ಅವೈಜ್ಞಾನಿಕವಾಗಿ ವಾಹನಗಳನ್ನ ತಡೆಯಬೇಡಿ; ಮಂಡ್ಯ ಘಟನೆ ಬಳಿಕ ಪೊಲೀಸರಿಗೆ ಗೃಹ ಸಚಿವ ಜಿ ಪರಮೇಶ್ವರ್ ಎಚ್ಚರಿಕೆ
ಮಂಡ್ಯದಲ್ಲಿ ಪೊಲೀಸರ ಎಡವಟ್ಟಿನಿಂದ ಮಗು ಸಾವನ್ನಪ್ಪಿದ ಬೆನ್ನಲ್ಲೇ ಹೋಮ್ ಮಿನಿಸ್ಟರ್ ಡಾ. ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಪೊಲೀಸರು ವಾಹನ ಸವಾರರನ್ನ ತಪಾಸಣೆಗೆ ಸುಖಾ ಸುಮ್ಮನೆ ಅವೈಜ್ಞಾನಿಕವಾಗಿ ತಡೆಯುವಂತಿಲ್ಲ. ಒಮ್ಮೆಲೇ ಓಡಿ ಬಂದು ತಡೆಯುವುದರಿಂದ ಅಪಘಾತಗಳು ಸಂಭವಿಸುತ್ತವೆ. ಬದಲಾಗಿ ಇದಕ್ಕೆ ಪೂರಕವಾದ ಮಾರ್ಗದರ್ಶಿ ಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಮಂಗಳವಾರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ಕರೆಯಲಾಗಿದ್ದು ಕೆಲವು ಸೂಚನೆಗಳನ್ನ ಹೋಮ್ ಮಿನಿಸ್ಟರ್ ನೀಡಲಿದ್ದಾರೆ.
ಮಂಡ್ಯದಲ್ಲಿ ಪೊಲೀಸರ ಎಡವಟ್ಟಿನಿಂದ ಮಗು ಸಾವನ್ನಪ್ಪಿದ ಬೆನ್ನಲ್ಲೇ ಹೋಮ್ ಮಿನಿಸ್ಟರ್ ಡಾ. ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಪೊಲೀಸರು ವಾಹನ ಸವಾರರನ್ನ ತಪಾಸಣೆಗೆ ಸುಖಾ ಸುಮ್ಮನೆ ಅವೈಜ್ಞಾನಿಕವಾಗಿ ತಡೆಯುವಂತಿಲ್ಲ. ಒಮ್ಮೆಲೇ ಓಡಿ ಬಂದು ತಡೆಯುವುದರಿಂದ ಅಪಘಾತಗಳು ಸಂಭವಿಸುತ್ತವೆ. ಬದಲಾಗಿ ಇದಕ್ಕೆ ಪೂರಕವಾದ ಮಾರ್ಗದರ್ಶಿ ಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಮಂಗಳವಾರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ಕರೆಯಲಾಗಿದ್ದು ಕೆಲವು ಸೂಚನೆಗಳನ್ನ ಹೋಮ್ ಮಿನಿಸ್ಟರ್ ನೀಡಲಿದ್ದಾರೆ.