ಕನ್ನಡ ಸುದ್ದಿ  /  Video Gallery  /  Famous Snake Catcher In Chikkamagaluru Dies After Being Bitten By Cobra Snake Naresh Venomous Cobra Karnataka Wild Life

Chikkamagalore Snake Naresh : ರಕ್ಷಣೆ ಮಾಡಿದ್ದ ಹಾವಿನಿಂದ ಕಚ್ಚಿಸಿಕೊಂಡು ಚಿಕ್ಕಮಗಳೂರಿನ ಉರಗ ತಜ್ಞ ನರೇಶ್ ಸಾವು

May 31, 2023 02:00 PM IST Prashanth BR
twitter
May 31, 2023 02:00 PM IST
  •  ಚಿಕ್ಕಮಗಳೂರಿನಲ್ಲಿ ಹಾವು ಕಚ್ಚಿ ಉರಗತಜ್ಞ ನರೇಶ್ ದುರಂತ ಸಾವನ್ನಪ್ಪಿದ್ದಾರೆ. ತಾನು ಸೆರೆ ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡು ಸ್ನೇಕ್ ನರೇಶ್ ಪ್ರಾಣ ಕಳೆದುಕೊಂಡಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ನೇಕ್ ನರೇಶ್ ಎಂದೇ ಖ್ಯಾತಿಯಾಗಿದ್ದ ನರೇಶ್, ಸಾವಿರಾರು ಹಾವುಗಳನ್ನ ಸೆರೆ ಹಿಡಿದು  ಕಾಡಿಗೆ ಬಿಟ್ಟು ಸಂರಕ್ಷಣೆ ಮಾಡಿದ್ದರು. ಕೆಲವು ದಿನಗಳ ಹಿಂದೆ  ನಾಗರಹಾವು ಹಿಡಿದು ಸ್ಕೂಟಿಯಲ್ಲಿ ಇಟ್ಟಿದ್ದ ಸ್ನೇಕ್‌ ನರೇಶ್,  ಮತ್ತೊಂದು ಹಾವನ್ನ  ಹಿಡಿಯಲು ಹೊರಟ್ಟಿದ್ಧರು. ಈ ವೇಳೆ ಸ್ಕೂಟಿಯ ಸೀಟ್ ತೆಗೆದು ಹಾವಿದ್ದ ಚೀಲ ಸರಿಪಡಿಸಲು ಮುಂದಾದಾಗ ನಾಗರಹಾವು ನರೇಶ್‌ ಅವರ ಕೈಗೆ ಕಚ್ಚಿದೆ. 
More