ʻಕ್ರೂರತನವನ್ನು ವಿಜೃಂಭಿಸಲು 1000 ಎಪಿಸೋಡ್, ಶಿಕ್ಷೆಗೆ ಒಂದೇ ವಾರ!ʼ ʻಸೀತಾ ರಾಮʼ ಧಾರಾವಾಹಿ ಬಗ್ಗೆ ವೀಕ್ಷಕರ ಅಸಮಾಧಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ʻಕ್ರೂರತನವನ್ನು ವಿಜೃಂಭಿಸಲು 1000 ಎಪಿಸೋಡ್, ಶಿಕ್ಷೆಗೆ ಒಂದೇ ವಾರ!ʼ ʻಸೀತಾ ರಾಮʼ ಧಾರಾವಾಹಿ ಬಗ್ಗೆ ವೀಕ್ಷಕರ ಅಸಮಾಧಾನ

ʻಕ್ರೂರತನವನ್ನು ವಿಜೃಂಭಿಸಲು 1000 ಎಪಿಸೋಡ್, ಶಿಕ್ಷೆಗೆ ಒಂದೇ ವಾರ!ʼ ʻಸೀತಾ ರಾಮʼ ಧಾರಾವಾಹಿ ಬಗ್ಗೆ ವೀಕ್ಷಕರ ಅಸಮಾಧಾನ

ಜೀ ಕನ್ನಡದಲ್ಲಿ ಕೊನೇ ಸಂಚಿಕೆಗಳ ಪ್ರಸಾರ ಆರಂಭಿಸಿದೆ ʻಸೀತಾ ರಾಮʼ ಧಾರಾವಾಹಿ. ಬಚ್ಚಿಟ್ಟ ಸತ್ಯಗಳ ಅನಾವರಣ ಪ್ರಕ್ರಿಯೆ ಆರಂಭವಾಗಿದೆ. ಮೊದಲಿಗೆ ಸಿಹಿ ಸುಬ್ಬಿ ಅವಳಿ ಜವಳಿ ಎಂಬುದು ಗೊತ್ತಾಗಿದೆ. ಇದರ ಬೆನ್ನಲ್ಲೇ ಇಂದ್ರ- ವಾಣಿ ಸಾವಿನ ಹಿಂದಿನ ರಹಸ್ಯವೂ ಬಯಲಾಗಲಿದೆ. ಆದರೆ, ಎಲ್ಲವನ್ನೂ ಒಂದೇ ವಾರದಲ್ಲಿ ಬಯಲಿಗೆಳೆಯುವ ಪ್ರಕ್ರಿಯೆಗೆ ವೀಕ್ಷಕ ಕೊಂಚ ರೋಸಿಹೋಗಿದ್ದಾನೆ.

ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಇಂದ್ರ- ವಾಣಿ ದಂಪತಿಯ ಪುಣ್ಯ ತಿಥಿ ಕಾರ್ಯ ನೆರವೇರಿಸುತ್ತಿದ್ದಾರೆ. ಅಚ್ಚರಿಯ ರೀತಿಯಲ್ಲಿ ಕರೀಮ್‌ ಕಾಕಾ ಅವರ ಆಗಮನವಾಗಿದೆ.
icon

(1 / 10)

ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಇಂದ್ರ- ವಾಣಿ ದಂಪತಿಯ ಪುಣ್ಯ ತಿಥಿ ಕಾರ್ಯ ನೆರವೇರಿಸುತ್ತಿದ್ದಾರೆ. ಅಚ್ಚರಿಯ ರೀತಿಯಲ್ಲಿ ಕರೀಮ್‌ ಕಾಕಾ ಅವರ ಆಗಮನವಾಗಿದೆ.
(Images\ Zee Kannada)

ಅಷ್ಟಕ್ಕೂ ಈ ಕರೀಮ್‌ ಕಾಕಾ, ದೇಸಾಯಿ ಕುಟುಂಬದ ಕಾರ್‌ ಡ್ರೈವರ್‌ ಆಗಿದ್ದವರು. ಇದೀಗ ದಿಢೀರ್‌ ಎಂದು ಸೂರ್ಯಪ್ರಕಾಶ್‌ ದೇಸಾಯಿ ಮನೆಗೆ ಆಗಮಿಸಿದ್ದಾರೆ.
icon

(2 / 10)

ಅಷ್ಟಕ್ಕೂ ಈ ಕರೀಮ್‌ ಕಾಕಾ, ದೇಸಾಯಿ ಕುಟುಂಬದ ಕಾರ್‌ ಡ್ರೈವರ್‌ ಆಗಿದ್ದವರು. ಇದೀಗ ದಿಢೀರ್‌ ಎಂದು ಸೂರ್ಯಪ್ರಕಾಶ್‌ ದೇಸಾಯಿ ಮನೆಗೆ ಆಗಮಿಸಿದ್ದಾರೆ.

ಇದೇ ವೇಳೆ ಸತ್ಯಜೀತ್‌ ಬಳಿ ಹೋದ ಕರೀಮ್‌ ಕಾಕಾ, ಹೇಗಿದ್ದವರು, ಹೇಗಾಗಿದ್ದೀರಿ? ಚಿಕ್ಕೆಜಮಾನ್ರು ಯಾವ ತಪ್ಪನ್ನೂ ಮಾಡಿಲ್ಲ ಎಂದಿದ್ದಾರೆ.
icon

(3 / 10)

ಇದೇ ವೇಳೆ ಸತ್ಯಜೀತ್‌ ಬಳಿ ಹೋದ ಕರೀಮ್‌ ಕಾಕಾ, ಹೇಗಿದ್ದವರು, ಹೇಗಾಗಿದ್ದೀರಿ? ಚಿಕ್ಕೆಜಮಾನ್ರು ಯಾವ ತಪ್ಪನ್ನೂ ಮಾಡಿಲ್ಲ ಎಂದಿದ್ದಾರೆ.

ಅಂದ್ರೆ, ಇಂದ್ರ- ವಾಣಿಯನ್ನು ಸತ್ಯ ಕೊಲೆ ಮಾಡಿಲ್ವಾ? ಎಂದಿದ್ದಾನೆ ಸೂರ್ಯಪ್ರಕಾಶ್‌.
icon

(4 / 10)

ಅಂದ್ರೆ, ಇಂದ್ರ- ವಾಣಿಯನ್ನು ಸತ್ಯ ಕೊಲೆ ಮಾಡಿಲ್ವಾ? ಎಂದಿದ್ದಾನೆ ಸೂರ್ಯಪ್ರಕಾಶ್‌.

ಅಲ್ಲೇ ಇದ್ದ ಭಾರ್ಗವಿ ಮಾತ್ರ ಕರೀಮ್‌ ಕಾಕಾನ ಮಾತು ಕೇಳಿ, ಒಳಗೊಳಗೆ ಕುದಿಯುತ್ತಿದ್ದಾಳೆ. ಈ ಸಮಯದಲ್ಲಿ ಇವನ್ಯಾಕೆ ಇಲ್ಲಿಗೆ ಬಂದ ಎಂದು ಭಾರ್ಗವಿ ಕಣ್ಣು ಕೆಂಪಗಾಗಿಸಿದ್ದಾಳೆ.
icon

(5 / 10)

ಅಲ್ಲೇ ಇದ್ದ ಭಾರ್ಗವಿ ಮಾತ್ರ ಕರೀಮ್‌ ಕಾಕಾನ ಮಾತು ಕೇಳಿ, ಒಳಗೊಳಗೆ ಕುದಿಯುತ್ತಿದ್ದಾಳೆ. ಈ ಸಮಯದಲ್ಲಿ ಇವನ್ಯಾಕೆ ಇಲ್ಲಿಗೆ ಬಂದ ಎಂದು ಭಾರ್ಗವಿ ಕಣ್ಣು ಕೆಂಪಗಾಗಿಸಿದ್ದಾಳೆ.

ಸತ್ಯ ಚಿಕ್ಕಪ್ಪ ಅತ್ತೆ ಮಾವನ್ನ ಕೊಲೆ ಮಾಡಿಲ್ಲ ಅಂದ್ರೆ, ಬೇರೆ ಯಾರೋ ಮಾಡಿರ್ಬೇಕಲ್ವಾ? ಅನ್ನೋ ಅನುಮಾನ ಸೀತಾಗೂ ಬಂದಿದೆ.
icon

(6 / 10)

ಸತ್ಯ ಚಿಕ್ಕಪ್ಪ ಅತ್ತೆ ಮಾವನ್ನ ಕೊಲೆ ಮಾಡಿಲ್ಲ ಅಂದ್ರೆ, ಬೇರೆ ಯಾರೋ ಮಾಡಿರ್ಬೇಕಲ್ವಾ? ಅನ್ನೋ ಅನುಮಾನ ಸೀತಾಗೂ ಬಂದಿದೆ.

ಸೀತಾ ಹೇಳಿದ ಮಾತಿಂದ ರಾಮ್‌ ತಲೆಯಲ್ಲಿಯೂ ಹಲವು ವಿಚಾರಗಳು ಓಡುತ್ತಿವೆ. ಇದೆಲ್ಲದರ ಹಿಂದೆ ಬೇರೆ ಯಾರೋ ಇದ್ದಾರೆ ಅನ್ನೋದು ರಾಮ್‌ಗೂ ಅನಿಸಿದೆ.
icon

(7 / 10)

ಸೀತಾ ಹೇಳಿದ ಮಾತಿಂದ ರಾಮ್‌ ತಲೆಯಲ್ಲಿಯೂ ಹಲವು ವಿಚಾರಗಳು ಓಡುತ್ತಿವೆ. ಇದೆಲ್ಲದರ ಹಿಂದೆ ಬೇರೆ ಯಾರೋ ಇದ್ದಾರೆ ಅನ್ನೋದು ರಾಮ್‌ಗೂ ಅನಿಸಿದೆ.

ಅಷ್ಟಕ್ಕೂ ಕೊಲೆಯಾದ ಸ್ಥಳಕ್ಕೆ ಭಾರ್ಗವಿ ಚಿಕ್ಕಿ ಯಾಕೆ ಬಂದ್ರು. ಕೊಲೆ ಆರೋಪವನ್ನು ಸತ್ಯ ಚಿಕ್ಕಪ್ಪನ ಮೇಲೆ ಯಾಕೆ ಹೊರಸಿದ್ರು. ಈ ಕೊಲೆಗೂ ಭಾರ್ಗವಿ ಚಿಕ್ಕಿಗೂ ಸಂಬಂಧ ಇದೆ ಅಂತಾನಾ? ಎಂದು ಅಶೋಕ ಮತ್ತು ಪ್ರಿಯಾ ಮಾತನಾಡಿಕೊಳ್ಳುತ್ತಿದ್ದಾರೆ.
icon

(8 / 10)

ಅಷ್ಟಕ್ಕೂ ಕೊಲೆಯಾದ ಸ್ಥಳಕ್ಕೆ ಭಾರ್ಗವಿ ಚಿಕ್ಕಿ ಯಾಕೆ ಬಂದ್ರು. ಕೊಲೆ ಆರೋಪವನ್ನು ಸತ್ಯ ಚಿಕ್ಕಪ್ಪನ ಮೇಲೆ ಯಾಕೆ ಹೊರಸಿದ್ರು. ಈ ಕೊಲೆಗೂ ಭಾರ್ಗವಿ ಚಿಕ್ಕಿಗೂ ಸಂಬಂಧ ಇದೆ ಅಂತಾನಾ? ಎಂದು ಅಶೋಕ ಮತ್ತು ಪ್ರಿಯಾ ಮಾತನಾಡಿಕೊಳ್ಳುತ್ತಿದ್ದಾರೆ.

ಸೀತಾ ರಾಮ ಧಾರಾವಾಹಿಯ ಕೊನೇ ಸಂಚಿಕೆಗಳ ಪ್ರಸಾರ ಆರಂಭವಾಗುತ್ತಿದ್ದಂತೆ, ವೀಕ್ಷಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ಚೆನ್ನಾಗಿರೋ ಸೀರಿಯಲ್‌ಅನ್ನು ಇಷ್ಟು ಬೇಗ ಮುಗಿಸಬಾರದಿತ್ತು ಎನ್ನುತ್ತಿದ್ದಾರೆ.
icon

(9 / 10)

ಸೀತಾ ರಾಮ ಧಾರಾವಾಹಿಯ ಕೊನೇ ಸಂಚಿಕೆಗಳ ಪ್ರಸಾರ ಆರಂಭವಾಗುತ್ತಿದ್ದಂತೆ, ವೀಕ್ಷಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ಚೆನ್ನಾಗಿರೋ ಸೀರಿಯಲ್‌ಅನ್ನು ಇಷ್ಟು ಬೇಗ ಮುಗಿಸಬಾರದಿತ್ತು ಎನ್ನುತ್ತಿದ್ದಾರೆ.

ಇನ್ನು ಕೆಲವರು ʻಕ್ರೂರತನವನ್ನು ವಿಜೃಂಭಿಸಲು 1000 ಎಪಿಸೋಡ್, ಶಿಕ್ಷೆಗೆ ಒಂದೇ ವಾರ!ʼ ಎಂದು ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
icon

(10 / 10)

ಇನ್ನು ಕೆಲವರು ʻಕ್ರೂರತನವನ್ನು ವಿಜೃಂಭಿಸಲು 1000 ಎಪಿಸೋಡ್, ಶಿಕ್ಷೆಗೆ ಒಂದೇ ವಾರ!ʼ ಎಂದು ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು