ಅಜ್ಜಿಯನ್ನು ನೋಡಿ "ಅಮ್ಮಾ..." ಎಂದು ಕಿರುಚಿದ ಲಚ್ಚಿ; ಸೃಜನ್‌ಗೆ ಶಕುಂತಲಾದೇವಿ ಮೇಲೆ ಅನುಮಾನ? ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಜ್ಜಿಯನ್ನು ನೋಡಿ "ಅಮ್ಮಾ..." ಎಂದು ಕಿರುಚಿದ ಲಚ್ಚಿ; ಸೃಜನ್‌ಗೆ ಶಕುಂತಲಾದೇವಿ ಮೇಲೆ ಅನುಮಾನ? ಅಮೃತಧಾರೆ ಧಾರಾವಾಹಿ

ಅಜ್ಜಿಯನ್ನು ನೋಡಿ "ಅಮ್ಮಾ..." ಎಂದು ಕಿರುಚಿದ ಲಚ್ಚಿ; ಸೃಜನ್‌ಗೆ ಶಕುಂತಲಾದೇವಿ ಮೇಲೆ ಅನುಮಾನ? ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಿರುವ ಗ್ಯಾಂಗ್‌ನಲ್ಲಿ ಶಕುಂತಲಾದೇವಿ ಕೂಡ ಇದ್ರು ಎಂಬ ಸುಳಿವು ಸೃಜನ್‌ಗೆ ದೊರಕುವುದೇ? ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೊದಲ್ಲಿ ಇಂತಹ ಸುಳಿವು ದೊರಕಿದೆ.

ಸೃಜನ್‌ ಮತ್ತು ಲಚ್ಚಿ ಕ್ರಿಕೆಟ್‌ ಆಡುತ್ತಿದ್ದಾರೆ. ಗೌತಮ್‌ ದಿವಾನ್‌ ಮನೆಯಲ್ಲಿರುವ ಸೃಜನ್‌ ಸುಧಾಳಿಗೆ ಹತ್ತಿರವಾಗಲು ನೋಡಿದ್ದ. ಆತನಿಗೆ ಆಕೆಯ ಮೇಲೆ ಏನೋ ಭಾವನೆ. ಆಕೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಇದಕ್ಕೆ ಸುಧಾ ಕೋಪಗೊಳ್ಳುತ್ತಿದ್ದಳು.
icon

(1 / 11)

ಸೃಜನ್‌ ಮತ್ತು ಲಚ್ಚಿ ಕ್ರಿಕೆಟ್‌ ಆಡುತ್ತಿದ್ದಾರೆ. ಗೌತಮ್‌ ದಿವಾನ್‌ ಮನೆಯಲ್ಲಿರುವ ಸೃಜನ್‌ ಸುಧಾಳಿಗೆ ಹತ್ತಿರವಾಗಲು ನೋಡಿದ್ದ. ಆತನಿಗೆ ಆಕೆಯ ಮೇಲೆ ಏನೋ ಭಾವನೆ. ಆಕೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಇದಕ್ಕೆ ಸುಧಾ ಕೋಪಗೊಳ್ಳುತ್ತಿದ್ದಳು.

ಈ ಪ್ರೊಮೊದಲ್ಲಿ ಸೃಜನ್‌ ಮತ್ತು ಲಚ್ಚಿ ಹೊರಗಡೆ ಕ್ರಿಕೆಟ್‌ ಆಡುವ ದೃಶ್ಯವಿದೆ. ಲಚ್ಚಿಯೆಂದರೆ ಸೃಜನ್‌ಗೆ ಅಚ್ಚುಮೆಚ್ಚು. ಹಾಗೇ ಆಡುತ್ತಾ ಇದ್ದಾನೆ.
icon

(2 / 11)

ಈ ಪ್ರೊಮೊದಲ್ಲಿ ಸೃಜನ್‌ ಮತ್ತು ಲಚ್ಚಿ ಹೊರಗಡೆ ಕ್ರಿಕೆಟ್‌ ಆಡುವ ದೃಶ್ಯವಿದೆ. ಲಚ್ಚಿಯೆಂದರೆ ಸೃಜನ್‌ಗೆ ಅಚ್ಚುಮೆಚ್ಚು. ಹಾಗೇ ಆಡುತ್ತಾ ಇದ್ದಾನೆ.

ಈ ಸಮಯದಲ್ಲಿ ಬಾಲ್‌ ಲಚ್ಚಿಯ ಅಜ್ಜಿ ಕೋಣೆಗೆ ಬಿತ್ತು. ಲಚ್ಚಿಯ ಅಜ್ಜಿ ಅಂದ್ರೆ ನಿಮಗೆ ಗೊತ್ತಾಗಿರಬಹುದು. ಶಕುಂತಲಾದೇವಿಯ ಕೋಣೆಗೆ ಬಿತ್ತು.
icon

(3 / 11)

ಈ ಸಮಯದಲ್ಲಿ ಬಾಲ್‌ ಲಚ್ಚಿಯ ಅಜ್ಜಿ ಕೋಣೆಗೆ ಬಿತ್ತು. ಲಚ್ಚಿಯ ಅಜ್ಜಿ ಅಂದ್ರೆ ನಿಮಗೆ ಗೊತ್ತಾಗಿರಬಹುದು. ಶಕುಂತಲಾದೇವಿಯ ಕೋಣೆಗೆ ಬಿತ್ತು.

ಶಕುಂತಲಾದೇವಿಯನ್ನು ಕಂಡರೆ ಇತ್ತೀಚೆಗೆ ಲಚ್ಚಿಗೆ ಭಯ. ಅಪಹರಣ ಆದ ಬಳಿಕ ಆಕೆಗೆ ಕಣ್ಣಿನ ಮರೆಯಲ್ಲಿ ಈಕೆಯ ಚಪ್ಪಲ್‌ ಮತ್ತು ಸೀರೆಯನ್ನು ನೋಡಿದಂತೆ ನೆನಪಾಗುತ್ತದೆ. ಈಕೆಯ ಮುಖವೇ ಕಾಣಿಸುತ್ತದೆ.
icon

(4 / 11)

ಶಕುಂತಲಾದೇವಿಯನ್ನು ಕಂಡರೆ ಇತ್ತೀಚೆಗೆ ಲಚ್ಚಿಗೆ ಭಯ. ಅಪಹರಣ ಆದ ಬಳಿಕ ಆಕೆಗೆ ಕಣ್ಣಿನ ಮರೆಯಲ್ಲಿ ಈಕೆಯ ಚಪ್ಪಲ್‌ ಮತ್ತು ಸೀರೆಯನ್ನು ನೋಡಿದಂತೆ ನೆನಪಾಗುತ್ತದೆ. ಈಕೆಯ ಮುಖವೇ ಕಾಣಿಸುತ್ತದೆ.

ನನ್ನನ್ನು ಕಿಡ್ನ್ಯಾಪ್‌ ಮಾಡಿರುವ ಗ್ಯಾಂಗ್‌ನಲ್ಲಿ ಅಜ್ಜಿಯೂ ಇರಬಹುದು ಎಂಬ ಅನುಮಾನ ಲಚ್ಚಿಗೆ. ಇದೇ ಕಾರಣಕ್ಕೆ ಶಕುಂತಲಾದೇವಿಯನ್ನು ಕಂಡಾಗ ಭಯಬೀಳುತ್ತಾಳೆ.
icon

(5 / 11)

ನನ್ನನ್ನು ಕಿಡ್ನ್ಯಾಪ್‌ ಮಾಡಿರುವ ಗ್ಯಾಂಗ್‌ನಲ್ಲಿ ಅಜ್ಜಿಯೂ ಇರಬಹುದು ಎಂಬ ಅನುಮಾನ ಲಚ್ಚಿಗೆ. ಇದೇ ಕಾರಣಕ್ಕೆ ಶಕುಂತಲಾದೇವಿಯನ್ನು ಕಂಡಾಗ ಭಯಬೀಳುತ್ತಾಳೆ.

ಇಂದು ಕೂಡ ಬಾಲ್‌ ಅಜ್ಜಿ ಕೋಣೆಗೆ ಬಿದ್ದಾಗ ನಾನು ಅಲ್ಲಿಗೆ ಹೋಗೋದಿಲ್ಲ ಎನ್ನುತ್ತಾಳೆ. ನಿನ್ನ ಅಜ್ಜಿ ಕೋಣೆಗೆ ನೀನು ಹೋಗದೆ ನಾನು ಹೋದರೆ ಸರಿಯಾಗುತ್ತಾ ಎಂದು ಸೃಜನ್‌ ಕೇಳುತ್ತಾನೆ.
icon

(6 / 11)

ಇಂದು ಕೂಡ ಬಾಲ್‌ ಅಜ್ಜಿ ಕೋಣೆಗೆ ಬಿದ್ದಾಗ ನಾನು ಅಲ್ಲಿಗೆ ಹೋಗೋದಿಲ್ಲ ಎನ್ನುತ್ತಾಳೆ. ನಿನ್ನ ಅಜ್ಜಿ ಕೋಣೆಗೆ ನೀನು ಹೋಗದೆ ನಾನು ಹೋದರೆ ಸರಿಯಾಗುತ್ತಾ ಎಂದು ಸೃಜನ್‌ ಕೇಳುತ್ತಾನೆ.

ಕೊನೆಗೆ ಒಲ್ಲದ ಮನಸ್ಸಿನಿಂದ ಅಜ್ಜಿ ಕೋಣೆಗೆ ಹೋಗಿ ಬಾಲ್‌ ಹೆಕ್ಕುತ್ತಾಳೆ. ಅಲ್ಲಿದ್ದ ಶಕುಂತಲಾದೇವಿ ಪ್ರೀತಿಯಿಂದ ಲಚ್ಚಿ ಎಂದು ಕರೆಯುತ್ತಾರೆ. ಆಕೆಗೂ ಮಗು ಭಯಪಡುತ್ತಿದೆ ಎಂಬ ಅನುಮಾನವಿದೆ.
icon

(7 / 11)

ಕೊನೆಗೆ ಒಲ್ಲದ ಮನಸ್ಸಿನಿಂದ ಅಜ್ಜಿ ಕೋಣೆಗೆ ಹೋಗಿ ಬಾಲ್‌ ಹೆಕ್ಕುತ್ತಾಳೆ. ಅಲ್ಲಿದ್ದ ಶಕುಂತಲಾದೇವಿ ಪ್ರೀತಿಯಿಂದ ಲಚ್ಚಿ ಎಂದು ಕರೆಯುತ್ತಾರೆ. ಆಕೆಗೂ ಮಗು ಭಯಪಡುತ್ತಿದೆ ಎಂಬ ಅನುಮಾನವಿದೆ.

ಅಜ್ಜಿ ಶಕುಂತಲಾದೇವಿಯನ್ನು ನೋಡಿ ಲಚ್ಚಿ ಜೋರಾಗಿ "ಅಮ್ಮಾ....." ಎಂದು ಕಿರುಚುತ್ತಾಳೆ. ಹೊರಗೆ ಇದ್ದ ಸೃಜನ್‌ ಓಡೋಡಿ ಬರುತ್ತಾನೆ. ಶಕುಂತಲಾದೇವಿ ಅಡಗುತ್ತಾರೆ. ಸೃಜನ್‌ ಮಗುವನ್ನು ಕರೆದುಕೊಂಡು ಹೋಗುತ್ತಾನೆ.
icon

(8 / 11)

ಅಜ್ಜಿ ಶಕುಂತಲಾದೇವಿಯನ್ನು ನೋಡಿ ಲಚ್ಚಿ ಜೋರಾಗಿ "ಅಮ್ಮಾ....." ಎಂದು ಕಿರುಚುತ್ತಾಳೆ. ಹೊರಗೆ ಇದ್ದ ಸೃಜನ್‌ ಓಡೋಡಿ ಬರುತ್ತಾನೆ. ಶಕುಂತಲಾದೇವಿ ಅಡಗುತ್ತಾರೆ. ಸೃಜನ್‌ ಮಗುವನ್ನು ಕರೆದುಕೊಂಡು ಹೋಗುತ್ತಾನೆ.

ಈ ದೃಶ್ಯ ಎಲ್ಲಿಗೆ ತಲುಪಲಿದೆ ಎಂದು ನಾಳೆಯ ಎಪಿಸೋಡ್‌ನಲ್ಲಿ ತಿಳಿಯಬಹುದು. ಸೃಜನ್‌ ಮನಸ್ಸಿನ ಮೂಲೆಯಲ್ಲಿ ಶಕುಂತಲಾದೇವಿ ಕುರಿತು ಅನುಮಾನ ಹುಟ್ಟಬಹುದು.
icon

(9 / 11)

ಈ ದೃಶ್ಯ ಎಲ್ಲಿಗೆ ತಲುಪಲಿದೆ ಎಂದು ನಾಳೆಯ ಎಪಿಸೋಡ್‌ನಲ್ಲಿ ತಿಳಿಯಬಹುದು. ಸೃಜನ್‌ ಮನಸ್ಸಿನ ಮೂಲೆಯಲ್ಲಿ ಶಕುಂತಲಾದೇವಿ ಕುರಿತು ಅನುಮಾನ ಹುಟ್ಟಬಹುದು.

ಈತನಲ್ಲಿ ಅನುಮಾನ ಮೂಡುವ ಸಮಯದಲ್ಲಿಯೂ ಸುಧಾ ಅಲ್ಲಿಗೆ ಬಂದು ಮಗುವನ್ನು ಕರೆದುಕೊಂಡು ಹೋಗಬಹುದು. ಮುಂದೆ ಭೂಮಿಕಾಳಿಗೆ ಈ ಅನುಮಾನವನ್ನು ಸೃಜನ್‌ ತಿಳಿಸಬಹುದೇ? ತಿಳಿಸಿದರೂ ಭೂಮಿಕಾ ಈ ರಹಸ್ಯ ಕಂಡುಹಿಡಿಯಬಹುದೇ?  ಮುಂದಿನ ದಿನಗಳಲ್ಲಿ ಈ ವಿಷಯಗಳು ತಿಳಿದುಬರಲಿದೆ.
icon

(10 / 11)

ಈತನಲ್ಲಿ ಅನುಮಾನ ಮೂಡುವ ಸಮಯದಲ್ಲಿಯೂ ಸುಧಾ ಅಲ್ಲಿಗೆ ಬಂದು ಮಗುವನ್ನು ಕರೆದುಕೊಂಡು ಹೋಗಬಹುದು. ಮುಂದೆ ಭೂಮಿಕಾಳಿಗೆ ಈ ಅನುಮಾನವನ್ನು ಸೃಜನ್‌ ತಿಳಿಸಬಹುದೇ? ತಿಳಿಸಿದರೂ ಭೂಮಿಕಾ ಈ ರಹಸ್ಯ ಕಂಡುಹಿಡಿಯಬಹುದೇ? ಮುಂದಿನ ದಿನಗಳಲ್ಲಿ ಈ ವಿಷಯಗಳು ತಿಳಿದುಬರಲಿದೆ.

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಅಮೃತಧಾರೆ ಮಾತ್ರವಲ್ಲದೆ ವಿವಿಧ ಧಾರಾವಾಹಿಗಳ ನಿನ್ನೆಯ ಮತ್ತು ಇಂದಿನ ಸಂಚಿಕೆಗಳು, ಸೀರಿಯಲ್‌ ಸೆಲೆಬ್ರಿಟಿಗಳ ಸ್ಟೋರಿಗಳು, ಸಿನಿಮಾ, ಒಟಿಟಿ ಅಪ್‌ಡೇಟ್‌ಗಳನ್ನು ಓದಬಹುದು.
icon

(11 / 11)

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಅಮೃತಧಾರೆ ಮಾತ್ರವಲ್ಲದೆ ವಿವಿಧ ಧಾರಾವಾಹಿಗಳ ನಿನ್ನೆಯ ಮತ್ತು ಇಂದಿನ ಸಂಚಿಕೆಗಳು, ಸೀರಿಯಲ್‌ ಸೆಲೆಬ್ರಿಟಿಗಳ ಸ್ಟೋರಿಗಳು, ಸಿನಿಮಾ, ಒಟಿಟಿ ಅಪ್‌ಡೇಟ್‌ಗಳನ್ನು ಓದಬಹುದು.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು