Viral News: ಪ್ಯಾರಾಗ್ಲೈಡಿಂಗ್‌ನಲ್ಲಿ ಪರೀಕ್ಷಾಕೇಂದ್ರಕ್ಕೆ ಬಂದ ಮಹಾರಾಷ್ಟ್ರ ವಿದ್ಯಾರ್ಥಿ; ಸಂಚಾರ ದಟ್ಟಣೆ ತಪ್ಪಿಸಲು ಕಂಡುಕೊಂಡ ಭಿನ್ನಮಾರ್ಗ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Viral News: ಪ್ಯಾರಾಗ್ಲೈಡಿಂಗ್‌ನಲ್ಲಿ ಪರೀಕ್ಷಾಕೇಂದ್ರಕ್ಕೆ ಬಂದ ಮಹಾರಾಷ್ಟ್ರ ವಿದ್ಯಾರ್ಥಿ; ಸಂಚಾರ ದಟ್ಟಣೆ ತಪ್ಪಿಸಲು ಕಂಡುಕೊಂಡ ಭಿನ್ನಮಾರ್ಗ

Viral News: ಪ್ಯಾರಾಗ್ಲೈಡಿಂಗ್‌ನಲ್ಲಿ ಪರೀಕ್ಷಾಕೇಂದ್ರಕ್ಕೆ ಬಂದ ಮಹಾರಾಷ್ಟ್ರ ವಿದ್ಯಾರ್ಥಿ; ಸಂಚಾರ ದಟ್ಟಣೆ ತಪ್ಪಿಸಲು ಕಂಡುಕೊಂಡ ಭಿನ್ನಮಾರ್ಗ

  • Viral News: ಕಷ್ಟಕ್ಕೆ ಸಿಲುಕಿದಾಗ ಹಲವು ದಾರಿಗಳು ಸಿಗುತ್ತವೆ. ಸೂಕ್ತ ದಾರಿ ಕಂಡುಕೊಳ್ಳಬೇಕು ಎನ್ನುವುದಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮಹಾರಾಷ್ಟ್ರದ ವಿದ್ಯಾರ್ಥಿ ಕಂಡುಕೊಂಡ ಮಾರ್ಗ ಗಮನ ಸೆಳೆದಿದೆ.

ಈತನ ಹೆಸರು ಸರ್ಮಥ್‌ ಮಹಾಂಗಡೆ. ಊರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಲಿ ತಾಲ್ಲೂಕಿನ ಪಸರಾಣಿ. ಪ್ರಥಮ ಬಿಕಾಂ ವಿದ್ಯಾರ್ಥಿ. ಇತ್ತೀಚಿಗೆ ತನ್ನ ಪರೀಕ್ಷಾ ಕೇಂದ್ರಕ್ಕೆ ಆತ ಹೋಗಿದ್ದು ಪ್ಯಾರಾ ಗ್ಲೈಡಿಂಗ್‌ ಮೂಲಕ.
icon

(1 / 6)

ಈತನ ಹೆಸರು ಸರ್ಮಥ್‌ ಮಹಾಂಗಡೆ. ಊರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಲಿ ತಾಲ್ಲೂಕಿನ ಪಸರಾಣಿ. ಪ್ರಥಮ ಬಿಕಾಂ ವಿದ್ಯಾರ್ಥಿ. ಇತ್ತೀಚಿಗೆ ತನ್ನ ಪರೀಕ್ಷಾ ಕೇಂದ್ರಕ್ಕೆ ಆತ ಹೋಗಿದ್ದು ಪ್ಯಾರಾ ಗ್ಲೈಡಿಂಗ್‌ ಮೂಲಕ.

ಸಮರ್ಥ್‌ ಪರೀಕ್ಷೆಗೆ ಅಂದು ಹೋಗಬೇಕಿತ್ತು. ಆದರೆ ಪರೀಕ್ಷೆ ಸಮಯ ಬದಲಾಗಿರುವುದು ತಡವಾಗಿ ತಿಳಿದಿತ್ತು. ಗುಡ್ಡಗಾಡು ಪ್ರದೇಶದಲ್ಲಿರುವ ತನ್ನ ಊರಿನಿಂದ ಹದಿನೈದು ಕಿಮಿ. ದೂರದ ಪಂಚಗಣಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿತ್ತು. 
icon

(2 / 6)

ಸಮರ್ಥ್‌ ಪರೀಕ್ಷೆಗೆ ಅಂದು ಹೋಗಬೇಕಿತ್ತು. ಆದರೆ ಪರೀಕ್ಷೆ ಸಮಯ ಬದಲಾಗಿರುವುದು ತಡವಾಗಿ ತಿಳಿದಿತ್ತು. ಗುಡ್ಡಗಾಡು ಪ್ರದೇಶದಲ್ಲಿರುವ ತನ್ನ ಊರಿನಿಂದ ಹದಿನೈದು ಕಿಮಿ. ದೂರದ ಪಂಚಗಣಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿತ್ತು. 

ಆಗಲೇ ಸಮಯ ಆಗಿದೆ. ವಾಹನದಲ್ಲಿ ಹೋದರೆ ಸಂಚಾರದಲ್ಲಿ ಸಿಲುಕಬೇಕು ಎನ್ನುವ ಆತಂಕ. ತನ್ನ ಊರು ಪ್ರವಾಸಿ ತಾಣವಾಗಿರುವುದರಿಂದ ಅಲ್ಲಿ ನಿತ್ಯ ಸಹಸ್ರಾರು ವಾಹನ ಬರುತ್ತವೆ. ಇದಕ್ಕಾಗಿ ಆತನಿಗೆ ಹೊಳೆದಿದ್ದು ಪ್ಯಾರಾ ಗ್ಲೈಡಿಂಗ್‌. 
icon

(3 / 6)

ಆಗಲೇ ಸಮಯ ಆಗಿದೆ. ವಾಹನದಲ್ಲಿ ಹೋದರೆ ಸಂಚಾರದಲ್ಲಿ ಸಿಲುಕಬೇಕು ಎನ್ನುವ ಆತಂಕ. ತನ್ನ ಊರು ಪ್ರವಾಸಿ ತಾಣವಾಗಿರುವುದರಿಂದ ಅಲ್ಲಿ ನಿತ್ಯ ಸಹಸ್ರಾರು ವಾಹನ ಬರುತ್ತವೆ. ಇದಕ್ಕಾಗಿ ಆತನಿಗೆ ಹೊಳೆದಿದ್ದು ಪ್ಯಾರಾ ಗ್ಲೈಡಿಂಗ್‌. 

ತನ್ನ ಊರಿನ ಸಮೀಪದಲ್ಲಿಯೇ ಪ್ಯಾರಾ ಗ್ಲೈಡಿಂಗ್‌ ಪ್ರವಾಸೋದ್ಯಮ ಚಟುವಟಿಕೆ ನಡೆಯುತ್ತದೆ. ಅದನ್ನು ನಡೆಸುವ ಗೋವಿಂದ ಯಾವ್ಳೆ ಎನ್ನುವ  ಸ್ನೇಹಿತನಿಗೆ ಸಮರ್ಥ್‌ ಕರೆ ಮಾಡಿ ಪರಿಸ್ಥಿತಿ ವಿವರಿಸಿದ.
icon

(4 / 6)

ತನ್ನ ಊರಿನ ಸಮೀಪದಲ್ಲಿಯೇ ಪ್ಯಾರಾ ಗ್ಲೈಡಿಂಗ್‌ ಪ್ರವಾಸೋದ್ಯಮ ಚಟುವಟಿಕೆ ನಡೆಯುತ್ತದೆ. ಅದನ್ನು ನಡೆಸುವ ಗೋವಿಂದ ಯಾವ್ಳೆ ಎನ್ನುವ  ಸ್ನೇಹಿತನಿಗೆ ಸಮರ್ಥ್‌ ಕರೆ ಮಾಡಿ ಪರಿಸ್ಥಿತಿ ವಿವರಿಸಿದ.

ಸಮರ್ಥ ಮನೆಯಿಂದ ಬರುವ ಹೊತ್ತಿಗೆ ಈತನಿಗಾಗಿಯೇ ಪ್ಯಾರಾಗ್ಲೈಡರ್‌ ಒಂದು ಸಿದ್ದವಿತ್ತು. ಅದನ್ನು ಟ್ರೇನರ್‌ ಒಬ್ಬರ ಸಹಾಯದಿಂದ ಸಮರ್ಥ್‌ ಏರಿದ.
icon

(5 / 6)

ಸಮರ್ಥ ಮನೆಯಿಂದ ಬರುವ ಹೊತ್ತಿಗೆ ಈತನಿಗಾಗಿಯೇ ಪ್ಯಾರಾಗ್ಲೈಡರ್‌ ಒಂದು ಸಿದ್ದವಿತ್ತು. ಅದನ್ನು ಟ್ರೇನರ್‌ ಒಬ್ಬರ ಸಹಾಯದಿಂದ ಸಮರ್ಥ್‌ ಏರಿದ.

ಇಬ್ಬರಿದ್ದ ಪ್ಯಾರಾಗ್ಲೈಡಿಂಗ್‌ ಮೂಲಕ ಹೊರಟು ಬರೀ ಹದಿನೈದು ನಿಮಿಷದಲ್ಲಿ ಕಾಲೇಜು ಅಂಗಳ ತಲುಪಿತ್ತು. ಸಮರ್ಥ್‌ನನ್ನು ಅಲ್ಲಿಗೆ ಇಳಿಸಲಾಯಿತು. ಆತ ನಿಗದಿತ ಅವಧಿಗಿಂತ ಮೊದಲೇ ಪರೀಕ್ಷಾ ಕೇಂದ್ರ ತಲುಪಿ ಸುಸೂತ್ರವಾಗಿ ಪರೀಕ್ಷೆಯನ್ನೂ ಎದುರಿಸಿದ. ಈ ಸುದ್ದಿ ಈಗ ಭಾರೀ ವೈರಲ್‌ ಆಗಿದೆ.
icon

(6 / 6)

ಇಬ್ಬರಿದ್ದ ಪ್ಯಾರಾಗ್ಲೈಡಿಂಗ್‌ ಮೂಲಕ ಹೊರಟು ಬರೀ ಹದಿನೈದು ನಿಮಿಷದಲ್ಲಿ ಕಾಲೇಜು ಅಂಗಳ ತಲುಪಿತ್ತು. ಸಮರ್ಥ್‌ನನ್ನು ಅಲ್ಲಿಗೆ ಇಳಿಸಲಾಯಿತು. ಆತ ನಿಗದಿತ ಅವಧಿಗಿಂತ ಮೊದಲೇ ಪರೀಕ್ಷಾ ಕೇಂದ್ರ ತಲುಪಿ ಸುಸೂತ್ರವಾಗಿ ಪರೀಕ್ಷೆಯನ್ನೂ ಎದುರಿಸಿದ. ಈ ಸುದ್ದಿ ಈಗ ಭಾರೀ ವೈರಲ್‌ ಆಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು