Seetha Rama Serial: ಭಾರ್ಗವಿ ಎದುರು ಅಸಲಿ ಆಟಕ್ಕಿಳಿದು, ಸಿಹಿ ಸಾವಿನ ತನಿಖೆಗಿಳಿದ ಸತ್ಯಜೀತ್ ದೇಸಾಯಿ!
- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಸಾವು ಸಹಜ ಅಲ್ಲ ಅನ್ನೋ ಅನುಮಾನ ಸತ್ಯನಿಗೆ ಮೂಡಿದೆ. ಆ ಸಾವಿನ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ತಿಳಿಯಲು, ತನಿಖೆ ಆರಂಭಿಸಿದ್ದಾನೆ. ಪೊಲೀಸರನ್ನ ಭೇಟಿ ಮಾಡಿ, ಮಾಹಿತಿ ಪಡೆದುಕೊಳ್ಳುತ್ತಿದ್ದಾನೆ. ಮತ್ತೊಂದೆಡೆ ಸತ್ಯನ ಈ ಬದಲಾವಣೆ, ಭಾರ್ಗವಿಗೂ ನಡುಕ ಹುಟ್ಟಿಸಿದೆ.
- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಸಾವು ಸಹಜ ಅಲ್ಲ ಅನ್ನೋ ಅನುಮಾನ ಸತ್ಯನಿಗೆ ಮೂಡಿದೆ. ಆ ಸಾವಿನ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ತಿಳಿಯಲು, ತನಿಖೆ ಆರಂಭಿಸಿದ್ದಾನೆ. ಪೊಲೀಸರನ್ನ ಭೇಟಿ ಮಾಡಿ, ಮಾಹಿತಿ ಪಡೆದುಕೊಳ್ಳುತ್ತಿದ್ದಾನೆ. ಮತ್ತೊಂದೆಡೆ ಸತ್ಯನ ಈ ಬದಲಾವಣೆ, ಭಾರ್ಗವಿಗೂ ನಡುಕ ಹುಟ್ಟಿಸಿದೆ.
(1 / 10)
ದೇವಸ್ಥಾನ ಮುಂಭಾಗದಲ್ಲಿ ಸುಬ್ಬಿ ಮತ್ತವರ ಸ್ನೇಹಿತರ ಜತೆ ಕೂತಿದ್ದಾಳೆ. ಹೊಟ್ಟೆ ಹಸಿವಿನಿಂದ ಕಂಗೆಟ್ಟಿದ್ದಾಳೆ. ದೇವಸ್ಥಾನದಲ್ಲಿ ಪ್ರಸಾದವಾದ್ರೂ ತಿಂದು ಬರೋಣವೆಂದು ಹೊರಟಿದ್ದಾಳೆ.
(2 / 10)
ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿರುವ ಸೀತಾ, ಗೊಂಬೆಯನ್ನೇ ಸಿಹಿ ಎಂದುಕೊಂಡಿದ್ದಾಳೆ. ಆಕೆಯ ಆರೈಕೆಯಲ್ಲಿಯೇ ಕಾಲ ಕಳೆಯುತ್ತಿರುವ ರಾಮ್, ಆಕೆಯನ್ನೀಗ ದೇವಸ್ಥಾನಕ್ಕೆ ಕರೆತಂದಿದ್ದಾನೆ.
(4 / 10)
ಸೀತಮ್ಮನನ್ನು ನೋಡಿದ ಖುಷಿಯಲ್ಲಿ ಸುಬ್ಬಿ ಕಳೆದುಹೋಗಿದ್ದಾಳೆ. ಪಕ್ಕದಲ್ಲಿಯೇ ನಿಂತು ಸೀತಮ್ಮನನ್ನೇ ದಿಟ್ಟಿಸಿದ್ದಾಳೆ.
(5 / 10)
ಸೀತಾಳನ್ನು ನೋಡಲು ಹೋಗಿ, ಸತ್ಯನ ಕಣ್ಣಿಗೆ ಬಿದ್ದಿದ್ದಳು ಸುಬ್ಬಿ. ಅಷ್ಟೇ ಅಲ್ಲ ಸುಬ್ಬಿಯನ್ನೇ ಸಿಹಿ ಎಂದು ಮುದ್ದಾಡಿದ್ದಳು ಸೀತಾ.
(6 / 10)
ಮತ್ತೊಂದು ಕಡೆ, ಸಿಹಿ ಸಾವಿನ ಹಿನ್ನೆಲೆ ತಿಳಿದುಕೊಳ್ಳಲು ಸತ್ಯ ಮುಂದಾಗಿದ್ದಾನೆ. ಕುಡಿತದ ಚಟ ಬಿಟ್ಟು, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ಹೊರಟಿದ್ದಾನೆ.
(7 / 10)
ಇನ್ನೊಂದು ಕಡೆ, ಹೊಸ ಆಟ ಶುರುವಿಟ್ಟುಕೊಂಡಿದ್ದಾನೆ ಸತ್ಯ, ಟಿಪ್ಟಾಪ್ ಆಗಿ ತಯಾರಾಗಿ ಹೊರಗಡೆ ಹೊರಟಿದ್ದವನಿಗೆ, ಎಲ್ಲಗೆ ಹೋಗ್ತಿದ್ದೀಯಾ ಸತ್ಯ ಎಂದು ಭಾರ್ಗವಿ ಪ್ರಶ್ನೆ ಮಾಡಿದ್ದಾಳೆ.
(8 / 10)
ಭಾರ್ಗವಿಯ ಪ್ರಶ್ನೆಗೆ, ಯಾರಾದ್ರೂ ಹೊರಗಡೆ ಹೊರಟಾಗ, ಎಲ್ಲಿಗೆ ಅಂತ ಕೇಳಬಾರದು ಅತ್ತಿಗೆ. ಆಲ್ ಬೆಸ್ಟ್ ಅಂತ ಹೇಳಿ ಎಂದು ಕಳಕಳಿಯಿಂದ ಕೇಳಿದ್ದಾನೆ.
(9 / 10)
ಆಲ್ ದಿ ಬೆಸ್ಟ್ ಮೈದುನ ಎಂದಿದ್ದಾಳೆ. ಸತ್ಯ ಹೊರ ನಡೆಯುತ್ತಿದ್ದಂತೆ, ಹಲ್ಲು ಮಸಿಯುತ್ತಲೇ ಆತನನ್ನೇ ದಿಟ್ಟಿಸಿ ನೋಡಿದ್ದಾಳೆ ಭಾರ್ಗವಿ.
ಇತರ ಗ್ಯಾಲರಿಗಳು