ಸಿಕ್ಕಿಬಿದ್ಲು ಶಕುಂತಲಾ! ಪಂಕಜಾಳ ರಹಸ್ಯ ಬಹಿರಂಗಪಡಿಸಿದ ನಂಜಮ್ಮಳ ಗಂಡ- ಅಮೃತಧಾರೆ ಮಹಾಸಂಚಿಕೆಯಲ್ಲಿ ಅಚ್ಚರಿಯ ಬೆಳವಣಿಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಕ್ಕಿಬಿದ್ಲು ಶಕುಂತಲಾ! ಪಂಕಜಾಳ ರಹಸ್ಯ ಬಹಿರಂಗಪಡಿಸಿದ ನಂಜಮ್ಮಳ ಗಂಡ- ಅಮೃತಧಾರೆ ಮಹಾಸಂಚಿಕೆಯಲ್ಲಿ ಅಚ್ಚರಿಯ ಬೆಳವಣಿಗೆ

ಸಿಕ್ಕಿಬಿದ್ಲು ಶಕುಂತಲಾ! ಪಂಕಜಾಳ ರಹಸ್ಯ ಬಹಿರಂಗಪಡಿಸಿದ ನಂಜಮ್ಮಳ ಗಂಡ- ಅಮೃತಧಾರೆ ಮಹಾಸಂಚಿಕೆಯಲ್ಲಿ ಅಚ್ಚರಿಯ ಬೆಳವಣಿಗೆ

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಮಹಾ ಸಂಚಿಕೆ ಮೇ 23ರಂದು ಪ್ರಸಾರವಾಗುತ್ತಿದೆ. ಇದರ ಪ್ರೊಮೊದಲ್ಲಿ ಸಾಕಷ್ಟು ಅಚ್ಚರಿಯ ವಿಷಯ ಬಹಿರಂಗವಾಗಿದೆ. ನಂಜಮ್ಮನ ಗಂಡ ಕುಡಿದ ಮತ್ತಿನಲ್ಲಿ ಆನಂದ್‌ ಮುಂದೆ ಪಂಕಜಾಳ ರಹಸ್ಯ ಬಿಚ್ಚಿಟ್ಟಿದ್ದಾರೆ.

ಅಮೃತಧಾರೆಯಲ್ಲಿ ಕಳೆದ ಹಲವು ಸಂಚಿಕೆಗಳಿಂದ ಪಂಕಜಾಳ ರಹಸ್ಯ ಕಂಡುಹಿಡಿಯುವ ಪ್ರಯತ್ನವನ್ನು ಭೂಮಿಕಾ ಮಾಡುತ್ತಿದ್ದಾರೆ. ಆನಂದ್‌ ಕೂಡ ಈಕೆಗೆ ಸಾಥ್‌ ನೀಡುತ್ತಿದ್ದಾರೆ. ಪಂಕಜಾ ಮತ್ತು ಶಕುಂತಲಾದೇವಿ ಇಬ್ಬರೂ ಒಬ್ಬರೇ ಎಂಬ ಅನುಮಾನ ಭೂಮಿಕಾಳಿಗೆ ಬಂದಿದೆ.
icon

(1 / 12)

ಅಮೃತಧಾರೆಯಲ್ಲಿ ಕಳೆದ ಹಲವು ಸಂಚಿಕೆಗಳಿಂದ ಪಂಕಜಾಳ ರಹಸ್ಯ ಕಂಡುಹಿಡಿಯುವ ಪ್ರಯತ್ನವನ್ನು ಭೂಮಿಕಾ ಮಾಡುತ್ತಿದ್ದಾರೆ. ಆನಂದ್‌ ಕೂಡ ಈಕೆಗೆ ಸಾಥ್‌ ನೀಡುತ್ತಿದ್ದಾರೆ. ಪಂಕಜಾ ಮತ್ತು ಶಕುಂತಲಾದೇವಿ ಇಬ್ಬರೂ ಒಬ್ಬರೇ ಎಂಬ ಅನುಮಾನ ಭೂಮಿಕಾಳಿಗೆ ಬಂದಿದೆ.

ಶಕುಂತಲಾದೇವಿಯ ಕೋಣೆಯೊಳಗೆ ಪಂಕಜಾ ಎಂಬ ಹೆಸರಿನ ಜನನ ಪ್ರಮಾಣ ಪತ್ರ ದೊರಕಿತ್ತು. ಇದನ್ನು ನೋಡಿದ ಬಳಿಕ ಭೂಮಿಕಾಗೆ ಅನುಮಾನ ಬಂದಿದೆ. ಪಂಕಜಾಳ ಜನನ ಪ್ರಮಾಣ ಪತ್ರದಲ್ಲಿರುವ ಊರಿನಲ್ಲಿ ವಿಚಾರಿಸಿದ್ದಾರೆ.
icon

(2 / 12)

ಶಕುಂತಲಾದೇವಿಯ ಕೋಣೆಯೊಳಗೆ ಪಂಕಜಾ ಎಂಬ ಹೆಸರಿನ ಜನನ ಪ್ರಮಾಣ ಪತ್ರ ದೊರಕಿತ್ತು. ಇದನ್ನು ನೋಡಿದ ಬಳಿಕ ಭೂಮಿಕಾಗೆ ಅನುಮಾನ ಬಂದಿದೆ. ಪಂಕಜಾಳ ಜನನ ಪ್ರಮಾಣ ಪತ್ರದಲ್ಲಿರುವ ಊರಿನಲ್ಲಿ ವಿಚಾರಿಸಿದ್ದಾರೆ.

ಆ ಸಮಯದಲ್ಲಿ ನಂಜಮ್ಮ ಎಂಬ ಮಹಿಳೆ ಫೋನ್‌ ಮಾಡಿದ್ದಳು. ಶಕುಂತಲಾದೇವಿ ಆಕೆಯೊಂದಿಗೆ ಮಾತನಾಡಿ ಕನಕಪುರದ ಬಳಿ ಭೇಟಿಯಾಗಿದ್ದರು.
icon

(3 / 12)

ಆ ಸಮಯದಲ್ಲಿ ನಂಜಮ್ಮ ಎಂಬ ಮಹಿಳೆ ಫೋನ್‌ ಮಾಡಿದ್ದಳು. ಶಕುಂತಲಾದೇವಿ ಆಕೆಯೊಂದಿಗೆ ಮಾತನಾಡಿ ಕನಕಪುರದ ಬಳಿ ಭೇಟಿಯಾಗಿದ್ದರು.

ನಂಜಮ್ಮನಿಗೆ ಕೊಂಚ ಹಣ ನೀಡಿ ಆಕೆಯ ಬಾಯಿ ಮುಚ್ಚಿಸಿದ್ದರು.
icon

(4 / 12)

ನಂಜಮ್ಮನಿಗೆ ಕೊಂಚ ಹಣ ನೀಡಿ ಆಕೆಯ ಬಾಯಿ ಮುಚ್ಚಿಸಿದ್ದರು.

ಪಂಕಜಾಳ ರಹಸ್ಯ ತಿಳಿಯಲು ಭೂಮಿಕಾ  ಅದೇ ಊರಿಗೆ ಹೋಗಿದ್ದಾರೆ. ಫ್ಯಾಕ್ಟರಿ ವಿಸಿಟ್‌ ನೆಪದಲ್ಲಿ ಗೌತಮ್‌ನನ್ನೂ ಕರೆದುಕೊಂಡು ಆನಂದ್‌ ಹೋಗಿದ್ದರು. ಆನಂದ್‌, ಅಪರ್ಣಾ, ಗೌತಮ್‌, ಭೂಮಿಕಾ ಅಲ್ಲಿದ್ದರು. ಆ ಸಮಯದಲ್ಲಿ ಭೂಮಿಕಾ ಮತ್ತು ಆನಂದ್‌ಗೆ ನಂಜಮ್ಮನ ಗಂಡನ ಪರಿಚಯವಾಗಿದೆ.
icon

(5 / 12)

ಪಂಕಜಾಳ ರಹಸ್ಯ ತಿಳಿಯಲು ಭೂಮಿಕಾ ಅದೇ ಊರಿಗೆ ಹೋಗಿದ್ದಾರೆ. ಫ್ಯಾಕ್ಟರಿ ವಿಸಿಟ್‌ ನೆಪದಲ್ಲಿ ಗೌತಮ್‌ನನ್ನೂ ಕರೆದುಕೊಂಡು ಆನಂದ್‌ ಹೋಗಿದ್ದರು. ಆನಂದ್‌, ಅಪರ್ಣಾ, ಗೌತಮ್‌, ಭೂಮಿಕಾ ಅಲ್ಲಿದ್ದರು. ಆ ಸಮಯದಲ್ಲಿ ಭೂಮಿಕಾ ಮತ್ತು ಆನಂದ್‌ಗೆ ನಂಜಮ್ಮನ ಗಂಡನ ಪರಿಚಯವಾಗಿದೆ.

ಜೀ ಕನ್ನಡ ಇಂದು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ನಂಜಮ್ಮ ತನ್ನ ಗಂಡನಿಗೆ ಹಣ ನೀಡುತ್ತಾಳೆ. ಅವಳಲ್ಲಿ ಶಕುಂತಲಾದೇವಿ ನೀಡಿದ ಹಣವಿದೆ.  "ಬೇಕಾದ್ದಷ್ಟು ಕುಡಿ" ಎಂದು ಹಣ ನೀಡುತ್ತಾಳೆ.
icon

(6 / 12)

ಜೀ ಕನ್ನಡ ಇಂದು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ನಂಜಮ್ಮ ತನ್ನ ಗಂಡನಿಗೆ ಹಣ ನೀಡುತ್ತಾಳೆ. ಅವಳಲ್ಲಿ ಶಕುಂತಲಾದೇವಿ ನೀಡಿದ ಹಣವಿದೆ. "ಬೇಕಾದ್ದಷ್ಟು ಕುಡಿ" ಎಂದು ಹಣ ನೀಡುತ್ತಾಳೆ.

ಕುಡುಕ ಗಂಡ ನೇರ ಬಾರ್‌ಗೆ ಹೋಗಿದ್ದಾನೆ. ಭೂಮಿಕಾ ಮತ್ತು ಆನಂದ್‌ಗೆ ಇದು ಗೊತ್ತಾಗಿದೆ. ಆನಂದ್‌ ನೇರವಾಗಿ ಹೋಗಿ ಬಾರ್‌ನೊಳಗೆ ಈ ತಾತಾನ ಪಕ್ಕ ಕುಳಿತಿದ್ದಾನೆ.
icon

(7 / 12)

ಕುಡುಕ ಗಂಡ ನೇರ ಬಾರ್‌ಗೆ ಹೋಗಿದ್ದಾನೆ. ಭೂಮಿಕಾ ಮತ್ತು ಆನಂದ್‌ಗೆ ಇದು ಗೊತ್ತಾಗಿದೆ. ಆನಂದ್‌ ನೇರವಾಗಿ ಹೋಗಿ ಬಾರ್‌ನೊಳಗೆ ಈ ತಾತಾನ ಪಕ್ಕ ಕುಳಿತಿದ್ದಾನೆ.

ಈ ಊರಲ್ಲಿ ನಂಜಮ್ಮ ಎಂಬವರ ಬಗ್ಗೆ ಗೊತ್ತಾ ಎಂದು ಮಾತು ಆರಂಭಿಸಿದ್ದಾನೆ. ಬಳಿಕ ಪಂಕಜಾಳ ಬಗ್ಗೆ ವಿಚಾರಿಸಿದ್ದಾನೆ.
icon

(8 / 12)

ಈ ಊರಲ್ಲಿ ನಂಜಮ್ಮ ಎಂಬವರ ಬಗ್ಗೆ ಗೊತ್ತಾ ಎಂದು ಮಾತು ಆರಂಭಿಸಿದ್ದಾನೆ. ಬಳಿಕ ಪಂಕಜಾಳ ಬಗ್ಗೆ ವಿಚಾರಿಸಿದ್ದಾನೆ.

ಕುಡಿದ ಮತ್ತಿನಲ್ಲಿ ತಾತಾ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ. ಪಂಕಜಾ ಮತ್ತು ಕಾಂತನ ರಹಸ್ಯ ಹೇಳಿದ್ದಾನೆ.
icon

(9 / 12)

ಕುಡಿದ ಮತ್ತಿನಲ್ಲಿ ತಾತಾ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ. ಪಂಕಜಾ ಮತ್ತು ಕಾಂತನ ರಹಸ್ಯ ಹೇಳಿದ್ದಾನೆ.

ಕಾಂತ ಮತ್ತು ಪಂಕಜಾ ಅಣ್ಣ ತಂಗಿ. ಕಾಂತಾ ಅಪಘಾತ ಮಾಡಿ ಊರಿಂದ ಓಡಿ ಹೋದ. ಇಲ್ಲಾಂದ್ರೆ ಜೈಲಿಗೆ ಹೋಗಬೇಕಿತ್ತು ಎಂದು ಹೇಳುತ್ತಾನೆ. ಇದನ್ನು ಕೇಳಿದ ಆನಂದ್‌ ಅಚ್ಚರಿಗೆ ಈಡಾಗುತ್ತಾನೆ.
icon

(10 / 12)

ಕಾಂತ ಮತ್ತು ಪಂಕಜಾ ಅಣ್ಣ ತಂಗಿ. ಕಾಂತಾ ಅಪಘಾತ ಮಾಡಿ ಊರಿಂದ ಓಡಿ ಹೋದ. ಇಲ್ಲಾಂದ್ರೆ ಜೈಲಿಗೆ ಹೋಗಬೇಕಿತ್ತು ಎಂದು ಹೇಳುತ್ತಾನೆ. ಇದನ್ನು ಕೇಳಿದ ಆನಂದ್‌ ಅಚ್ಚರಿಗೆ ಈಡಾಗುತ್ತಾನೆ.

ಇಂದಿನ ಮಹಾ ಸಂಚಿಕೆಯಲ್ಲಿ ಪಂಕಜಾ ಮತ್ತು ಲಕ್ಷ್ಮಿಕಾಂತ್‌ನ ಇನ್ನಷ್ಟು  ರಹಸ್ಯಗಳು ಹೊರಬೀಳುವ ಸೂಚನೆಯಿದೆ.
icon

(11 / 12)

ಇಂದಿನ ಮಹಾ ಸಂಚಿಕೆಯಲ್ಲಿ ಪಂಕಜಾ ಮತ್ತು ಲಕ್ಷ್ಮಿಕಾಂತ್‌ನ ಇನ್ನಷ್ಟು ರಹಸ್ಯಗಳು ಹೊರಬೀಳುವ ಸೂಚನೆಯಿದೆ.

ಆದರೆ, ಈ ವಿಚಾರ ಗೌತಮ್‌ಗೆ ತಲುಪುವ ಸಾಧ್ಯತೆ ಇದೆಯೇ ಎಂದು ಕಾದು ನೋಡಬೇಕಿದೆ. ನಂಜಮ್ಮನ ಗಂಡ ಅಮಲು ಇಳಿದ ಬಳಿಕ ಯಾವುದೇ ಮಾಹಿತಿ ನೀಡದೆ ಇರಬಹುದು. ಒಟ್ಟಾರೆ, ಈ ಪ್ರೊಮೊ ನೋಡಿ ಸೀರಿಯಲ್‌ ಪ್ರೇಕ್ಷಕರು ಖುಷಿಯಾಗಿದ್ದಾರೆ.
icon

(12 / 12)

ಆದರೆ, ಈ ವಿಚಾರ ಗೌತಮ್‌ಗೆ ತಲುಪುವ ಸಾಧ್ಯತೆ ಇದೆಯೇ ಎಂದು ಕಾದು ನೋಡಬೇಕಿದೆ. ನಂಜಮ್ಮನ ಗಂಡ ಅಮಲು ಇಳಿದ ಬಳಿಕ ಯಾವುದೇ ಮಾಹಿತಿ ನೀಡದೆ ಇರಬಹುದು. ಒಟ್ಟಾರೆ, ಈ ಪ್ರೊಮೊ ನೋಡಿ ಸೀರಿಯಲ್‌ ಪ್ರೇಕ್ಷಕರು ಖುಷಿಯಾಗಿದ್ದಾರೆ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು