ಅಮೃತಧಾರೆಯಲ್ಲಿ ದುರುಳ ಜೈದೇವನ 10+ ವಿಫಲ ಸಾಹಸಗಳು; ಅಯ್ಯೋ ವಿಧಿಯೇ , ಸಕ್ಸಸ್‌ ಇವನ ನಸೀಬಿನಲ್ಲಿ ಇಲ್ಲ ಕಣ್ರೀ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆಯಲ್ಲಿ ದುರುಳ ಜೈದೇವನ 10+ ವಿಫಲ ಸಾಹಸಗಳು; ಅಯ್ಯೋ ವಿಧಿಯೇ , ಸಕ್ಸಸ್‌ ಇವನ ನಸೀಬಿನಲ್ಲಿ ಇಲ್ಲ ಕಣ್ರೀ!

ಅಮೃತಧಾರೆಯಲ್ಲಿ ದುರುಳ ಜೈದೇವನ 10+ ವಿಫಲ ಸಾಹಸಗಳು; ಅಯ್ಯೋ ವಿಧಿಯೇ , ಸಕ್ಸಸ್‌ ಇವನ ನಸೀಬಿನಲ್ಲಿ ಇಲ್ಲ ಕಣ್ರೀ!

ಅಮೃತಧಾರೆ ಧಾರಾವಾಹಿಯ ಶಕುಂತಲಾ ಗ್ಯಾಂಗ್‌ನ ಪ್ರಮುಖ ಪಾತ್ರದಾರಿ "ಜೈದೇವ್‌" ಮಾಡದ ಕೆಟ್ಟ ಕೆಲಸವಿಲ್ಲ. ಆದರೆ, ಈತ ಮಾಡಿದ ಕುತಂತ್ರಗಳು ಯಶಸ್ಸು ಕಾಣುವುದೇ ಇಲ್ಲ. ಅಣುಬಾಂಬ್‌ ಎಂದು ಈತ ಮಾಡಿದ ಪ್ಲ್ಯಾನ್‌ಗಳೆಲ್ಲವೂ ಠುಸ್‌ ಪಟಾಕಿಯಾಗುತ್ತಿವೆ. ಒಂಥರ ಶಾಪಗ್ರಸ್ಥ ಕ್ಯಾರೆಕ್ಟರ್‌ ಈತನದ್ದು.

ಅಮೃತಧಾರೆ ಧಾರಾವಾಹಿಯ ನೆಗೆಟಿವ್‌ ಪಾತ್ರ "ಜೈದೇವ್‌"ಗೆ ಟೈಂ ಸರಿಯಾಗಿರುವ ಸಮಯವೇ ಇಲ್ಲ. ಆತ ಮಾಡಿದ ಪ್ಲ್ಯಾನ್‌ಗಳೆಲ್ಲವೂ ಠುಸ್‌ ಆಗುತ್ತವೆ. ಗೌತಮ್‌ ಅಥವಾ ಭೂಮಿಕಾ ಎದಿರು ಈತ ಮಾಡಿದ ಯೋಜನೆಗಳು ವಿಫಲವಾಗುತ್ತಿವೆ. ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಹಲವು ಸಂಚಿಕೆಗಳಲ್ಲಿನ ಜೈದೇವನ ಪ್ಲಾಪ್‌ ಶೋಗಳನ್ನು ನೆನಪಿಸಿಕೊಳ್ಳೋಣ ಬನ್ನಿ.
icon

(1 / 12)

ಅಮೃತಧಾರೆ ಧಾರಾವಾಹಿಯ ನೆಗೆಟಿವ್‌ ಪಾತ್ರ "ಜೈದೇವ್‌"ಗೆ ಟೈಂ ಸರಿಯಾಗಿರುವ ಸಮಯವೇ ಇಲ್ಲ. ಆತ ಮಾಡಿದ ಪ್ಲ್ಯಾನ್‌ಗಳೆಲ್ಲವೂ ಠುಸ್‌ ಆಗುತ್ತವೆ. ಗೌತಮ್‌ ಅಥವಾ ಭೂಮಿಕಾ ಎದಿರು ಈತ ಮಾಡಿದ ಯೋಜನೆಗಳು ವಿಫಲವಾಗುತ್ತಿವೆ. ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಹಲವು ಸಂಚಿಕೆಗಳಲ್ಲಿನ ಜೈದೇವನ ಪ್ಲಾಪ್‌ ಶೋಗಳನ್ನು ನೆನಪಿಸಿಕೊಳ್ಳೋಣ ಬನ್ನಿ.

ಪ್ಲಾಪ್‌ ಶೋ 1: ತನಗೆ ಪ್ರಮೋಷನ್‌ ದೊರಕಿದ ಬಳಿಕ ಆನಂದ್‌ ಸೇರಿದಂತೆ ಹಲವು ಸೀನಿಯರ್‌ಗಳ ಉದ್ಯೋಗ ಕಡಿತ ಮಾಡುತ್ತಾನೆ. ಈ ವಿಷಯ ಆನಂದ್‌ಗೆ ಗೊತ್ತಾಗಿ "ಕಂಪನಿಯ ಬಾಸ್‌ ನೀನಾ ನಾನಾ"  ಎಂದು ಗದರಿಸಿ ಎಲ್ಲರಿಗೂ ಬೋನಸ್‌ ನೀಡಿ ಕೆಲಸಕ್ಕೆ ವಾಪಸ್‌ ತೆಗೆದುಕೊಳ್ಳುತ್ತಾನೆ.
icon

(2 / 12)

ಪ್ಲಾಪ್‌ ಶೋ 1: ತನಗೆ ಪ್ರಮೋಷನ್‌ ದೊರಕಿದ ಬಳಿಕ ಆನಂದ್‌ ಸೇರಿದಂತೆ ಹಲವು ಸೀನಿಯರ್‌ಗಳ ಉದ್ಯೋಗ ಕಡಿತ ಮಾಡುತ್ತಾನೆ. ಈ ವಿಷಯ ಆನಂದ್‌ಗೆ ಗೊತ್ತಾಗಿ "ಕಂಪನಿಯ ಬಾಸ್‌ ನೀನಾ ನಾನಾ" ಎಂದು ಗದರಿಸಿ ಎಲ್ಲರಿಗೂ ಬೋನಸ್‌ ನೀಡಿ ಕೆಲಸಕ್ಕೆ ವಾಪಸ್‌ ತೆಗೆದುಕೊಳ್ಳುತ್ತಾನೆ.

ಪ್ಲಾಪ್‌  ಶೋ 2: ಭಾಗ್ಯಮ್ಮ‌, ಲಚ್ಚಿ, ಸುಧಾ ಮತ್ತು ಭೂಮಿಕಾಳನ್ನು ಕಾರು ಗುದ್ದಿಸಿ ಕೊಲೆ ಮಾಡಲು ಯತ್ನಿಸಿದ. ಆ ಸಮಯದಲ್ಲಿ ಸೃಜನ್‌ ಬಂದು ಕಾಪಾಡಿದ. ಜೈದೇವ್‌  ಪ್ಲ್ಯಾನ್‌ ಠುಸ್ಸಾಯ್ತು.
icon

(3 / 12)

ಪ್ಲಾಪ್‌ ಶೋ 2: ಭಾಗ್ಯಮ್ಮ‌, ಲಚ್ಚಿ, ಸುಧಾ ಮತ್ತು ಭೂಮಿಕಾಳನ್ನು ಕಾರು ಗುದ್ದಿಸಿ ಕೊಲೆ ಮಾಡಲು ಯತ್ನಿಸಿದ. ಆ ಸಮಯದಲ್ಲಿ ಸೃಜನ್‌ ಬಂದು ಕಾಪಾಡಿದ. ಜೈದೇವ್‌ ಪ್ಲ್ಯಾನ್‌ ಠುಸ್ಸಾಯ್ತು.

ಪ್ಲಾಪ್‌ ಶೋ 3: ಇತ್ತೀಚೆಗೆ ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಿದ್ದ ಜೈದೇವನ ಪ್ಲ್ಯಾನ್‌ ಕೂಡ ಠುಸ್‌ ಆಗಿತ್ತು. ತನ್ನ ತಾಯಿ ಜತೆ ಸೇರಿ ಮಾಡಿದ ಈ ಪ್ರಸಂಗದಲ್ಲಿಯೂ ಇವನಿಗೆ ಯಶಸ್ಸು ದೊರಕಲಿಲ್ಲ.
icon

(4 / 12)

ಪ್ಲಾಪ್‌ ಶೋ 3: ಇತ್ತೀಚೆಗೆ ಲಚ್ಚಿಯನ್ನು ಕಿಡ್ನ್ಯಾಪ್‌ ಮಾಡಿದ್ದ ಜೈದೇವನ ಪ್ಲ್ಯಾನ್‌ ಕೂಡ ಠುಸ್‌ ಆಗಿತ್ತು. ತನ್ನ ತಾಯಿ ಜತೆ ಸೇರಿ ಮಾಡಿದ ಈ ಪ್ರಸಂಗದಲ್ಲಿಯೂ ಇವನಿಗೆ ಯಶಸ್ಸು ದೊರಕಲಿಲ್ಲ.

ಪ್ಲಾಪ್‌ ಶೋ 4: ಇತ್ತೀಚೆಗೆ ದೇವಸ್ಥಾನದಲ್ಲಿ ದಿಯಾಳನ್ನು ಮದುವೆಯಾಗಲು ಸಿದ್ಧನಾದ. ಈತನ  ಯೋಜನೆಯನ್ನು ಮಲ್ಲಿ ಬಂದು ಠುಸ್‌ ಮಾಡಿದ್ಲು.
icon

(5 / 12)

ಪ್ಲಾಪ್‌ ಶೋ 4: ಇತ್ತೀಚೆಗೆ ದೇವಸ್ಥಾನದಲ್ಲಿ ದಿಯಾಳನ್ನು ಮದುವೆಯಾಗಲು ಸಿದ್ಧನಾದ. ಈತನ ಯೋಜನೆಯನ್ನು ಮಲ್ಲಿ ಬಂದು ಠುಸ್‌ ಮಾಡಿದ್ಲು.

ಪ್ಲಾಪ್‌ ಶೋ 5: ಭೂಪತಿ ಜತೆ ಸೇರಿದ ಜೈದೇವ್‌, ದಿವಾನ್‌ ಕಂಪನಿಯನ್ನು ನಾಶ ಮಾಡಲು ಯತ್ನಿಸಿದ. ಆದರೆ, ಇದು ಕೂಡ ವಿಫಲವಾಯಿತು.
icon

(6 / 12)

ಪ್ಲಾಪ್‌ ಶೋ 5: ಭೂಪತಿ ಜತೆ ಸೇರಿದ ಜೈದೇವ್‌, ದಿವಾನ್‌ ಕಂಪನಿಯನ್ನು ನಾಶ ಮಾಡಲು ಯತ್ನಿಸಿದ. ಆದರೆ, ಇದು ಕೂಡ ವಿಫಲವಾಯಿತು.

ಪ್ಲಾಪ್‌ ಶೋ 6: ಸಹೋದರತ್ವದ ಬೆಲೆಯೇ ಗೊತ್ತಿಲ್ಲದಂತೆ ತನ್ನ ತಮ್ಮ ಪಾರ್ಥನನ್ನೇ ಕೊಲ್ಲಲು ಯತ್ನಿಸಿದ. ಆದರೆ, ಆ ಯೋಜನೆಯೂ ವಿಫಲವಾಯಿತು.
icon

(7 / 12)

ಪ್ಲಾಪ್‌ ಶೋ 6: ಸಹೋದರತ್ವದ ಬೆಲೆಯೇ ಗೊತ್ತಿಲ್ಲದಂತೆ ತನ್ನ ತಮ್ಮ ಪಾರ್ಥನನ್ನೇ ಕೊಲ್ಲಲು ಯತ್ನಿಸಿದ. ಆದರೆ, ಆ ಯೋಜನೆಯೂ ವಿಫಲವಾಯಿತು.

ಪ್ಲಾಪ್‌ ಶೋ 7: ಕೆಲಸದವಳು ಮಲ್ಲಿ ಜತೆ ಅಕ್ರಮ ಸಂಬಂಧ ಮಾಡಿದ. ಅವಳನ್ನು ಬಿಟ್ಟು ಅಪೇಕ್ಷಾಳನ್ನು ಮದುವೆಯಾಗಲು ನೋಡಿದ. ಗೌತಮ್‌ ಭೂಮಿಕಾ ಮುಂದೆ ನಿಂತು ಮಲ್ಲಿಯೊಂದಿಗೆ ಜೈದೇವನ ಮದುವೆ ಮಾಡಿದ್ರು. ಜೈದೇವ ಅಂದುಕೊಂಡದ್ದೆಲ್ಲ ಹಾಳಾಯ್ತು.
icon

(8 / 12)

ಪ್ಲಾಪ್‌ ಶೋ 7: ಕೆಲಸದವಳು ಮಲ್ಲಿ ಜತೆ ಅಕ್ರಮ ಸಂಬಂಧ ಮಾಡಿದ. ಅವಳನ್ನು ಬಿಟ್ಟು ಅಪೇಕ್ಷಾಳನ್ನು ಮದುವೆಯಾಗಲು ನೋಡಿದ. ಗೌತಮ್‌ ಭೂಮಿಕಾ ಮುಂದೆ ನಿಂತು ಮಲ್ಲಿಯೊಂದಿಗೆ ಜೈದೇವನ ಮದುವೆ ಮಾಡಿದ್ರು. ಜೈದೇವ ಅಂದುಕೊಂಡದ್ದೆಲ್ಲ ಹಾಳಾಯ್ತು.

ಪ್ಲಾಪ್‌ ಶೋ 8: ಅಪೇಕ್ಷಾ ಮತ್ತು ಪಾರ್ಥನ ಮದುವೆ ಕಟ್‌ ಮಾಡಬೇಕೆಂದು ಇವರಿಬ್ಬರನ್ನು ಸಾಯಿಸಲು ಯತ್ನಿಸಿದ್ದೂ ವಿಫಲವಾಯಿತು. ಇವರಿಬ್ಬರ ಮದುವೆಯಾಯಿತು.
icon

(9 / 12)

ಪ್ಲಾಪ್‌ ಶೋ 8: ಅಪೇಕ್ಷಾ ಮತ್ತು ಪಾರ್ಥನ ಮದುವೆ ಕಟ್‌ ಮಾಡಬೇಕೆಂದು ಇವರಿಬ್ಬರನ್ನು ಸಾಯಿಸಲು ಯತ್ನಿಸಿದ್ದೂ ವಿಫಲವಾಯಿತು. ಇವರಿಬ್ಬರ ಮದುವೆಯಾಯಿತು.

ಪ್ಲಾಪ್‌ ಶೋ 9: ಚಿಕ್ಕಮಗಳೂರಿನಲ್ಲಿ ಭೂಮಿಕಾನ ಕಿಡ್ನ್ಯಾಪ್‌ ಮಾಡುವ ಸಾಹಸಕ್ಕೆ ಕೈ ಹಾಕಿದ. ಆ ಪ್ಲ್ಯಾನ್‌ ಕೂಡ ಎಕ್ಕುಟ್ಟು ಹೋಯಿತು.
icon

(10 / 12)

ಪ್ಲಾಪ್‌ ಶೋ 9: ಚಿಕ್ಕಮಗಳೂರಿನಲ್ಲಿ ಭೂಮಿಕಾನ ಕಿಡ್ನ್ಯಾಪ್‌ ಮಾಡುವ ಸಾಹಸಕ್ಕೆ ಕೈ ಹಾಕಿದ. ಆ ಪ್ಲ್ಯಾನ್‌ ಕೂಡ ಎಕ್ಕುಟ್ಟು ಹೋಯಿತು.

ಪ್ಲಾಪ್‌ ಶೋ 10: ಅಪಘಾತ ಮಾಡಿ ಮಲ್ಲಿಯನ್ನು ಸಾಯಿಸಲು ಯತ್ನಿಸಿದ ಆಗಲಿಲ್ಲ. ಆಸ್ಪತ್ರೆಯಲ್ಲಿ ಮಲ್ಲಿಯನ್ನು ಸಾಯಿಸುವ ಯತ್ನ ಮಾಡಿದ,  ಅದೂ ವಿಫಲವಾಯಿತು. ಮಲ್ಲಿಯನ್ನು ಸಾಯಿಸುವ ಇವನ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ.
icon

(11 / 12)

ಪ್ಲಾಪ್‌ ಶೋ 10: ಅಪಘಾತ ಮಾಡಿ ಮಲ್ಲಿಯನ್ನು ಸಾಯಿಸಲು ಯತ್ನಿಸಿದ ಆಗಲಿಲ್ಲ. ಆಸ್ಪತ್ರೆಯಲ್ಲಿ ಮಲ್ಲಿಯನ್ನು ಸಾಯಿಸುವ ಯತ್ನ ಮಾಡಿದ, ಅದೂ ವಿಫಲವಾಯಿತು. ಮಲ್ಲಿಯನ್ನು ಸಾಯಿಸುವ ಇವನ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ.

ಇನ್ನುಳಿದಂತೆ ಆನಂದನನ್ನು ಕೊಲ್ಲುವ ಯತ್ನ, ಕಂಪನಿಯ ವಿಲ್‌ ಪತ್ರ ಅಡಗಿಸಿಡುವ ಯತ್ನ, ಭಾಗ್ಯಮ್ಮನ ಮನೆಗೆ ಬೆಂಕಿ ಹಾಕಿ ಸಾಯಿಸುವ ಪ್ರಯತ್ನ ಸೇರಿದಂತೆ ಇನ್ನೂ ಹತ್ತು ಹಲವು ಜೈದೇವ್‌ನ ವಿಫಲ ಪ್ರಸಂಗಗಳು ನಿಮಗೆ ನೆನಪಿಗೆ ಬರಬಹುದು.
icon

(12 / 12)

ಇನ್ನುಳಿದಂತೆ ಆನಂದನನ್ನು ಕೊಲ್ಲುವ ಯತ್ನ, ಕಂಪನಿಯ ವಿಲ್‌ ಪತ್ರ ಅಡಗಿಸಿಡುವ ಯತ್ನ, ಭಾಗ್ಯಮ್ಮನ ಮನೆಗೆ ಬೆಂಕಿ ಹಾಕಿ ಸಾಯಿಸುವ ಪ್ರಯತ್ನ ಸೇರಿದಂತೆ ಇನ್ನೂ ಹತ್ತು ಹಲವು ಜೈದೇವ್‌ನ ವಿಫಲ ಪ್ರಸಂಗಗಳು ನಿಮಗೆ ನೆನಪಿಗೆ ಬರಬಹುದು.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು