ಮೈಸೂರು ದಸರಾ ಗಜಪಡೆಯ ತೂಕ ಪರೀಕ್ಷೆ; ಕ್ಯಾಪ್ಟನ್ ಅಭಿಮನ್ಯುವೇ ನಂ 1, ಉಳಿದ ಆನೆಗಳ ತೂಕ ಎಷ್ಟೆಷ್ಟಿದೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ದಸರಾ ಗಜಪಡೆಯ ತೂಕ ಪರೀಕ್ಷೆ; ಕ್ಯಾಪ್ಟನ್ ಅಭಿಮನ್ಯುವೇ ನಂ 1, ಉಳಿದ ಆನೆಗಳ ತೂಕ ಎಷ್ಟೆಷ್ಟಿದೆ?

ಮೈಸೂರು ದಸರಾ ಗಜಪಡೆಯ ತೂಕ ಪರೀಕ್ಷೆ; ಕ್ಯಾಪ್ಟನ್ ಅಭಿಮನ್ಯುವೇ ನಂ 1, ಉಳಿದ ಆನೆಗಳ ತೂಕ ಎಷ್ಟೆಷ್ಟಿದೆ?

  • Mysuru Dasara 2024: ಮೈಸೂರು ದಸರಾಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಕಾಡಿನಿಂದ ನಾಡಿಗೆ ಬಂದಿರುವ ದಸರಾ ಗಜಪಡೆ ತೂಕ ಪರೀಕ್ಷೆ ನಡೆಸಲಾಯಿತು. ಯಾವ ಆನೆ ಎಷ್ಟು ತೂಕ ಇದೆ? ಇಲ್ಲಿದೆ ವಿವರ.

ಕಾಡಿನಿಂದ ನಾಡಿಗೆ ಬಂದಿರುವ ಕ್ಯಾಪ್ಟನ್​ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದು (ಆಗಸ್ಟ್​ 24) ತೂಕ ಪರೀಕ್ಷೆ ನಡೆಯಿತು.
icon

(1 / 9)

ಕಾಡಿನಿಂದ ನಾಡಿಗೆ ಬಂದಿರುವ ಕ್ಯಾಪ್ಟನ್​ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದು (ಆಗಸ್ಟ್​ 24) ತೂಕ ಪರೀಕ್ಷೆ ನಡೆಯಿತು.

ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ, ಎಲೆಕ್ಟ್ರಿಕ್ ತೂಕ ಮಾಪನ ಕೇಂದ್ರದಲ್ಲಿ 9 ಆನೆಗಳನ್ನು ತೂಕ ಮಾಡಲಾಯಿತು.
icon

(2 / 9)

ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ, ಎಲೆಕ್ಟ್ರಿಕ್ ತೂಕ ಮಾಪನ ಕೇಂದ್ರದಲ್ಲಿ 9 ಆನೆಗಳನ್ನು ತೂಕ ಮಾಡಲಾಯಿತು.

ಈ 9 ಆನೆಗಳ ಪೈಕಿ ಕ್ಯಾಪ್ಟನ್​ ಅಭಿಮನ್ಯುನೇ ಅತಿ ಹೆಚ್ಚು ತೂಕ ಇದ್ದಾನೆ. ಅಭಿಮನ್ಯು 5,560 ಕೆಜಿ ತೂಕ ಹೊಂದಿದ್ದಾನೆ. ಉಳಿದ ಆನೆಗಳಿಗಿಂತ ಅಧಿಕ ತೂಕ ಹೊಂದಿದ್ದಾನೆ.
icon

(3 / 9)

ಈ 9 ಆನೆಗಳ ಪೈಕಿ ಕ್ಯಾಪ್ಟನ್​ ಅಭಿಮನ್ಯುನೇ ಅತಿ ಹೆಚ್ಚು ತೂಕ ಇದ್ದಾನೆ. ಅಭಿಮನ್ಯು 5,560 ಕೆಜಿ ತೂಕ ಹೊಂದಿದ್ದಾನೆ. ಉಳಿದ ಆನೆಗಳಿಗಿಂತ ಅಧಿಕ ತೂಕ ಹೊಂದಿದ್ದಾನೆ.

ಉಳಿದಂತೆ ವರಲಕ್ಷ್ಮಿ 3,495 ತೂಕ, ಭೀಮ 4,945, ಏಕಲವ್ಯ 4,730, ಲಕ್ಷ್ಮಿ 2,480, ರೋಹಿತ್ 3,625, ಗೋಪಿ 4,970, ಕಂಜನ್ 4,515, ಧನಂಜಯ 5,155 ಕೆಜಿ ತೂಕ ಇದ್ದಾನೆ.
icon

(4 / 9)

ಉಳಿದಂತೆ ವರಲಕ್ಷ್ಮಿ 3,495 ತೂಕ, ಭೀಮ 4,945, ಏಕಲವ್ಯ 4,730, ಲಕ್ಷ್ಮಿ 2,480, ರೋಹಿತ್ 3,625, ಗೋಪಿ 4,970, ಕಂಜನ್ 4,515, ಧನಂಜಯ 5,155 ಕೆಜಿ ತೂಕ ಇದ್ದಾನೆ.

ದಸರಾ ಗಜಪಡೆಯ ತೂಕ ಪರೀಕ್ಷೆ ಕುರಿತು ಮೈಸೂರು ವಲಯ ವನ್ಯಜೀವಿ ವಿಭಾಗದ ಡಿಸಿಎಫ್ ಡಾ ಪ್ರಭುಗೌಡ ಮಾತನಾಡಿದ್ದು, ನಿನ್ನೆ ಮೈಸೂರು ಅರಮನೆಗೆ ಬಂದ ಗಜಪಡೆಗೆ ಇಂದು ತೂಕ ಪರೀಕ್ಷೆ ಮಾಡಲಾಗಿದೆ ಎಂದಿದ್ದಾರೆ.
icon

(5 / 9)

ದಸರಾ ಗಜಪಡೆಯ ತೂಕ ಪರೀಕ್ಷೆ ಕುರಿತು ಮೈಸೂರು ವಲಯ ವನ್ಯಜೀವಿ ವಿಭಾಗದ ಡಿಸಿಎಫ್ ಡಾ ಪ್ರಭುಗೌಡ ಮಾತನಾಡಿದ್ದು, ನಿನ್ನೆ ಮೈಸೂರು ಅರಮನೆಗೆ ಬಂದ ಗಜಪಡೆಗೆ ಇಂದು ತೂಕ ಪರೀಕ್ಷೆ ಮಾಡಲಾಗಿದೆ ಎಂದಿದ್ದಾರೆ.

ತೂಕದ ಜೊತೆಗೆ ಆನೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಆನೆಗಳ ತೂಕದ ಆಧಾರದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
icon

(6 / 9)

ತೂಕದ ಜೊತೆಗೆ ಆನೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಆನೆಗಳ ತೂಕದ ಆಧಾರದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದಸರಾ ಜಂಬೂಸವಾರಿ ಮೆರವಣಿಗೆಗೂ ಮುನ್ನಾ ಮತ್ತೊಮ್ಮೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ನಾಳೆಯಿಂದಲೇ ಗಜಪಡೆಯ ನಿತ್ಯ ತಾಲೀಮು ಅರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
icon

(7 / 9)

ದಸರಾ ಜಂಬೂಸವಾರಿ ಮೆರವಣಿಗೆಗೂ ಮುನ್ನಾ ಮತ್ತೊಮ್ಮೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ನಾಳೆಯಿಂದಲೇ ಗಜಪಡೆಯ ನಿತ್ಯ ತಾಲೀಮು ಅರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಆನೆಗಳ ಆರೋಗ್ಯ ನೋಡಿಕೊಳ್ಳುತ್ತಿರುವ ಡಾ ಮುಜೀಬ್  ಹಾಗೂ ಸಾಯಿರಾಮ್ ಅಂಡ್ ಕೊ., ತೂಕ ಮಾಪನ‌ಕೇಂದ್ರದ ಮಾಲೀಕ ಗಣೇಶ್ ಪ್ರಸಾದ್ ಕೂಡ ಇದ್ದರು.
icon

(8 / 9)

ಇದೇ ವೇಳೆ ಆನೆಗಳ ಆರೋಗ್ಯ ನೋಡಿಕೊಳ್ಳುತ್ತಿರುವ ಡಾ ಮುಜೀಬ್  ಹಾಗೂ ಸಾಯಿರಾಮ್ ಅಂಡ್ ಕೊ., ತೂಕ ಮಾಪನ‌ಕೇಂದ್ರದ ಮಾಲೀಕ ಗಣೇಶ್ ಪ್ರಸಾದ್ ಕೂಡ ಇದ್ದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ (ಮೈಸೂರು ಜಿಲ್ಲೆ ಹುಣಸೂರು) ಗಜ ಪಡೆಗೆ ಪಯಣಕ್ಕೆ ಚಾಲನೆ‌ ನೀಡಲಾಗಿತ್ತು.
icon

(9 / 9)

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ (ಮೈಸೂರು ಜಿಲ್ಲೆ ಹುಣಸೂರು) ಗಜ ಪಡೆಗೆ ಪಯಣಕ್ಕೆ ಚಾಲನೆ‌ ನೀಡಲಾಗಿತ್ತು.


ಇತರ ಗ್ಯಾಲರಿಗಳು