ಕನ್ನಡ ಸುದ್ದಿ  /  Sports  /  Ind Vs Aus 2nd Odi Captain Rohit Sharma Set To Replace Ishan Kishan, Axar Patel Likely For Shardul Thakur

Ind vs Aus 2nd ODI: ರೋಹಿತ್​ ರಿಟರ್ನ್​​; ಭಾರತ ತಂಡದಲ್ಲಿ 2 ಪ್ರಮುಖ ಬದಲಾವಣೆ ಸಾಧ್ಯತೆ!

Ind vs Aus 2nd ODI: ಇಂಡೋ- ಆಸಿಸ್​ 2ನೇ ODI ಫೈಟ್​​ಗೆ​ ವಿಶಾಖಪಟ್ಟಣದ ವೈ.ಎಸ್ ರಾಜಶೇಖರ ರೆಡ್ಡಿ ಮೈದಾನ ಸಜ್ಜಾಗಿದೆ. ಸರಣಿ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ ಇದ್ದರೆ, ಮೆನ್​​-ಇನ್​​-ಬ್ಲೂಗೆ ತಿರುಗೇಟು ನೀಡಲು ಆಸ್ಟ್ರೇಲಿಯಾ ಪ್ಲಾನ್ ಹಾಕಿಕೊಂಡಿದೆ.

ಟೀಮ್​ ಇಂಡಿಯಾ
ಟೀಮ್​ ಇಂಡಿಯಾ (BCCI)

ಆಸ್ಟ್ರೇಲಿಯಾ (Australia) ವಿರುದ್ಧ ಮೊದಲ ಏಕದಿನದಲ್ಲಿ ರೋಚಕ ಗೆಲುವು ದಾಖಲಿಸಿದ್ದ ಭಾರತ ತಂಡ (Team India), 2ನೇ ಪಂದ್ಯದಲ್ಲೂ ಅದೇ ವಿಶ್ವಾಸದಲ್ಲಿ ಕಣಕ್ಕಿಳಿಯಲು ರೆಡಿಯಾಗಿದೆ. ಬ್ಯಾಟಿಂಗ್​​-ಬೌಲಿಂಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಮ್​ ಇಂಡಿಯಾ, ಭಾನುವಾರ (ಮಾರ್ಚ್​ 19ರಂದು) ನಡೆಯುವ 2ನೇ ಏಕದಿನಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯ ಗೆದ್ದು ಸರಣಿ ಜಯಿಸುವ ವಿಶ್ವಾಸದಲ್ಲಿ ಭಾರತ ಇದೆ.

ಇಂಡೋ- ಆಸಿಸ್​ 2ನೇ ODI ಫೈಟ್​​ಗೆ​ ವಿಶಾಖಪಟ್ಟಣದ ವೈ.ಎಸ್ ರಾಜಶೇಖರ ರೆಡ್ಡಿ ಮೈದಾನ ಸಜ್ಜಾಗಿದೆ. ಸರಣಿ ಗೆಲ್ಲುವ ತವಕದಲ್ಲಿ ಟೀಮ್ ಇಂಡಿಯಾ ಇದ್ದರೆ, ಮೆನ್​​-ಇನ್​​-ಬ್ಲೂಗೆ ತಿರುಗೇಟು ನೀಡಲು ಆಸ್ಟ್ರೇಲಿಯಾ ಪ್ಲಾನ್ ಹಾಕಿಕೊಂಡಿದೆ. ಆಸಿಸ್​ಗೆ​ ಟೆಸ್ಟ್​ ಸರಣಿ ಬಳಿಕ ಏಕದಿನ ಸರಣಿಯಲ್ಲೂ ಮುಖಭಂಗ ಮಾಡಲು ಸಜ್ಜಾಗಿರುವ ಮೆನ್​ ಇನ್​ ಬ್ಲೂ, ತಂಡದಲ್ಲಿ ಪ್ರಮುಖ ಬದಲಾವಣೆಗೂ ಮುಂದಾಗಿದೆ.

ರೋಹಿತ್​ ರಿಟರ್ನ್​​, ಇಶಾನ್​​​ಗೆ ಕೊಕ್​​!

ವೈಯಕ್ತಿಕ ಕಾರಣಗಳಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ನಾಯಕ ರೋಹಿತ್​ ಶರ್ಮಾ (Rohit Sharma) 2ನೇ ಏಕದಿನಕ್ಕೆ ಮರಳಿದ್ದಾರೆ. ಹಾಗಾಗಿ ರೋಹಿತ್​ ಅಲಭ್ಯತೆಯಲ್ಲಿ ಅವಕಾಶ ಪಡೆದಿದ್ದ ಇಶಾನ್​ ಕಿಶನ್​ಗೆ (Ishan Kishan) ನಾಳೆಯ ಪಂದ್ಯದಲ್ಲಿ ಕೊಕ್​ ನೀಡುವುದು ಖಚಿತ. ಮೊದಲ ಪಂದ್ಯದಲ್ಲಿ ಇಶಾನ್​ 3 ರನ್​​ಗೆ ಔಟಾಗಿ ನಿರಾಸೆ ಮೂಡಿಸಿದ್ದರು. ಇದೀಗ ಹಿಟ್​ಮ್ಯಾನ್​​ ರಿಟರ್ನ್​ ಆಗಿದ್ದು, ಶುಭ್​​ಮನ್​ ಗಿಲ್ (Shubman Gill) ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ಸೂರ್ಯಕುಮಾರ್​ಗೆ ಟೆಸ್ಟಿಂಗ್​ ಟೈಮ್​.!

ಟಿ20 ಕ್ರಿಕೆಟ್​​​ನಲ್ಲಿ ರನ್​ ಪರ್ವ ಸೃಷ್ಟಿಸಿರುವ ಸೂರ್ಯಕುಮಾರ್ (Suryakumar Yadav)​, ಏಕದಿನದಲ್ಲಿ ಮಾತ್ರ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಶ್ರೇಯಸ್​ ಅಯ್ಯರ್ ಅಲಭ್ಯತೆಯಲ್ಲಿ ಅವಕಾಶ ಪಡೆದ ಸೂರ್ಯ, ಮೊದಲ ಪಂದ್ಯದಲ್ಲಿ ಗೋಲ್ಡನ್​ ಡಕ್​ಗೆ ಬಲಿಯಾದ್ರು. ಏಕದಿನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕು ಅಂದರೆ ರನ್​ ಮಳೆ ಹರಿಸಲೇಬೇಕು. ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು.

ಶಾರ್ದೂಲ್​ ಜಾಗಕ್ಕೆ ಅಕ್ಷರ್ ಸಾಧ್ಯತೆ?

ಆಲ್​ರೌಂಡರ್​​ ಶಾರ್ದೂಲ್​ ಠಾಕೂರ್ (Shardul Thakur)​ ಅವರನ್ನು 2ನೇ ಏಕದಿನ ಪಂದ್ಯದಲ್ಲಿ ಕೊಕ್ ನೀಡುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ವಿಕೆಟ್​ ಪಡೆಯಲು ವಿಫಲರಾದ ಶಾರ್ದೂಲ್​, ಜಾಗಕ್ಕೆ ಭರ್ಜರಿ ಫಾರ್ಮ್​​ನಲ್ಲಿರುವ ಅಕ್ಷರ್​ ಪಟೇಲ್ (Axar Patel)​​​ ಅವರನ್ನು ಕರೆ ತರುವ ಪ್ಲಾನ್​ ಹಾಕಿಕೊಂಡಿದೆ ಟೀಮ್​ ಮ್ಯಾನೇಜ್​ಮೆಂಟ್. ಜೊತೆ ಶಮಿ ಮತ್ತು ಸಿರಾಜ್​ ಖಡಕ್​ ಬೌಲಿಂಗ್​ ತಂಡದ ಬಲ ಹೆಚ್ಚಿಸಿದರೆ, ಕುಲ್ದೀಪ್​ ಯಾದವ್​ ದುಬಾರಿ ಬೌಲಿಂಗ್​ ಹಿನ್ನಡೆ ಕಾರಣವಾಗಿತ್ತು. ಕುಲ್ದೀಪ್​ ಸ್ಥಾನಕ್ಕೆ ಯಜುವೇಂದ್ರ ಚಹಲ್​ ಅಥವಾ ಡೆತ್​​ ಓವರ್​​​​ಗಳಲ್ಲಿ ಬೌಲಿಂಗ್​​​​​​​​ ಬಲ ಹೆಚ್ಚಿಸಲು ಮತ್ತೊಬ್ಬ ವೇಗಿಗೆ ಮಣೆ ಹಾಕಿದರೂ ಅಚ್ಚರಿ ಇಲ್ಲ.

ಸತತ 8ನೇ ಸರಣಿ ಮೇಲೆ ಕಣ್ಣು

2ನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕರಾಗಲಿದ್ದಾರೆ. ಮೊದಲ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಕ್ಯಾಪ್ಟನ್​ ಆಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಭಾನುವಾರ ಕೂಡ ಪಂದ್ಯ ಗೆದ್ದರೆ ತವರಿನಲ್ಲಿ ಸತತ 8 ಏಕದಿನ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಭಾರತ ಏಕದಿನ ಸರಣಿ ಸೋತಿತ್ತು.

ಭಾರತ ಏಕದಿನ ತಂಡ:

ಶುಭಮನ್ ಗಿಲ್, ರೋಹಿತ್​ ಶರ್ಮಾ (ನಾಯಕ) ಇಶಾನ್ ಕಿಶನ್ (ವಿಕೆಟ್​ ಕೀಪರ್​​), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​​​), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್, ಶಾರ್ದೂಲ್ ಠಾಕೂರ್, ಅಕ್ಷರ್​ ಪಟೇಲ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಜಯದೇವ್ ಉನಾದ್ಕತ್.