ಪಾರ್ಕ್ಗಳಲ್ಲಿ ಜೀವ ತಳೆಯಲು ಸಿದ್ಧವಾಗುತ್ತಿರುವ ಹಾವೇರಿಯ ಗೊಟಗೋಡಿ ಶಿಲ್ಪಕಲಾ ಕುಟೀರದ ಸಿಮೆಂಟ್ ಮೂರ್ತಿಗಳು
ಶಿಲ್ಪಕಲೆ ವಿದ್ಯಾವಂತರ ಆಸ್ತಿಯಲ್ಲ, ಅನಕ್ಷರಸ್ಥರಿಗೂ ಅದರ ಪಾಲು ಇದೆ ಎಂದು ಹಾವೇರಿಯ ಡಾ.ಟಿಬಿ ಸೋಲಬಕ್ಕನವರ್ ಸಾಬೀತು ಮಾಡಿದ್ದಾರೆ. ಗ್ರಾಮೀಣ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಅವರು 1992ರಲ್ಲಿ ಶಿಲ್ಪ ಕಲಾ ಕುಟೀರವನ್ನು ಸ್ಥಾಪಿಸಿದರು. ಇದೀಗ ಅವರ ಪುತ್ರ ರಾಜಹರ್ಷ ಸೊಲಬಕ್ಕನವರ್, ಕಲಾ ಮಾರ್ಗದರ್ಶಿಯಾಗಿ ಶಿಲ್ಪ ಕಲಾ ಕುಟೀರವನ್ನು ಮುನ್ನಡೆಸುತ್ತಿದ್ದಾರೆ.ಇಲ್ಲಿ 15,000 ಕ್ಕೂ ಹೆಚ್ಚು ಕಲಾಕೃತಿಗಳನ್ನು ಕೆತ್ತಲಾಗಿದ್ದು ದೇಶಾದ್ಯಂತ ಅನೇಕ ಉದ್ಯಾನಗಳಲ್ಲಿ ಸ್ಥಾಪಿಸಲಾಗಿದೆ. ಈಗ ಮತ್ತೆ ಜೀವಂತವಾಗಿ ಕಾಣುವಂತಿರುವ ಸಿಮೆಂಟ್ ಮೂರ್ತಿಗಳನ್ನು ವಿವಿಧ ಪಾರ್ಕ್ಗಳಲ್ಲಿ ಸ್ಥಾಪಿಸಲು ಗೊಟಗೋಡಿ ಕುಟೀರ ಮುಂದಾಗಿದೆ. ಇದಕ್ಕಾಗಿ ಸುಮಾರು ನೂರು ಮಂದಿ ಕಲಾತಜ್ಞರು ಶ್ರಮಿಸುತ್ತಿದ್ದಾರೆ.
ಶಿಲ್ಪಕಲೆ ವಿದ್ಯಾವಂತರ ಆಸ್ತಿಯಲ್ಲ, ಅನಕ್ಷರಸ್ಥರಿಗೂ ಅದರ ಪಾಲು ಇದೆ ಎಂದು ಹಾವೇರಿಯ ಡಾ.ಟಿಬಿ ಸೋಲಬಕ್ಕನವರ್ ಸಾಬೀತು ಮಾಡಿದ್ದಾರೆ. ಗ್ರಾಮೀಣ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಅವರು 1992ರಲ್ಲಿ ಶಿಲ್ಪ ಕಲಾ ಕುಟೀರವನ್ನು ಸ್ಥಾಪಿಸಿದರು. ಇದೀಗ ಅವರ ಪುತ್ರ ರಾಜಹರ್ಷ ಸೊಲಬಕ್ಕನವರ್, ಕಲಾ ಮಾರ್ಗದರ್ಶಿಯಾಗಿ ಶಿಲ್ಪ ಕಲಾ ಕುಟೀರವನ್ನು ಮುನ್ನಡೆಸುತ್ತಿದ್ದಾರೆ.ಇಲ್ಲಿ 15,000 ಕ್ಕೂ ಹೆಚ್ಚು ಕಲಾಕೃತಿಗಳನ್ನು ಕೆತ್ತಲಾಗಿದ್ದು ದೇಶಾದ್ಯಂತ ಅನೇಕ ಉದ್ಯಾನಗಳಲ್ಲಿ ಸ್ಥಾಪಿಸಲಾಗಿದೆ. ಈಗ ಮತ್ತೆ ಜೀವಂತವಾಗಿ ಕಾಣುವಂತಿರುವ ಸಿಮೆಂಟ್ ಮೂರ್ತಿಗಳನ್ನು ವಿವಿಧ ಪಾರ್ಕ್ಗಳಲ್ಲಿ ಸ್ಥಾಪಿಸಲು ಗೊಟಗೋಡಿ ಕುಟೀರ ಮುಂದಾಗಿದೆ. ಇದಕ್ಕಾಗಿ ಸುಮಾರು ನೂರು ಮಂದಿ ಕಲಾತಜ್ಞರು ಶ್ರಮಿಸುತ್ತಿದ್ದಾರೆ.