Viral Video: 'ಬೆಂಕಿಯ ಮಳೆ ಸುರಿದರೂ ನಿಮ್ಮ ಕೋರಿಕೆ ಈಡೇರಿಸುತ್ತೇನೆ' - ಕಾಂಗ್ರೆಸ್ ನಾಯಕಿಗೆ ಧೂಮಾವತಿ ದೈವದ ಅಭಯ
- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ಗೆಜ್ಜಿಗಿರಿ ದೇಯಿ ಬೈದೈತಿ ಕೋಟಿ ಚೆನ್ನಯ್ಯ ಮೂಲಸ್ಥಾನ ಆದಿದೈವ ಧೂಮಾವತಿ ದೈವ ಆಶೀರ್ವಾದ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. "ನೀವು ಏನು ಹರಕೆ ಮಾಡಿಕೊಂಡಿದ್ದೀರೋ, ಬೆಂಕಿಯ ಮಳೆ ಸುರಿದರೂ ಅದನ್ನೆಲ್ಲ ನಡೆಸಿಕೊಡುತ್ತೇನೆ" ಎಂದು ದೈವ ಭಾಷೆ ನೀಡಿದೆ. "ಯಾವುದಕ್ಕೂ ಭಯ ಪಡಬೇಡಿ, ಕಣ್ಣೀರು ಹಾಕಬೇಡಿ. ಅಧಿದೇವತೆ ಪಿಲಿಭೂತ, ಪಿಲಿಚಾಮುಂಡಿ ನಿಮ್ಮ ಮನಸ್ಸಿನ ಅಭಿಲಾಷೆ ಈಡೇರಿಸಿ, ನಿಮ್ಮ ಮನಸ್ಸಿನ ದುಃಖ ದೂರ ಮಾಡಿಕೊಡುತ್ತದೆ" ಎಂದು ಅಭಯ ಹಸ್ತ ನೀಡಿದೆ.