Viral News: ಬೆಂಗಳೂರು ಹೆದ್ದಾರಿಯಲ್ಲಿ ರಾಂಗ್‌ ಸೈಡ್‌ ಓಡಿಸಿದ ಬಸ್‌ ಮಂಡ್ಯಕ್ಕೆ ತಂದು ಚಾಲಕಗೆ ಭಾರೀ ದಂಡ, ಹೀಗಿತ್ತು ಪೊಲೀಸರ ಕಾರ್ಯಾಚರಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Viral News: ಬೆಂಗಳೂರು ಹೆದ್ದಾರಿಯಲ್ಲಿ ರಾಂಗ್‌ ಸೈಡ್‌ ಓಡಿಸಿದ ಬಸ್‌ ಮಂಡ್ಯಕ್ಕೆ ತಂದು ಚಾಲಕಗೆ ಭಾರೀ ದಂಡ, ಹೀಗಿತ್ತು ಪೊಲೀಸರ ಕಾರ್ಯಾಚರಣೆ

Viral News: ಬೆಂಗಳೂರು ಹೆದ್ದಾರಿಯಲ್ಲಿ ರಾಂಗ್‌ ಸೈಡ್‌ ಓಡಿಸಿದ ಬಸ್‌ ಮಂಡ್ಯಕ್ಕೆ ತಂದು ಚಾಲಕಗೆ ಭಾರೀ ದಂಡ, ಹೀಗಿತ್ತು ಪೊಲೀಸರ ಕಾರ್ಯಾಚರಣೆ

  • Wrong Side Driving ಈಗ ಸಾಮಾಜಿಕ ಮಾಧ್ಯಮಗಳ ಕಣ್ಣಿಂದ ತಪ್ಪಿಸಿಕೊಳ್ಳುವುದು ಕಷ್ಟವೇ. ವಿಆರ್‌ಎಲ್‌ ಬಸ್‌ ಚಾಲಕ ತಪ್ಪು ದಾರಿಯಲ್ಲಿ ಬಸ್‌ ಚಲಾಯಿಸಿ ಸಿಕ್ಕಿಬಿದ್ದಿದ್ದಾನೆ. ಕರ್ನಾಟಕ ಪೊಲೀಸರು ಬಸ್‌ ಹಿಡಿದು ತಂದದ್ದು ಹೇಗೆ. ಇಲ್ಲಿದೆ ಚಿತ್ರನೋಟ..

ನಾಲ್ಕು ದಿನದ ಹಿಂದೆ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ವಿಆರ್‌ಎಲ್‌ ಬಸ್‌ ಮುಂಬೈ ಕಡೆಗೆ ಹೊರಟಿತ್ತು ಮಂಡ್ಯ ಸಮೀಪ ಬಸ್‌ ವಿರುದ್ದ ದಿಕ್ಕಿನಲ್ಲಿ ವೇಗವಾಗಿ ಚಲಿಸಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿತ್ತು. 
icon

(1 / 6)

ನಾಲ್ಕು ದಿನದ ಹಿಂದೆ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ವಿಆರ್‌ಎಲ್‌ ಬಸ್‌ ಮುಂಬೈ ಕಡೆಗೆ ಹೊರಟಿತ್ತು ಮಂಡ್ಯ ಸಮೀಪ ಬಸ್‌ ವಿರುದ್ದ ದಿಕ್ಕಿನಲ್ಲಿ ವೇಗವಾಗಿ ಚಲಿಸಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿತ್ತು. 

ಕರ್ನಾಟಕದ ಹಳೆಯ ಸಾರಿಗೆ ಸೇವಾದಾರರಾದ ವಿಆರ್‌ಎಲ್‌ ಎಂದರೆ ಶಿಸ್ತು. ಆದರೆ ಚಾಲಕ ರಸ್ತೆ ದಾಟುವ ಭರದಲ್ಲಿ ತಪ್ಪು ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
icon

(2 / 6)

ಕರ್ನಾಟಕದ ಹಳೆಯ ಸಾರಿಗೆ ಸೇವಾದಾರರಾದ ವಿಆರ್‌ಎಲ್‌ ಎಂದರೆ ಶಿಸ್ತು. ಆದರೆ ಚಾಲಕ ರಸ್ತೆ ದಾಟುವ ಭರದಲ್ಲಿ ತಪ್ಪು ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್‌ ಆಗಿದ್ದನ್ನು ಗಮನಿಸಿದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಕ್ರಮಕ್ಕೆ ಮಂಡ್ಯ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೇ ಎಕ್ಸ್‌ನಲ್ಲೂ ಪೋಸ್ಟ್‌ ಮಾಡಿ ಪ್ರಯಾಣಿಕರನ್ನು ತುಂಬಿಸಿಕೊಂಡು ವಿರುದ್ದ ದಿಕ್ಕಿನಲ್ಲಿ ಬಸ್‌ ಹೊರಟಿದ್ದ ಕ್ರಮ ತಪ್ಪು ಎಂದು ಹೇಳಿದ್ದರು.
icon

(3 / 6)

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್‌ ಆಗಿದ್ದನ್ನು ಗಮನಿಸಿದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಕ್ರಮಕ್ಕೆ ಮಂಡ್ಯ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೇ ಎಕ್ಸ್‌ನಲ್ಲೂ ಪೋಸ್ಟ್‌ ಮಾಡಿ ಪ್ರಯಾಣಿಕರನ್ನು ತುಂಬಿಸಿಕೊಂಡು ವಿರುದ್ದ ದಿಕ್ಕಿನಲ್ಲಿ ಬಸ್‌ ಹೊರಟಿದ್ದ ಕ್ರಮ ತಪ್ಪು ಎಂದು ಹೇಳಿದ್ದರು.

ಮಂಡ್ಯ ಪೊಲೀಸರು ಬಸ್‌ನ ವಿವರಗಳನ್ನು ಪಡೆದುಕೊಂಡು ಮಾಹಿತಿ ಕಲೆ ಹಾಕಿದ್ದರು.ಬಸ್‌ ಮುಂಬೈ ತಲುಪಿದ್ದು ಗೊತ್ತಾಗಿತ್ತು. ಚಾಲಕ ಪ್ರಶಾಂತನನ್ನು ಸಂಪರ್ಕಿಸಿದ ಪೊಲೀಸರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಬರುವಂತೆ ಸೂಚಿಸಿದ್ದರು.
icon

(4 / 6)

ಮಂಡ್ಯ ಪೊಲೀಸರು ಬಸ್‌ನ ವಿವರಗಳನ್ನು ಪಡೆದುಕೊಂಡು ಮಾಹಿತಿ ಕಲೆ ಹಾಕಿದ್ದರು.ಬಸ್‌ ಮುಂಬೈ ತಲುಪಿದ್ದು ಗೊತ್ತಾಗಿತ್ತು. ಚಾಲಕ ಪ್ರಶಾಂತನನ್ನು ಸಂಪರ್ಕಿಸಿದ ಪೊಲೀಸರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಬರುವಂತೆ ಸೂಚಿಸಿದ್ದರು.

ಬಸ್‌ ಚಾಲಕ ಪ್ರಶಾಂತ್‌ ಹಾಗೂ ಸಹ ಚಾಲಕ ನೀಲಪ್ಪ ಬಸ್‌ ಸಮೇತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಆಗಮಿಸಿದ್ದರು. ಅಚಾತುರ್ಯದಿಂದ ಹೀಗೆ ಆಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
icon

(5 / 6)

ಬಸ್‌ ಚಾಲಕ ಪ್ರಶಾಂತ್‌ ಹಾಗೂ ಸಹ ಚಾಲಕ ನೀಲಪ್ಪ ಬಸ್‌ ಸಮೇತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಆಗಮಿಸಿದ್ದರು. ಅಚಾತುರ್ಯದಿಂದ ಹೀಗೆ ಆಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಆನ್‌ಲೈನ್‌ ಮೂಲಕವೇ ಬಸ್‌ನ ಇರುವಿಕೆ ಪತ್ತೆ ಮಾಡಿದ್ದ ಮಂಡ್ಯ ಸಂಚಾರ ಠಾಣೆ ಪೊಲೀಸರು ಎರಡು ಸಾವಿರ ರೂ. ದಂಡವನ್ನು ಚಾಲಕನಿಗೆ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. 
icon

(6 / 6)

ಆನ್‌ಲೈನ್‌ ಮೂಲಕವೇ ಬಸ್‌ನ ಇರುವಿಕೆ ಪತ್ತೆ ಮಾಡಿದ್ದ ಮಂಡ್ಯ ಸಂಚಾರ ಠಾಣೆ ಪೊಲೀಸರು ಎರಡು ಸಾವಿರ ರೂ. ದಂಡವನ್ನು ಚಾಲಕನಿಗೆ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. 


ಇತರ ಗ್ಯಾಲರಿಗಳು