ಅಣಕು ಯುದ್ಧ ತಾಲೀಮು ಎಂದರೇನು; ನಾವೇನು ಮಾಡುವುದಿರುತ್ತೆ, ಏನೇನು ಅನುಭವವಾಗಲಿದೆ, ಭಾರತ - ಪಾಕ್ ಯುದ್ಧ ಮುನ್ಸೂಚನೆಯೇ ಇದು, ಚಿತ್ರವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಣಕು ಯುದ್ಧ ತಾಲೀಮು ಎಂದರೇನು; ನಾವೇನು ಮಾಡುವುದಿರುತ್ತೆ, ಏನೇನು ಅನುಭವವಾಗಲಿದೆ, ಭಾರತ - ಪಾಕ್ ಯುದ್ಧ ಮುನ್ಸೂಚನೆಯೇ ಇದು, ಚಿತ್ರವಿವರ

ಅಣಕು ಯುದ್ಧ ತಾಲೀಮು ಎಂದರೇನು; ನಾವೇನು ಮಾಡುವುದಿರುತ್ತೆ, ಏನೇನು ಅನುಭವವಾಗಲಿದೆ, ಭಾರತ - ಪಾಕ್ ಯುದ್ಧ ಮುನ್ಸೂಚನೆಯೇ ಇದು, ಚಿತ್ರವಿವರ

ಜಮ್ಮು - ಕಾಶ್ಮೀರದ ಪಹಲ್ಗಾಮ್‌ ದಾಳಿಯ ಬಳಿಕ ಪಾಕಿಸ್ತಾನ ಜೊತೆಗಿನ ಸಂಬಂಧ ವಿಷಮಗೊಂಡಿರುವ ನಡುವೆಯೇ ಯಾವುದೇ ಸನ್ನಿವೇಶವನ್ನು ಎದುರಿಸುವುದಕ್ಕಾಗಿ ಸ್ವರಕ್ಷಣೆ ತಾಲೀಮು ಅಥವಾ ಅಣಕು ಯುದ್ಧ ತಾಲೀಮನ್ನು ಬುಧವಾರ (ಮೇ 7) ನಡೆಸಬೇಕು ಎಂದು ಎಲ್ಲ ರಾಜ್ಯಗಳಿಗೆ ಗೃಹ ಸಚಿವಾಲಯವು ಸೂಚಿಸಿದೆ. ಹಾಗಾದರೆ ಅಣಕು ಯುದ್ಧ ತಾಲೀಮು ಎಂದರೇನು? ಎಂಬುದನ್ನು ತಿಳಿಯೋಣ.

ಭಾರತ- ಪಾಕಿಸ್ತಾನ ನಡುವೆ ಸಂಬಂಧ ಹಳಸಿದ್ದು, ಬಿಕ್ಕಟ್ಟು ತೀವ್ರಗೊಳ್ಳುತ್ತಿರುವಾಗ ಯಾವುದೇ ತುರ್ತು ಪರಿಸ್ಥಿತಿ ಎದುರಿಸುವುದಕ್ಕೆ ನಾಗರಿಕ ಸ್ವರಕ್ಷಣಾ ತಾಲೀಮು ಅಥವಾ ಅಣಕು ಯುದ್ಧ ತಾಲೀಮು ನಡೆಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ. ಏನಿದು ನಾಗರಿಕ ಸ್ವರಕ್ಷಣಾ ತಾಲೀಮು, ನಾವೇನು ಮಾಡುವುದಿರುತ್ತೆ, ಏನೇನು ಅನುಭವವಾಗಲಿದೆ, ಭಾರತ - ಪಾಕ್ ಯುದ್ಧ ಮುನ್ಸೂಚನೆಯೇ ಇದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇದು.
icon

(1 / 11)

ಭಾರತ- ಪಾಕಿಸ್ತಾನ ನಡುವೆ ಸಂಬಂಧ ಹಳಸಿದ್ದು, ಬಿಕ್ಕಟ್ಟು ತೀವ್ರಗೊಳ್ಳುತ್ತಿರುವಾಗ ಯಾವುದೇ ತುರ್ತು ಪರಿಸ್ಥಿತಿ ಎದುರಿಸುವುದಕ್ಕೆ ನಾಗರಿಕ ಸ್ವರಕ್ಷಣಾ ತಾಲೀಮು ಅಥವಾ ಅಣಕು ಯುದ್ಧ ತಾಲೀಮು ನಡೆಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ. ಏನಿದು ನಾಗರಿಕ ಸ್ವರಕ್ಷಣಾ ತಾಲೀಮು, ನಾವೇನು ಮಾಡುವುದಿರುತ್ತೆ, ಏನೇನು ಅನುಭವವಾಗಲಿದೆ, ಭಾರತ - ಪಾಕ್ ಯುದ್ಧ ಮುನ್ಸೂಚನೆಯೇ ಇದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇದು.

ಚಿತ್ರದಲ್ಲಿರುವುದು 2016ರ ಜನವರಿ 15 ರಂದು ಸೇನಾ ದಿನದ ಸಂದರ್ಭದಲ್ಲಿ ಭಾರತೀಯ ಸೇನೆ ತೋರಿಸಿದ ಅಣಕು ಯುದ್ಧ ತಾಲೀಮಿನ ಒಂದು ನೋಟ. ಇನ್ನು, ನಾಗರಿಕ ಸ್ವರಕ್ಷಣಾ ತಾಲೀಮು ಅಥವಾ ಅಣಕು ಯುದ್ಧ ತಾಲೀಮು ಎಂಬುದು ಯುದ್ಧ, ಕ್ಷಿಪಣಿ ದಾಳಿಗಳು ಅಥವಾ ವೈಮಾನಿಕ ದಾಳಿ ಮುಂತಾದ ತುರ್ತು ಪರಿಸ್ಥಿತಿ ಎದುರಾದ ವೇಳೆ ನಾಗರಿಕರು ಮತ್ತು ಸರ್ಕಾರಿ ವ್ಯವಸ್ಥೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಪರೀಕ್ಷಿಸುವ ಉದ್ದೇಶವನ್ನು ಹೊಂದಿರುವಂಥದ್ದಾಗಿದೆ.
icon

(2 / 11)

ಚಿತ್ರದಲ್ಲಿರುವುದು 2016ರ ಜನವರಿ 15 ರಂದು ಸೇನಾ ದಿನದ ಸಂದರ್ಭದಲ್ಲಿ ಭಾರತೀಯ ಸೇನೆ ತೋರಿಸಿದ ಅಣಕು ಯುದ್ಧ ತಾಲೀಮಿನ ಒಂದು ನೋಟ. ಇನ್ನು, ನಾಗರಿಕ ಸ್ವರಕ್ಷಣಾ ತಾಲೀಮು ಅಥವಾ ಅಣಕು ಯುದ್ಧ ತಾಲೀಮು ಎಂಬುದು ಯುದ್ಧ, ಕ್ಷಿಪಣಿ ದಾಳಿಗಳು ಅಥವಾ ವೈಮಾನಿಕ ದಾಳಿ ಮುಂತಾದ ತುರ್ತು ಪರಿಸ್ಥಿತಿ ಎದುರಾದ ವೇಳೆ ನಾಗರಿಕರು ಮತ್ತು ಸರ್ಕಾರಿ ವ್ಯವಸ್ಥೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಪರೀಕ್ಷಿಸುವ ಉದ್ದೇಶವನ್ನು ಹೊಂದಿರುವಂಥದ್ದಾಗಿದೆ.
(REUTERS)

ಜಮ್ಮು - ಕಾಶ್ಮೀರದ ಸಂಬಾ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಏಪ್ರಿಲ್ 16 ರಂದು ಉಗ್ರ ದಾಳಿಯ ಅಣಕು ಕಾರ್ಯಾಚರಣೆ ನಡೆಸಿದ ಸಂದರ್ಭದ ಚಿತ್ರನೋಟ. ಕೇಂದ್ರ ಸರ್ಕಾರ ಮೇ 7 ರಂದು ದೇಶಾದ್ಯಂತ ನಡೆಸಲು ಸೂಚಿಸಿದ ಅಣಕು ಯುದ್ಧ ತಾಲೀಮು ಕೂಡ ಇಂಥದ್ದೇ ಒಂದು ಕಾರ್ಯಾಚರಣೆಯಾಗಿದೆ. ನಾಗರಿಕರ ಸ್ವರಕ್ಷಣೆ ತಾಲೀಮು ಅಥವಾ ಅಣಕು ಯುದ್ಧ ತಾಲೀಮು ನಡೆಯುವ ಸಂದರ್ಭದಲ್ಲಿ, ವಾಯುದಾಳಿಯ ಎಚ್ಚರಿಕೆ ನೀಡುವ ಸೈರನ್‌ ಮೊಳಗಿಸಬೇಕು. ಈ ತಾಲೀಮಿನಲ್ಲಿ ಸ್ವರಕ್ಷಣೆಯ ಕ್ರಮಗಳನ್ನು ಸೇರಿಸಿಕೊಳ್ಳಬೇಕು ಎಂದೂ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
icon

(3 / 11)

ಜಮ್ಮು - ಕಾಶ್ಮೀರದ ಸಂಬಾ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಏಪ್ರಿಲ್ 16 ರಂದು ಉಗ್ರ ದಾಳಿಯ ಅಣಕು ಕಾರ್ಯಾಚರಣೆ ನಡೆಸಿದ ಸಂದರ್ಭದ ಚಿತ್ರನೋಟ. ಕೇಂದ್ರ ಸರ್ಕಾರ ಮೇ 7 ರಂದು ದೇಶಾದ್ಯಂತ ನಡೆಸಲು ಸೂಚಿಸಿದ ಅಣಕು ಯುದ್ಧ ತಾಲೀಮು ಕೂಡ ಇಂಥದ್ದೇ ಒಂದು ಕಾರ್ಯಾಚರಣೆಯಾಗಿದೆ. ನಾಗರಿಕರ ಸ್ವರಕ್ಷಣೆ ತಾಲೀಮು ಅಥವಾ ಅಣಕು ಯುದ್ಧ ತಾಲೀಮು ನಡೆಯುವ ಸಂದರ್ಭದಲ್ಲಿ, ವಾಯುದಾಳಿಯ ಎಚ್ಚರಿಕೆ ನೀಡುವ ಸೈರನ್‌ ಮೊಳಗಿಸಬೇಕು. ಈ ತಾಲೀಮಿನಲ್ಲಿ ಸ್ವರಕ್ಷಣೆಯ ಕ್ರಮಗಳನ್ನು ಸೇರಿಸಿಕೊಳ್ಳಬೇಕು ಎಂದೂ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
(PTI)

ಗುರುಗ್ರಾಮದಲ್ಲಿ ಏಪ್ರಿಲ್ 20 ರಂದು ಅಗ್ನಿದುರಂತ ಅಣಕು ಕಾರ್ಯಾಚರಣೆ ನಡೆಸಿದ ಸಂದರ್ಭ ಇದು, ಸಾಂಕೇತಿಕವಾಗಿ ಚಿತ್ರವನ್ನು ಇಲ್ಲಿ ಬಳಸಲಾಗಿದೆ. ಇನ್ನು ಅಣಕು ಯುದ್ಧ ತಾಲೀಮು ವಿಚಾರಕ್ಕೆ ಬಂದರೆ, ದೇಶದ ಮೇಲೆ ಯಾವುದೇ ರೀತಿಯ ಸೇನಾ ದಾಳಿ ನಡೆದರೆ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸಲು ಈ ತಾಲೀಮು ವ್ಯವಸ್ಥೆ ಮಾಡಲಾಗಿದೆ. ದಾಳಿ ನಡೆದರೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ, ಅವರು ಯಾವ ರೀತಿ ಸಿದ್ಧರಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಈ ತಾಲೀಮು ನೆರವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
icon

(4 / 11)

ಗುರುಗ್ರಾಮದಲ್ಲಿ ಏಪ್ರಿಲ್ 20 ರಂದು ಅಗ್ನಿದುರಂತ ಅಣಕು ಕಾರ್ಯಾಚರಣೆ ನಡೆಸಿದ ಸಂದರ್ಭ ಇದು, ಸಾಂಕೇತಿಕವಾಗಿ ಚಿತ್ರವನ್ನು ಇಲ್ಲಿ ಬಳಸಲಾಗಿದೆ. ಇನ್ನು ಅಣಕು ಯುದ್ಧ ತಾಲೀಮು ವಿಚಾರಕ್ಕೆ ಬಂದರೆ, ದೇಶದ ಮೇಲೆ ಯಾವುದೇ ರೀತಿಯ ಸೇನಾ ದಾಳಿ ನಡೆದರೆ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸಲು ಈ ತಾಲೀಮು ವ್ಯವಸ್ಥೆ ಮಾಡಲಾಗಿದೆ. ದಾಳಿ ನಡೆದರೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ, ಅವರು ಯಾವ ರೀತಿ ಸಿದ್ಧರಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಈ ತಾಲೀಮು ನೆರವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
(Photo by Parveen Kumar/Hindustan Times)

ವಿಪತ್ತು ನಿರ್ವಹಣಾ ತಂಡದ ಅಣಕು ಕಾರ್ಯಾಚರಣೆಯ ದೃಶ್ಯ. ಇದೇ ರೀತಿ ಅಣಕು ಯುದ್ಧ ತಾಲೀಮು ನಡೆಯುವಾಗ, ನಿಜ ಜೀವನದ ಸನ್ನಿವೇಶಗಳನ್ನು ಮರುಸೃಷ್ಟಿಮಾಡಲಾಗುತ್ತದೆ. ವಾಯುದಾಳಿ ಸೈರನ್‌ಗಳು ಮೊಳಗುತ್ತವೆ. ವಿದ್ಯುತ್ ಕಡಿತ ಉಂಟಾಗಿ ಊರು ಕತ್ತಲಲ್ಲಿ ಮುಳುಗುತ್ತದೆ. ಯಾರೂ ದೀಪ ಹಚ್ಚದಂತೆ, ಇನ್‌ವರ್ಟರ್‌ ಬಳಸದಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನಾಗರಿಕರ ಸ್ವರಕ್ಷಣೆಗೆ ಆದ್ಯತೆ ನೀಡುವ ಈ ಕಾರ್ಯಾಚರಣೆಗಳು ನಾಗರಿಕರ ಆತಂಕ, ಕಳವಳ ಕಡಿಮೆ ಮಾಡುವಂಥವು.
icon

(5 / 11)

ವಿಪತ್ತು ನಿರ್ವಹಣಾ ತಂಡದ ಅಣಕು ಕಾರ್ಯಾಚರಣೆಯ ದೃಶ್ಯ. ಇದೇ ರೀತಿ ಅಣಕು ಯುದ್ಧ ತಾಲೀಮು ನಡೆಯುವಾಗ, ನಿಜ ಜೀವನದ ಸನ್ನಿವೇಶಗಳನ್ನು ಮರುಸೃಷ್ಟಿಮಾಡಲಾಗುತ್ತದೆ. ವಾಯುದಾಳಿ ಸೈರನ್‌ಗಳು ಮೊಳಗುತ್ತವೆ. ವಿದ್ಯುತ್ ಕಡಿತ ಉಂಟಾಗಿ ಊರು ಕತ್ತಲಲ್ಲಿ ಮುಳುಗುತ್ತದೆ. ಯಾರೂ ದೀಪ ಹಚ್ಚದಂತೆ, ಇನ್‌ವರ್ಟರ್‌ ಬಳಸದಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನಾಗರಿಕರ ಸ್ವರಕ್ಷಣೆಗೆ ಆದ್ಯತೆ ನೀಡುವ ಈ ಕಾರ್ಯಾಚರಣೆಗಳು ನಾಗರಿಕರ ಆತಂಕ, ಕಳವಳ ಕಡಿಮೆ ಮಾಡುವಂಥವು.
(Princess Ilvita )

ನಾಳೆ ಏನೇನು ನಡೆಯುತ್ತದೆ: (1) ವಾಯುದಾಳಿ ನಡೆಯುವ ಎಚ್ಚರಿಕೆ ನೀಡುವ ಸೈರನ್ ಮೊಳಗುತ್ತದೆ. (2) ದಾಳಿ ನಡೆದಾಗ ಸ್ವರಕ್ಷಣೆ ಹೇಗೆ ಮಾಡಿಕೊಳ್ಳುವುದು ಎಂಬ ಕುರಿತು ತರಬೇತಿ ನೀಡಲಾಗುತ್ತದೆ. ಒತ್ತೆಯಾಳುಗಳಾಗಿ ಬಂಧಿಯಾದ ವೇಳೆ ಯಾವ ರೀತಿ ವರ್ತಿಸಬೇಕು ಎಂಬುದರ ತಿಳಿವಳಿಕೆಯನ್ನೂ ನೀಡಲಾಗುತ್ತದೆ.
icon

(6 / 11)

ನಾಳೆ ಏನೇನು ನಡೆಯುತ್ತದೆ: (1) ವಾಯುದಾಳಿ ನಡೆಯುವ ಎಚ್ಚರಿಕೆ ನೀಡುವ ಸೈರನ್ ಮೊಳಗುತ್ತದೆ. (2) ದಾಳಿ ನಡೆದಾಗ ಸ್ವರಕ್ಷಣೆ ಹೇಗೆ ಮಾಡಿಕೊಳ್ಳುವುದು ಎಂಬ ಕುರಿತು ತರಬೇತಿ ನೀಡಲಾಗುತ್ತದೆ. ಒತ್ತೆಯಾಳುಗಳಾಗಿ ಬಂಧಿಯಾದ ವೇಳೆ ಯಾವ ರೀತಿ ವರ್ತಿಸಬೇಕು ಎಂಬುದರ ತಿಳಿವಳಿಕೆಯನ್ನೂ ನೀಡಲಾಗುತ್ತದೆ.
(Photo by Parveen Kumar/Hindustan Times)

(3) ರಾತ್ರಿ ವೇಳೆ ಗಂಟೆಗಳ ಕಾಲ ವಿದ್ಯುತ್ ಕಡಿತವಾಗಲಿದ್ದು, ಶತ್ರು ರಾಷ್ಟ್ರಗಳಿಗೆ ವಸತಿ ಪ್ರದೇಶದ ಅಂದಾಜು ಸಿಗದಂತೆ ಮಾಡುವುದು ಇದರ ಉದ್ದೇಶ. (4) ಅಪಾಯ ಉಂಟಾದಾಗ ನಾಗರಿಕರನ್ನು ಅಲ್ಲಿಂದ ಸ್ಥಳಾಂತರಿಸುವುದು ಹೇಗೆ ಎಂಬುದರ ತಾಲೀಮು ಕೂಡ ನಡೆಯಲಿದೆ.
icon

(7 / 11)

(3) ರಾತ್ರಿ ವೇಳೆ ಗಂಟೆಗಳ ಕಾಲ ವಿದ್ಯುತ್ ಕಡಿತವಾಗಲಿದ್ದು, ಶತ್ರು ರಾಷ್ಟ್ರಗಳಿಗೆ ವಸತಿ ಪ್ರದೇಶದ ಅಂದಾಜು ಸಿಗದಂತೆ ಮಾಡುವುದು ಇದರ ಉದ್ದೇಶ. (4) ಅಪಾಯ ಉಂಟಾದಾಗ ನಾಗರಿಕರನ್ನು ಅಲ್ಲಿಂದ ಸ್ಥಳಾಂತರಿಸುವುದು ಹೇಗೆ ಎಂಬುದರ ತಾಲೀಮು ಕೂಡ ನಡೆಯಲಿದೆ.
(PTI)

(5) ನಮ್ಮ ದೇಶದ ಪ್ರಮುಖ ಘಟಕ, ಸಂಸ್ಥೆಗಳನ್ನು ಮರೆಮಾಚುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳವುದು, ಅಗ್ನಿಶಾಮಕ ಸೇವೆ, ವಿಪತ್ತು ನಿರ್ವಹಣಾ ಘಟಕ, ಪೊಲೀಸರು, ಗೃಹ ರಕ್ಷಕ ದಳ, ಎನ್‌ಸಿಸಿ, ಎನ್‌ಎಸ್‌ಎಸ್, ನೆಹರೂ ಯುವ ಸಂಘಟನೆ ಸೇರಿ ಸಮಾಜಮುಖಿ ಸಂಘಟನೆಗಳಲ್ಲಿ ಜಾಗೃತಿ ಮೂಡಿಸುವುದು.
icon

(8 / 11)

(5) ನಮ್ಮ ದೇಶದ ಪ್ರಮುಖ ಘಟಕ, ಸಂಸ್ಥೆಗಳನ್ನು ಮರೆಮಾಚುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳವುದು, ಅಗ್ನಿಶಾಮಕ ಸೇವೆ, ವಿಪತ್ತು ನಿರ್ವಹಣಾ ಘಟಕ, ಪೊಲೀಸರು, ಗೃಹ ರಕ್ಷಕ ದಳ, ಎನ್‌ಸಿಸಿ, ಎನ್‌ಎಸ್‌ಎಸ್, ನೆಹರೂ ಯುವ ಸಂಘಟನೆ ಸೇರಿ ಸಮಾಜಮುಖಿ ಸಂಘಟನೆಗಳಲ್ಲಿ ಜಾಗೃತಿ ಮೂಡಿಸುವುದು.
(PTI)

ಅಣಕು ಯುದ್ಧ ತಾಲೀಮು ನಡೆಯುವಾಗ ಸಾರ್ವಜನಿಕರಿಗೆ ಹಲವು ರೀತಿಯ ಅನುಭವವಾಗಲಿದೆ. ವಿದ್ಯುತ್ ಕಡಿತ ಉಂಟಾಗಲಿದೆ. ಮೊಬೈಲ್ ಸಿಗ್ನಲ್ ಸಿಗಲ್ಲ ಅಥವಾ ಅಡಚಣೆ ಉಂಟಾಗಲಿದೆ. ಸಾರ್ವಜನಿಕ ಸಂದೇಶಗಳು ರವಾನೆಯಾಗಬಹುದು. ಕೆಲವು ಪ್ರದೇಶಗಳಲ್ಲಿ ಪೊಲೀಸರು, ಅರೆ ಸೇನಾ ಸಿಬ್ಬಂದಿ ಬಿಗಿ ಬಂದೋಬಸ್ತ್‌ನಲ್ಲಿ ತೊಡಗಿರುವುದು ಕಾಣಬಹುದು.
icon

(9 / 11)

ಅಣಕು ಯುದ್ಧ ತಾಲೀಮು ನಡೆಯುವಾಗ ಸಾರ್ವಜನಿಕರಿಗೆ ಹಲವು ರೀತಿಯ ಅನುಭವವಾಗಲಿದೆ. ವಿದ್ಯುತ್ ಕಡಿತ ಉಂಟಾಗಲಿದೆ. ಮೊಬೈಲ್ ಸಿಗ್ನಲ್ ಸಿಗಲ್ಲ ಅಥವಾ ಅಡಚಣೆ ಉಂಟಾಗಲಿದೆ. ಸಾರ್ವಜನಿಕ ಸಂದೇಶಗಳು ರವಾನೆಯಾಗಬಹುದು. ಕೆಲವು ಪ್ರದೇಶಗಳಲ್ಲಿ ಪೊಲೀಸರು, ಅರೆ ಸೇನಾ ಸಿಬ್ಬಂದಿ ಬಿಗಿ ಬಂದೋಬಸ್ತ್‌ನಲ್ಲಿ ತೊಡಗಿರುವುದು ಕಾಣಬಹುದು.
(PTI)

ಉಗ್ರ ದಾಳಿ ನಡೆದ ಸಂದರ್ಭದಲ್ಲಿ ಯಾವ ರೀತಿ ಕಾರ್ಯಾಚರಣೆ ನಡೆಯುತ್ತದೆ ಎಂಬುದನ್ನು ತೋರಿಸುವ ಅಣಕು ಕಾರ್ಯಾಚರಣೆಯನ್ನು ಜಮ್ಮು - ಕಾಶ್ಮೀರದಲ್ಲಿ ಏಪ್ರಿಲ್ 18 ರಂದು ಮಾಡಿ ಜನರಿಗೆ ತೋರಿಸಲಾಗಿತ್ತು.
icon

(10 / 11)

ಉಗ್ರ ದಾಳಿ ನಡೆದ ಸಂದರ್ಭದಲ್ಲಿ ಯಾವ ರೀತಿ ಕಾರ್ಯಾಚರಣೆ ನಡೆಯುತ್ತದೆ ಎಂಬುದನ್ನು ತೋರಿಸುವ ಅಣಕು ಕಾರ್ಯಾಚರಣೆಯನ್ನು ಜಮ್ಮು - ಕಾಶ್ಮೀರದಲ್ಲಿ ಏಪ್ರಿಲ್ 18 ರಂದು ಮಾಡಿ ಜನರಿಗೆ ತೋರಿಸಲಾಗಿತ್ತು.
(PTI)

ಆಗ್ರಾದ ತಾಜ್‌ಮಹಲ್‌ ಸಮೀಪ ಕೂಡ ಉಗ್ರ ನಿಗ್ರಹದ ಅಣಕು ಕಾರ್ಯಾಚರಣೆ ಮಾಡಿ ತೋರಿಸಲಾಗಿತ್ತು. ಆಣಕು ಯುದ್ಧ ತಾಲೀಮು ನಡೆಯುವಾಗ ಸಾಧ್ಯವಾದಷ್ಟೂ ಕಳವಳಗೊಳ್ಳದೇ, ಶಾಂತ ಮನಸ್ಥಿತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.
icon

(11 / 11)

ಆಗ್ರಾದ ತಾಜ್‌ಮಹಲ್‌ ಸಮೀಪ ಕೂಡ ಉಗ್ರ ನಿಗ್ರಹದ ಅಣಕು ಕಾರ್ಯಾಚರಣೆ ಮಾಡಿ ತೋರಿಸಲಾಗಿತ್ತು. ಆಣಕು ಯುದ್ಧ ತಾಲೀಮು ನಡೆಯುವಾಗ ಸಾಧ್ಯವಾದಷ್ಟೂ ಕಳವಳಗೊಳ್ಳದೇ, ಶಾಂತ ಮನಸ್ಥಿತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.
(PTI)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು