ಅಜ್ಜಿಯನ್ನು ನೋಡಿ "ಅಮ್ಮಾ..." ಎಂದು ಕಿರುಚಿದ ಲಚ್ಚಿ; ಸೃಜನ್ಗೆ ಶಕುಂತಲಾದೇವಿ ಮೇಲೆ ಅನುಮಾನ? ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಲಚ್ಚಿಯನ್ನು ಕಿಡ್ನ್ಯಾಪ್ ಮಾಡಿರುವ ಗ್ಯಾಂಗ್ನಲ್ಲಿ ಶಕುಂತಲಾದೇವಿ ಕೂಡ ಇದ್ರು ಎಂಬ ಸುಳಿವು ಸೃಜನ್ಗೆ ದೊರಕುವುದೇ? ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೊದಲ್ಲಿ ಇಂತಹ ಸುಳಿವು ದೊರಕಿದೆ.
(1 / 11)
ಸೃಜನ್ ಮತ್ತು ಲಚ್ಚಿ ಕ್ರಿಕೆಟ್ ಆಡುತ್ತಿದ್ದಾರೆ. ಗೌತಮ್ ದಿವಾನ್ ಮನೆಯಲ್ಲಿರುವ ಸೃಜನ್ ಸುಧಾಳಿಗೆ ಹತ್ತಿರವಾಗಲು ನೋಡಿದ್ದ. ಆತನಿಗೆ ಆಕೆಯ ಮೇಲೆ ಏನೋ ಭಾವನೆ. ಆಕೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಇದಕ್ಕೆ ಸುಧಾ ಕೋಪಗೊಳ್ಳುತ್ತಿದ್ದಳು.
(2 / 11)
ಈ ಪ್ರೊಮೊದಲ್ಲಿ ಸೃಜನ್ ಮತ್ತು ಲಚ್ಚಿ ಹೊರಗಡೆ ಕ್ರಿಕೆಟ್ ಆಡುವ ದೃಶ್ಯವಿದೆ. ಲಚ್ಚಿಯೆಂದರೆ ಸೃಜನ್ಗೆ ಅಚ್ಚುಮೆಚ್ಚು. ಹಾಗೇ ಆಡುತ್ತಾ ಇದ್ದಾನೆ.
(3 / 11)
ಈ ಸಮಯದಲ್ಲಿ ಬಾಲ್ ಲಚ್ಚಿಯ ಅಜ್ಜಿ ಕೋಣೆಗೆ ಬಿತ್ತು. ಲಚ್ಚಿಯ ಅಜ್ಜಿ ಅಂದ್ರೆ ನಿಮಗೆ ಗೊತ್ತಾಗಿರಬಹುದು. ಶಕುಂತಲಾದೇವಿಯ ಕೋಣೆಗೆ ಬಿತ್ತು.
(4 / 11)
ಶಕುಂತಲಾದೇವಿಯನ್ನು ಕಂಡರೆ ಇತ್ತೀಚೆಗೆ ಲಚ್ಚಿಗೆ ಭಯ. ಅಪಹರಣ ಆದ ಬಳಿಕ ಆಕೆಗೆ ಕಣ್ಣಿನ ಮರೆಯಲ್ಲಿ ಈಕೆಯ ಚಪ್ಪಲ್ ಮತ್ತು ಸೀರೆಯನ್ನು ನೋಡಿದಂತೆ ನೆನಪಾಗುತ್ತದೆ. ಈಕೆಯ ಮುಖವೇ ಕಾಣಿಸುತ್ತದೆ.
(5 / 11)
ನನ್ನನ್ನು ಕಿಡ್ನ್ಯಾಪ್ ಮಾಡಿರುವ ಗ್ಯಾಂಗ್ನಲ್ಲಿ ಅಜ್ಜಿಯೂ ಇರಬಹುದು ಎಂಬ ಅನುಮಾನ ಲಚ್ಚಿಗೆ. ಇದೇ ಕಾರಣಕ್ಕೆ ಶಕುಂತಲಾದೇವಿಯನ್ನು ಕಂಡಾಗ ಭಯಬೀಳುತ್ತಾಳೆ.
(6 / 11)
ಇಂದು ಕೂಡ ಬಾಲ್ ಅಜ್ಜಿ ಕೋಣೆಗೆ ಬಿದ್ದಾಗ ನಾನು ಅಲ್ಲಿಗೆ ಹೋಗೋದಿಲ್ಲ ಎನ್ನುತ್ತಾಳೆ. ನಿನ್ನ ಅಜ್ಜಿ ಕೋಣೆಗೆ ನೀನು ಹೋಗದೆ ನಾನು ಹೋದರೆ ಸರಿಯಾಗುತ್ತಾ ಎಂದು ಸೃಜನ್ ಕೇಳುತ್ತಾನೆ.
(7 / 11)
ಕೊನೆಗೆ ಒಲ್ಲದ ಮನಸ್ಸಿನಿಂದ ಅಜ್ಜಿ ಕೋಣೆಗೆ ಹೋಗಿ ಬಾಲ್ ಹೆಕ್ಕುತ್ತಾಳೆ. ಅಲ್ಲಿದ್ದ ಶಕುಂತಲಾದೇವಿ ಪ್ರೀತಿಯಿಂದ ಲಚ್ಚಿ ಎಂದು ಕರೆಯುತ್ತಾರೆ. ಆಕೆಗೂ ಮಗು ಭಯಪಡುತ್ತಿದೆ ಎಂಬ ಅನುಮಾನವಿದೆ.
(8 / 11)
ಅಜ್ಜಿ ಶಕುಂತಲಾದೇವಿಯನ್ನು ನೋಡಿ ಲಚ್ಚಿ ಜೋರಾಗಿ "ಅಮ್ಮಾ....." ಎಂದು ಕಿರುಚುತ್ತಾಳೆ. ಹೊರಗೆ ಇದ್ದ ಸೃಜನ್ ಓಡೋಡಿ ಬರುತ್ತಾನೆ. ಶಕುಂತಲಾದೇವಿ ಅಡಗುತ್ತಾರೆ. ಸೃಜನ್ ಮಗುವನ್ನು ಕರೆದುಕೊಂಡು ಹೋಗುತ್ತಾನೆ.
(9 / 11)
ಈ ದೃಶ್ಯ ಎಲ್ಲಿಗೆ ತಲುಪಲಿದೆ ಎಂದು ನಾಳೆಯ ಎಪಿಸೋಡ್ನಲ್ಲಿ ತಿಳಿಯಬಹುದು. ಸೃಜನ್ ಮನಸ್ಸಿನ ಮೂಲೆಯಲ್ಲಿ ಶಕುಂತಲಾದೇವಿ ಕುರಿತು ಅನುಮಾನ ಹುಟ್ಟಬಹುದು.
(10 / 11)
ಈತನಲ್ಲಿ ಅನುಮಾನ ಮೂಡುವ ಸಮಯದಲ್ಲಿಯೂ ಸುಧಾ ಅಲ್ಲಿಗೆ ಬಂದು ಮಗುವನ್ನು ಕರೆದುಕೊಂಡು ಹೋಗಬಹುದು. ಮುಂದೆ ಭೂಮಿಕಾಳಿಗೆ ಈ ಅನುಮಾನವನ್ನು ಸೃಜನ್ ತಿಳಿಸಬಹುದೇ? ತಿಳಿಸಿದರೂ ಭೂಮಿಕಾ ಈ ರಹಸ್ಯ ಕಂಡುಹಿಡಿಯಬಹುದೇ? ಮುಂದಿನ ದಿನಗಳಲ್ಲಿ ಈ ವಿಷಯಗಳು ತಿಳಿದುಬರಲಿದೆ.
ಇತರ ಗ್ಯಾಲರಿಗಳು