ಭಾರ್ಗವಿಗೆ ಟಕ್ಕರ್ ಮೇಲೆ ಟಕ್ಕರ್ ಕೊಡ್ತಿದ್ದಾನೆ ಅಶೋಕ; ಮುಕ್ತಾಯಕ್ಕೆ ಅಣಿಯಾಗ್ತಿದ್ಯಾ ʻಸೀತಾ ರಾಮʼ ಸೀರಿಯಲ್?
ಸೀತಾ ರಾಮ ಸೀರಿಯಲ್ನಲ್ಲಿ ಇದೀಗ ಮಕ್ಕಳ ಡ್ರಾಮಾ ಶುರುವಾಗಿದೆ. ರಾಮ್ನ ಮನೆಯಲ್ಲಿಯೇ ಪುಟಾಣಿಗಳಿಗಾಗಿಯೇ ತಾನೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾನೆ ಅಶೋಕ. ಭಾರ್ಗವಿಗೆ ಟಕ್ಕರ್ ಕೊಡಲು ಈ ನಾಟಕವನ್ನು ಸೃಷ್ಟಿಸಿದ್ದಾನೆ. ಇತ್ತ ಈ ನಾಟಕ ನಡೆಯದಂತೆ ಪ್ಲಾನ್ ಮಾಡುತ್ತಿದ್ದಾಳೆ ಭಾರ್ಗವಿ.
(1 / 10)
ಭಾರ್ಗವಿಯ ಮತ್ತೊಂದು ಮುಖ ಕಳಚಲು ಅಶೋಕ ಪ್ಲಾನ್ ಮಾಡಿದ್ದಾನೆ. ರಾಮ್ನ ಮನೆಯಲ್ಲಿ ಮಕ್ಕಳೊಟ್ಟಿಗೆ ಸೇರಿ ಡ್ರಾಮಾ ಪ್ರಾಕ್ಟಿಸ್ ಮಾಡಿಸುತ್ತಿದ್ದಾನೆ.
(2 / 10)
ಅಷ್ಟಕ್ಕೂ ಅಶೋಕ ಸೃಷ್ಟಿಸುತ್ತಿರುವ ನಾಟಕ ಭಾರ್ಗವಿಯದ್ದೆ. ಆಕೆ ಮಾಡಿದ ಕರ್ಮಗಳನ್ನು ಆಕೆ ಮುಂದೆಯೇ ಮಕ್ಕಳ ಮೂಲಕ ತೆರೆದಿಡುವ ಕೆಲಸಕ್ಕೆ ಮುಂದಾಗಿದ್ದಾನೆ.
(3 / 10)
ಸೀತಾ ರಾಮರ ಪ್ರೀತಿ, ಸೀತಾ ರಾಮ ಕಲ್ಯಾಣದಿಂದ ಆರಂಭವಾಗಿ, ಕೊನೆಗೆ ಅದು ಸಿಹಿಯ ಕೊಲೆಯ ಮೂಲಕ ಅಂತ್ಯವಾಗುತ್ತದೆ. ಹೀಗೆ ಸಾಗುವ ಮಕ್ಕಳ ನಾಟಕದಲ್ಲಿ, ಸಿಹಿ ಹತ್ಯೆಯ ಹಿಂದಿನ ಅಸಲಿಯತ್ತಿನ ಸ್ಕ್ರಿಪ್ಟ್ ಬರೆದಿದ್ದಾನೆ ಅಶೋಕ.
(4 / 10)
ಈ ನಾಟಕದ ಕಥೆ ಏನು ಎಂಬುದು ಭಾರ್ಗವಿ ಮತ್ತು ವಿಶ್ವನಿಗೂ ಗೊತ್ತಾಗಿದೆ. ಒಳಗೊಳಗೆ ಅವರಿಬ್ಬರು ಅಶೋಕ ಆಟ ಕಂಡು ಕುದಿಯುತ್ತಿದ್ದಾರೆ. ಪ್ಲಾನ್ ಮೇಲೆ ಪ್ಲಾನ್ ಹಾಕುತ್ತಿದ್ದಾರೆ.
(5 / 10)
ಅಷ್ಟೇ ಅಲ್ಲ ಆ ಮಕ್ಕಳ ನಾಟಕವನ್ನು ಸ್ವತಃ ಭಾರ್ಗವಿ ಕೈಯಿಂದಲೇ ಉದ್ಘಾಟನೆ ಮಾಡಿಸುವ ಲೆಕ್ಕಾಚಾರವೂ ಅಶೋಕನದ್ದು. ಈ ವಿಚಾರವನ್ನೂ ಈಗಾಗಲೇ ಭಾರ್ಗವಿಗೆ ಹೇಳಿದ್ದಾನೆ.
(6 / 10)
ಇತ್ತ ಇದೇ ಅಶೋಕನ ನಾಟಕದ ಬಗ್ಗೆ ಭಾರ್ಗವಿ ಕೆಂಡಾಮಂಡಲವಾಗಿದ್ದಾಳೆ. ಕುರಿನ ಬಲಿ ಕೊಡೋದಕ್ಕೂ ಮೊದಲು ಅದಕ್ಕೆ ಹಾರ ಹಾಕಿ, ಡೋಲು ಬಜಾಯಿಸಿ ಸಂಭ್ರಮ ಪಡ್ತಾರಲ್ಲ ಹಾಗೆ ಅಲ್ವ ಎಂದು ಭಾರ್ಗವಿಗೆ ಟೀಸ್ ಮಾಡಿದ್ದಾನೆ ವಿಶ್ವ.
(7 / 10)
ಆ ಅಶೋಕ ಮಾಡ್ತಿರೋ ಡ್ರಾಮಾಕ್ಕೆ ತೆರೆ ಎಳೆಯೋದು ಹೇಗೆ ಎಂಬುದನ್ನು ಯೋಚನೆ ಮಾಡು. ನಾಳೆ ಆ ನಾಟಕ ನಡಿಬಾರ್ದು, ನಿಂತು ಹೋಗಬೇಕು ಅನ್ನೋದು ಭಾರ್ಗವಿ ಪ್ಲಾನ್.
(8 / 10)
ಅಷ್ಟರಲ್ಲಿ ಅಶೋಕನ ಎಂಟ್ರಿಯಾಗಿದೆ. ಏನೋ ನಾಟಕ ನಿಲ್ಸಿಸ್ತಿನಿ ಅಂತಿದ್ರಿ ಎಂದು ಕೇಳಿದ್ದೇನೆ. ನಾಟಕ ಮಾತ್ರವಲ್ಲ ನಿನ್ನ ನಾಟಕವನ್ನೂ ನಿಲ್ಲಿಸ್ತಿನಿ ಎಂದಿದ್ದಾಳೆ ಭಾರ್ಗವಿ.
(9 / 10)
ಯಾರ ನಾಟಕಾನಾ ಯಾರು ನಿಲ್ಲಿಸ್ತಾರೆ ಅನ್ನೋದನ್ನು ನೋಡೋಣ. ನೀವೇನು ಮಾಡ್ಬೇಕು ಅಂದುಕೊಂಡಿದ್ದೀರೋ ಅದನ್ನ ನೀವು ಮಾಡಿ ಗುಡ್ ಲಕ್ ಎಂದಿದ್ದಾನೆ ಅಶೋಕ.
ಇತರ ಗ್ಯಾಲರಿಗಳು