IND vs AUS TEST: ಗಿಲ್ ವಿರುದ್ಧ ಗವಾಸ್ಕರ್ ಕೆಂಡಾಮಂಡಲ, ನೀವೆಷ್ಟು ಕಠೋರ ಎಂದ ಹೇಡನ್.! ಯಾಕೆ? ಏನಾಯ್ತು.?
IND vs AUS TEST: ಕೆ.ಎಲ್.ರಾಹುಲ್ (KL Rahul) ಜಾಗದಲ್ಲಿ ಸ್ಥಾನ ಪಡೆದು ನಿರೀಕ್ಷೆ ಸೃಷ್ಟಿಸಿದ್ದ ಶುಭ್ಮನ್ ಗಿಲ್ ಭಾರೀ ನಿರಾಸೆ ಮೂಡಿಸಿದ್ದಾರೆ. ಆದರೆ ಗಿಲ್ ಬ್ಯಾಟಿಂಗ್ ನಡೆಸುತ್ತಿದ್ದಾಗ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ (IND vs AUS 3rd TEST) ಟೀಮ್ ಇಂಡಿಯಾ (Team India) ಕಳಪೆ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಸ್ಟಾರ್ಗಳೇ ಪೆವಿಲಿಯನ್ ಪರೇಡ್ ನಡೆಸಿದರು. ಆಸಿಸ್ ಮಾರಕ ಸ್ಪಿನ್ ದಾಳಿಗೆ ನಡುಗಿದ ಭಾರತ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತು. ಅದರಲ್ಲೂ ಕೆ.ಎಲ್.ರಾಹುಲ್ (KL Rahul) ಜಾಗದಲ್ಲಿ ಸ್ಥಾನ ಪಡೆದು ನಿರೀಕ್ಷೆ ಸೃಷ್ಟಿಸಿದ್ದ ಶುಭ್ಮನ್ ಗಿಲ್ (Shubman Gill), ಭಾರೀ ನಿರಾಸೆ ಮೂಡಿಸಿದ್ದಾರೆ. ಆದರೆ ಗಿಲ್ ಬ್ಯಾಟಿಂಗ್ ನಡೆಸುತ್ತಿದ್ದಾಗ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿಲ್ ವಿರುದ್ಧ ಸುನಿಲ್ ಗವಾಸ್ಕರ್ ಅವರು ಸಿಟ್ಟಿಗೆದ್ದಿದ್ದನ್ನು ನೋಡಿ ಕಾಮೆಂಟರಿ ಮಾಡುತ್ತಿದ್ದ ಆಸಿಸ್ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಶಾಕ್ ಆಗಿದ್ದಾರೆ. ನೀವಿಷ್ಟು ಕಠೋರ ವ್ಯಕ್ತಿ ಎಂದು ನನಗೆ ತಿಳಿದೇ ಇರಲಿಲ್ಲ ಎಂದು ಗವಾಸ್ಕರ್ ಅವರೊಂದಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಭಾರತದ ಮೊದಲ ಇನಿಂಗ್ಸ್ನ 7ನೇ ಓವರ್ನಲ್ಲಿ ನಡೆದ ಘಟನೆ. ರೋಹಿತ್ ಶರ್ಮಾ ಮೊದಲ ವಿಕೆಟ್ 27 ರನ್ ಕಲೆ ಹಾಕಿ, ಮ್ಯಾಥ್ಯೂ ಕುಹ್ನೆಮನ್ ಬೌಲಿಂಗ್ನಲ್ಲಿ ಸ್ಟಂಪ್ಔಟ್ ಆಗಿ ಹೊರ ನಡೆದರು.
ಹೊಸ ಬ್ಯಾಟರ್ ಚೇತೇಶ್ವರ ಪೂಜಾರ (Cheteshwar Pujara) ಕ್ರಿಸ್ಗೆ ಬಂದ ನಂತರ ಗಿಲ್ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಎದುರಿಸುತ್ತಿದ್ದರು. ಆಗ ಸಿಂಗಲ್ಗಾಗಿ ತ್ವರಿತವಾಗಿ ಓಡಿದರು. ಆಗ ಸಮಯಕ್ಕೆ ಸರಿಯಾಗಿ ಕ್ರೀಸ್ ಮುಟ್ಟಲು ಸಾಧ್ಯವಾಗದ ಕಾರಣ, ಗಿಲ್ ಡೈವ್ ಮಾಡಬೇಕಾಯಿತು. ಈ ಪ್ರಕ್ರಿಯೆಯಲ್ಲಿ ಗಿಲ್ ತನ್ನ ಹೊಟ್ಟೆಗೆ ಪೆಟ್ಟಾದಂತೆ ಕಂಡು ಬಂತು. ಜೊತೆಗೆ ಗಾಯವಾದಂತೆಯೂ ಕಂಡು ಬಂತು. ಒಂದು ಕ್ಷಣವೂ ಸಮಯ ವ್ಯರ್ಥ ಮಾಡದೇ ಗಿಲ್ ಫಿಸಿಯೋ ಕರೆದರು. ಆದರೆ ಈ ಘಟನೆ ಗವಾಸ್ಕರ್ ಪಿತ್ತ ನೆತ್ತಿಗೇರುವಂತೆ ಮಾಡಿತು.
ಶುಭ್ಮನ್ ಗಿಲ್ಗೆ ಸ್ವಲ್ಪ ರಿಪೇರಿ ಕೆಲಸ ಮಾಡುವುದನ್ನು ನೋಡುತ್ತಿದ್ದೇವೆ. ಅವರು ತಮ್ಮ ಕ್ರೀಸ್ಗೆ ಮರಲು ಡೈವ್ ಮಾಡಿದರು. ಆದರೆ ನಿಮಗೆ ಏನು ಹೇಳುತ್ತೇನೆ ಅಂದರೆ ಫಿಸಿಯೋರನ್ನು ಅಷ್ಟು ಬೇಗ ಕರೆಯುವ ಅವಶ್ಯಕತೆ ಏನಿತ್ತು.? ಸ್ವಲ್ಪ ಹೊತ್ತು ಕಾಯಬಹುದಿತ್ತು. ಓವರ್ ಕೊನೇವರೆಗೂ ಕಾಯದಿರುವಷ್ಟು ಆತುರವೇ.? ಮಿಚೆಲ್ ಸ್ಟಾರ್ಕ್ ಒಬ್ಬ ವೇಗದ ಬೌಲರ್.. ಓವರ್ನಲ್ಲಿ 4 ಬಾಲ್ಗಳನ್ನು ಎಸೆದಿದ್ದಾರೆ. ಅದರಲ್ಲೂ ಸುಡು ಬಿಸಿಲು ಬೇರೆ. ಇದು ಬೌಲರ್ಗೆ ತುಂಬಾ ನೋವು ತರಿಸುತ್ತದೆ. ಜೊತೆಗೆ ನಾನ್ ಸ್ಟ್ರೈಕರ್ನಲ್ಲಿದ್ದ ಓವರ್ ಮುಗಿಸಿಯೇ ಫಿಸಿಯೋ ಕರೆಸಬಹುದಿತ್ತು. ಹೌದು ನಿಮಗೆ ನೋವಾಗಿದೆ. ಹಾಗಂತ ಕೊನೆಯ 2 ಎಸೆತಗಳಿಗೆ ಕಾಯಲು ಆಗಲಿಲ್ಲವೇ.? ಇಂತಹ ಸರಳವಾದ ವಿಷಯಗಳಿಂದ ಸಮಯ ಹಾಳು ಮಾಡಬೇಡಿ ಎಂದು ಖಡಕ್ ಆಗಿ ಕಾಮೆಂಟರಿ ಮಾಡುತ್ತಿದ್ದಾಗ ಹೇಳಿದ್ದಾರೆ.
ಕಾಮೆಂಟರಿ ಬಾಕ್ಸ್ನಲ್ಲಿದ್ದ ಗವಾಸ್ಕರ್ ಜೊತೆಯಲ್ಲಿ ಕುಳಿತಿದ್ದ ಮ್ಯಾಥ್ಯೂ ಹೇಡನ್ (Matthew Hayden) ಈ ಕೋಪ ನೋಡಿ ಗಾಬರಿಗೊಂಡಿದ್ದಾರೆ. ನೀವಿಷ್ಟು ಕಠೋರ ವ್ಯಕ್ತಿ ಎಂದು ಗೊತ್ತೇ ಇರಲಿಲ್ಲ. ಬಳಿಕ ಇದಕ್ಕೆ ಉತ್ತರಿಸಿದ ಗವಾಸ್ಕರ್, ನೀವು ದೇಶಕ್ಕಾಗಿ ಆಡುತ್ತೀರಿ ಎಂದರೆ ಎಲ್ಲವನ್ನೂ ತಿಳಿಯಬೇಕು ಎಂದು ತಿಳಿಸಿದ್ದಾರೆ. ಅಲ್ಲಿನ ಪರಿಸ್ಥಿತಿ ಅರಿಯಬೇಕು. ಒಂದು ಕ್ಷಣವೂ ಕಾಯದೇ ಇದ್ದರೆ ಹೇಗೆ ಎಂದು ಲೆಜೆಂಡರಿ ಕ್ರಿಕೆಟರ್ ಪ್ರಶ್ನೆ ಮಾಡಿದರು. ಇನ್ನೂ ಈ ಪಂದ್ಯದಲ್ಲಿ ಶುಭ್ಮನ್ ಗಿಲ್ 21 ರನ್ಗಳಿಗೆ ಆಟ ಮುಗಿಸಿದ್ದಾರೆ. ಆಸ್ಟ್ರೇಲಿಯಾ ಸ್ಪಿನ್ ದಾಳಿಗೆ ನಲುಗಿದ ಟೀಮ್ ಇಂಡಿಯಾ 109 ರನ್ಗೆ ಆಲ್ಔಟ್ ಆಗಿದೆ. ಆದರೆ ಆಸ್ಟ್ರೇಲಿಯಾ ಉತ್ತಮ ಮುನ್ನಡೆಯತ್ತ ಹೆಜ್ಜೆ ಹಾಕಿದೆ.