ಕೊಡಗು- ಹಾಸನ ಭಾಗದಲ್ಲಿ ಪುಂಡಾಟ ಮಾಡುತ್ತಿದ್ದ ಆನೆ ಸೆರೆ ಹಿಡಿದ ಅರಣ್ಯ ಇಲಾಖೆ; ದುಬಾರೆಯಲ್ಲಿ ಕ್ರಾಲ್‌ ಸೇರಿಕೊಂಡ ಕಾಜೂರು ಕರ್ಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊಡಗು- ಹಾಸನ ಭಾಗದಲ್ಲಿ ಪುಂಡಾಟ ಮಾಡುತ್ತಿದ್ದ ಆನೆ ಸೆರೆ ಹಿಡಿದ ಅರಣ್ಯ ಇಲಾಖೆ; ದುಬಾರೆಯಲ್ಲಿ ಕ್ರಾಲ್‌ ಸೇರಿಕೊಂಡ ಕಾಜೂರು ಕರ್ಣ

ಕೊಡಗು- ಹಾಸನ ಭಾಗದಲ್ಲಿ ಪುಂಡಾಟ ಮಾಡುತ್ತಿದ್ದ ಆನೆ ಸೆರೆ ಹಿಡಿದ ಅರಣ್ಯ ಇಲಾಖೆ; ದುಬಾರೆಯಲ್ಲಿ ಕ್ರಾಲ್‌ ಸೇರಿಕೊಂಡ ಕಾಜೂರು ಕರ್ಣ

  • ಕೊಡಗು ಹಾಗೂ ಹಾಸನ ಭಾಗದಲ್ಲಿ ಕೆಲ ವರ್ಷದಿಂದ ಉಪಟಳ ನೀಡುತ್ತಿದ್ದ ಕಾಜೂರು ಕರ್ಣ ಎನ್ನುವ ಕಾಡಾನೆಯನ್ನು ಕರ್ನಾಟಕ ಅರಣ್ಯ ಇಲಾಖೆಯವರು ಸೋಮವಾರಪೇಟೆ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಇದರ ಹೆಸರು ಕರ್ಣ, ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಸುತ್ತಮುತ್ತಲ ಪ್ರದೇಶದಲ್ಲಿಯೇ ಅಡ್ಡಾಡಿಕೊಂಡಿದ್ದ ಕಾರಣಕ್ಕೆ ಇದಕ್ಕೆ ಕಾಜೂರು ಕರ್ಣ ಆನೆ ಎಂದೇ ಹೆಸರಿಡಲಾಗಿತ್ತು. ಇದರ ವಯಸ್ಸು 45 ವರ್ಷ.
icon

(1 / 6)

ಇದರ ಹೆಸರು ಕರ್ಣ, ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಸುತ್ತಮುತ್ತಲ ಪ್ರದೇಶದಲ್ಲಿಯೇ ಅಡ್ಡಾಡಿಕೊಂಡಿದ್ದ ಕಾರಣಕ್ಕೆ ಇದಕ್ಕೆ ಕಾಜೂರು ಕರ್ಣ ಆನೆ ಎಂದೇ ಹೆಸರಿಡಲಾಗಿತ್ತು. ಇದರ ವಯಸ್ಸು 45 ವರ್ಷ.

ಹಲವು ವರ್ಷದಿಂದ ಕೊಡಗು ಹಾಗೂ ಹಾಸನ ಭಾಗದಲ್ಲಿ ಸುತ್ತಾಡಿಕೊಂಡು ಜನರಿಗೆ ಉಪಟಳ ನೀಡುತ್ತಿದ್ದ ಕಾಜೂರು ಕರ್ಣನ ಸೆರೆ ಹಿಡಿಯುವುದೇ ಸವಾಲಾಗಿತ್ತು.
icon

(2 / 6)

ಹಲವು ವರ್ಷದಿಂದ ಕೊಡಗು ಹಾಗೂ ಹಾಸನ ಭಾಗದಲ್ಲಿ ಸುತ್ತಾಡಿಕೊಂಡು ಜನರಿಗೆ ಉಪಟಳ ನೀಡುತ್ತಿದ್ದ ಕಾಜೂರು ಕರ್ಣನ ಸೆರೆ ಹಿಡಿಯುವುದೇ ಸವಾಲಾಗಿತ್ತು.

ಅರಣ್ಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್‌ ಜಖಂಗೊಳಿಸೋದು,. ಕಾರುಗಳ ಮೇಲೆ ದಾಳಿ ಮಾಡುವುದನ್ನು ಕರ್ಣ ನಿರಂತರವಾಗಿ ನಡೆಸಿಕೊಂಡು ಬಂದಿದ್ದ.
icon

(3 / 6)

ಅರಣ್ಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್‌ ಜಖಂಗೊಳಿಸೋದು,. ಕಾರುಗಳ ಮೇಲೆ ದಾಳಿ ಮಾಡುವುದನ್ನು ಕರ್ಣ ನಿರಂತರವಾಗಿ ನಡೆಸಿಕೊಂಡು ಬಂದಿದ್ದ.

ಕೊಡಗಿನ ಭಾಗದವರಿಗೆ ಹೆಚ್ಚು ತೊಂದರೆ ನೀಡುತ್ತಿದ್ದ ಈತನನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಲೇ ಇದ್ದರು. ಕೊನೆಗೆ ಅರಣ್ಯ ಇಲಾಖೆ ಇದನ್ನು ಸೆರೆ ಹಿಡಿದಿದೆ.
icon

(4 / 6)

ಕೊಡಗಿನ ಭಾಗದವರಿಗೆ ಹೆಚ್ಚು ತೊಂದರೆ ನೀಡುತ್ತಿದ್ದ ಈತನನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಲೇ ಇದ್ದರು. ಕೊನೆಗೆ ಅರಣ್ಯ ಇಲಾಖೆ ಇದನ್ನು ಸೆರೆ ಹಿಡಿದಿದೆ.

ಒಂದು ವರ್ಷದಿಂದಲೂ ಈತನ ಸೆರೆಗೆ ಇಲಾಖೆ ಪ್ರಯತ್ನಿಸುತ್ತಿತ್ತು. ಆದರೂ ಕರ್ಣ ತಪ್ಪಿಸಿಕೊಳ್ಳುತ್ತಿದ್ದ. ಎರಡು ವಾರದಿಂದ ತಂಡ ರಚಿಸಿ ಗಂಭೀರ ಪ್ರಯತ್ನ ಆರಂಭಿಸಿ ಸೋಮವಾರ ಪೇಟೆ ಎಸಿಎಫ್‌ ಎಎ ಗೋಪಾಲ್‌ ಅವರ ನೇತೃತ್ವದ ತಂಡ ಇದನ್ನು ಸೆರೆ ಹಿಡಿದಿದೆ.
icon

(5 / 6)

ಒಂದು ವರ್ಷದಿಂದಲೂ ಈತನ ಸೆರೆಗೆ ಇಲಾಖೆ ಪ್ರಯತ್ನಿಸುತ್ತಿತ್ತು. ಆದರೂ ಕರ್ಣ ತಪ್ಪಿಸಿಕೊಳ್ಳುತ್ತಿದ್ದ. ಎರಡು ವಾರದಿಂದ ತಂಡ ರಚಿಸಿ ಗಂಭೀರ ಪ್ರಯತ್ನ ಆರಂಭಿಸಿ ಸೋಮವಾರ ಪೇಟೆ ಎಸಿಎಫ್‌ ಎಎ ಗೋಪಾಲ್‌ ಅವರ ನೇತೃತ್ವದ ತಂಡ ಇದನ್ನು ಸೆರೆ ಹಿಡಿದಿದೆ.

ಕಾಜೂರು ಕರ್ಣ ಆನೆ ಈಗ ಕೊಡಗಿನ ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರ ಸೇರಿದೆ. ಅಲ್ಲಿ ಕ್ರಾಲಿಂಗ್‌ಗೆ ಹಾಕಿ ತರಬೇತಿ ನೀಡಲಾಗುತ್ತದೆ. ಆನಂತರ ಅರಣ್ಯ ಇಲಾಖೆ ಕೆಲಸಗಳಿಗೆ ಇದನ್ನು ಬಳಸುವ ಸಾಧ್ಯತೆಯಿದೆ.
icon

(6 / 6)

ಕಾಜೂರು ಕರ್ಣ ಆನೆ ಈಗ ಕೊಡಗಿನ ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರ ಸೇರಿದೆ. ಅಲ್ಲಿ ಕ್ರಾಲಿಂಗ್‌ಗೆ ಹಾಕಿ ತರಬೇತಿ ನೀಡಲಾಗುತ್ತದೆ. ಆನಂತರ ಅರಣ್ಯ ಇಲಾಖೆ ಕೆಲಸಗಳಿಗೆ ಇದನ್ನು ಬಳಸುವ ಸಾಧ್ಯತೆಯಿದೆ.


ಇತರ ಗ್ಯಾಲರಿಗಳು