ಕೂದಲೆಳೆ ಅಂತರದಲ್ಲಿ ಮೊದಲ ಸ್ಥಾನ ತಪ್ಪಿಸಿಕೊಂಡ ʻಅಣ್ಣಯ್ಯʼ; ಜೀ ಕನ್ನಡದ 9 ಧಾರಾವಾಹಿಗಳಲ್ಲಿ ಯಾರಿಗೆ ಟಾಪ್‌ ಸ್ಥಾನ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೂದಲೆಳೆ ಅಂತರದಲ್ಲಿ ಮೊದಲ ಸ್ಥಾನ ತಪ್ಪಿಸಿಕೊಂಡ ʻಅಣ್ಣಯ್ಯʼ; ಜೀ ಕನ್ನಡದ 9 ಧಾರಾವಾಹಿಗಳಲ್ಲಿ ಯಾರಿಗೆ ಟಾಪ್‌ ಸ್ಥಾನ?

ಕೂದಲೆಳೆ ಅಂತರದಲ್ಲಿ ಮೊದಲ ಸ್ಥಾನ ತಪ್ಪಿಸಿಕೊಂಡ ʻಅಣ್ಣಯ್ಯʼ; ಜೀ ಕನ್ನಡದ 9 ಧಾರಾವಾಹಿಗಳಲ್ಲಿ ಯಾರಿಗೆ ಟಾಪ್‌ ಸ್ಥಾನ?

17ನೇ ವಾರದ ಟಿಆರ್‌ಪಿಯಲ್ಲಿ ಜೀ ಕನ್ನಡದ ಧಾರಾವಾಹಿಗಳಿಗೆ ಸಿಕ್ಕ ರೇಟಿಂಗ್ಸ್‌ ಎಷ್ಟು? ಯಾವ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿದೆ, ಕೊನೇ ಸ್ಥಾನದಲ್ಲಿನ ಸೀರಿಯಲ್‌ ಯಾವುದು? ನಂಬರ್‌ 1 ಸ್ಥಾನಕ್ಕೆ ಪೈಪೋಟಿಗೆ ಬಿದ್ದಿರುವ ಧಾರಾವಾಹಿಗಳ ಕುರಿತ ಮಾಹಿತಿಯೂ ಇಲ್ಲಿದೆ.

ಜೀ ಕನ್ನಡದ ಧಾರಾವಾಹಿಗಳಿಗೆ ಸಿಕ್ಕ ರೇಟಿಂಗ್ಸ್‌ ಎಷ್ಟು? ಯಾವ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿದೆ, ಕೊನೇ ಸ್ಥಾನದಲ್ಲಿನ ಸೀರಿಯಲ್‌ ಯಾವುದು? ಇಲ್ಲಿದೆ ಅಪ್‌ಡೇಟ್‌ ಮಾಹಿತಿ.
icon

(1 / 10)

ಜೀ ಕನ್ನಡದ ಧಾರಾವಾಹಿಗಳಿಗೆ ಸಿಕ್ಕ ರೇಟಿಂಗ್ಸ್‌ ಎಷ್ಟು? ಯಾವ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿದೆ, ಕೊನೇ ಸ್ಥಾನದಲ್ಲಿನ ಸೀರಿಯಲ್‌ ಯಾವುದು? ಇಲ್ಲಿದೆ ಅಪ್‌ಡೇಟ್‌ ಮಾಹಿತಿ.
(Images\ Zee5)

ಇನ್ನು ಮುಕ್ತಾಯದ ಹಂತಕ್ಕೆ ತಲುಪಿರುವ ಸೀರಿಯಲ್‌ಗಳೆಂದರೆ ಶ್ರೀರಸ್ತು ಶುಭಮಸ್ತು ಮತ್ತು ಸೀತಾರಾಮ. ಈ ಎರಡು ಸೀರಿಯಲ್‌ಗಳ ಪೈಕಿ ಶ್ರೀರಸ್ತು ಶುಭಮಸ್ತು ಧಾರಾವಾಹಿ 2.6 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.
icon

(2 / 10)

ಇನ್ನು ಮುಕ್ತಾಯದ ಹಂತಕ್ಕೆ ತಲುಪಿರುವ ಸೀರಿಯಲ್‌ಗಳೆಂದರೆ ಶ್ರೀರಸ್ತು ಶುಭಮಸ್ತು ಮತ್ತು ಸೀತಾರಾಮ. ಈ ಎರಡು ಸೀರಿಯಲ್‌ಗಳ ಪೈಕಿ ಶ್ರೀರಸ್ತು ಶುಭಮಸ್ತು ಧಾರಾವಾಹಿ 2.6 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.

ಅದೇ ರೀತಿ ಜೀ ಕನ್ನಡದ ಒಂದು ಕಾಲದ ನಂಬರ್‌ 1 ಧಾರಾವಾಹಿ ಪುಟ್ಟಕ್ಕನ ಮಕ್ಕಳು 17ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 4.6 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
icon

(3 / 10)

ಅದೇ ರೀತಿ ಜೀ ಕನ್ನಡದ ಒಂದು ಕಾಲದ ನಂಬರ್‌ 1 ಧಾರಾವಾಹಿ ಪುಟ್ಟಕ್ಕನ ಮಕ್ಕಳು 17ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 4.6 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗೆ 17ನೇ ವಾರದ ಟಿಆರ್‌ಪಿಯಲ್ಲಿ 3ನೇ ಸ್ಥಾನ ಸಿಕ್ಕಿದೆ. ಕಳೆದ ಎರಡ್ಮೂರು ವಾರ ಮೊದಲ ಸ್ಥಾನದಲ್ಲಿಯೇ ಇದ್ದ ಈ ಧಾರಾವಾಹಿ, 7.1 ಟಿಆರ್‌ಪಿ ಪಡೆದು ಕುಸಿತ ಕಂಡಿದೆ.
icon

(4 / 10)

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗೆ 17ನೇ ವಾರದ ಟಿಆರ್‌ಪಿಯಲ್ಲಿ 3ನೇ ಸ್ಥಾನ ಸಿಕ್ಕಿದೆ. ಕಳೆದ ಎರಡ್ಮೂರು ವಾರ ಮೊದಲ ಸ್ಥಾನದಲ್ಲಿಯೇ ಇದ್ದ ಈ ಧಾರಾವಾಹಿ, 7.1 ಟಿಆರ್‌ಪಿ ಪಡೆದು ಕುಸಿತ ಕಂಡಿದೆ.

ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್‌ 17ನೇ ವಾರದ ಟಿಆರ್‌ಪಿಯಲ್ಲಿ 5.3 ರೇಟಿಂಗ್ಸ್‌ ಪಡೆದು, ಆರನೇ ಸ್ಥಾನದಲ್ಲಿದೆ. 16ನೇ ವಾರಕ್ಕೆ ಹೋಲಿಸಿದರೆ ಟಿಆರ್‌ಪಿಯಲ್ಲಿ ಏರಿಕೆ ಕಂಡಿದೆ.
icon

(5 / 10)

ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್‌ 17ನೇ ವಾರದ ಟಿಆರ್‌ಪಿಯಲ್ಲಿ 5.3 ರೇಟಿಂಗ್ಸ್‌ ಪಡೆದು, ಆರನೇ ಸ್ಥಾನದಲ್ಲಿದೆ. 16ನೇ ವಾರಕ್ಕೆ ಹೋಲಿಸಿದರೆ ಟಿಆರ್‌ಪಿಯಲ್ಲಿ ಏರಿಕೆ ಕಂಡಿದೆ.

ಸೀತಾ ರಾಮ ಧಾರಾವಾಹಿ 2.0 ಟಿಆರ್‌ಪಿ ಪಡೆದು ಕೊನೇ ಮತ್ತು 9ನೇ ಸ್ಥಾನದಲ್ಲಿದೆ. ಇನ್ನೇನು ಹೊಸ ಸೀರಿಯಲ್‌ಗಳ ಆಗಮನ ಆಗುತ್ತಿರುವುದರಿಂದ ಈ ಎರಡು ಸೀರಿಯಲ್‌ಗಳು ಕೊನೆಯಾಗಲಿವೆ ಎಂದು ಹೇಳಲಾಗುತ್ತಿದೆ.
icon

(6 / 10)

ಸೀತಾ ರಾಮ ಧಾರಾವಾಹಿ 2.0 ಟಿಆರ್‌ಪಿ ಪಡೆದು ಕೊನೇ ಮತ್ತು 9ನೇ ಸ್ಥಾನದಲ್ಲಿದೆ. ಇನ್ನೇನು ಹೊಸ ಸೀರಿಯಲ್‌ಗಳ ಆಗಮನ ಆಗುತ್ತಿರುವುದರಿಂದ ಈ ಎರಡು ಸೀರಿಯಲ್‌ಗಳು ಕೊನೆಯಾಗಲಿವೆ ಎಂದು ಹೇಳಲಾಗುತ್ತಿದೆ.

17ನೇ ವಾರ ಅಮೃತಧಾರೆಗೆ ಸಿಕ್ಕ ನಂಬರ್ಸ್‌ ಎಷ್ಟು ಎಂಬುದನ್ನು ನೋಡುವುದಾದರೆ, 5.9 ಟಿಆರ್‌ಪಿ ಪಡೆದು ಐದನೇ ಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಈ ಧಾರಾವಾಹಿಯೂ ಕುಸಿತ ಕಾಣುತ್ತಿದೆ.
icon

(7 / 10)

17ನೇ ವಾರ ಅಮೃತಧಾರೆಗೆ ಸಿಕ್ಕ ನಂಬರ್ಸ್‌ ಎಷ್ಟು ಎಂಬುದನ್ನು ನೋಡುವುದಾದರೆ, 5.9 ಟಿಆರ್‌ಪಿ ಪಡೆದು ಐದನೇ ಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಈ ಧಾರಾವಾಹಿಯೂ ಕುಸಿತ ಕಾಣುತ್ತಿದೆ.

ಅದೇ ರೀತಿ ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ ಕೂದಲೆಳೆ ಅಂತರದಲ್ಲಿ ನಂಬರ್‌ ಸ್ಥಾನದಿಂದ ಕೆಳಗಿಳಿದಿದೆ. ನಾ ನಿನ್ನ ಬಿಡಲಾರೆ ಸೀರಿಯಲ್‌ ಪಡೆದಷ್ಟೇ ಟಿಆರ್‌ಪಿ ಪಡೆದರೂ, ಗ್ರಾಮೀಣ ಭಾಗದಲ್ಲಿ ಕಡಿಮೆ ಟಿಆರ್‌ಪಿ ಪಡೆದಿದೆ. ಈ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
icon

(8 / 10)

ಅದೇ ರೀತಿ ಜೀ ಕನ್ನಡದ ಅಣ್ಣಯ್ಯ ಧಾರಾವಾಹಿ ಕೂದಲೆಳೆ ಅಂತರದಲ್ಲಿ ನಂಬರ್‌ ಸ್ಥಾನದಿಂದ ಕೆಳಗಿಳಿದಿದೆ. ನಾ ನಿನ್ನ ಬಿಡಲಾರೆ ಸೀರಿಯಲ್‌ ಪಡೆದಷ್ಟೇ ಟಿಆರ್‌ಪಿ ಪಡೆದರೂ, ಗ್ರಾಮೀಣ ಭಾಗದಲ್ಲಿ ಕಡಿಮೆ ಟಿಆರ್‌ಪಿ ಪಡೆದಿದೆ. ಈ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಜೀ ಕನ್ನಡ ಒಂದು ಗಂಟೆಯ ಮೆಗಾ ಧಾರಾವಾಹಿ ʻಲಕ್ಷ್ಮೀ ನಿವಾಸʼ 6.5 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಇತ್ತೀಚಿನ ಕೆಲ ವಾರಗಳಿಂದ ಈ ಧಾರಾವಾಹಿಯೂ ಮೊದಲ ಸ್ಥಾನಕ್ಕೆ ಆಗಮಿಸಿಲ್ಲ.
icon

(9 / 10)

ಜೀ ಕನ್ನಡ ಒಂದು ಗಂಟೆಯ ಮೆಗಾ ಧಾರಾವಾಹಿ ʻಲಕ್ಷ್ಮೀ ನಿವಾಸʼ 6.5 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಇತ್ತೀಚಿನ ಕೆಲ ವಾರಗಳಿಂದ ಈ ಧಾರಾವಾಹಿಯೂ ಮೊದಲ ಸ್ಥಾನಕ್ಕೆ ಆಗಮಿಸಿಲ್ಲ.

ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯೋಗದ ಮೂಲಕ ಮೂರು ತಿಂಗಳ ಹಿಂದಷ್ಟೇ ಪ್ರಸಾರ ಆರಂಭಿಸಿರುವ ʻನಾ ನಿನ್ನ ಬಿಡಲಾರೆʼ 17ನೇ ವಾರದ ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಈ ಧಾರಾವಾಹಿ 7.2 ರೇಟಿಂಗ್ಸ್‌ ಪಡೆದು ಮೊದಲ ಸ್ಥಾನದಲ್ಲಿದೆ.
icon

(10 / 10)

ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯೋಗದ ಮೂಲಕ ಮೂರು ತಿಂಗಳ ಹಿಂದಷ್ಟೇ ಪ್ರಸಾರ ಆರಂಭಿಸಿರುವ ʻನಾ ನಿನ್ನ ಬಿಡಲಾರೆʼ 17ನೇ ವಾರದ ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಈ ಧಾರಾವಾಹಿ 7.2 ರೇಟಿಂಗ್ಸ್‌ ಪಡೆದು ಮೊದಲ ಸ್ಥಾನದಲ್ಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು