ಪಂದ್ಯಶ್ರೇಷ್ಠ ಪ್ರಶಸ್ತಿ ನನಗಲ್ಲ, ಈತನಿಗೆ ಕೊಡಬೇಕಿತ್ತು; ವಿರಾಟ್ ಕೊಹ್ಲಿ ಅರ್ಪಿಸಿದ್ದು ಯಾರಿಗೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂದ್ಯಶ್ರೇಷ್ಠ ಪ್ರಶಸ್ತಿ ನನಗಲ್ಲ, ಈತನಿಗೆ ಕೊಡಬೇಕಿತ್ತು; ವಿರಾಟ್ ಕೊಹ್ಲಿ ಅರ್ಪಿಸಿದ್ದು ಯಾರಿಗೆ?

ಪಂದ್ಯಶ್ರೇಷ್ಠ ಪ್ರಶಸ್ತಿ ನನಗಲ್ಲ, ಈತನಿಗೆ ಕೊಡಬೇಕಿತ್ತು; ವಿರಾಟ್ ಕೊಹ್ಲಿ ಅರ್ಪಿಸಿದ್ದು ಯಾರಿಗೆ?

ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯ ಗೆದ್ದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ವಿರಾಟ್ ಕೊಹ್ಲಿ ಇದು ನನಗೆ ಸೇರಬೇಕಿದ್ದ ಪ್ರಶಸ್ತಿ ಅಲ್ಲ ಎಂದು ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಲಿಗೆ ಇದೇ ತಂಡದ ವಿರುದ್ಧ ಆರ್​ಸಿಬಿ ಸೇಡು ತೀರಿಸಿಕೊಂಡಿದೆ.
icon

(1 / 6)

ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಲಿಗೆ ಇದೇ ತಂಡದ ವಿರುದ್ಧ ಆರ್​ಸಿಬಿ ಸೇಡು ತೀರಿಸಿಕೊಂಡಿದೆ.
(AP)

ಚಂಢೀಗಡದ ಮುಲ್ಲನ್​ಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 159 ರನ್ ಕಲೆ ಹಾಕಿತು. ಇದೀಗ ಅಂಕಪಟ್ಟಿಯಲ್ಲಿ ಬೆಂಗಳೂರು ತಂಡ 3ನೇ ಸ್ಥಾನಕ್ಕೇರಿದೆ.
icon

(2 / 6)

ಚಂಢೀಗಡದ ಮುಲ್ಲನ್​ಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 159 ರನ್ ಕಲೆ ಹಾಕಿತು. ಇದೀಗ ಅಂಕಪಟ್ಟಿಯಲ್ಲಿ ಬೆಂಗಳೂರು ತಂಡ 3ನೇ ಸ್ಥಾನಕ್ಕೇರಿದೆ.
(PTI)

ಪಂದ್ಯದಲ್ಲಿ ಮಿಂಚಿದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು 54 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 73 ರನ್ ಬಾರಿಸಿದರು. ಆದರೆ ನನಗಲ್ಲ, ಈತನಿಗೆ ಪಂದ್ಯಶ್ರೇಷ್ಠ ನೀಡಬೇಕಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
icon

(3 / 6)

ಪಂದ್ಯದಲ್ಲಿ ಮಿಂಚಿದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು 54 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 73 ರನ್ ಬಾರಿಸಿದರು. ಆದರೆ ನನಗಲ್ಲ, ಈತನಿಗೆ ಪಂದ್ಯಶ್ರೇಷ್ಠ ನೀಡಬೇಕಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
(REUTERS)

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಕೊಹ್ಲಿ, ನಮಗೆ ಬಹಳ ಮುಖ್ಯವಾದ ಪಂದ್ಯ ಇದಾಗಿತ್ತು. ಅರ್ಹತೆಯ ವಿಷಯದಲ್ಲಿ 2 ಅಂಕಗಳು ಭಾರಿ ವ್ಯತ್ಯಾಸ ಉಂಟು ಮಾಡಬಹುದು. ನಾವು ತವರಿನಲ್ಲಿ ಸೋತರೂ ಮನೆಯಿಂದ ಹೊರಗಡೆ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಪ್ರತಿ ಪಂದ್ಯದಲ್ಲೂ 2 ಅಂಕ ಗಳಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
icon

(4 / 6)

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಮಾತನಾಡಿದ ಕೊಹ್ಲಿ, ನಮಗೆ ಬಹಳ ಮುಖ್ಯವಾದ ಪಂದ್ಯ ಇದಾಗಿತ್ತು. ಅರ್ಹತೆಯ ವಿಷಯದಲ್ಲಿ 2 ಅಂಕಗಳು ಭಾರಿ ವ್ಯತ್ಯಾಸ ಉಂಟು ಮಾಡಬಹುದು. ನಾವು ತವರಿನಲ್ಲಿ ಸೋತರೂ ಮನೆಯಿಂದ ಹೊರಗಡೆ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಪ್ರತಿ ಪಂದ್ಯದಲ್ಲೂ 2 ಅಂಕ ಗಳಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
(PTI)

ನಾನು ಬ್ಯಾಟಿಂಗ್​ನಲ್ಲಿ ವೇಗದ ಕಾಯ್ದುಕೊಳ್ಳಲು ಬಯಸಿದ್ದೆ. ಆದರೆ ಮತ್ತೊಂದು ಎಂಡ್​ನಲ್ಲಿ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಲು ಪ್ರಾರಂಭಿಸಿದರು. ಇದು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಹಾಗಾಗಿ, ಅವರಿಗೆ (ಪಡಿಕ್ಕಲ್​) ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು. ನನಗೆ ಈ ಪ್ರಶಸ್ತಿ ಕೊಟ್ಟಿದ್ದೇಕೆ ಎಂದು ಅರ್ಥವಾಗುತ್ತಿಲ್ಲ. ಈ ಪ್ಲೇಯರ್​ ಆಫ್ ದ ಮ್ಯಾಚ್ ಪ್ರಶಸ್ತಿಗೆ ದೇವ್ ಅರ್ಹರು ಎಂದು ಹೇಳಿದ್ದಾರೆ.
icon

(5 / 6)

ನಾನು ಬ್ಯಾಟಿಂಗ್​ನಲ್ಲಿ ವೇಗದ ಕಾಯ್ದುಕೊಳ್ಳಲು ಬಯಸಿದ್ದೆ. ಆದರೆ ಮತ್ತೊಂದು ಎಂಡ್​ನಲ್ಲಿ ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ನಡೆಸಲು ಪ್ರಾರಂಭಿಸಿದರು. ಇದು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಹಾಗಾಗಿ, ಅವರಿಗೆ (ಪಡಿಕ್ಕಲ್​) ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು. ನನಗೆ ಈ ಪ್ರಶಸ್ತಿ ಕೊಟ್ಟಿದ್ದೇಕೆ ಎಂದು ಅರ್ಥವಾಗುತ್ತಿಲ್ಲ. ಈ ಪ್ಲೇಯರ್​ ಆಫ್ ದ ಮ್ಯಾಚ್ ಪ್ರಶಸ್ತಿಗೆ ದೇವ್ ಅರ್ಹರು ಎಂದು ಹೇಳಿದ್ದಾರೆ.
(HT_PRINT)

ಟಿ20 ಕ್ರಿಕೆಟ್​ ರನ್ ಚೇಸ್​ನಲ್ಲಿ ಉತ್ತಮ ಜೊತೆಯಾಟ ಸಾಕು. ಇದು ಪಂದ್ಯದ ದಿಕ್ಕನ್ನೇ ಬದಲಿಸುತ್ತದೆ. ಅಂತಹದೊಂದು ಜೊತೆಯಾಟ ದೇವದತ್ ಪಡಿಕ್ಕಲ್ ಅವರಿಂದ ಬಂದಿದೆ ಎಂದು ಕೊಹ್ಲಿ ಅವರು ಡಿಡಿಪಿ ಜೊತೆಗಿನ ಆಟದ ಕುರಿತು ಮಾತನಾಡಿದ್ದಾರೆ.
icon

(6 / 6)

ಟಿ20 ಕ್ರಿಕೆಟ್​ ರನ್ ಚೇಸ್​ನಲ್ಲಿ ಉತ್ತಮ ಜೊತೆಯಾಟ ಸಾಕು. ಇದು ಪಂದ್ಯದ ದಿಕ್ಕನ್ನೇ ಬದಲಿಸುತ್ತದೆ. ಅಂತಹದೊಂದು ಜೊತೆಯಾಟ ದೇವದತ್ ಪಡಿಕ್ಕಲ್ ಅವರಿಂದ ಬಂದಿದೆ ಎಂದು ಕೊಹ್ಲಿ ಅವರು ಡಿಡಿಪಿ ಜೊತೆಗಿನ ಆಟದ ಕುರಿತು ಮಾತನಾಡಿದ್ದಾರೆ.
(REUTERS)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು