ಪಂದ್ಯಶ್ರೇಷ್ಠ ಪ್ರಶಸ್ತಿ ನನಗಲ್ಲ, ಈತನಿಗೆ ಕೊಡಬೇಕಿತ್ತು; ವಿರಾಟ್ ಕೊಹ್ಲಿ ಅರ್ಪಿಸಿದ್ದು ಯಾರಿಗೆ?
ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯ ಗೆದ್ದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ವಿರಾಟ್ ಕೊಹ್ಲಿ ಇದು ನನಗೆ ಸೇರಬೇಕಿದ್ದ ಪ್ರಶಸ್ತಿ ಅಲ್ಲ ಎಂದು ಹೇಳಿದ್ದಾರೆ.
(1 / 6)
ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಲಿಗೆ ಇದೇ ತಂಡದ ವಿರುದ್ಧ ಆರ್ಸಿಬಿ ಸೇಡು ತೀರಿಸಿಕೊಂಡಿದೆ.
(AP)(2 / 6)
ಚಂಢೀಗಡದ ಮುಲ್ಲನ್ಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ 159 ರನ್ ಕಲೆ ಹಾಕಿತು. ಇದೀಗ ಅಂಕಪಟ್ಟಿಯಲ್ಲಿ ಬೆಂಗಳೂರು ತಂಡ 3ನೇ ಸ್ಥಾನಕ್ಕೇರಿದೆ.
(PTI)(3 / 6)
ಪಂದ್ಯದಲ್ಲಿ ಮಿಂಚಿದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು 54 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 73 ರನ್ ಬಾರಿಸಿದರು. ಆದರೆ ನನಗಲ್ಲ, ಈತನಿಗೆ ಪಂದ್ಯಶ್ರೇಷ್ಠ ನೀಡಬೇಕಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
(REUTERS)(4 / 6)
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಕೊಹ್ಲಿ, ನಮಗೆ ಬಹಳ ಮುಖ್ಯವಾದ ಪಂದ್ಯ ಇದಾಗಿತ್ತು. ಅರ್ಹತೆಯ ವಿಷಯದಲ್ಲಿ 2 ಅಂಕಗಳು ಭಾರಿ ವ್ಯತ್ಯಾಸ ಉಂಟು ಮಾಡಬಹುದು. ನಾವು ತವರಿನಲ್ಲಿ ಸೋತರೂ ಮನೆಯಿಂದ ಹೊರಗಡೆ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಪ್ರತಿ ಪಂದ್ಯದಲ್ಲೂ 2 ಅಂಕ ಗಳಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
(PTI)(5 / 6)
ನಾನು ಬ್ಯಾಟಿಂಗ್ನಲ್ಲಿ ವೇಗದ ಕಾಯ್ದುಕೊಳ್ಳಲು ಬಯಸಿದ್ದೆ. ಆದರೆ ಮತ್ತೊಂದು ಎಂಡ್ನಲ್ಲಿ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಲು ಪ್ರಾರಂಭಿಸಿದರು. ಇದು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಹಾಗಾಗಿ, ಅವರಿಗೆ (ಪಡಿಕ್ಕಲ್) ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು. ನನಗೆ ಈ ಪ್ರಶಸ್ತಿ ಕೊಟ್ಟಿದ್ದೇಕೆ ಎಂದು ಅರ್ಥವಾಗುತ್ತಿಲ್ಲ. ಈ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ದೇವ್ ಅರ್ಹರು ಎಂದು ಹೇಳಿದ್ದಾರೆ.
(HT_PRINT)ಇತರ ಗ್ಯಾಲರಿಗಳು