Man Tries To Kiss Cobra: ನಾಗರ ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಭದ್ರಾವತಿಯ ಉರಗ ರಕ್ಷಕ
- ಭದ್ರಾವತಿ ( ಶಿವಮೊಗ್ಗ): ಹಾವಿನ ಜೊತೆ ಆಟ ಆಡೋಕೆ ಹೋದ್ರೆ ಏನಾಗುತ್ತೆ ಎಂಬುದಕ್ಕೆ ಶಿವಮೊಗ್ಗದಲ್ಲಿ ನಡೆದ ಘಟನೆಯೇ ಸಾಕ್ಷಿ. ಭದ್ರಾವತಿಯ ಮನೆಯೊಂದರಲ್ಲಿ ಕಾಣಿಸಿಕೊಂಡ ನಾಗರ ಹಾವನ್ನು ಉರಗ ರಕ್ಷಕ ಅಲೆಕ್ಸ್ ಹಿಡಿದಿದ್ದಾರೆ. ಆದರೆ ಹಿಡಿದ ಬಳಿಕ ಹಾವಿನ ತಲೆಗೆ ಮುತ್ತಿಡಲು ಹೋಗಿದ್ದಾರೆ. ಈ ವೇಳೆ ಹಾವು ತಿರುಗಿ ಆತನ ತುಟಿಗೇ ಕಚ್ಚಿದೆ. ಗಾಯಗೊಂಡ ಅಲೆಕ್ಸ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.