ಕುಮಾರಸ್ವಾಮಿ ನನ್ನ ಮುಂದೆ ನಿಂತ್ಕೊಳೊದಿಕ್ಕೆ ಭಯ ಪಡ್ತಿದ್ದ;ಮೋದಿ, ಸಿದ್ದರಾಮಯ್ಯ, ಹೆಚ್ ಡಿಕೆ ಬಗ್ಗೆ ಇದೆಂತಾ ಮಾತು..!
- ಅದೃಷ್ಟದ ಬಗ್ಗೆ ಮಾತನಾಡುವ ಭರದಲ್ಲಿ ಕಾಂಗ್ರೆಸ್ ನಾಯಕ ಬಸವರಾಜ ರಾಯ ರೆಡ್ಡಿ ಇತರೆ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕೊಪ್ಪಳದಲ್ಲಿ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ರಾಯರೆಡ್ಡಿ ಬಿಜೆಪಿಯನ್ನ ಅಡ್ವಾಣಿ ಕಟ್ಟಿದ, ಮೋದಿ ಪ್ರಧಾನಿಯಾದ, ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದು 2 ಬಾರಿ ಸಿಎಂ ಆದ ಎಂದಿದ್ದಾರೆ. ಅಲ್ಲದೆ ಹೆಚ್ ಡಿ ದೇವೇಗೌಡರ ಕಾಲದಲ್ಲಿ ನಾನು ಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ನನ್ನ ಮುಂದೆ ನಿಲ್ಲೋದಕ್ಕೆ ಭಯ ಪಡ್ತಿದ್ದ ಎಂದಿದ್ದಾರೆ. ರಾಯರೆಡ್ಡಿಯವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗ್ತಿದ್ದಂತೆ ತಮ್ಮ ಹೇಳಿಕೆ ಬಗ್ಗೆ ಕ್ಲಾರಿಟಿ ನೀಡಿರುವ ರಾಯರೆಡ್ಡಿ, ಸಹಜವಾಗಿ ಅದೃಷ್ಟದ ಬಗ್ಗೆ ಹೇಳಿದ್ದು ಎಂದಿದ್ದಾರೆ.