸಮಿತಿ ರಾಜ್ಯ ಉಪಾಧ್ಯಕ್ಷೆ, ಮೈಸೂರು ಜಿಪಂ ಅಧ್ಯಕ್ಷೆಯೂ ಆಗಿದ್ದ ಡಾ.ಪುಷ್ಪಾ ಅವರದ್ದು ಪ್ರೇಮ ವಿವಾಹ. ಪುಷ್ಪ ಅವರ ಪತಿ ಉದ್ಯಮಿ, ಚಿತ್ರ ನಿರ್ಮಾಪಕ ಅಮರನಾಥ್‌. ಹುಣಸೂರು ಶಾಸಕರಾಗಿದ್ದ ಎಚ್‌ಪಿ ಮಂಜುನಾಥ್‌ ಅವರ ಸಹೋದರ.


ಇತರ ಗ್ಯಾಲರಿಗಳು